ಟೀಮ್ನಲ್ಲಿದ್ದಾರೆ 6 ಪೇಸ್ರ್ಗಳು ಆದ್ರೆ ಎಡಗೈ ವೇಗಿಯೇ ಇಲ್ಲ
ಬಿಸಿಸಿಐಗೆ ಇಂತಹ ಟೀಮ್ ಕಟ್ಟೋಕೆ ಇಷ್ಟು ಟೈಮ್ ಬೇಕಿತ್ತಾ?
ಕೆ.ಎಲ್ ರಾಹುಲ್ ಬಗ್ಗೆ ಅಜಿತ್ ಅಗರ್ಕರ್ ಹೇಳುವುದೇನು..?
ಕೊನೆಗೂ ಏಷ್ಯಾಕಪ್ ತಂಡದ ಆಯ್ಕೆ ಸರ್ಕಸ್ಗೆ ತೆರೆ ಬಿದ್ದಿದೆ. ಆದ್ರೆ, ಟೀಮ್ ಅನೌನ್ಸ್ ಆಗಿದ್ದು ಖುಷಿಗಿಂತ ಹೆಚ್ಚು ಬೇಸರವಾಗಿದೆ. ಯಾಕಂದ್ರೆ, ಸೆಲೆಕ್ಷನ್ ಕಮಿಟಿ ಈ ಹಿಂದೆ ಮಾಡಿದ ತಪ್ಪನ್ನ ತಿದ್ದಿಕೊಂಡಿಲ್ಲ. ಮತ್ತೆ ಅದೇ ಎಡವಟ್ಟು ಈ ಬಾರಿ ರಿಪೀಟ್ ಆಗಿವೆ.
ಅಂತೂ ಇಂತೂ ಕೊನೆಗೂ ಏಷ್ಯಾಕಪ್ ಟೂರ್ನಿಗೆ ಬಲಿಷ್ಠ ಟೀಮ್ ಇಂಡಿಯಾವನ್ನ ಪ್ರಕಟಿಸಲಾಗಿದೆ. ಅನುಭವಿಗಳು- ಯಂಗ್ಸ್ಟರ್ಗಳಿಂದ ಕೂಡಿದ 17 ಸದಸ್ಯರ ತಂಡ ಫೈನಲ್ ಆಗಿದೆ. ಆದ್ರೆ ಬ್ಯಾಲೆನ್ಸ್ಡ್ ತಂಡ ಕಟ್ಟಿದ್ದೇವೆ ಹೇಳಿಕೊಳ್ಳುವ ಅಜಿತ್ ಅಗರ್ಕರ್ ಟೀಮ್ ಆಯ್ಕೆಯಲ್ಲಿ 4 ಮಹಾ ಎಡವಟ್ಟುಗಳನ್ನ ಮಾಡಿದೆ.
ರಾಹುಲ್ ಆಡದಿದ್ರೆ ಸ್ಯಾಮ್ಸನ್ ಬ್ಯಾಕ್ಅಪ್ ಯಾಕೆ..?
ಕನ್ನಡಿಗ ಕೆ.ಎಲ್ ರಾಹುಲ್ ಏಷ್ಯಾಕಪ್ಗೆ ಆಯ್ಕೆಯಾಗಿದ್ರು ಅವರಿನ್ನೂ ಫುಲ್ ಫಿಟ್ ಇಲ್ಲ. ಆರಂಭಿಕ ಪಂದ್ಯಗಳನ್ನ ಮಿಸ್ ಮಾಡಿಕೊಳ್ಳಲಿದ್ದಾರೆ ಎಂದು ಸ್ವತಃ ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ಹೇಳಿದ್ದಾರೆ. ಹಾಗೊಂದು ವೇಳೆ ರಾಹುಲ್ ಆಡದಿದ್ದಲ್ಲಿ ಅವರ ಬದಲಿ ಇಶಾನ್ ಕಿಶನ್ ಆಡಲಿದ್ದಾರೆ. ಹಾಗಿದ್ರೆ ಸ್ಯಾಮ್ಸನ್ರನ್ನ ಬ್ಯಾಕ್ಅಪ್ ಆಟಗಾರರನಾಗಿ ತಂಡಕ್ಕೆ ಆಯ್ಕೆ ಮಾಡಿದ್ದೇಕೆ? ಚಾನ್ಸ್ ಸಿಗದಿದ್ರೂ ಬರೀ ಬೆಂಚ್ ಕಾಯಿಸಲು ಅವಕಾಶ ನೀಡಬೇಕಿತ್ತಾ ಎನ್ನುವ ಪ್ರಶ್ನೆ ಕಾಡ್ತಿದೆ.
ಶ್ರೇಯಸ್ ಫಿಟ್ ಆಗಿದ್ರೆ ಸೂರ್ಯ-ತಿಲಕ್ಗೆ ಚಾನ್ಸ್ ಯಾಕೆ..?
ಮುಂಬೈಕರ್ 4ನೇ ಸ್ಥಾನದಲ್ಲಿ ಆಡುವುದು ಖಚಿತವಾಗಿದೆ. ಹಾಗಿದ್ದ ಮೇಲೆ ಸೂರ್ಯಕುಮಾರ್ ಯಾದವ್-ತಿಲಕ್ ವರ್ಮಾ ಆಯ್ಕೆ ವ್ಯರ್ಥ. ಯಾಕಂದ್ರೆ ಶ್ರೇಯಸ್ ಅನ್ಫಿಟ್ ಆದಲ್ಲಿ ಮಾತ್ರ ಇಬ್ಬರಲ್ಲಿ ಒಬ್ಬರಿಗೆ ಚಾನ್ಸ್ ಸಿಗಬಹುದು. ಸದ್ಯ ಆ ಅವಕಾಶವಿಲ್ಲ. ಏಕದಿನ ಮಾದರಿಯಲ್ಲಿ ಸೂರ್ಯಕುಮಾರ್ ಪರ್ಫಾಮೆನ್ಸ್ ಉತ್ತಮವಾಗಿಲ್ಲ. ಟಿ20 ಪ್ರದರ್ಶನದ ಮೇಲೆ ತಿಲಕ್ಗೆ ಏಕದಿನಕ್ಕೆ ಆಯ್ಕೆ ಮಾಡಿದ್ದು ಎಷ್ಟು ಸರಿ ಅನ್ನೋ ಡಿಬೇಟ್ ಜೋರಾಗಿ ನಡೆಯುತ್ತಿದೆ.
ಆಫ್ ಸ್ಪಿನ್ನರ್-ಲೆಗ್ ಸ್ಪಿನ್ನರ್ಗೆ ಚಾನ್ಸ್ ಯಾಕಿಲ್ಲ..?
ಈ ವಿಚಾರದಲ್ಲಿ ಆಯ್ಕೆ ಸಮಿತಿ ಕಣ್ಣಿದ್ದು ನಿಜಕ್ಕೂ ಕುರುಡಾಗಿದೆ. ಟೀಮ್ ಇಂಡಿಯಾ ಎಲ್ಲ ಪಂದ್ಯಗಳನ್ನ ಶ್ರೀಲಂಕಾದಲ್ಲಿ ಆಡಲಿದೆ. ಇಲ್ಲಿ ಪಿಚ್ ಸ್ಪಿನ್ ಸ್ನೇಹಿಯಾಗಿವೆ. ಇದು ಗೊತ್ತಿದ್ರೂ ತಂಡದಲ್ಲಿ ಆಫ್ ಸ್ಸಿನ್ನರ್ ಹಾಗೂ ಲೆಗ್ ಸ್ಪಿನ್ನರ್ಗೆ ಚಾನ್ಸ್ ನೀಡಿಲ್ಲ. ಜಡ್ಡು-ಅಕ್ಷರ್ ಪಟೇಲ್ ಲೆಫ್ಟ್ ಆರ್ಮ್ ಸ್ಪಿನ್ನರ್ಗಳಾಗಿದ್ರೆ, ಕುಲ್ದೀಪ್ ಯಾದವ್ ರಿಸ್ಟ್ ಸ್ಪಿನ್ನರ್. ಅಶ್ವಿನ್ ತರಹದ ಆಫ್ ಸ್ಪಿನ್ನರ್ ಆಗಲಿ, ಚಹಲ್ ರೀತಿ ಲೆಗ್ ಸ್ಪಿನ್ನರ್ ಆಗಲಿ ಇಲ್ಲ. ಪಾಕ್, ಲಂಕಾ ಹಾಗೂ ಬಾಂಗ್ಲಾ ತಂಡದಲ್ಲಿ ಐದಕ್ಕಿಂತ ಹೆಚ್ಚಿನ ಎಡಗೈ ಬ್ಯಾಟ್ಸ್ಮನ್ಗಳಿದ್ದಾರೆ. ಇವರನ್ನ ಕಟ್ಟಿಹಾಕಲು ಆಫ್ ಸ್ಪಿನ್ನರ್ -ಲೆಗ್ ಸ್ಪಿನ್ನರ್ ನೆರವಾಗ್ತಿದ್ರು ಅನ್ನೋದನ್ನ ಆಯ್ಕೆ ಸಮಿತಿ ಮರೆತಿದೆ.
6 ಪೇಸರ್ಗಳಿದ್ರೂ ತಂಡದಲ್ಲಿಲ್ಲ ಎಡಗೈ ವೇಗಿ
ಈ ವಿಚಾರದಲ್ಲಿ ಟೀಮ್ ಇಂಡಿಯಾ ಅದ್ಯಾವಾಗ ಪಾಠ ಕಲಿಯುತ್ತೋ ಗೊತ್ತಿಲ್ಲ. ಆಯ್ಕೆಯಾದ ಆರಕ್ಕೆ 6 ಜನ ರೈಟ್ ಹ್ಯಾಂಡ್ ಪೇಸರ್ಗಳು. ಒಬ್ಬೇ ಒಬ್ಬ ಲೆಫ್ಟ್ ಹ್ಯಾಂಡ್ ಬೌಲರ್ ತಂಡದಲ್ಲಿಲ್ಲ. ಅರ್ಷ್ದೀಪ್ ಸಿಂಗ್, ಉನಾದ್ಕತ್ ರನ್ನ ಕಡೆಗಣಿಸಲಾಗಿದೆ. ಒಂದು ವೇಳೆ ಇಬ್ಬರ ಪೈಕಿ ಇಬ್ಬರು ಏಷ್ಯಾಕಪ್ಗೆ ಆಯ್ಕೆಯಾಗಿದ್ರೆ, ಎದುರಾಳಿ ತಂಡಗಳ ಎಡಗೈ ಬೌಲರ್ಗಳನ್ನ ಪೇಸ್ ಮಾಡಲು ಹೆಲ್ಪ್ ಆಗ್ತಿತ್ತು. ಸದ್ಯ ಆ ಅವಕಾಶವನ್ನ ಸೆಲೆಕ್ಟರ್ಸ್ ಕೈ ಚೆಲ್ಲಿದ್ದಾರೆ.
ಪರ್ಫೆಕ್ಟ್ ತಂಡ ಕಟ್ಟುವಲ್ಲಿ ಆಯ್ಕೆಸಮಿತಿ ಫೇಲ್ಯೂರ್ ಆದಂತಿದೆ. ಆಯ್ಕೆ ಸಮಿತಿ ಸೆಲೆಕ್ಷನ್ ಮಾಡಿ ಮುಗಿಸಿದೆ. ಇನ್ನೇನಿದ್ರೂ, ಕ್ಯಾಪ್ಟನ್ ರೋಹಿತ್ ಶರ್ಮಾಗೆ ಈ ಮಿಸ್ಟೇಕ್ಸ್ ಸವಾಲಾಗಿ ಪರಿಣಮಿಸಲಿವೆ. ಏಷ್ಯಾಕಪ್ ಅಖಾಡದಲ್ಲಿ ಇದನ್ನ ಹೇಗೆ ನಿಭಾಯಿಸ್ತಾರೆ ಅನ್ನೋದೆ ಸದ್ಯಕ್ಕಿರೋ ಪ್ರಶ್ನೆಯಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಟೀಮ್ನಲ್ಲಿದ್ದಾರೆ 6 ಪೇಸ್ರ್ಗಳು ಆದ್ರೆ ಎಡಗೈ ವೇಗಿಯೇ ಇಲ್ಲ
ಬಿಸಿಸಿಐಗೆ ಇಂತಹ ಟೀಮ್ ಕಟ್ಟೋಕೆ ಇಷ್ಟು ಟೈಮ್ ಬೇಕಿತ್ತಾ?
