newsfirstkannada.com

ಅಕ್ರಮ ಸಂಬಂಧಕ್ಕೆ ಅಡ್ಡಿ.. ಪ್ರೇಮಿಯೊಂದಿಗೆ ಸೇರಿ ಪತಿಯನ್ನೇ ಕೊಲೆಗೈದ ಪಾಪಿ ಪತ್ನಿ!

Share :

14-06-2023

    ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಹತ್ಯೆ ಮಾಡಿದ ಪಾಪಿ ಪತ್ನಿ

    ದಾವಣಗೆರೆ ಹಳೆ ಬಿಸಲೇರಿ ದುರ್ಗಾಂಬಿಕಾ ಕ್ಯಾಂಪ್​ನಲ್ಲಿ ದುರ್ಘಟನೆ

    ಘಟನಾ ಸ್ಥಳಕ್ಕೆ ಭೇಟಿ ನೀಡಿ ಹದಡಿ ಪೊಲೀಸರಿಂದ ಪರಿಶೀಲನೆ

ದಾವಣಗೆರೆ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಎಂದು ಪತಿಯನ್ನು ಪ್ರಿಯಕರನ ಜೊತೆ ಸೇರಿ ಪತ್ನಿಯೇ ಹತ್ಯೆ ಮಾಡಿರೋ ಘಟನೆ ಹಳೆ ಬಿಸಲೇರಿ ದುರ್ಗಾಂಬಿಕಾ ಕ್ಯಾಂಪ್​ನಲ್ಲಿ ನಡೆದಿದೆ. ನಿಂಗರಾಜ (32) ಮೃತ ಪತಿ.

ಪತ್ನಿ ಕಾವ್ಯ ಎಂಬಾಕೆ ಪ್ರಿಯಕರನ ಜೊತೆ ಸೇರಿ ಪತಿಯನ್ನು ಹಳೆ ಬಿಸಲೇರಿಯ ಮನೆಯಲ್ಲಿ ಕೊಲೆ ಮಾಡಿದ್ದಾಳೆ. ಪತ್ನಿ ಕಾವ್ಯ ಪತಿಗೆ ಉಟದಲ್ಲಿ ಮತ್ತು ಬರುವ ಮಾತ್ರೆ ಹಾಕಿದ್ದಾಳೆ. ಬಳಿಕ ಆಕೆಯ ಪ್ರಿಯಕರ ಬಿರೇಶ್ ಎಂಬಾತ ರಾಡ್​​ನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿ ಧೂಳು ತೆಗೆಯಲು ಹೋಗಿ ಬಿದ್ದು ಸಾವನ್ನಪ್ಪಿದ್ದಾನೆ ಅಂತ ಹೇಳಿದ್ದಾರೆ.

ಆದರೆ ಕಾವ್ಯ-ಬಿರೇಶ್ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಗ್ರಾಮಸ್ಥರಿಗೆ ಮಾಹಿತಿ ಲಭ್ಯವಾಗಿದೆ. ಕಾವ್ಯಾಳ ಮೇಲೆ ಅನುಮಾನಗೊಂಡು ಈಕೆಯೇ ಕೊಲೆ ಮಾಡಿದ್ದಾಳೆ ಎಂದು ಗ್ರಾಮಸ್ಥರು ಹದಡಿ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. ಈ ಕುರಿತು ಪೊಲೀಸ್​ ಅಧಿಕಾರಿಗಳು ತನಿಖೆ ನಡೆಸಿದ ಬಳಿಕ ಕಾವ್ಯ-ಬಿರೇಶ್ ಸೇರಿಕೊಂಡು ಪತಿಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಸದ್ಯ ಇಬ್ಬರನ್ನು ಪೊಲೀಸ್​ ಅಧಿಕಾರಿಗಳು ಬಂಧಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

ಅಕ್ರಮ ಸಂಬಂಧಕ್ಕೆ ಅಡ್ಡಿ.. ಪ್ರೇಮಿಯೊಂದಿಗೆ ಸೇರಿ ಪತಿಯನ್ನೇ ಕೊಲೆಗೈದ ಪಾಪಿ ಪತ್ನಿ!

https://newsfirstlive.com/wp-content/uploads/2023/06/death-1-2.jpg

    ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಹತ್ಯೆ ಮಾಡಿದ ಪಾಪಿ ಪತ್ನಿ

    ದಾವಣಗೆರೆ ಹಳೆ ಬಿಸಲೇರಿ ದುರ್ಗಾಂಬಿಕಾ ಕ್ಯಾಂಪ್​ನಲ್ಲಿ ದುರ್ಘಟನೆ

    ಘಟನಾ ಸ್ಥಳಕ್ಕೆ ಭೇಟಿ ನೀಡಿ ಹದಡಿ ಪೊಲೀಸರಿಂದ ಪರಿಶೀಲನೆ

ದಾವಣಗೆರೆ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಎಂದು ಪತಿಯನ್ನು ಪ್ರಿಯಕರನ ಜೊತೆ ಸೇರಿ ಪತ್ನಿಯೇ ಹತ್ಯೆ ಮಾಡಿರೋ ಘಟನೆ ಹಳೆ ಬಿಸಲೇರಿ ದುರ್ಗಾಂಬಿಕಾ ಕ್ಯಾಂಪ್​ನಲ್ಲಿ ನಡೆದಿದೆ. ನಿಂಗರಾಜ (32) ಮೃತ ಪತಿ.

ಪತ್ನಿ ಕಾವ್ಯ ಎಂಬಾಕೆ ಪ್ರಿಯಕರನ ಜೊತೆ ಸೇರಿ ಪತಿಯನ್ನು ಹಳೆ ಬಿಸಲೇರಿಯ ಮನೆಯಲ್ಲಿ ಕೊಲೆ ಮಾಡಿದ್ದಾಳೆ. ಪತ್ನಿ ಕಾವ್ಯ ಪತಿಗೆ ಉಟದಲ್ಲಿ ಮತ್ತು ಬರುವ ಮಾತ್ರೆ ಹಾಕಿದ್ದಾಳೆ. ಬಳಿಕ ಆಕೆಯ ಪ್ರಿಯಕರ ಬಿರೇಶ್ ಎಂಬಾತ ರಾಡ್​​ನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿ ಧೂಳು ತೆಗೆಯಲು ಹೋಗಿ ಬಿದ್ದು ಸಾವನ್ನಪ್ಪಿದ್ದಾನೆ ಅಂತ ಹೇಳಿದ್ದಾರೆ.

ಆದರೆ ಕಾವ್ಯ-ಬಿರೇಶ್ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಗ್ರಾಮಸ್ಥರಿಗೆ ಮಾಹಿತಿ ಲಭ್ಯವಾಗಿದೆ. ಕಾವ್ಯಾಳ ಮೇಲೆ ಅನುಮಾನಗೊಂಡು ಈಕೆಯೇ ಕೊಲೆ ಮಾಡಿದ್ದಾಳೆ ಎಂದು ಗ್ರಾಮಸ್ಥರು ಹದಡಿ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. ಈ ಕುರಿತು ಪೊಲೀಸ್​ ಅಧಿಕಾರಿಗಳು ತನಿಖೆ ನಡೆಸಿದ ಬಳಿಕ ಕಾವ್ಯ-ಬಿರೇಶ್ ಸೇರಿಕೊಂಡು ಪತಿಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಸದ್ಯ ಇಬ್ಬರನ್ನು ಪೊಲೀಸ್​ ಅಧಿಕಾರಿಗಳು ಬಂಧಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

Load More