ಉತ್ತಮ ಆರಂಭ ಪಡೆದಿದ್ದ ನೇಪಾಳದ ಓಪನರ್ ಬ್ಯಾಟ್ಸ್ಮನ್ಸ್
ಭಾರತ-ನೇಪಾಳ ಮ್ಯಾಚ್ನಲ್ಲಿ ವಿಫಲ ಫಿಲ್ಡಿಂಗ್, 7 ಕ್ಯಾಚ್ ಡ್ರಾಪ್
ಮಳೆ ಬಂದ್ರು ಭಾರತಕ್ಕೆ ಜಯ, ರೋಹಿತ್, ಗಿಲ್ ಬ್ಯಾಟಿಂಗ್ ಅಬ್ಬರ
ಏಷ್ಯಾಕಪ್ನ 5ನೇ ಪಂದ್ಯದಲ್ಲಿ ನೇಪಾಳ ವಿರುದ್ಧ ಟೀಮ್ ಇಂಡಿಯಾ ಗೆಲುವು ಪಡೆದು ಸೂಪರ್- 4 ಹಂತಕ್ಕೆ ಲಗ್ಗೆ ಇಟ್ಟಿದೆ. ಪಂದ್ಯ ಆರಂಭವಾದ ಮೇಲೆ ಮಳೆಯು ಬಿಟ್ಟು, ಬಿಟ್ಟು ಬಂದು ಅಡ್ಡಿಪಡಿಸಿದ್ದರಿಂದ ಕೊನೆಗೆ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ (DLS) 23 ಓವರ್ಗಳಲ್ಲಿ 145 ರನ್ಗಳ ಗುರಿ ನೀಡಲಾಗಿತ್ತು. ಈ ಗುರಿಯನ್ನು ಭಾರತ ವಿಕೆಟ್ ನಷ್ಟವಿಲ್ಲದೇ ಸುಲಭವಾಗಿ ಮುಟ್ಟಿ ಜಯ ದಾಖಲಿಸಿತು.
ಈ ಪಂದ್ಯದಲ್ಲಿ ಟಾಸ್ ಗೆದ್ದ ನಾಯಕ ರೋಹಿತ್ ಶರ್ಮಾ ಮೊದಲು ಫೀಲ್ಡಿಂಗ್ ಆಯ್ದುಕೊಂಡು ನೇಪಾಳವನ್ನು ಬ್ಯಾಟಿಂಗ್ಗೆ ಆಹ್ವಾನಿಸಿದರು. ಕ್ರೀಸ್ಗೆ ಆಗಮಿಸಿದ ಕುಶಾಲ್ ಭುರ್ಟೆಲ್ ಹಾಗೂ ಆಸಿಫ್ ಶೇಖ್ ಉತ್ತಮ ಆರಂಭವನ್ನೇ ತಂದುಕೊಂಡರು. ಮೊದಲ ವಿಕೆಟ್ಗೆ 65 ರನ್ಗಳ ಜೊತೆಯಾಟ ಆಡುವಾಗ ಶಾರ್ದೂಲ್ ಠಾಕೂರ್ ಬೌಲಿಂಗ್ನಲ್ಲಿ ಕುಶಾಲ್ ಔಟ್ ಆಗುವ ಮೂಲಕ ಪಾರ್ಟನರ್ಶಿಪ್ ಅನ್ನು ಮುರಿದರು. ಇದಕ್ಕೂ ಮೊದಲು ಟೀಮ್ ಇಂಡಿಯಾ ಆಟಗಾರರು 3 ಕ್ಯಾಚ್ಗಳನ್ನು ಡ್ರಾಪ್ ಮಾಡಿದ್ದರು. ಇದರ ಲಾಭ ಪಡೆದಿದ್ದ ಓಪನರ್ಸ್ ಉತ್ತಮ ರನ್ ಕಲೆ ಹಾಕುವಲ್ಲಿ ಮುನ್ನುಗ್ಗುತ್ತಿದ್ದರು.
ಆಸಿಫ್ ಶೇಖ್ 8 ಬೌಂಡರಿಗಳೊಂದಿಗೆ 58 ರನ್ಗಳಿಂದ ಆಡುವಾಗ ಜಡೇಜಾಗೆ ವಿಕೆಟ್ ಒಪ್ಪಿಸಿದರು. ಗುಲ್ಸನ್ ಝಾ 23, ದೀಪೇಂದ್ರ ಸಿಂಗ್ 29 ಹಾಗೂ ಸೋಂಪಾಲ್ ಕಾಮಿ (48) ಹಾಫ್ ಸೆಂಚುರಿ ಹೊಸ್ತಿಲಲ್ಲಿ ಇರುವಾಗ ಮೊಹಮ್ಮದ್ ಶಮಿ ಬೌಲಿಂಗ್ನಲ್ಲಿ ಔಟ್ ಆದರು. ನೇಪಾಳದ ಉಳಿದ ಯಾವ ಆಟಗಾರರು 10ರ ಗಡಿ ದಾಟಲಿಲ್ಲ. ಹೀಗಾಗಿ 48.2 ಓವರ್ಗಳಲ್ಲಿ ನೇಪಾಳ 230 ರನ್ಗೆ ಆಲೌಟ್ ಆಯಿತು.
