newsfirstkannada.com

ಪೂಜಾರಗೆ ಕೊಕ್.. ಟೆಸ್ಟ್​ ಕರಿಯರ್​​​​ ಕ್ಲೋಸ್? ತಂಡಕ್ಕೆ ಕಂಬ್ಯಾಕ್ ಆಗಿರುವ ಆಟಗಾರರಿಗೆ ಅಗ್ನಿ ಪರೀಕ್ಷೆ..!​

Share :

24-06-2023

    ಭಾರತ ತಂಡದಲ್ಲಿ ಭಾರೀ ಬದಲಾವಣೆ, ಯಂಗ್​ ಪ್ಲೇಯರ್ಸ್​ಗೆ ಚಾನ್ಸ್​

    ಭಾರೀ ಆಕ್ರೋಶದ ಬಳಿಕ ಏಕದಿನಕ್ಕೆ ಸಂಜು ಸ್ಯಾಮ್ಸನ್ ಕಮ್​ಬ್ಯಾಕ್​​​​​

    ಸಾಮರ್ಥ್ಯ ಪ್ರದರ್ಶನ ಮಾಡಲು ಇಶನ್ ಕಿಶನ್​ಗೆ ಮತ್ತೊಂದು ಚಾನ್ಸ್​​

ಮುಂಬರುವ ವೆಸ್ಟ್ ​​​​​ಇಂಡೀಸ್​ ಸರಣಿಗೆ ಬಿಸಿಸಿಐ ಟೀಮ್ ಇಂಡಿಯಾವನ್ನು ಪ್ರಕಟಿಸಿದೆ. ಕೆಲ ಅಚ್ಚರಿ ನಿರ್ಧಾರಗಳನ್ನ ಕೈಗೊಂಡಿದೆ. ಭವಿಷ್ಯದ ದೃಷ್ಟಿಯಿಂದ ಹೊಸಬರಿಗೆ ಮಣೆ ಹಾಕಿ ಹಳಬರಿಗೆ ಗೇಟ್​​ಪಾಸ್​​ ನೀಡಿದೆ. ಬನ್ನಿ ಹಾಗಾದ್ರೆ ಈ ಸರಣಿಗೆಯಲ್ಲಿ ಯಾರು ಇನ್,​​​ ಯಾರು ಔಟ್​ ನೋಡೋಣ.

ಭಾರತ ವಿಶ್ವ ಟೆಸ್ಟ್ ಚಾಂಪಿಯನ್​​ ಶಿಪ್​​​​​​​​​​​​​ ಆಡಿ ಮುಗಿಸಿದೆ. ಮೆನ್​ ಇನ್​​ ಬ್ಲೂ ಪಡೆಯ ಮುಂದಿನ ಟಾರ್ಗೆಟ್​​​ ವೆಸ್ಟ್​ ​ಇಂಡೀಸ್​​​​​​​​​​​ ಟೂರ್​​​. ಜುಲೈ 12 ರಿಂದ ಭಾರತ-ವೆಸ್ಟ್​ ಇಂಡೀಸ್​​​​​​​​​ ದ್ವಿ ಪಕ್ಷೀಯ ಸರಣಿ ಆರಂಭಗೊಳ್ಳಲಿದ್ದು, ಬಿಸಿಸಿಐ ಆಯ್ಕೆ ಸಮಿತಿ ತಂಡವನ್ನ ಪ್ರಕಟಿಸಿದೆ. ಬಲಿಷ್ಠ ಸೈನ್ಯವನ್ನ ಸಜ್ಜುಗೊಳಿಸಿದ್ದು, ಟೆಸ್ಟ್​ ಮತ್ತು ಏಕದಿನ ಸರಣಿಗೆ ತಂಡವನ್ನ ಅನೌನ್ಸ್ ಮಾಡಿದೆ. ಈ ಸಲ ಹಿಂದಿನ ತಪ್ಪನ್ನ ತಿದ್ದಿಕೊಂಡು ಹೊಸಬರ ಬೆನ್ನು ಬಿದ್ದಿದೆ. ಜೊತೆಗೆ ಕೆಲ ಬೋಲ್ಡ್​ ಡಿಸಿಷನ್​ ತೆಗೆದುಕೊಂಡು ಬದಲಾವಣೆಗೆ ಮುನ್ನುಡಿ ಬರೆದಿದೆ.

