newsfirstkannada.com

Asia Cup: ರೋಹಿತ್​​​-ಗಿಲ್ ​​​​ಮಿಂಚಿನ ಅರ್ಧ ಶತಕ.. ಇವತ್ತು ಮ್ಯಾಚ್​ ರದ್ದುಗೊಂಡರೆ ಭಾರತಕ್ಕೆ ಹೆಚ್ಚು ಲಾಸ್​; ಯಾಕೆ?

Share :

11-09-2023

    ಬಾಬರ್​ ಪಡೆಯ ಗೇಮ್​​ಪ್ಲಾನ್​ಗೆ ಟಕ್ಕರ್ ಕೊಟ್ಟ ಭಾರತ

    ಒಂದು ವೇಳೆ ಇಂದು ಮಳೆ ಬಂದರೇ ಭಾರತಕ್ಕೆ ಹೇಗೆ ಲಾಸ್?

    ಪಾಕ್​ ಬೌಲರ್​ಗಳಿಗೆ ಬೆವರಿಳಿಸಿದ ಓಪನರ್​ ಬ್ಯಾಟ್ಸ್​ಮನ್ಸ್​

ಮತ್ತೆ ನಿರಾಸೆ.. ಫುಲ್​ ಮಜಾ ಸವಿಯುವ ಅಭಿಮಾನಿಗಳ ನಿರೀಕ್ಷೆಗೆ ಮಳೆರಾಯ ತಣ್ಣೀರೆರೆಚಿದ. ಭಾರತ-ಪಾಕಿಸ್ತಾನ ನಡುವಿನ ಸೂಪರ್​​​​-4 ಪಂದ್ಯಕ್ಕೆ ಮಳೆ ಅವಕೃಪೆ ತೋರಿತು. ಆದರೂ ಬೇಸರ ಪಡಬೇಕಿಲ್ಲ. ಏಕೆಂದರೆ ಪಂದ್ಯಕ್ಕೆ ರಿಸರ್ವ್​ ಡೇ ಇರೋದ್ರಿಂದ ಇವತ್ತು ಪಂದ್ಯ ಮುಂದುವರೆಯಲಿದೆ.

ಕೊಲೊಂಬೋದಲ್ಲಿ ಟಾಸ್​​​ ಸೋತು ಬ್ಯಾಟಿಂಗ್​ಗಿಳಿದ ಟೀಮ್ ಇಂಡಿಯಾ ಬದ್ಧವೈರಿ ಪಾಕ್​​​ಗೆ ಮುಟ್ಟಿನೋಡಿಕೊಳ್ಳುವಂತ ಆನ್ಸರ್​ ನೀಡಿತು. ಮತ್ತೊಮ್ಮೆ ಟಾಪ್ ಆರ್ಡರ್ ಕಟ್ಟಿಹಾಕುವ ಬಾಬರ್​​ ಪಡೆಯ ಸ್ಟ್ರಾಟಜಿಯನ್ನ ಭಾರತದ ಓಪನರ್ಸ್​ ಬುಡಮೇಲು ಮಾಡಿದ್ರು.

ಅರ್ಧಶತಕ ಸಿಡಿಸಿದ ರೋಹಿತ್ ಶರ್ಮಾ

ರೋಹಿತ್​​​​-ಗಿಲ್​ ರಣಾರ್ಭಟಕ್ಕೆ ಉಡೀಸ್​​​..!

ಮೊದಲ ಮುಖಾಮುಖಿಯಲ್ಲಿ ಪಾಕ್​ ಬೌಲರ್ಸ್​ ಎದುರು ತಗ್ಗಿಸಿದ ಇಂಡಿಯನ್ ಓಪನರ್ಸ್​ ನಿನ್ನೆ ತಲೆ ಎತ್ತಿ ನಿಲ್ಲುವಂತ ಆಟವಾಡಿದ್ರು. ಬಲಿಷ್ಠ ಪಾಕ್​ ಪೇಸ್​ ಬ್ಯಾಟರಿಯನ್ನ ರೋಹಿತ್ ಶರ್ಮಾ ಹಾಗೂ ಶುಭ್​​ಮನ್​​​ ಗಿಲ್ ಉಡೀಸ್ ಮಾಡಿದ್ರು. ಕೊಲಂಬೋದಲ್ಲಿ ಅಕ್ಷರಶಃ ರೌದ್ರ ನರ್ತನ ತೋರಿದ ಓಪನಿಂಗ್ ಜೋಡಿ ಬೊಂಬಾಟ್​​​ ಶತಕದ ಜೊತೆಯಾಟವಾಡಿ ವಿಜೃಂಭಿಸಿತು.

