newsfirstkannada.com

‘ನಾನು ಉತ್ತರ ಕೊಡಬಲ್ಲೆ ಆದರೆ..’- MB ಪಾಟೀಲ್‌ಗೆ ವಾರ್ನಿಂಗ್‌ ಕೊಟ್ಟ ಡಿಕೆ ಸುರೇಶ್ ಹೇಳಿದ್ದೇನು?

Share :

23-05-2023

    5 ವರ್ಷ ಸಿದ್ದುನೇ ಸಿಎಂ ಎಂದಿದ್ದ MBP

    ಎಂ.ಬಿ ಪಾಟೀಲ್‌ಗೆ ಡಿಕೆ ಬ್ರದರ್ ಎಚ್ಚರಿಕೆ

    ಸಿದ್ದು ಬಣಕ್ಕೆ ಖಡಕ್ ಸಂದೇಶ ರವಾನೆ

ಬೆಂಗಳೂರು: ಸಿಎಂ, ಡಿಸಿಎಂ ಪ್ರಮಾಣ ವಚನ ಸ್ವೀಕರಿಸಿದ ಮೂರು ದಿನಕ್ಕೆ ಕಾಂಗ್ರೆಸ್‌ ನಾಯಕರಲ್ಲಿ ಮುಸುಕಿನ ಗುದ್ದಾಟ ಶುರುವಾಗಿದೆ. 5 ವರ್ಷ ಸಿದ್ದರಾಮಯ್ಯನೇ ಸಿಎಂ ಅನ್ನೋ ಹೇಳಿಕೆ ‘ಕೈ’ ಪಕ್ಷದಲ್ಲಿ ಅತಿ ದೊಡ್ಡ ಬಿರುಗಾಳಿಯನ್ನೇ ಸೃಷ್ಟಿಸಿದೆ. ಸಚಿವ ಎಂ.ಬಿ ಪಾಟೀಲ್ ಹೇಳಿಕೆಗೆ ಗರಂ ಆಗಿರೋ ಸಂಸದ ಡಿ.ಕೆ ಸುರೇಶ್ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

ಸಿದ್ದರಾಮಯ್ಯನೇ ಪೂರ್ಣಾವಧಿ ಸಿಎಂ ಅನ್ನೋ ಎಂ.ಬಿ ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿ.ಕೆ ಸುರೇಶ್ ಫುಲ್ ಗರಂ ಆದ್ರು. ನಾನು ಎಂ.ಬಿ ಪಾಟೀಲ್​ಗೆ ತೀಕ್ಷ್ಣವಾಗಿ ಎಚ್ಚರಿಕೆ ಕೊಡಬಲ್ಲೆ. ಆದರೆ ಈಗ ಅದು ಬೇಡ. ಅವರ ಹೇಳಿಕೆಗೆ ಮಾಹಿತಿ ಬೇಕಿದ್ರೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಎಐಸಿಸಿ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಅವರ​ ಬಳಿ ಕೇಳಿ ಎಂದರು.

ನನಗೂ ತೀಕ್ಷ್ಣವಾಗಿ ಉತ್ತರ ನೀಡಲೂ ಬರುತ್ತೆ ಎಂದ ಡಿ.ಕೆ ಸುರೇಶ್, ಸಚಿವ ಎಂ.ಬಿ ಪಾಟೀಲ್​ಗೆ ಹೇಳಿ ಇದೆಲ್ಲ ಬೇಡ ಅಂತಾ ಸುದ್ದಿಗಾರರ ಮೂಲಕ ಎಚ್ಚರಿಕೆಯ ಸಂದೇಶ ರವಾನಿಸಿದರು. ಡಿಸಿಎಂ ಡಿಕೆ ಶಿವಕುಮಾರ್ ಕೂಡ ಎಂಬಿ ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. ಯಾರು ಏನೇ ಹೇಳಿಕೆ ಕೊಡಲಿ, ನಾನು ಮಾತಾಡಲ್ಲ. AICC ಸಮಿತಿ, AICC ಅಧ್ಯಕ್ಷರಿದ್ದಾರೆ ಅವರು ನೋಡ್ಕೋತಾರೆ ಎಂದಷ್ಟೇ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ನಾನು ಉತ್ತರ ಕೊಡಬಲ್ಲೆ ಆದರೆ..’- MB ಪಾಟೀಲ್‌ಗೆ ವಾರ್ನಿಂಗ್‌ ಕೊಟ್ಟ ಡಿಕೆ ಸುರೇಶ್ ಹೇಳಿದ್ದೇನು?