ಗಾಯಕ್ವಾಡ್​​-ಮುಖೇಶ್​​ ಕುಮಾರ್​​​ಗೆ ‘ಡಬಲ್’​​​ ಧಮಾಕ..!

ಪ್ರಕಟಗೊಂಡಿರೋ ತಂಡದಲ್ಲಿ ರುತುರಾಜ್​ ಗಾಯಕ್ವಾಡ್​ ಹಾಗೂ ವೇಗಿ ಮುಕೇಶ್​ ಕುಮಾರ್​​​​ಗೆ ಜಾಕ್​​ಪಾಟ್ ಹೊಡೆದಿದೆ. ಇಬ್ಬರೂ ಟೆಸ್ಟ್​ ಮತ್ತು ಏಕದಿನ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಸೀಮಿತ ಓವರ್​​​​​ಗಳ ಸರಣಿಯಲ್ಲಿ ಗಾಯಕ್ವಾಡ್​​ ಟೀಮ್ ಇಂಡಿಯಾವನ್ನ ಪ್ರತಿನಿಧಿಸಿದ್ದು, ಟೆಸ್ಟ್​​ ಕ್ಯಾಪ್​​​ ತೊಡಲು ಸಜ್ಜಾಗಿದ್ದಾರೆ. ಇನ್ನು ಈ ಹಿಂದೆ ​​​​​ಬದಲಿ ಆಟಗಾರನಾಗಿದ್ದ ಮುಕೇಶ್ ಕುಮಾರ್​​​ಗೆ ಡಬಲ್​​​ ಜಾಕ್​ಪಾಟ್ ಹೊಡೆದಿದೆ.

ಸೈನಿಗೆ 2 ವರ್ಷಗಳ ಬಳಿಕ ಟೆಸ್ಟ್​ ತಂಡದಲ್ಲಿ ಸ್ಥಾನ

ನತದೃಷ್ಟ ಕ್ರಿಕೆಟಿಗ ಸಂಜು ಸ್ಯಾಮ್ಸನ್​​ ಮತ್ತೆ ಒನ್ಡೇ ತಂಡಕ್ಕೆ ಮರಳಿದ್ದಾರೆ. ಈ ವರ್ಷ ನಡೆದ ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ಏಕದಿನ ಸರಣಿಯಿಂದ ಸ್ಯಾಮ್ಸನ್​ರನ್ನ ಕೈಬಿಡಲಾಗಿತ್ತು. ಇದಕ್ಕೆ ಭಾರೀ ಆಕ್ರೋಶ ಕೇಳಿ ಬಂದಿತ್ತು. ಕ್ರಿಕೆಟ್ ಎಕ್ಸ್​ಫರ್ಟ್ಸ್, ಫ್ಯಾನ್ಸ್​ ಆಕ್ರೋಶಕ್ಕೆ ಮಣಿದ ಆಯ್ಕೆ ಸಮಿತಿ ಕೊನೆಗೂ ಬಿಗ್​​ ಹಿಟ್ಟರ್​​​​​​​​ಗೆ ತಂಡದಲ್ಲಿ ಸ್ಥಾನ ನೀಡಿದೆ.

ಇನ್ನು ಸ್ಯಾಮ್ಸನ್ ಜೊತೆ ಯುವವೇಗಿ ನವ್​ದೀಪ್ ಸೈನಿ ಟೆಸ್ಟ್​ ತಂಡಕ್ಕೆ ಕಮ್​ಬ್ಯಾಕ್​ ಮಾಡಿದ್ದಾರೆ. ಆ ಮೂಲಕ 2 ವರ್ಷಗಳ ಬಳಿಕ ರೆಡ್​​​ಬಾಲ್​ ಕ್ರಿಕೆಟ್​ನಲ್ಲಿ ಅಬ್ಬರಿಸಲು ಸಜ್ಜಾಗಿದ್ದಾರೆ. 2021 ರಲ್ಲಿ ಕೊನೆ ಟೆಸ್ಟ್​ ಆಡಿದ್ದ ಸೈನಿ, ಇಂಜುರಿ ಕಾರಣದಿಂದ ತಂಡದಿಂದ ಕಿಕೌಟ್​ ಆಗಿದ್ರು. ಬಳಿಕ ತಂಡದಲ್ಲಿ ಸ್ಥಾನ ಅನ್ನೋದು ಮರೀಚಿಕೆ ಆಗಿತ್ತು.