ಅರ್ಧಶತಕದೊಂದಿಗೆ ಪಾಕ್​ ಬೌಲರ್ಸ್​ ಜನ್ಮಜಾಲಾಡಿದ ಗಿಲ್

ಮೊದಲ ಮುಖಾಮುಖಿಯಲ್ಲಿ ರನ್​ ಗಳಿಸಲು ತಿಣುಕಾಡಿದ್ದ ಶುಭ್​​ಮನ್ ಗಿಲ್ ನಿನ್ನೆ ಉಗ್ರರೂಪವನ್ನೇ ತಾಳಿದ್ರು. ಮೊದಲ ಎಸೆತದಿಂದಲೇ ಪಾಕ್​​ ಬೌಲರ್​​​ ಜನ್ಮಜಾಲಾಡಿದ ಪ್ರಿನ್ಸ್ 37 ಎಸೆತಗಳಲ್ಲಿ ಸ್ಫೋಟಕ ಹಾಫ್​​ಸೆಂಚುರಿ ಸಿಡಿಸಿ ಪೆವಿಲಿಯನ್ ಸೇರಿದರು.

ರೋಹಿತ್ ಅಂದ್ರೆ ಫ್ಲವರ್​ ಅಲ್ಲ, ಫಯರ್​​​..!

ರೋಹಿತ್ ಅಂದ್ರೆ ಫ್ಲವರ್ ಅಂದುಕೊಂಡಿದ್ದ ಪಾಕ್ ಬೌಲರ್​​​​​​​ ಯೋಚನೆಯನ್ನ ಹಿಟ್​ಮ್ಯಾನ್​ ತಲೆಕೆಳಗಾಗಿಸಿದ್ರು. ಸಿಕ್ಸರ್​​​-ಬೌಂಡ್ರಿಗಳ ಭೋರ್ಗರೆತದ ಮೂಲಕ ನಾನು ಫ್ಲವರ್ ಅಲ್ಲ, ಫಯರ್ ಅನ್ನೋದನ್ನ ತೋರಿಸಿದ್ರು. 4 ಬೌಂಡ್ರಿ, 6 ಸಿಕ್ಸರ್ ಸಹಿತ ಅರ್ಧಶತಕ ಸಿಡಿಸಿ ಕಮಾಲ್ ಮಾಡಿದ್ರು.

ಪಂದ್ಯಕ್ಕೆ ಮಳೆ ಅಡ್ಡಿ..ಇಂದಿಗೆ ಮುಂದೂಡಿಕೆ..

ಓಪನರ್ಸ್​ ನಿರ್ಗಮಿಸಿದ ಬಳಿಕ ಕಿಂಗ್ ಕೊಹ್ಲಿ ಹಾಗೂ ಕೆ.ಎಲ್ ರಾಹುಲ್ ಕೂಡಿಕೊಂಡು ತಾಳ್ಮೆಯುತ ಇನ್ನಿಂಗ್ಸ್ ಕಟ್ಟಲು ಪ್ರಯತ್ನಿಸಿದ್ರು. ಉತ್ತಮ ಸ್ಥಿತಿಯಲ್ಲಿದ್ದ ಭಾರತ 147 ರನ್​ಗೆ 2 ವಿಕೆಟ್ ಕಳೆದುಕೊಂಡಿದ್ದಾಗ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು. ಬಳಿಕ ಪಂದ್ಯ ಶುರುವಾಗಲಿಲ್ಲ. ಕೊನೆಗೆ ರಾತ್ರಿ 8.45ಕ್ಕೆ ಅಂಪೈರ್​ಗಳು​ ಉಭಯ ಕ್ಯಾಪ್ಟನ್​ಗಳ​​ ಜೊತೆ ಚರ್ಚಿಸಿ ಪಂದ್ಯ ಇಂದಿಗೆ ಮುಂದೂಡಿದ್ರು.

