ಏಷ್ಯಾಕಪ್ ಗೆಲ್ಲುವ ನಿರೀಕ್ಷೆಯಲ್ಲಿ ರೋಹಿತ್ ಶರ್ಮಾ ಟೀಮ್
ಇವತ್ತಿನ ಮ್ಯಾಚ್ನಲ್ಲಿ ಮತ್ತೆ ಅಬ್ಬರಿಸ್ತಾರಾ ವಿರಾಟ್, ರಾಹುಲ್
ಫೈನಲ್ ಪಂದ್ಯದಲ್ಲಿ ಯಾರಿಗೆ ಒಲಿಯಲಿದೆ ವಿಜಯಲಕ್ಷ್ಮಿ ಗೊತ್ತಾ?
ಶ್ರೀಲಂಕಾದ ಕೊಲೊಂಬೋದ ಆರ್ ಪ್ರೇಮದಾಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಏಷ್ಯಾಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಟಾಸ್ ಗೆದ್ದುಕೊಂಡಿದೆ. ಲಂಕಾದ ಕ್ಯಾಪ್ಟನ್ ದಸುನ್ ಶನಕ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು ರೋಹಿತ್ ಪಡೆಯನ್ನು ಫೀಲ್ಡಿಂಗ್ಗೆ ಆಹ್ವಾನಿಸಿದ್ದಾರೆ.
ಈ ಬಾರಿ ನೇಪಾಳ ಸೇರಿ ಒಟ್ಟು ಆರು ತಂಡಗಳು ಏಷ್ಯಾಕಪ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದವು. ಇದರಲ್ಲಿ ಸಖತ್ ಪೈಪೋಟಿ ಮಾಡಿ ಭಾರತ ಮತ್ತು ಶ್ರೀಲಂಕಾ ತಂಡಗಳು ಫೈನಲ್ಗೆ ಬಂದಿವೆ. ಇನ್ನು ಟೀಮ್ ಇಂಡಿಯಾದಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಕೆ.ಎಲ್ ರಾಹುಲ್ ಅದ್ಭುತವಾದ ಫಾರ್ಮ್ನಲ್ಲಿದ್ದಾರೆ. ಈಗಾಗಲೇ ಕಳೆದ ಮ್ಯಾಚ್ಗಳಲ್ಲಿ ಮೂರು ಸೆಂಚುರಿಗಳು ಒಲಿದು ಬಂದಿದ್ದು ಫೈನಲ್ ಪಂದ್ಯದಲ್ಲೂ ಈ ನಾಲ್ವರು ಆಟಗಾರರು ಆರ್ಭಟಿಸೋ ಮುನ್ಸೂಚನೆ ಇದೆ ಎನ್ನಲಾಗಿದೆ.
ಆಲ್ರೌಂಡರ್ಗಳಾಗಿ ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್ ಕಣಕ್ಕೆ ಇಳಿಯಲಿದ್ದಾರೆ. ಭಾರತದ ಬೌಲಿಂಗ್ ಪಡೆ ಕೂಡ ಪ್ರಬಲವಾಗಿದ್ದು ಕೊಂಚ ಬದಲಾವಣೆ ಮಾಡಲಾಗಿದೆ. ಶಾರ್ದುಲ್ ಠಾಕೂರ್ ಬದಲಿಗೆ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ಗೆ ಚಾನ್ಸ್ ನೀಡಲಾಗಿದೆ. ಇನ್ನು ಬೂಮ್ರಾ, ಮೊಹಮ್ಮದ್ ಸಿರಾಜ್ ಹಾಗೂ ಕುಲ್ದೀಪ್ ಯಾದವ್ ಅವರು ವಿಕೆಟ್ಗಳನ್ನು ಉರುಳಿಸಲು ರೆಡಿಯಾಗಿದ್ದಾರೆ.
2ನೇ ಬಾರಿಗೆ ಏಷ್ಯಾಕಪ್ ಫೈನಲ್ಗೆ ಲಗ್ಗೆ ಇಟ್ಟಿರುವ ಶ್ರೀಲಂಕಾ ಟೀಮ್ ಹೇಗಾದ್ರೂ ಮಾಡಿ ರೋಹಿತ್ ತಂಡವನ್ನು ಕಟ್ಟಿ ಹಾಕಲು ಬಿಗ್ ಪ್ಲಾನ್ನಲ್ಲಿದ್ದಾರೆ. ನಾಯಕ ದಸುನ್ ಶನಕ್ ನೇತೃತ್ವದ ತಂಡ ಭಾರೀ ನೀರಿಕ್ಷಯಿಂದ ಕ್ರೀಸ್ಗೆ ಇಳಿಯುತ್ತಿದೆ. ಯುವ ಆಟಗಾರ ದುನಿತ್ ವೆಲ್ಲಲಾಗೆ ಅವರು ಕಳೆದ ಪಂದ್ಯದಲ್ಲಿ ಭಾರತಕ್ಕೆ ಶಾಕ್ ನೀಡಿದ್ದರು. ಈ ಬಾರಿ ಏನು ಮಾಡುತ್ತಾರೆ ಎಂದು ಮ್ಯಾಚ್ ಶುರುವಾದ ಮೇಲೆ ಗೊತ್ತಾಗಲಿದೆ.