ಇಶನ್​ ಕಿಶನ್​​​​ -ಕೆಎಸ್ ಭರತ್ ಸ್ಥಾನ ಭದ್ರ..!

ಡಬಲ್​ ಸೆಂಚುರಿಮ್ಯಾನ್​ ಇಶನ್​ ಕಿಶನ್​​​ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಏಕದಿನ ಹಾಗೂ ಟೆಸ್ಟ್​​​​​​ ಸರಣಿಗೆ ಲೆಫ್ಟಿ ಬ್ಯಾಟರ್ ಆಯ್ಕೆಯಾಗಿದ್ದು, ಕೆಪಾಸಿಟಿ ಪ್ರೂವ್ ಮಾಡಲು ಮತ್ತೊಂದು ಅವಕಾಶ ಸಿಕ್ಕಂತಾಗಿದೆ. ಇವರ ಜೊತೆ ವಿಕೆಟ್ ಕೀಪರ್​​ ಕೆಎಸ್​ ಭರತ್ ಟೆಸ್ಟ್​​ನಲ್ಲಿ ಸ್ಥಾನ ಭದ್ರ ಪಡಿಸಿಕೊಂಡಿದ್ದಾರೆ. ರಿಷಬ್​​ ಪಂತ್ ಆಬ್​ಸನ್ಸ್​​​​​ ಭರತ್​ಗೆ ವರದಾನವಾಗಿದೆ. ಇನ್ನು ವೇಗಿ ಜಯ್​ದೇವ್ ಉನಾದ್ಕಟ್​​​ ಸ್ಥಾನ ಭದ್ರವಾಗಿದೆ.

ಪೂಜಾರಗೆ ಕೊಕ್.. ಟೆಸ್ಟ್​ ಕರಿಯರ್​​​​ ಕ್ಲೋಸ್​​..?

ಅಸ್ಥಿರ ಪರ್ಫಾಮೆನ್ಸ್​ ನಿಂದ ಟೀಕೆಗೆ ಗುರಿ ಎದುರಿಸಿದ್ದ ಚೇತೇಶ್ವರ್ ಪೂಜಾರನ್ನ ಇಂಡೀಸ್ ಟೆಸ್ಟ್​ ಸರಣಿಯಿಂದ ಡ್ರಾಪ್ ಮಾಡ್ತಾರೆ ಎಂದು ಹೇಳಾಗ್ತಿತ್ತು. ಸದ್ಯ ಅದು ನಿಜವಾಗಿದೆ. ನಂಬಿಗಸ್ಥ ಪೂಜಾರ ಅವರಿಗೆ ರೆಡ್​​ಬಾಲ್​ ಕ್ರಿಕೆಟ್​​​​​ನಿಂದ ಗೇಟ್​ಪಾಸ್​ ನೀಡಿದೆ. ಇವರ ಬದಲಿ ಯಂಗ್​​​​​ಗನ್​ ಯಶಸ್ವಿ ಜೈಸ್ವಾಲ್​​ಗೆ ಮಣೆ ಹಾಕಲಾಗಿದೆ. ಒಂದು ವೇಳೆ ಯಶಸ್ವಿ ಜೈಸ್ವಾಲ್​​​​ ಉತ್ತಮ ಪ್ರದರ್ಶನ ನೀಡಿದ್ದೆ ಆದಲ್ಲಿ ಟೆಸ್ಟ್​ ಸ್ಪೆಷಲಿಸ್ಟ್​ ಪೂಜಾರರ ಟೆಸ್ಟ್ ಕರಿಯರ್​​ ಬಹುತೇಕ ಕ್ಲೊಸ್ ಆಗಲಿದೆ.