ಭಾರತದ ಕ್ಯಾಪ್ಟನ್​ ರೋಹಿತ್ ಶರ್ಮಾ

ಇಂದೂ ಮಳೆ ಬಂದರೆ ಏನಾಗುತ್ತೆ..?

ನಿನ್ನೆ ಆಟಕ್ಕಿಂತ ಮಳೆರಾಯನೇ ಹೆಚ್ಚು ಸದ್ದು ಮಾಡಿದ. ಒಂದು ವೇಳೆ ಇಂದು ಮಳೆ ಬರದೇ ಹೋದಲ್ಲಿ ಸಂಪೂರ್ಣ 50 ಓವರ್​ಗಳ ಆಟ ನಡೆಯಲಿದೆ. ಭಾರತ 147 ರನ್​ನಿಂದ ಇನ್ನಿಂಗ್ಸ್ ಮುಂದುವರಿಸಲಿದೆ. ಇಷ್ಟಾಗಿಯೂ ಮತ್ತೆ ಮಳೆ ಅವಕೃಪೆ ತೋರಿದ್ರೆ ಡೆಕ್ವರ್ತ್​ ಲೂಯಿಸ್​​​ ನಿಯಮದನ್ವಯ ಓವರ್ ಕಡಿತ ಮಾಡಿ ಆಡಿಸಲಾಗುತ್ತೆ. ಹಾಗೊಂದು ವೇಳೆ ಆಡಲು ಸ್ವಲ್ಪ ಅನುವು ಮಾಡಿಕೊಡದಿದ್ದಲ್ಲಿ ಪಂದ್ಯವನ್ನ ರದ್ದು ಮಾಡಿ ಉಭಯ ತಂಡಗಳಿಗೆ ತಲಾ ಒಂದು ಅಂಕ ನೀಡಲಾಗುತ್ತೆ.

ಮಳೆ ರದ್ದಿನಿಂದ ಭಾರತಕ್ಕೆ ಆಗುವ ನಷ್ಟವೇನು ?

ಇಂದೂ ನಿಜಕ್ಕೂ ಮಳೆ ಬಾರದಿರಲಿ. ಯಾಕಂದ್ರೆ ಬಂದಿದ್ದೇ ಆದಲ್ಲಿ ಅದರಿಂದ ಟೀಮ್ ಇಂಡಿಯಾಗೆ ಹೆಚ್ಚು ಲಾಸ್​​. ರದ್ದಿನಿಂದ 1 ಅಂಕ ಪಡೆಯುವ ಭಾರತ ಉಳಿದೆರಡು ಪಂದ್ಯಗಳನ್ನ ಗೆಲ್ಲಲೇಕಾಗುತ್ತೆ. ಜೊತೆಗೆ ನೆಟ್​​ರನ್​ಗೇಟ್​​ ಕೂಡ ಉತ್ತಮಪಡಿಸಿಕೊಳ್ಳಬೇಕು. ಆಗಲಷ್ಟೇ 5 ಅಂಕ ಪಡೆದು ಫೈನಲ್ ಆಸೆ ಜೀವಂತವಾಗಿರಿಸಿಕೊಳ್ಳಲಿದೆ. ಎರಡರ ಪೈಕಿ ಒಂದು ಪಂದ್ಯ ಸೋತರೂ ಫೈನಲ್​ ಹಾದಿ ದುರ್ಗಮವಾಗಲಿದೆ. ಇಂದೂ ಸಂಪೂರ್ಣ ಪಂದ್ಯ ನಡೆಯಲಿ. ರೋಹಿತ್​ ಪಡೆ ಬದ್ಧವೈರಿ ಪಾಕ್​ ಮಣಿಸಿ ಸೂಪರ್​​​- 4ನಲ್ಲಿ ಶುಭಾರಂಭ ಮಾಡಲಿ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Asia Cup: ರೋಹಿತ್​​​-ಗಿಲ್ ​​​​ಮಿಂಚಿನ ಅರ್ಧ ಶತಕ.. ಇವತ್ತು ಮ್ಯಾಚ್​ ರದ್ದುಗೊಂಡರೆ ಭಾರತಕ್ಕೆ ಹೆಚ್ಚು ಲಾಸ್​; ಯಾಕೆ?

https://newsfirstlive.com/wp-content/uploads/2023/09/ROHIT_GILL_BATTING.jpg

    ಬಾಬರ್​ ಪಡೆಯ ಗೇಮ್​​ಪ್ಲಾನ್​ಗೆ ಟಕ್ಕರ್ ಕೊಟ್ಟ ಭಾರತ

    ಒಂದು ವೇಳೆ ಇಂದು ಮಳೆ ಬಂದರೇ ಭಾರತಕ್ಕೆ ಹೇಗೆ ಲಾಸ್?

    ಪಾಕ್​ ಬೌಲರ್​ಗಳಿಗೆ ಬೆವರಿಳಿಸಿದ ಓಪನರ್​ ಬ್ಯಾಟ್ಸ್​ಮನ್ಸ್​

ಮತ್ತೆ ನಿರಾಸೆ.. ಫುಲ್​ ಮಜಾ ಸವಿಯುವ ಅಭಿಮಾನಿಗಳ ನಿರೀಕ್ಷೆಗೆ ಮಳೆರಾಯ ತಣ್ಣೀರೆರೆಚಿದ. ಭಾರತ-ಪಾಕಿಸ್ತಾನ ನಡುವಿನ ಸೂಪರ್​​​​-4 ಪಂದ್ಯಕ್ಕೆ ಮಳೆ ಅವಕೃಪೆ ತೋರಿತು. ಆದರೂ ಬೇಸರ ಪಡಬೇಕಿಲ್ಲ. ಏಕೆಂದರೆ ಪಂದ್ಯಕ್ಕೆ ರಿಸರ್ವ್​ ಡೇ ಇರೋದ್ರಿಂದ ಇವತ್ತು ಪಂದ್ಯ ಮುಂದುವರೆಯಲಿದೆ.

ಕೊಲೊಂಬೋದಲ್ಲಿ ಟಾಸ್​​​ ಸೋತು ಬ್ಯಾಟಿಂಗ್​ಗಿಳಿದ ಟೀಮ್ ಇಂಡಿಯಾ ಬದ್ಧವೈರಿ ಪಾಕ್​​​ಗೆ ಮುಟ್ಟಿನೋಡಿಕೊಳ್ಳುವಂತ ಆನ್ಸರ್​ ನೀಡಿತು. ಮತ್ತೊಮ್ಮೆ ಟಾಪ್ ಆರ್ಡರ್ ಕಟ್ಟಿಹಾಕುವ ಬಾಬರ್​​ ಪಡೆಯ ಸ್ಟ್ರಾಟಜಿಯನ್ನ ಭಾರತದ ಓಪನರ್ಸ್​ ಬುಡಮೇಲು ಮಾಡಿದ್ರು.

ಅರ್ಧಶತಕ ಸಿಡಿಸಿದ ರೋಹಿತ್ ಶರ್ಮಾ

ರೋಹಿತ್​​​​-ಗಿಲ್​ ರಣಾರ್ಭಟಕ್ಕೆ ಉಡೀಸ್​​​..!

ಮೊದಲ ಮುಖಾಮುಖಿಯಲ್ಲಿ ಪಾಕ್​ ಬೌಲರ್ಸ್​ ಎದುರು ತಗ್ಗಿಸಿದ ಇಂಡಿಯನ್ ಓಪನರ್ಸ್​ ನಿನ್ನೆ ತಲೆ ಎತ್ತಿ ನಿಲ್ಲುವಂತ ಆಟವಾಡಿದ್ರು. ಬಲಿಷ್ಠ ಪಾಕ್​ ಪೇಸ್​ ಬ್ಯಾಟರಿಯನ್ನ ರೋಹಿತ್ ಶರ್ಮಾ ಹಾಗೂ ಶುಭ್​​ಮನ್​​​ ಗಿಲ್ ಉಡೀಸ್ ಮಾಡಿದ್ರು. ಕೊಲಂಬೋದಲ್ಲಿ ಅಕ್ಷರಶಃ ರೌದ್ರ ನರ್ತನ ತೋರಿದ ಓಪನಿಂಗ್ ಜೋಡಿ ಬೊಂಬಾಟ್​​​ ಶತಕದ ಜೊತೆಯಾಟವಾಡಿ ವಿಜೃಂಭಿಸಿತು.

ಅರ್ಧಶತಕದೊಂದಿಗೆ ಪಾಕ್​ ಬೌಲರ್ಸ್​ ಜನ್ಮಜಾಲಾಡಿದ ಗಿಲ್

ಮೊದಲ ಮುಖಾಮುಖಿಯಲ್ಲಿ ರನ್​ ಗಳಿಸಲು ತಿಣುಕಾಡಿದ್ದ ಶುಭ್​​ಮನ್ ಗಿಲ್ ನಿನ್ನೆ ಉಗ್ರರೂಪವನ್ನೇ ತಾಳಿದ್ರು. ಮೊದಲ ಎಸೆತದಿಂದಲೇ ಪಾಕ್​​ ಬೌಲರ್​​​ ಜನ್ಮಜಾಲಾಡಿದ ಪ್ರಿನ್ಸ್ 37 ಎಸೆತಗಳಲ್ಲಿ ಸ್ಫೋಟಕ ಹಾಫ್​​ಸೆಂಚುರಿ ಸಿಡಿಸಿ ಪೆವಿಲಿಯನ್ ಸೇರಿದರು.

ರೋಹಿತ್ ಅಂದ್ರೆ ಫ್ಲವರ್​ ಅಲ್ಲ, ಫಯರ್​​​..!

ರೋಹಿತ್ ಅಂದ್ರೆ ಫ್ಲವರ್ ಅಂದುಕೊಂಡಿದ್ದ ಪಾಕ್ ಬೌಲರ್​​​​​​​ ಯೋಚನೆಯನ್ನ ಹಿಟ್​ಮ್ಯಾನ್​ ತಲೆಕೆಳಗಾಗಿಸಿದ್ರು. ಸಿಕ್ಸರ್​​​-ಬೌಂಡ್ರಿಗಳ ಭೋರ್ಗರೆತದ ಮೂಲಕ ನಾನು ಫ್ಲವರ್ ಅಲ್ಲ, ಫಯರ್ ಅನ್ನೋದನ್ನ ತೋರಿಸಿದ್ರು. 4 ಬೌಂಡ್ರಿ, 6 ಸಿಕ್ಸರ್ ಸಹಿತ ಅರ್ಧಶತಕ ಸಿಡಿಸಿ ಕಮಾಲ್ ಮಾಡಿದ್ರು.

ಪಂದ್ಯಕ್ಕೆ ಮಳೆ ಅಡ್ಡಿ..ಇಂದಿಗೆ ಮುಂದೂಡಿಕೆ..

ಓಪನರ್ಸ್​ ನಿರ್ಗಮಿಸಿದ ಬಳಿಕ ಕಿಂಗ್ ಕೊಹ್ಲಿ ಹಾಗೂ ಕೆ.ಎಲ್ ರಾಹುಲ್ ಕೂಡಿಕೊಂಡು ತಾಳ್ಮೆಯುತ ಇನ್ನಿಂಗ್ಸ್ ಕಟ್ಟಲು ಪ್ರಯತ್ನಿಸಿದ್ರು. ಉತ್ತಮ ಸ್ಥಿತಿಯಲ್ಲಿದ್ದ ಭಾರತ 147 ರನ್​ಗೆ 2 ವಿಕೆಟ್ ಕಳೆದುಕೊಂಡಿದ್ದಾಗ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು. ಬಳಿಕ ಪಂದ್ಯ ಶುರುವಾಗಲಿಲ್ಲ. ಕೊನೆಗೆ ರಾತ್ರಿ 8.45ಕ್ಕೆ ಅಂಪೈರ್​ಗಳು​ ಉಭಯ ಕ್ಯಾಪ್ಟನ್​ಗಳ​​ ಜೊತೆ ಚರ್ಚಿಸಿ ಪಂದ್ಯ ಇಂದಿಗೆ ಮುಂದೂಡಿದ್ರು.