ಕೆ.ಎಲ್ ರಾಹುಲ್ ಬಗ್ಗೆ ಅಜಿತ್ ಅಗರ್ಕರ್ ಹೇಳುವುದೇನು..?
ಕೊನೆಗೂ ಏಷ್ಯಾಕಪ್ ತಂಡದ ಆಯ್ಕೆ ಸರ್ಕಸ್ಗೆ ತೆರೆ ಬಿದ್ದಿದೆ. ಆದ್ರೆ, ಟೀಮ್ ಅನೌನ್ಸ್ ಆಗಿದ್ದು ಖುಷಿಗಿಂತ ಹೆಚ್ಚು ಬೇಸರವಾಗಿದೆ. ಯಾಕಂದ್ರೆ, ಸೆಲೆಕ್ಷನ್ ಕಮಿಟಿ ಈ ಹಿಂದೆ ಮಾಡಿದ ತಪ್ಪನ್ನ ತಿದ್ದಿಕೊಂಡಿಲ್ಲ. ಮತ್ತೆ ಅದೇ ಎಡವಟ್ಟು ಈ ಬಾರಿ ರಿಪೀಟ್ ಆಗಿವೆ.
ಅಂತೂ ಇಂತೂ ಕೊನೆಗೂ ಏಷ್ಯಾಕಪ್ ಟೂರ್ನಿಗೆ ಬಲಿಷ್ಠ ಟೀಮ್ ಇಂಡಿಯಾವನ್ನ ಪ್ರಕಟಿಸಲಾಗಿದೆ. ಅನುಭವಿಗಳು- ಯಂಗ್ಸ್ಟರ್ಗಳಿಂದ ಕೂಡಿದ 17 ಸದಸ್ಯರ ತಂಡ ಫೈನಲ್ ಆಗಿದೆ. ಆದ್ರೆ ಬ್ಯಾಲೆನ್ಸ್ಡ್ ತಂಡ ಕಟ್ಟಿದ್ದೇವೆ ಹೇಳಿಕೊಳ್ಳುವ ಅಜಿತ್ ಅಗರ್ಕರ್ ಟೀಮ್ ಆಯ್ಕೆಯಲ್ಲಿ 4 ಮಹಾ ಎಡವಟ್ಟುಗಳನ್ನ ಮಾಡಿದೆ.
ರಾಹುಲ್ ಆಡದಿದ್ರೆ ಸ್ಯಾಮ್ಸನ್ ಬ್ಯಾಕ್ಅಪ್ ಯಾಕೆ..?
ಕನ್ನಡಿಗ ಕೆ.ಎಲ್ ರಾಹುಲ್ ಏಷ್ಯಾಕಪ್ಗೆ ಆಯ್ಕೆಯಾಗಿದ್ರು ಅವರಿನ್ನೂ ಫುಲ್ ಫಿಟ್ ಇಲ್ಲ. ಆರಂಭಿಕ ಪಂದ್ಯಗಳನ್ನ ಮಿಸ್ ಮಾಡಿಕೊಳ್ಳಲಿದ್ದಾರೆ ಎಂದು ಸ್ವತಃ ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ಹೇಳಿದ್ದಾರೆ. ಹಾಗೊಂದು ವೇಳೆ ರಾಹುಲ್ ಆಡದಿದ್ದಲ್ಲಿ ಅವರ ಬದಲಿ ಇಶಾನ್ ಕಿಶನ್ ಆಡಲಿದ್ದಾರೆ. ಹಾಗಿದ್ರೆ ಸ್ಯಾಮ್ಸನ್ರನ್ನ ಬ್ಯಾಕ್ಅಪ್ ಆಟಗಾರರನಾಗಿ ತಂಡಕ್ಕೆ ಆಯ್ಕೆ ಮಾಡಿದ್ದೇಕೆ? ಚಾನ್ಸ್ ಸಿಗದಿದ್ರೂ ಬರೀ ಬೆಂಚ್ ಕಾಯಿಸಲು ಅವಕಾಶ ನೀಡಬೇಕಿತ್ತಾ ಎನ್ನುವ ಪ್ರಶ್ನೆ ಕಾಡ್ತಿದೆ.