https://newsfirstlive.com/wp-content/uploads/2023/05/Dk-Suresh.jpg

    5 ವರ್ಷ ಸಿದ್ದುನೇ ಸಿಎಂ ಎಂದಿದ್ದ MBP

    ಎಂ.ಬಿ ಪಾಟೀಲ್‌ಗೆ ಡಿಕೆ ಬ್ರದರ್ ಎಚ್ಚರಿಕೆ

    ಸಿದ್ದು ಬಣಕ್ಕೆ ಖಡಕ್ ಸಂದೇಶ ರವಾನೆ

ಬೆಂಗಳೂರು: ಸಿಎಂ, ಡಿಸಿಎಂ ಪ್ರಮಾಣ ವಚನ ಸ್ವೀಕರಿಸಿದ ಮೂರು ದಿನಕ್ಕೆ ಕಾಂಗ್ರೆಸ್‌ ನಾಯಕರಲ್ಲಿ ಮುಸುಕಿನ ಗುದ್ದಾಟ ಶುರುವಾಗಿದೆ. 5 ವರ್ಷ ಸಿದ್ದರಾಮಯ್ಯನೇ ಸಿಎಂ ಅನ್ನೋ ಹೇಳಿಕೆ ‘ಕೈ’ ಪಕ್ಷದಲ್ಲಿ ಅತಿ ದೊಡ್ಡ ಬಿರುಗಾಳಿಯನ್ನೇ ಸೃಷ್ಟಿಸಿದೆ. ಸಚಿವ ಎಂ.ಬಿ ಪಾಟೀಲ್ ಹೇಳಿಕೆಗೆ ಗರಂ ಆಗಿರೋ ಸಂಸದ ಡಿ.ಕೆ ಸುರೇಶ್ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

ಸಿದ್ದರಾಮಯ್ಯನೇ ಪೂರ್ಣಾವಧಿ ಸಿಎಂ ಅನ್ನೋ ಎಂ.ಬಿ ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿ.ಕೆ ಸುರೇಶ್ ಫುಲ್ ಗರಂ ಆದ್ರು. ನಾನು ಎಂ.ಬಿ ಪಾಟೀಲ್​ಗೆ ತೀಕ್ಷ್ಣವಾಗಿ ಎಚ್ಚರಿಕೆ ಕೊಡಬಲ್ಲೆ. ಆದರೆ ಈಗ ಅದು ಬೇಡ. ಅವರ ಹೇಳಿಕೆಗೆ ಮಾಹಿತಿ ಬೇಕಿದ್ರೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಎಐಸಿಸಿ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಅವರ​ ಬಳಿ ಕೇಳಿ ಎಂದರು.

ನನಗೂ ತೀಕ್ಷ್ಣವಾಗಿ ಉತ್ತರ ನೀಡಲೂ ಬರುತ್ತೆ ಎಂದ ಡಿ.ಕೆ ಸುರೇಶ್, ಸಚಿವ ಎಂ.ಬಿ ಪಾಟೀಲ್​ಗೆ ಹೇಳಿ ಇದೆಲ್ಲ ಬೇಡ ಅಂತಾ ಸುದ್ದಿಗಾರರ ಮೂಲಕ ಎಚ್ಚರಿಕೆಯ ಸಂದೇಶ ರವಾನಿಸಿದರು. ಡಿಸಿಎಂ ಡಿಕೆ ಶಿವಕುಮಾರ್ ಕೂಡ ಎಂಬಿ ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. ಯಾರು ಏನೇ ಹೇಳಿಕೆ ಕೊಡಲಿ, ನಾನು ಮಾತಾಡಲ್ಲ. AICC ಸಮಿತಿ, AICC ಅಧ್ಯಕ್ಷರಿದ್ದಾರೆ ಅವರು ನೋಡ್ಕೋತಾರೆ ಎಂದಷ್ಟೇ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More