Advertisment

ಗಂಡನಿಗೆ ಹೆಂಡದ ಚಿಂತೆ.. ಕುಡಿಯೋಕೆ ಹಣ ನೀಡದ್ದಕ್ಕೆ ಹೆಂಡತಿಯನ್ನೇ ಕೊಲೆಗೈದ ಪತಿ

author-image
AS Harshith
Updated On
ಗಂಡನಿಗೆ ಹೆಂಡದ ಚಿಂತೆ.. ಕುಡಿಯೋಕೆ ಹಣ ನೀಡದ್ದಕ್ಕೆ ಹೆಂಡತಿಯನ್ನೇ ಕೊಲೆಗೈದ ಪತಿ
Advertisment
  • ಗಂಡನ ಕೈಯಾರೆ ಕೊಲೆಯಾದ 28 ವರ್ಷದ ಪತ್ನಿ
  • ಸಲಿಕೆಯಿಂದ ಹೊಡೆದು ಪತ್ನಿಯನ್ನು ಕೊಲೆಗೈದ ಗಂಡ
  • ಕುಡಿತದ ದಾಸನಾಗಿದ್ದ ಗಂಡನಿಗೆ ಹೆಂಡದ ಚಿಂತೆ

ರಾಯಚೂರು: ಕುಡಿಯುವುದಕ್ಕೆ ಹಣ ಕೊಡಲಿಲ್ಲ ಎಂದು ಪತಿಯೇ ಪತ್ನಿಯನ್ನು ಹತ್ಯೆ ಮಾಡಿದ ಘಟನೆ ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ಚಿಕ್ಕ ಉಪ್ಪೇರಿಯಲ್ಲಿ ನಡೆದಿದೆ. ಗಂಡ ಬಸವರಾಜ್​​ನಿಂದ ಸುನಿತಾ (28) ಹತ್ಯೆಯಾಗಿದ್ದಾಳೆ.

Advertisment

ಬಸವರಾಜ್ ಮತ್ತು ಸುನಿತಾ ನಡುವೆ ಜಮೀನಿನಲ್ಲಿ ಬೆಳೆಗೆ ನೀರು ಕಟ್ಟುವಾಗ ಗಲಾಟೆ ನಡೆದಿದೆ. ಈ ವೇಳೆ ಬಸವರಾಜ್​ ಕುಡಿಯುವುದಕ್ಕೆ ಹಣ ನೀಡುವಂತೆ ಪತ್ನಿಗೆ ಕಿರುಕುಳ ನೀಡಿದ್ದಾನೆ. ನಿತ್ಯವೂ ಹಣಕ್ಕಾಗಿ ಪೀಡಿಸುತ್ತಿದ್ದ ಬಸವರಾಜ್​ ನಿನ್ನೆ ಸಂಜೆಯೂ ಕೂಡ ಹಣಕ್ಕಾಗಿ ಗಲಾಟೆ ಮಾಡಿದ್ದಾನೆ. ಆ ವೇಳೆ ಪಕ್ಕದಲ್ಲಿದ್ದ ಸಲಿಕೆಯಿಂದ ಸುನಿತಾ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಹಲ್ಲೆಯ ಭೀಕರತೆಗೆ ಸುನಿತಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ.

ಸುನಿತಾ ಮತ್ತು ಬಸವರಾಜ್​ ಪ್ರೀತಿಸಿ ಮದುವೆಯಾಗಿದ್ದರು. 2015 ರಲ್ಲಿ ಲಿಂಗಸ್ಗೂರು ಸಬ್ ರಿಜಿಸ್ಟ್ರಾರ್ ನಲ್ಲಿ ಲವ್​ ಮ್ಯಾರೇಜ್​ ಆಗಿದ್ದರು. ಮದುವೆಯಾಗಿ‌ ಕೆಲ ದಿನಗಳ ಕಾಲ ಮಾತ್ರ ಇಬ್ಬರು ಸುಖ ಸಂಸಾರ ನಡೆಸುತ್ತಿದ್ದರು. ಬಳಿಕ ಪತಿ ಬಸವರಾಜ ಕುಡಿತಕ್ಕೆ ದಾಸನಾಗಿದ್ದನು. ಕುಡಿತದ ದಾಸನಾಗಿದ್ದ ಬಸವರಾಜ್​ ಪತ್ನಿಯ ಜೀವವನ್ನೇ ತೆಗೆದಿದ್ದಾನೆ. ಸದ್ಯ ಸ್ಥಳಕ್ಕೆ ಲಿಂಗಸುಗೂರು ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment