ಬೂಮ್ರಾಗೆ ಕ್ಯಾಪ್ಟನ್.. ಯುವ ಆಟಗಾರನಿಗೆ ಉಪನಾಯಕ ಪಟ್ಟ
ಯುವಕರಿಗೆ ಮಣೆ, ಕರ್ನಾಟಕದ ವೇಗಿಗೂ ಸಿಕ್ಕಿದೆ ಚಾನ್ಸ್..?
ದುಬೆಗೆ ಚಾನ್ಸ್.. ಕೊಹ್ಲಿ, ಜಡೇಜಾ, ರಾಹುಲ್ ಇದ್ದಾರಾ..?
ವೆಸ್ಟ್ ಇಂಡೀಸ್ ಸರಣಿಯ ಕೊನೆಯ ಏಕದಿನಕ್ಕೂ ಮುನ್ನ ಮುಂಬರೋ ಐರ್ಲೆಂಡ್ ಟೂರ್ಗೆ ಟೀಮ್ ಇಂಡಿಯಾ ಅನೌನ್ಸ್ ಆಗಿದೆ. ಅಳೆದು ತೂಗಿ ಲೆಕ್ಕಾಚಾರ ಹಾಕಿರೋ ಸೆಲೆಕ್ಷನ್ ಕಮಿಟಿ ಸ್ಟಾರ್ಗಳಿಗೆಲ್ಲಾ ಕೊಕ್ ಕೊಟ್ಟಿದ್ರೆ, ಹೊಸಬರಿಗೆ ಮಣೆ ಹಾಕಿದೆ. ಯಾರು ಇನ್? ಯಾರು ಔಟ್? ಅನ್ನೋ ವಿವರ ಇಲ್ಲಿದೆ.
ಅಗಸ್ಟ್ನಲ್ಲಿ 18ರಿಂದ ಆರಂಭವಾಗೋ ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ಟೀಮ್ ಇಂಡಿಯಾ ಅನೌನ್ಸ್ ಆಗಿದೆ. ಎಕ್ಸ್ಪೆಕ್ಟೇಶನ್ಗಳೆಲ್ಲಾ ಎಲ್ಲಾ ಉಲ್ಟಾ ಆಗಿದ್ದು, ಸೆಲೆಕ್ಷನ್ ಕಮಿಟಿ ಅಚ್ಚರಿಯ ನಡೆಯನ್ನಿಟ್ಟಿದೆ. ಕೊಹ್ಲಿ, ರೋಹಿತ್ ಶರ್ಮಾ, ಜಡೇಜಾ ಎಲ್ಲಾ ಔಟ್ ಆಗಿದ್ರೆ ತಂಡದಿಂದ ಹೊರಬಿದ್ದವರೆಲ್ಲಾ ಕಮ್ಬ್ಯಾಕ್ ಮಾಡಿದ್ದಾರೆ.
ಬೂಮ್ರಾ ಕಮ್ಬ್ಯಾಕ್, ಶ್ರೇಯಸ್, ರಾಹುಲ್ ಔಟ್
ಬರೋಬ್ಬರಿ 327 ದಿನಗಳ ಬಳಿಕ ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬೂಮ್ರಾ ಕಣಕ್ಕಿಳಿಯೋದು ಕನ್ಫರ್ಮ್ ಆಗಿದೆ. ಕಂಪ್ಲೀಟ್ ಫಿಟ್ ಆಗಿರೋ ಬೂಮ್ರಾಗೆ ಸೆಲೆಕ್ಷನ್ ಕಮಿಟಿ ಮಣೆ ಹಾಕಿದೆ. ಆದ್ರೆ ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್ ಹೊರ ಬಿದ್ದಿದ್ದಾರೆ. ಇದ್ರೊಂದಿಗೆ ಇವರಿಬ್ಬರೂ ಇನ್ನೂ ಕಂಪ್ಲೀಟ್ ಫಿಟ್ ಆಗಿಲ್ಲ ಅನ್ನೋದು ಖಾತರಿ ಆಗಿದೆ.
ಬೂಮ್ರಾ ನಾಯಕ, ಋತುರಾಜ್ ಉಪನಾಯಕ..!