ಟೀಮ್ ಇಂಡಿಯಾದ ಪ್ಲೇಯಿಂಗ್- 11
ರೋಹಿತ್ ಶರ್ಮಾ(ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಕೆ.ಎಲ್ ರಾಹುಲ್ (ವಿಕೆಟ್ ಕೀಪರ್ ), ಇಶನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಜಸ್ಪ್ರೀತ್ ಬೂಮ್ರಾ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್
ಏಷ್ಯಾಕಪ್ ಗೆಲ್ಲುವ ನಿರೀಕ್ಷೆಯಲ್ಲಿ ರೋಹಿತ್ ಶರ್ಮಾ ಟೀಮ್
ಇವತ್ತಿನ ಮ್ಯಾಚ್ನಲ್ಲಿ ಮತ್ತೆ ಅಬ್ಬರಿಸ್ತಾರಾ ವಿರಾಟ್, ರಾಹುಲ್
ಫೈನಲ್ ಪಂದ್ಯದಲ್ಲಿ ಯಾರಿಗೆ ಒಲಿಯಲಿದೆ ವಿಜಯಲಕ್ಷ್ಮಿ ಗೊತ್ತಾ?
ಶ್ರೀಲಂಕಾದ ಕೊಲೊಂಬೋದ ಆರ್ ಪ್ರೇಮದಾಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಏಷ್ಯಾಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಟಾಸ್ ಗೆದ್ದುಕೊಂಡಿದೆ. ಲಂಕಾದ ಕ್ಯಾಪ್ಟನ್ ದಸುನ್ ಶನಕ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು ರೋಹಿತ್ ಪಡೆಯನ್ನು ಫೀಲ್ಡಿಂಗ್ಗೆ ಆಹ್ವಾನಿಸಿದ್ದಾರೆ.
ಈ ಬಾರಿ ನೇಪಾಳ ಸೇರಿ ಒಟ್ಟು ಆರು ತಂಡಗಳು ಏಷ್ಯಾಕಪ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದವು. ಇದರಲ್ಲಿ ಸಖತ್ ಪೈಪೋಟಿ ಮಾಡಿ ಭಾರತ ಮತ್ತು ಶ್ರೀಲಂಕಾ ತಂಡಗಳು ಫೈನಲ್ಗೆ ಬಂದಿವೆ. ಇನ್ನು ಟೀಮ್ ಇಂಡಿಯಾದಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಕೆ.ಎಲ್ ರಾಹುಲ್ ಅದ್ಭುತವಾದ ಫಾರ್ಮ್ನಲ್ಲಿದ್ದಾರೆ. ಈಗಾಗಲೇ ಕಳೆದ ಮ್ಯಾಚ್ಗಳಲ್ಲಿ ಮೂರು ಸೆಂಚುರಿಗಳು ಒಲಿದು ಬಂದಿದ್ದು ಫೈನಲ್ ಪಂದ್ಯದಲ್ಲೂ ಈ ನಾಲ್ವರು ಆಟಗಾರರು ಆರ್ಭಟಿಸೋ ಮುನ್ಸೂಚನೆ ಇದೆ ಎನ್ನಲಾಗಿದೆ.
ಆಲ್ರೌಂಡರ್ಗಳಾಗಿ ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್ ಕಣಕ್ಕೆ ಇಳಿಯಲಿದ್ದಾರೆ. ಭಾರತದ ಬೌಲಿಂಗ್ ಪಡೆ ಕೂಡ ಪ್ರಬಲವಾಗಿದ್ದು ಕೊಂಚ ಬದಲಾವಣೆ ಮಾಡಲಾಗಿದೆ. ಶಾರ್ದುಲ್ ಠಾಕೂರ್ ಬದಲಿಗೆ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ಗೆ ಚಾನ್ಸ್ ನೀಡಲಾಗಿದೆ. ಇನ್ನು ಬೂಮ್ರಾ, ಮೊಹಮ್ಮದ್ ಸಿರಾಜ್ ಹಾಗೂ ಕುಲ್ದೀಪ್ ಯಾದವ್ ಅವರು ವಿಕೆಟ್ಗಳನ್ನು ಉರುಳಿಸಲು ರೆಡಿಯಾಗಿದ್ದಾರೆ.
2ನೇ ಬಾರಿಗೆ ಏಷ್ಯಾಕಪ್ ಫೈನಲ್ಗೆ ಲಗ್ಗೆ ಇಟ್ಟಿರುವ ಶ್ರೀಲಂಕಾ ಟೀಮ್ ಹೇಗಾದ್ರೂ ಮಾಡಿ ರೋಹಿತ್ ತಂಡವನ್ನು ಕಟ್ಟಿ ಹಾಕಲು ಬಿಗ್ ಪ್ಲಾನ್ನಲ್ಲಿದ್ದಾರೆ. ನಾಯಕ ದಸುನ್ ಶನಕ್ ನೇತೃತ್ವದ ತಂಡ ಭಾರೀ ನೀರಿಕ್ಷಯಿಂದ ಕ್ರೀಸ್ಗೆ ಇಳಿಯುತ್ತಿದೆ. ಯುವ ಆಟಗಾರ ದುನಿತ್ ವೆಲ್ಲಲಾಗೆ ಅವರು ಕಳೆದ ಪಂದ್ಯದಲ್ಲಿ ಭಾರತಕ್ಕೆ ಶಾಕ್ ನೀಡಿದ್ದರು. ಈ ಬಾರಿ ಏನು ಮಾಡುತ್ತಾರೆ ಎಂದು ಮ್ಯಾಚ್ ಶುರುವಾದ ಮೇಲೆ ಗೊತ್ತಾಗಲಿದೆ.
ಟೀಮ್ ಇಂಡಿಯಾದ ಪ್ಲೇಯಿಂಗ್- 11
ರೋಹಿತ್ ಶರ್ಮಾ(ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಕೆ.ಎಲ್ ರಾಹುಲ್ (ವಿಕೆಟ್ ಕೀಪರ್ ), ಇಶನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಜಸ್ಪ್ರೀತ್ ಬೂಮ್ರಾ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್