ಶ್ರೇಯಸ್ ಫಿಟ್ ಆಗಿದ್ರೆ ಸೂರ್ಯ-ತಿಲಕ್ಗೆ ಚಾನ್ಸ್ ಯಾಕೆ..?
ಮುಂಬೈಕರ್ 4ನೇ ಸ್ಥಾನದಲ್ಲಿ ಆಡುವುದು ಖಚಿತವಾಗಿದೆ. ಹಾಗಿದ್ದ ಮೇಲೆ ಸೂರ್ಯಕುಮಾರ್ ಯಾದವ್-ತಿಲಕ್ ವರ್ಮಾ ಆಯ್ಕೆ ವ್ಯರ್ಥ. ಯಾಕಂದ್ರೆ ಶ್ರೇಯಸ್ ಅನ್ಫಿಟ್ ಆದಲ್ಲಿ ಮಾತ್ರ ಇಬ್ಬರಲ್ಲಿ ಒಬ್ಬರಿಗೆ ಚಾನ್ಸ್ ಸಿಗಬಹುದು. ಸದ್ಯ ಆ ಅವಕಾಶವಿಲ್ಲ. ಏಕದಿನ ಮಾದರಿಯಲ್ಲಿ ಸೂರ್ಯಕುಮಾರ್ ಪರ್ಫಾಮೆನ್ಸ್ ಉತ್ತಮವಾಗಿಲ್ಲ. ಟಿ20 ಪ್ರದರ್ಶನದ ಮೇಲೆ ತಿಲಕ್ಗೆ ಏಕದಿನಕ್ಕೆ ಆಯ್ಕೆ ಮಾಡಿದ್ದು ಎಷ್ಟು ಸರಿ ಅನ್ನೋ ಡಿಬೇಟ್ ಜೋರಾಗಿ ನಡೆಯುತ್ತಿದೆ.
ಆಫ್ ಸ್ಪಿನ್ನರ್-ಲೆಗ್ ಸ್ಪಿನ್ನರ್ಗೆ ಚಾನ್ಸ್ ಯಾಕಿಲ್ಲ..?
ಈ ವಿಚಾರದಲ್ಲಿ ಆಯ್ಕೆ ಸಮಿತಿ ಕಣ್ಣಿದ್ದು ನಿಜಕ್ಕೂ ಕುರುಡಾಗಿದೆ. ಟೀಮ್ ಇಂಡಿಯಾ ಎಲ್ಲ ಪಂದ್ಯಗಳನ್ನ ಶ್ರೀಲಂಕಾದಲ್ಲಿ ಆಡಲಿದೆ. ಇಲ್ಲಿ ಪಿಚ್ ಸ್ಪಿನ್ ಸ್ನೇಹಿಯಾಗಿವೆ. ಇದು ಗೊತ್ತಿದ್ರೂ ತಂಡದಲ್ಲಿ ಆಫ್ ಸ್ಸಿನ್ನರ್ ಹಾಗೂ ಲೆಗ್ ಸ್ಪಿನ್ನರ್ಗೆ ಚಾನ್ಸ್ ನೀಡಿಲ್ಲ. ಜಡ್ಡು-ಅಕ್ಷರ್ ಪಟೇಲ್ ಲೆಫ್ಟ್ ಆರ್ಮ್ ಸ್ಪಿನ್ನರ್ಗಳಾಗಿದ್ರೆ, ಕುಲ್ದೀಪ್ ಯಾದವ್ ರಿಸ್ಟ್ ಸ್ಪಿನ್ನರ್. ಅಶ್ವಿನ್ ತರಹದ ಆಫ್ ಸ್ಪಿನ್ನರ್ ಆಗಲಿ, ಚಹಲ್ ರೀತಿ ಲೆಗ್ ಸ್ಪಿನ್ನರ್ ಆಗಲಿ ಇಲ್ಲ. ಪಾಕ್, ಲಂಕಾ ಹಾಗೂ ಬಾಂಗ್ಲಾ ತಂಡದಲ್ಲಿ ಐದಕ್ಕಿಂತ ಹೆಚ್ಚಿನ ಎಡಗೈ ಬ್ಯಾಟ್ಸ್ಮನ್ಗಳಿದ್ದಾರೆ. ಇವರನ್ನ ಕಟ್ಟಿಹಾಕಲು ಆಫ್ ಸ್ಪಿನ್ನರ್ -ಲೆಗ್ ಸ್ಪಿನ್ನರ್ ನೆರವಾಗ್ತಿದ್ರು ಅನ್ನೋದನ್ನ ಆಯ್ಕೆ ಸಮಿತಿ ಮರೆತಿದೆ.