ಕಮ್ಬ್ಯಾಕ್ ಬೆನ್ನಲ್ಲೇ ಬೂಮ್ರಾಗೆ ಬಡ್ತಿ ಸಿಕ್ಕಿದ್ದು, ಐರ್ಲೆಂಡ್ ಪ್ರವಾಸದಲ್ಲಿ ತಂಡವನ್ನ ಮುನ್ನಡೆಸೋ ಜವಾಬ್ದಾರಿ ನೀಡಲಾಗಿದೆ. ಏಷ್ಯನ್ ಗೇಮ್ಸ್ನಲ್ಲಿ ತಂಡದ ನಾಯಕನಾಗಿ ಆಯ್ಕೆಯಾಗಿರೋ ಋತುರಾಜ್ ಗಾಯಕ್ವಾಡ್ಗೆ ಉಪನಾಯಕನ ಪಟ್ಟವನ್ನ ಸೆಲೆಕ್ಷನ್ ಕಮಿಟಿ ಕಟ್ಟಿದೆ.
ರಿಂಕು ಸಿಂಗ್, ಜಿತೇಶ್ ಶರ್ಮಾಗೆ ಸ್ಥಾನ..!
ಐಪಿಎಲ್ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ನಿಂದ ಐಪಿಎಲ್ ಟೂರ್ನಿಯಲ್ಲಿ ಅಬ್ಬರಿಸಿದ ಫಿನಿಷರ್ ರಿಂಕು ಸಿಂಗ್ಗೆ ಐರ್ಲೆಂಡ್ ಟೂರ್ನಲ್ಲಿ ಚಾನ್ಸ್ ಸಿಕ್ಕಿದೆ. ರಿಂಕು ಸಿಂಗ್ ಜೊತೆಗೆ ಐಪಿಎಲ್ನಲ್ಲಿ ಮೋಡಿ ಮಾಡಿದ ಜಿತೇಶ್ ಶರ್ಮಾಗೂ ಸೆಲೆಕ್ಟರ್ಸ್ ಮಣೆ ಹಾಕಿದ್ದಾರೆ. ಬ್ಯಾಕ್ ಅಪ್ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿ ಜಿತೇಶ್ಗೆ ಸ್ಥಾನ ಸಿಕ್ಕಿದೆ.
ಕನ್ನಡಿಗ ಪ್ರಸಿದ್ಧ್ ಕೃಷ್ಣ ವಾಪಸ್
ಅಗಸ್ಟ್ 2022ಕ್ಕೆ ಕೊನೆಯ ಪಂದ್ಯವನ್ನಾಡಿದ್ದ ಕೊನೆಗೂ ಟೀಮ್ ಇಂಡಿಯಾಗೆ ಕಮ್ಬ್ಯಾಕ್ ಮಾಡಿದ್ದಾರೆ. ಗಾಯಗೊಂಡಿದ್ದ ಕರ್ನಾಟಕದ ವೇಗಿ ಹಲ ತಿಂಗಳಿನಿಂದ ಎನ್ಸಿಎನಲ್ಲಿ ಬೀಡು ಬಿಟ್ಟಿದ್ರು. ಸದ್ಯ ಪ್ರಸಿದ್ಧ್, ಕಂಪ್ಲೀಟ್ ಫಿಟ್ ಆಗಿದ್ದು, ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಪ್ರಸಿದ್ಧ್ ಜೊತೆಗೆ ಆರ್ಷ್ದೀಪ್ ಸಿಂಗ್, ಆವೇಶ್ ಖಾನ್ ಕೂಡ ಕಮ್ಬ್ಯಾಕ್ ಮಾಡಿದ್ದಾರೆ.
ಇವರಿಷ್ಟೇ ಅಲ್ಲ.. 2020ರಲ್ಲಿ ಟೀಮ್ ಇಂಡಿಯಾ ಪರ ಕೊನೆಯ ಪಂದ್ಯವನ್ನಾಡಿದ್ದ ಶಿವಂ ದುಬೆಯ ಕಮ್ಬ್ಯಾಕ್ ಕನಸೂ ನನಸಾಗಿದೆ. ಐಪಿಎಲ್ ಹಾಗೂ ದೇವಧರ್ ಟ್ರೋಫಿಯಲ್ಲಿ ಮಿಂಚಿನ ಪ್ರದರ್ಶನ ನೀಡಿದ ದುಬೆಗೆ ಸೆಲೆಕ್ಟರ್ಸ್ ಮಣೆ ಹಾಕಿದ್ದಾರೆ.