ಈ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ ಓಪನರ್ಸ್ ರೋಹಿತ್ ಶರ್ಮಾ, ಶುಭ್ಮನ್ ಗಿಲ್ ಉತ್ತಮ ಆರಂಭ ಪಡೆದರು. ಇವರ ಬ್ಯಾಟಿಂಗ್ ವೇಳೆ ಮಳೆ ಬಂದಿದ್ದರಿಂದ ಕೆಲ ಕಾಲ ಪಂದ್ಯ ಸ್ಥಗಿತ ಮಾಡಲಾಗಿತ್ತು. ಬಳಿಕ ಮಳೆ ನಿಂತ ಮೇಲೆ ಡಕ್ವರ್ತ್ ನಿಯಮದ ಪ್ರಕಾರ 23 ಓವರ್ಗಳಲ್ಲಿ ಭಾರತಕ್ಕೆ 145 ರನ್ಗಳ ಗುರಿ ನೀಡಲಾಯಿತು.
ಈ ಗುರಿ ಬೆನ್ನತ್ತಿದ ಭಾರತ 20 ಓವರ್ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೇ 147 ರನ್ಗಳನ್ನು ಬಾರಿಸುವ ಮೂಲಕ 10 ವಿಕೆಟ್ಗಳ ಭರ್ಜರಿ ಗೆಲುವು ಪಡೆಯಿತು. ಕ್ಯಾಪ್ಟನ್ ರೋಹಿತ್ ಶರ್ಮಾ 5 ಭರ್ಜರಿ ಸಿಕ್ಸರ್ ಸಮೇತ 74, ಗಿಲ್ ಅಮೋಘವಾದ 8 ಬೌಂಡರಿಗಳಿಂದ 67 ಸಿಡಿಸಿ ತಂಡದ ಗೆಲುವಿಗೆ ಕಾರಣರಾದರು.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಉತ್ತಮ ಆರಂಭ ಪಡೆದಿದ್ದ ನೇಪಾಳದ ಓಪನರ್ ಬ್ಯಾಟ್ಸ್ಮನ್ಸ್
ಭಾರತ-ನೇಪಾಳ ಮ್ಯಾಚ್ನಲ್ಲಿ ವಿಫಲ ಫಿಲ್ಡಿಂಗ್, 7 ಕ್ಯಾಚ್ ಡ್ರಾಪ್
ಮಳೆ ಬಂದ್ರು ಭಾರತಕ್ಕೆ ಜಯ, ರೋಹಿತ್, ಗಿಲ್ ಬ್ಯಾಟಿಂಗ್ ಅಬ್ಬರ
ಏಷ್ಯಾಕಪ್ನ 5ನೇ ಪಂದ್ಯದಲ್ಲಿ ನೇಪಾಳ ವಿರುದ್ಧ ಟೀಮ್ ಇಂಡಿಯಾ ಗೆಲುವು ಪಡೆದು ಸೂಪರ್- 4 ಹಂತಕ್ಕೆ ಲಗ್ಗೆ ಇಟ್ಟಿದೆ. ಪಂದ್ಯ ಆರಂಭವಾದ ಮೇಲೆ ಮಳೆಯು ಬಿಟ್ಟು, ಬಿಟ್ಟು ಬಂದು ಅಡ್ಡಿಪಡಿಸಿದ್ದರಿಂದ ಕೊನೆಗೆ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ (DLS) 23 ಓವರ್ಗಳಲ್ಲಿ 145 ರನ್ಗಳ ಗುರಿ ನೀಡಲಾಗಿತ್ತು. ಈ ಗುರಿಯನ್ನು ಭಾರತ ವಿಕೆಟ್ ನಷ್ಟವಿಲ್ಲದೇ ಸುಲಭವಾಗಿ ಮುಟ್ಟಿ ಜಯ ದಾಖಲಿಸಿತು.