ಅಜಿಂಕ್ಯಾ ರಹಾನೆಗೆ ಮತ್ತೆ ವೈಸ್​ ಕ್ಯಾಪ್ಟನ್ಸಿ ಪಟ್ಟ

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​​ ಫೈನಲ್​ ಮೂಲಕ ತಂಡಕ್ಕೆ ಮರಳಿದ್ದ ಅಜಿಂಕ್ಯಾ ರಹಾನೆಗೆ ವೈಸ್​ ಕ್ಯಾಪ್ಟನ್ಸಿ ಪಟ್ಟ ಕಟ್ಟಲಾಗಿದೆ. ಈ ಹಿಂದೆ ರಹಾನೆ ತಂಡದ ಉಪನಾಯಕನಾಗಿದ್ರು. ಸದ್ಯ ಪೂಜಾರಗೆ ತಂಡದಿಂದ ಗೇಟ್​ಪಾಸ್ ನೀಡಿದ್ದರಿಂದ ರಹಾನೆಗೆ ಈ ಜವಾಬ್ದಾರಿ ನೀಡಲಾಗಿದೆ. ಆ ಮೂಲಕ ಬಿಸಿಸಿಐ ರೋಹಿತ್ ಶರ್ಮಾ ಬಳಿಕ ರಹಾನೆಗೆ ಟೆಸ್ಟ್​​ ಕ್ಯಾಪ್ಟನ್ಸಿ ನೀಡುವ ಹಿಂಟ್​​ ನೀಡಿದೆ.

ಮೊಹಮ್ಮದ್ ಶಮಿಗೆ ವಿಶ್ರಾಂತಿ ನೀಡಿದ BCCI

ವಿಂಡೀಸ್ ಸರಣಿ ವೇಳೆ ವಿರಾಟ್ ಹಾಗೂ ರೋಹಿತ್​ಗೆ ರೆಸ್ಟ್ ನೀಡೋ ಚರ್ಚೆ ನಡೆದಿತ್ತು. ಆದ್ರೆ ಸೆಲೆಕ್ಷನ್ ಕಮಿಟಿ ವರ್ಕ್​ಲೋಡ್ ಮ್ಯಾನೇಜ್​ಮೆಂಟ್ ಅಡಿಯಲ್ಲಿ ಮೊಹಮ್ಮದ್ ಶಮಿಗೆ ರೆಸ್ಟ್​ ನೀಡಿದೆ. ಇದೇ ಕಾರಣಕ್ಕೆ ನವದೀಪ್ ಸೈನಿಗೆ ಬುಲಾವ್ ನೀಡಿರೋ ಆಯ್ಕೆ ಸಮಿತಿ, ಟಿ20 ಸರಣಿ ವೇಳೆ ಮೊಹಮ್ಮದ್​ ಶಮಿಗೆ ಚಾನ್ಸ್​ ನೀಡೋ ಸಾಧ್ಯತೆ ಇದೆ.

ಆಯ್ಕೆ ಸಮಿತಿ ಅಳೆದು ತೂಗಿ ತಂಡವನ್ನ ಪ್ರಕಟಿಸಿದೆ. ಹತ್ತಾರು ಲೆಕ್ಕಚಾರಗಳು ಅಡಗಿವೆ. ಇದ್ರಲ್ಲಿ ಬಿಗ್​​ಬಾಸ್​ಗಳು ಸಕ್ಸಸ್​​​​​​​ ಕಾಣ್ತರಾ?, ಫೇಲಾಗ್ತಾರಾ? ಅನ್ನೋದು ಇಂಡೀಸ್​​​​ ಪ್ರವಾಸದ ಬಳಿಕವೇ ಗೊತ್ತಾಗಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಪೂಜಾರಗೆ ಕೊಕ್.. ಟೆಸ್ಟ್​ ಕರಿಯರ್​​​​ ಕ್ಲೋಸ್? ತಂಡಕ್ಕೆ ಕಂಬ್ಯಾಕ್ ಆಗಿರುವ ಆಟಗಾರರಿಗೆ ಅಗ್ನಿ ಪರೀಕ್ಷೆ..!​