6 ಪೇಸರ್ಗಳಿದ್ರೂ ತಂಡದಲ್ಲಿಲ್ಲ ಎಡಗೈ ವೇಗಿ
ಈ ವಿಚಾರದಲ್ಲಿ ಟೀಮ್ ಇಂಡಿಯಾ ಅದ್ಯಾವಾಗ ಪಾಠ ಕಲಿಯುತ್ತೋ ಗೊತ್ತಿಲ್ಲ. ಆಯ್ಕೆಯಾದ ಆರಕ್ಕೆ 6 ಜನ ರೈಟ್ ಹ್ಯಾಂಡ್ ಪೇಸರ್ಗಳು. ಒಬ್ಬೇ ಒಬ್ಬ ಲೆಫ್ಟ್ ಹ್ಯಾಂಡ್ ಬೌಲರ್ ತಂಡದಲ್ಲಿಲ್ಲ. ಅರ್ಷ್ದೀಪ್ ಸಿಂಗ್, ಉನಾದ್ಕತ್ ರನ್ನ ಕಡೆಗಣಿಸಲಾಗಿದೆ. ಒಂದು ವೇಳೆ ಇಬ್ಬರ ಪೈಕಿ ಇಬ್ಬರು ಏಷ್ಯಾಕಪ್ಗೆ ಆಯ್ಕೆಯಾಗಿದ್ರೆ, ಎದುರಾಳಿ ತಂಡಗಳ ಎಡಗೈ ಬೌಲರ್ಗಳನ್ನ ಪೇಸ್ ಮಾಡಲು ಹೆಲ್ಪ್ ಆಗ್ತಿತ್ತು. ಸದ್ಯ ಆ ಅವಕಾಶವನ್ನ ಸೆಲೆಕ್ಟರ್ಸ್ ಕೈ ಚೆಲ್ಲಿದ್ದಾರೆ.
ಪರ್ಫೆಕ್ಟ್ ತಂಡ ಕಟ್ಟುವಲ್ಲಿ ಆಯ್ಕೆಸಮಿತಿ ಫೇಲ್ಯೂರ್ ಆದಂತಿದೆ. ಆಯ್ಕೆ ಸಮಿತಿ ಸೆಲೆಕ್ಷನ್ ಮಾಡಿ ಮುಗಿಸಿದೆ. ಇನ್ನೇನಿದ್ರೂ, ಕ್ಯಾಪ್ಟನ್ ರೋಹಿತ್ ಶರ್ಮಾಗೆ ಈ ಮಿಸ್ಟೇಕ್ಸ್ ಸವಾಲಾಗಿ ಪರಿಣಮಿಸಲಿವೆ. ಏಷ್ಯಾಕಪ್ ಅಖಾಡದಲ್ಲಿ ಇದನ್ನ ಹೇಗೆ ನಿಭಾಯಿಸ್ತಾರೆ ಅನ್ನೋದೆ ಸದ್ಯಕ್ಕಿರೋ ಪ್ರಶ್ನೆಯಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