ಐರ್ಲೆಂಡ್ ಪ್ರವಾಸಕ್ಕೆ ಟೀಮ್ ಇಂಡಿಯಾ
ಬೂಮ್ರಾ, ಋತುರಾಜ್, ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಶಿವಮ್ ದುಬೆ, ಸಂಜು ಸ್ಯಾಮ್ಸನ್, ಜಿತೇಶ್ ಶರ್ಮಾ, ವಾಷಿಂಗ್ಟನ್ ಸುಂದರ್, ಶಹಬಾಜ್ ಅಹಮ್ಮದ್, ರವಿ ಬಿಷ್ನೋಯಿ, ಪ್ರಸಿದ್ಧ್ ಕೃಷ್ಣ, ಅರ್ಷ್ದೀಪ್ ಸಿಂಗ್, ಮುಖೇಶ್ ಕುಮಾರ್, ಆವೇಶ್ ಖಾನ್
ಐರ್ಲೆಂಡ್ ಪ್ರವಾಸದ ತಂಡಕ್ಕೆ ಬೂಮ್ರಾ ನಾಯಕನಾಗಿದ್ರೆ, ಋತುರಾಜ್ ಗಾಯಕ್ವಾಡ್ ಉಪನಾಯಕನಾಗಿದ್ದಾರೆ. ಬ್ಯಾಟ್ಸ್ಮನ್ಗಳಾಗಿ ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್, ಶಿವಮ್ ದುಬೆ ಸ್ಥಾನ ಗಿಟ್ಟಿಸಿಕೊಂಡಿದ್ರೆ, ವಿಕೆಟ್ ಕೀಪರ್ ಕೋಟಾದಲ್ಲಿ ಸಂಜು ಸ್ಯಾಮ್ಸನ್, ಜಿತೇಶ್ ಶರ್ಮಾಗೆ ಮಣೆ ಹಾಕಲಾಗಿದೆ. ಇನ್ನು ಸ್ಪಿನ್ನರ್ಗಳಾಗಿ ವಾಷಿಂಗ್ಟನ್ ಸುಂದರ್, ಶಹಬಾಜ್ ಅಹಮ್ಮದ್, ರವಿ ಬಿಷ್ನೋಯಿಗೆ ಚಾನ್ಸ್ ಸಿಕ್ಕಿದೆ. ವೇಗಿ ಪ್ರಸಿದ್ಧ್ ಕೃಷ್ಣ, ಆರ್ಷ್ದೀಪ್ ಸಿಂಗ್, ಮುಖೇಶ್ ಕುಮಾರ್ ಹಾಗೂ ಅವೇಶ್ ಖಾನ್ ಸ್ಥಾನ ಗಿಟ್ಟಿಸಿಕೊಂಡಿರುವ ವೇಗಿಗಳಾಗಿದ್ದಾರೆ.
ಒಟ್ಟಿನಲ್ಲಿ, ಅಳೆದು ತೂಗಿ ಲೆಕ್ಕಾಚಾರ ಹಾಕಿರುವ ಸೆಲೆಕ್ಷನ್ ಕಮಿಟಿ ಕೆಲವೇ ಕೆಲವು ಅನುಭವಿಗಳ ಜೊತೆಗೆ ಬಹುತೇಕ ಯಂಗ್ಸ್ಟರ್ಗಳಿಗೆ ಮಣೆ ಹಾಕಿದೆ. ಇದರೊಂದಿಗೆ 2024ರ ಟಿ20 ವಿಶ್ವಕಪ್ಗೆ ಈಗಿನಿಂದಲೇ ತಯಾರಿ ಆರಂಭಿಸಿರುವ ಸೂಚನೆಯನ್ನಂತೂ ನೀಡಿದೆ. ಆಯ್ಕೆಗಾರರ ಈ ನಿರ್ಧಾರವನ್ನ ಮೆಚ್ಚಲೇಬೇಕು.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಬೂಮ್ರಾಗೆ ಕ್ಯಾಪ್ಟನ್.. ಯುವ ಆಟಗಾರನಿಗೆ ಉಪನಾಯಕ ಪಟ್ಟ
ಯುವಕರಿಗೆ ಮಣೆ, ಕರ್ನಾಟಕದ ವೇಗಿಗೂ ಸಿಕ್ಕಿದೆ ಚಾನ್ಸ್..?