https://newsfirstlive.com/wp-content/uploads/2023/06/TEAM_INDIA-1-1.jpg

    ಭಾರತ ತಂಡದಲ್ಲಿ ಭಾರೀ ಬದಲಾವಣೆ, ಯಂಗ್​ ಪ್ಲೇಯರ್ಸ್​ಗೆ ಚಾನ್ಸ್​

    ಭಾರೀ ಆಕ್ರೋಶದ ಬಳಿಕ ಏಕದಿನಕ್ಕೆ ಸಂಜು ಸ್ಯಾಮ್ಸನ್ ಕಮ್​ಬ್ಯಾಕ್​​​​​

    ಸಾಮರ್ಥ್ಯ ಪ್ರದರ್ಶನ ಮಾಡಲು ಇಶನ್ ಕಿಶನ್​ಗೆ ಮತ್ತೊಂದು ಚಾನ್ಸ್​​

ಮುಂಬರುವ ವೆಸ್ಟ್ ​​​​​ಇಂಡೀಸ್​ ಸರಣಿಗೆ ಬಿಸಿಸಿಐ ಟೀಮ್ ಇಂಡಿಯಾವನ್ನು ಪ್ರಕಟಿಸಿದೆ. ಕೆಲ ಅಚ್ಚರಿ ನಿರ್ಧಾರಗಳನ್ನ ಕೈಗೊಂಡಿದೆ. ಭವಿಷ್ಯದ ದೃಷ್ಟಿಯಿಂದ ಹೊಸಬರಿಗೆ ಮಣೆ ಹಾಕಿ ಹಳಬರಿಗೆ ಗೇಟ್​​ಪಾಸ್​​ ನೀಡಿದೆ. ಬನ್ನಿ ಹಾಗಾದ್ರೆ ಈ ಸರಣಿಗೆಯಲ್ಲಿ ಯಾರು ಇನ್,​​​ ಯಾರು ಔಟ್​ ನೋಡೋಣ.

ಭಾರತ ವಿಶ್ವ ಟೆಸ್ಟ್ ಚಾಂಪಿಯನ್​​ ಶಿಪ್​​​​​​​​​​​​​ ಆಡಿ ಮುಗಿಸಿದೆ. ಮೆನ್​ ಇನ್​​ ಬ್ಲೂ ಪಡೆಯ ಮುಂದಿನ ಟಾರ್ಗೆಟ್​​​ ವೆಸ್ಟ್​ ​ಇಂಡೀಸ್​​​​​​​​​​​ ಟೂರ್​​​. ಜುಲೈ 12 ರಿಂದ ಭಾರತ-ವೆಸ್ಟ್​ ಇಂಡೀಸ್​​​​​​​​​ ದ್ವಿ ಪಕ್ಷೀಯ ಸರಣಿ ಆರಂಭಗೊಳ್ಳಲಿದ್ದು, ಬಿಸಿಸಿಐ ಆಯ್ಕೆ ಸಮಿತಿ ತಂಡವನ್ನ ಪ್ರಕಟಿಸಿದೆ. ಬಲಿಷ್ಠ ಸೈನ್ಯವನ್ನ ಸಜ್ಜುಗೊಳಿಸಿದ್ದು, ಟೆಸ್ಟ್​ ಮತ್ತು ಏಕದಿನ ಸರಣಿಗೆ ತಂಡವನ್ನ ಅನೌನ್ಸ್ ಮಾಡಿದೆ. ಈ ಸಲ ಹಿಂದಿನ ತಪ್ಪನ್ನ ತಿದ್ದಿಕೊಂಡು ಹೊಸಬರ ಬೆನ್ನು ಬಿದ್ದಿದೆ. ಜೊತೆಗೆ ಕೆಲ ಬೋಲ್ಡ್​ ಡಿಸಿಷನ್​ ತೆಗೆದುಕೊಂಡು ಬದಲಾವಣೆಗೆ ಮುನ್ನುಡಿ ಬರೆದಿದೆ.

ಗಾಯಕ್ವಾಡ್​​-ಮುಖೇಶ್​​ ಕುಮಾರ್​​​ಗೆ ‘ಡಬಲ್’​​​ ಧಮಾಕ..!