ಈ ಪಂದ್ಯದಲ್ಲಿ ಟಾಸ್ ಗೆದ್ದ ನಾಯಕ ರೋಹಿತ್ ಶರ್ಮಾ ಮೊದಲು ಫೀಲ್ಡಿಂಗ್ ಆಯ್ದುಕೊಂಡು ನೇಪಾಳವನ್ನು ಬ್ಯಾಟಿಂಗ್ಗೆ ಆಹ್ವಾನಿಸಿದರು. ಕ್ರೀಸ್ಗೆ ಆಗಮಿಸಿದ ಕುಶಾಲ್ ಭುರ್ಟೆಲ್ ಹಾಗೂ ಆಸಿಫ್ ಶೇಖ್ ಉತ್ತಮ ಆರಂಭವನ್ನೇ ತಂದುಕೊಂಡರು. ಮೊದಲ ವಿಕೆಟ್ಗೆ 65 ರನ್ಗಳ ಜೊತೆಯಾಟ ಆಡುವಾಗ ಶಾರ್ದೂಲ್ ಠಾಕೂರ್ ಬೌಲಿಂಗ್ನಲ್ಲಿ ಕುಶಾಲ್ ಔಟ್ ಆಗುವ ಮೂಲಕ ಪಾರ್ಟನರ್ಶಿಪ್ ಅನ್ನು ಮುರಿದರು. ಇದಕ್ಕೂ ಮೊದಲು ಟೀಮ್ ಇಂಡಿಯಾ ಆಟಗಾರರು 3 ಕ್ಯಾಚ್ಗಳನ್ನು ಡ್ರಾಪ್ ಮಾಡಿದ್ದರು. ಇದರ ಲಾಭ ಪಡೆದಿದ್ದ ಓಪನರ್ಸ್ ಉತ್ತಮ ರನ್ ಕಲೆ ಹಾಕುವಲ್ಲಿ ಮುನ್ನುಗ್ಗುತ್ತಿದ್ದರು.
ಆಸಿಫ್ ಶೇಖ್ 8 ಬೌಂಡರಿಗಳೊಂದಿಗೆ 58 ರನ್ಗಳಿಂದ ಆಡುವಾಗ ಜಡೇಜಾಗೆ ವಿಕೆಟ್ ಒಪ್ಪಿಸಿದರು. ಗುಲ್ಸನ್ ಝಾ 23, ದೀಪೇಂದ್ರ ಸಿಂಗ್ 29 ಹಾಗೂ ಸೋಂಪಾಲ್ ಕಾಮಿ (48) ಹಾಫ್ ಸೆಂಚುರಿ ಹೊಸ್ತಿಲಲ್ಲಿ ಇರುವಾಗ ಮೊಹಮ್ಮದ್ ಶಮಿ ಬೌಲಿಂಗ್ನಲ್ಲಿ ಔಟ್ ಆದರು. ನೇಪಾಳದ ಉಳಿದ ಯಾವ ಆಟಗಾರರು 10ರ ಗಡಿ ದಾಟಲಿಲ್ಲ. ಹೀಗಾಗಿ 48.2 ಓವರ್ಗಳಲ್ಲಿ ನೇಪಾಳ 230 ರನ್ಗೆ ಆಲೌಟ್ ಆಯಿತು.
ಈ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ ಓಪನರ್ಸ್ ರೋಹಿತ್ ಶರ್ಮಾ, ಶುಭ್ಮನ್ ಗಿಲ್ ಉತ್ತಮ ಆರಂಭ ಪಡೆದರು. ಇವರ ಬ್ಯಾಟಿಂಗ್ ವೇಳೆ ಮಳೆ ಬಂದಿದ್ದರಿಂದ ಕೆಲ ಕಾಲ ಪಂದ್ಯ ಸ್ಥಗಿತ ಮಾಡಲಾಗಿತ್ತು. ಬಳಿಕ ಮಳೆ ನಿಂತ ಮೇಲೆ ಡಕ್ವರ್ತ್ ನಿಯಮದ ಪ್ರಕಾರ 23 ಓವರ್ಗಳಲ್ಲಿ ಭಾರತಕ್ಕೆ 145 ರನ್ಗಳ ಗುರಿ ನೀಡಲಾಯಿತು.
ಈ ಗುರಿ ಬೆನ್ನತ್ತಿದ ಭಾರತ 20 ಓವರ್ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೇ 147 ರನ್ಗಳನ್ನು ಬಾರಿಸುವ ಮೂಲಕ 10 ವಿಕೆಟ್ಗಳ ಭರ್ಜರಿ ಗೆಲುವು ಪಡೆಯಿತು. ಕ್ಯಾಪ್ಟನ್ ರೋಹಿತ್ ಶರ್ಮಾ 5 ಭರ್ಜರಿ ಸಿಕ್ಸರ್ ಸಮೇತ 74, ಗಿಲ್ ಅಮೋಘವಾದ 8 ಬೌಂಡರಿಗಳಿಂದ 67 ಸಿಡಿಸಿ ತಂಡದ ಗೆಲುವಿಗೆ ಕಾರಣರಾದರು.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