ದುಬೆಗೆ ಚಾನ್ಸ್.. ಕೊಹ್ಲಿ, ಜಡೇಜಾ, ರಾಹುಲ್ ಇದ್ದಾರಾ..?
ವೆಸ್ಟ್ ಇಂಡೀಸ್ ಸರಣಿಯ ಕೊನೆಯ ಏಕದಿನಕ್ಕೂ ಮುನ್ನ ಮುಂಬರೋ ಐರ್ಲೆಂಡ್ ಟೂರ್ಗೆ ಟೀಮ್ ಇಂಡಿಯಾ ಅನೌನ್ಸ್ ಆಗಿದೆ. ಅಳೆದು ತೂಗಿ ಲೆಕ್ಕಾಚಾರ ಹಾಕಿರೋ ಸೆಲೆಕ್ಷನ್ ಕಮಿಟಿ ಸ್ಟಾರ್ಗಳಿಗೆಲ್ಲಾ ಕೊಕ್ ಕೊಟ್ಟಿದ್ರೆ, ಹೊಸಬರಿಗೆ ಮಣೆ ಹಾಕಿದೆ. ಯಾರು ಇನ್? ಯಾರು ಔಟ್? ಅನ್ನೋ ವಿವರ ಇಲ್ಲಿದೆ.
ಅಗಸ್ಟ್ನಲ್ಲಿ 18ರಿಂದ ಆರಂಭವಾಗೋ ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ಟೀಮ್ ಇಂಡಿಯಾ ಅನೌನ್ಸ್ ಆಗಿದೆ. ಎಕ್ಸ್ಪೆಕ್ಟೇಶನ್ಗಳೆಲ್ಲಾ ಎಲ್ಲಾ ಉಲ್ಟಾ ಆಗಿದ್ದು, ಸೆಲೆಕ್ಷನ್ ಕಮಿಟಿ ಅಚ್ಚರಿಯ ನಡೆಯನ್ನಿಟ್ಟಿದೆ. ಕೊಹ್ಲಿ, ರೋಹಿತ್ ಶರ್ಮಾ, ಜಡೇಜಾ ಎಲ್ಲಾ ಔಟ್ ಆಗಿದ್ರೆ ತಂಡದಿಂದ ಹೊರಬಿದ್ದವರೆಲ್ಲಾ ಕಮ್ಬ್ಯಾಕ್ ಮಾಡಿದ್ದಾರೆ.
ಬೂಮ್ರಾ ಕಮ್ಬ್ಯಾಕ್, ಶ್ರೇಯಸ್, ರಾಹುಲ್ ಔಟ್
ಬರೋಬ್ಬರಿ 327 ದಿನಗಳ ಬಳಿಕ ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬೂಮ್ರಾ ಕಣಕ್ಕಿಳಿಯೋದು ಕನ್ಫರ್ಮ್ ಆಗಿದೆ. ಕಂಪ್ಲೀಟ್ ಫಿಟ್ ಆಗಿರೋ ಬೂಮ್ರಾಗೆ ಸೆಲೆಕ್ಷನ್ ಕಮಿಟಿ ಮಣೆ ಹಾಕಿದೆ. ಆದ್ರೆ ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್ ಹೊರ ಬಿದ್ದಿದ್ದಾರೆ. ಇದ್ರೊಂದಿಗೆ ಇವರಿಬ್ಬರೂ ಇನ್ನೂ ಕಂಪ್ಲೀಟ್ ಫಿಟ್ ಆಗಿಲ್ಲ ಅನ್ನೋದು ಖಾತರಿ ಆಗಿದೆ.
ಬೂಮ್ರಾ ನಾಯಕ, ಋತುರಾಜ್ ಉಪನಾಯಕ..!