ಭಾರತದ ಕ್ಯಾಪ್ಟನ್​ ರೋಹಿತ್ ಶರ್ಮಾ

ಇಂದೂ ಮಳೆ ಬಂದರೆ ಏನಾಗುತ್ತೆ..?

ನಿನ್ನೆ ಆಟಕ್ಕಿಂತ ಮಳೆರಾಯನೇ ಹೆಚ್ಚು ಸದ್ದು ಮಾಡಿದ. ಒಂದು ವೇಳೆ ಇಂದು ಮಳೆ ಬರದೇ ಹೋದಲ್ಲಿ ಸಂಪೂರ್ಣ 50 ಓವರ್​ಗಳ ಆಟ ನಡೆಯಲಿದೆ. ಭಾರತ 147 ರನ್​ನಿಂದ ಇನ್ನಿಂಗ್ಸ್ ಮುಂದುವರಿಸಲಿದೆ. ಇಷ್ಟಾಗಿಯೂ ಮತ್ತೆ ಮಳೆ ಅವಕೃಪೆ ತೋರಿದ್ರೆ ಡೆಕ್ವರ್ತ್​ ಲೂಯಿಸ್​​​ ನಿಯಮದನ್ವಯ ಓವರ್ ಕಡಿತ ಮಾಡಿ ಆಡಿಸಲಾಗುತ್ತೆ. ಹಾಗೊಂದು ವೇಳೆ ಆಡಲು ಸ್ವಲ್ಪ ಅನುವು ಮಾಡಿಕೊಡದಿದ್ದಲ್ಲಿ ಪಂದ್ಯವನ್ನ ರದ್ದು ಮಾಡಿ ಉಭಯ ತಂಡಗಳಿಗೆ ತಲಾ ಒಂದು ಅಂಕ ನೀಡಲಾಗುತ್ತೆ.

ಮಳೆ ರದ್ದಿನಿಂದ ಭಾರತಕ್ಕೆ ಆಗುವ ನಷ್ಟವೇನು ?

ಇಂದೂ ನಿಜಕ್ಕೂ ಮಳೆ ಬಾರದಿರಲಿ. ಯಾಕಂದ್ರೆ ಬಂದಿದ್ದೇ ಆದಲ್ಲಿ ಅದರಿಂದ ಟೀಮ್ ಇಂಡಿಯಾಗೆ ಹೆಚ್ಚು ಲಾಸ್​​. ರದ್ದಿನಿಂದ 1 ಅಂಕ ಪಡೆಯುವ ಭಾರತ ಉಳಿದೆರಡು ಪಂದ್ಯಗಳನ್ನ ಗೆಲ್ಲಲೇಕಾಗುತ್ತೆ. ಜೊತೆಗೆ ನೆಟ್​​ರನ್​ಗೇಟ್​​ ಕೂಡ ಉತ್ತಮಪಡಿಸಿಕೊಳ್ಳಬೇಕು. ಆಗಲಷ್ಟೇ 5 ಅಂಕ ಪಡೆದು ಫೈನಲ್ ಆಸೆ ಜೀವಂತವಾಗಿರಿಸಿಕೊಳ್ಳಲಿದೆ. ಎರಡರ ಪೈಕಿ ಒಂದು ಪಂದ್ಯ ಸೋತರೂ ಫೈನಲ್​ ಹಾದಿ ದುರ್ಗಮವಾಗಲಿದೆ. ಇಂದೂ ಸಂಪೂರ್ಣ ಪಂದ್ಯ ನಡೆಯಲಿ. ರೋಹಿತ್​ ಪಡೆ ಬದ್ಧವೈರಿ ಪಾಕ್​ ಮಣಿಸಿ ಸೂಪರ್​​​- 4ನಲ್ಲಿ ಶುಭಾರಂಭ ಮಾಡಲಿ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Load More