ಕಮ್ಬ್ಯಾಕ್ ಬೆನ್ನಲ್ಲೇ ಬೂಮ್ರಾಗೆ ಬಡ್ತಿ ಸಿಕ್ಕಿದ್ದು, ಐರ್ಲೆಂಡ್ ಪ್ರವಾಸದಲ್ಲಿ ತಂಡವನ್ನ ಮುನ್ನಡೆಸೋ ಜವಾಬ್ದಾರಿ ನೀಡಲಾಗಿದೆ. ಏಷ್ಯನ್ ಗೇಮ್ಸ್ನಲ್ಲಿ ತಂಡದ ನಾಯಕನಾಗಿ ಆಯ್ಕೆಯಾಗಿರೋ ಋತುರಾಜ್ ಗಾಯಕ್ವಾಡ್ಗೆ ಉಪನಾಯಕನ ಪಟ್ಟವನ್ನ ಸೆಲೆಕ್ಷನ್ ಕಮಿಟಿ ಕಟ್ಟಿದೆ.
ರಿಂಕು ಸಿಂಗ್, ಜಿತೇಶ್ ಶರ್ಮಾಗೆ ಸ್ಥಾನ..!
ಐಪಿಎಲ್ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ನಿಂದ ಐಪಿಎಲ್ ಟೂರ್ನಿಯಲ್ಲಿ ಅಬ್ಬರಿಸಿದ ಫಿನಿಷರ್ ರಿಂಕು ಸಿಂಗ್ಗೆ ಐರ್ಲೆಂಡ್ ಟೂರ್ನಲ್ಲಿ ಚಾನ್ಸ್ ಸಿಕ್ಕಿದೆ. ರಿಂಕು ಸಿಂಗ್ ಜೊತೆಗೆ ಐಪಿಎಲ್ನಲ್ಲಿ ಮೋಡಿ ಮಾಡಿದ ಜಿತೇಶ್ ಶರ್ಮಾಗೂ ಸೆಲೆಕ್ಟರ್ಸ್ ಮಣೆ ಹಾಕಿದ್ದಾರೆ. ಬ್ಯಾಕ್ ಅಪ್ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿ ಜಿತೇಶ್ಗೆ ಸ್ಥಾನ ಸಿಕ್ಕಿದೆ.
ಕನ್ನಡಿಗ ಪ್ರಸಿದ್ಧ್ ಕೃಷ್ಣ ವಾಪಸ್
ಅಗಸ್ಟ್ 2022ಕ್ಕೆ ಕೊನೆಯ ಪಂದ್ಯವನ್ನಾಡಿದ್ದ ಕೊನೆಗೂ ಟೀಮ್ ಇಂಡಿಯಾಗೆ ಕಮ್ಬ್ಯಾಕ್ ಮಾಡಿದ್ದಾರೆ. ಗಾಯಗೊಂಡಿದ್ದ ಕರ್ನಾಟಕದ ವೇಗಿ ಹಲ ತಿಂಗಳಿನಿಂದ ಎನ್ಸಿಎನಲ್ಲಿ ಬೀಡು ಬಿಟ್ಟಿದ್ರು. ಸದ್ಯ ಪ್ರಸಿದ್ಧ್, ಕಂಪ್ಲೀಟ್ ಫಿಟ್ ಆಗಿದ್ದು, ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಪ್ರಸಿದ್ಧ್ ಜೊತೆಗೆ ಆರ್ಷ್ದೀಪ್ ಸಿಂಗ್, ಆವೇಶ್ ಖಾನ್ ಕೂಡ ಕಮ್ಬ್ಯಾಕ್ ಮಾಡಿದ್ದಾರೆ.
ಇವರಿಷ್ಟೇ ಅಲ್ಲ.. 2020ರಲ್ಲಿ ಟೀಮ್ ಇಂಡಿಯಾ ಪರ ಕೊನೆಯ ಪಂದ್ಯವನ್ನಾಡಿದ್ದ ಶಿವಂ ದುಬೆಯ ಕಮ್ಬ್ಯಾಕ್ ಕನಸೂ ನನಸಾಗಿದೆ. ಐಪಿಎಲ್ ಹಾಗೂ ದೇವಧರ್ ಟ್ರೋಫಿಯಲ್ಲಿ ಮಿಂಚಿನ ಪ್ರದರ್ಶನ ನೀಡಿದ ದುಬೆಗೆ ಸೆಲೆಕ್ಟರ್ಸ್ ಮಣೆ ಹಾಕಿದ್ದಾರೆ.
ಐರ್ಲೆಂಡ್ ಪ್ರವಾಸಕ್ಕೆ ಟೀಮ್ ಇಂಡಿಯಾ
ಬೂಮ್ರಾ, ಋತುರಾಜ್, ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಶಿವಮ್ ದುಬೆ, ಸಂಜು ಸ್ಯಾಮ್ಸನ್, ಜಿತೇಶ್ ಶರ್ಮಾ, ವಾಷಿಂಗ್ಟನ್ ಸುಂದರ್, ಶಹಬಾಜ್ ಅಹಮ್ಮದ್, ರವಿ ಬಿಷ್ನೋಯಿ, ಪ್ರಸಿದ್ಧ್ ಕೃಷ್ಣ, ಅರ್ಷ್ದೀಪ್ ಸಿಂಗ್, ಮುಖೇಶ್ ಕುಮಾರ್, ಆವೇಶ್ ಖಾನ್
ಐರ್ಲೆಂಡ್ ಪ್ರವಾಸದ ತಂಡಕ್ಕೆ ಬೂಮ್ರಾ ನಾಯಕನಾಗಿದ್ರೆ, ಋತುರಾಜ್ ಗಾಯಕ್ವಾಡ್ ಉಪನಾಯಕನಾಗಿದ್ದಾರೆ. ಬ್ಯಾಟ್ಸ್ಮನ್ಗಳಾಗಿ ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್, ಶಿವಮ್ ದುಬೆ ಸ್ಥಾನ ಗಿಟ್ಟಿಸಿಕೊಂಡಿದ್ರೆ, ವಿಕೆಟ್ ಕೀಪರ್ ಕೋಟಾದಲ್ಲಿ ಸಂಜು ಸ್ಯಾಮ್ಸನ್, ಜಿತೇಶ್ ಶರ್ಮಾಗೆ ಮಣೆ ಹಾಕಲಾಗಿದೆ. ಇನ್ನು ಸ್ಪಿನ್ನರ್ಗಳಾಗಿ ವಾಷಿಂಗ್ಟನ್ ಸುಂದರ್, ಶಹಬಾಜ್ ಅಹಮ್ಮದ್, ರವಿ ಬಿಷ್ನೋಯಿಗೆ ಚಾನ್ಸ್ ಸಿಕ್ಕಿದೆ. ವೇಗಿ ಪ್ರಸಿದ್ಧ್ ಕೃಷ್ಣ, ಆರ್ಷ್ದೀಪ್ ಸಿಂಗ್, ಮುಖೇಶ್ ಕುಮಾರ್ ಹಾಗೂ ಅವೇಶ್ ಖಾನ್ ಸ್ಥಾನ ಗಿಟ್ಟಿಸಿಕೊಂಡಿರುವ ವೇಗಿಗಳಾಗಿದ್ದಾರೆ.
ಒಟ್ಟಿನಲ್ಲಿ, ಅಳೆದು ತೂಗಿ ಲೆಕ್ಕಾಚಾರ ಹಾಕಿರುವ ಸೆಲೆಕ್ಷನ್ ಕಮಿಟಿ ಕೆಲವೇ ಕೆಲವು ಅನುಭವಿಗಳ ಜೊತೆಗೆ ಬಹುತೇಕ ಯಂಗ್ಸ್ಟರ್ಗಳಿಗೆ ಮಣೆ ಹಾಕಿದೆ. ಇದರೊಂದಿಗೆ 2024ರ ಟಿ20 ವಿಶ್ವಕಪ್ಗೆ ಈಗಿನಿಂದಲೇ ತಯಾರಿ ಆರಂಭಿಸಿರುವ ಸೂಚನೆಯನ್ನಂತೂ ನೀಡಿದೆ. ಆಯ್ಕೆಗಾರರ ಈ ನಿರ್ಧಾರವನ್ನ ಮೆಚ್ಚಲೇಬೇಕು.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್