ಪ್ರಕಟಗೊಂಡಿರೋ ತಂಡದಲ್ಲಿ ರುತುರಾಜ್​ ಗಾಯಕ್ವಾಡ್​ ಹಾಗೂ ವೇಗಿ ಮುಕೇಶ್​ ಕುಮಾರ್​​​​ಗೆ ಜಾಕ್​​ಪಾಟ್ ಹೊಡೆದಿದೆ. ಇಬ್ಬರೂ ಟೆಸ್ಟ್​ ಮತ್ತು ಏಕದಿನ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಸೀಮಿತ ಓವರ್​​​​​ಗಳ ಸರಣಿಯಲ್ಲಿ ಗಾಯಕ್ವಾಡ್​​ ಟೀಮ್ ಇಂಡಿಯಾವನ್ನ ಪ್ರತಿನಿಧಿಸಿದ್ದು, ಟೆಸ್ಟ್​​ ಕ್ಯಾಪ್​​​ ತೊಡಲು ಸಜ್ಜಾಗಿದ್ದಾರೆ. ಇನ್ನು ಈ ಹಿಂದೆ ​​​​​ಬದಲಿ ಆಟಗಾರನಾಗಿದ್ದ ಮುಕೇಶ್ ಕುಮಾರ್​​​ಗೆ ಡಬಲ್​​​ ಜಾಕ್​ಪಾಟ್ ಹೊಡೆದಿದೆ.

ಸೈನಿಗೆ 2 ವರ್ಷಗಳ ಬಳಿಕ ಟೆಸ್ಟ್​ ತಂಡದಲ್ಲಿ ಸ್ಥಾನ

ನತದೃಷ್ಟ ಕ್ರಿಕೆಟಿಗ ಸಂಜು ಸ್ಯಾಮ್ಸನ್​​ ಮತ್ತೆ ಒನ್ಡೇ ತಂಡಕ್ಕೆ ಮರಳಿದ್ದಾರೆ. ಈ ವರ್ಷ ನಡೆದ ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ಏಕದಿನ ಸರಣಿಯಿಂದ ಸ್ಯಾಮ್ಸನ್​ರನ್ನ ಕೈಬಿಡಲಾಗಿತ್ತು. ಇದಕ್ಕೆ ಭಾರೀ ಆಕ್ರೋಶ ಕೇಳಿ ಬಂದಿತ್ತು. ಕ್ರಿಕೆಟ್ ಎಕ್ಸ್​ಫರ್ಟ್ಸ್, ಫ್ಯಾನ್ಸ್​ ಆಕ್ರೋಶಕ್ಕೆ ಮಣಿದ ಆಯ್ಕೆ ಸಮಿತಿ ಕೊನೆಗೂ ಬಿಗ್​​ ಹಿಟ್ಟರ್​​​​​​​​ಗೆ ತಂಡದಲ್ಲಿ ಸ್ಥಾನ ನೀಡಿದೆ.

ಇನ್ನು ಸ್ಯಾಮ್ಸನ್ ಜೊತೆ ಯುವವೇಗಿ ನವ್​ದೀಪ್ ಸೈನಿ ಟೆಸ್ಟ್​ ತಂಡಕ್ಕೆ ಕಮ್​ಬ್ಯಾಕ್​ ಮಾಡಿದ್ದಾರೆ. ಆ ಮೂಲಕ 2 ವರ್ಷಗಳ ಬಳಿಕ ರೆಡ್​​​ಬಾಲ್​ ಕ್ರಿಕೆಟ್​ನಲ್ಲಿ ಅಬ್ಬರಿಸಲು ಸಜ್ಜಾಗಿದ್ದಾರೆ. 2021 ರಲ್ಲಿ ಕೊನೆ ಟೆಸ್ಟ್​ ಆಡಿದ್ದ ಸೈನಿ, ಇಂಜುರಿ ಕಾರಣದಿಂದ ತಂಡದಿಂದ ಕಿಕೌಟ್​ ಆಗಿದ್ರು. ಬಳಿಕ ತಂಡದಲ್ಲಿ ಸ್ಥಾನ ಅನ್ನೋದು ಮರೀಚಿಕೆ ಆಗಿತ್ತು.

ಇಶನ್​ ಕಿಶನ್​​​​ -ಕೆಎಸ್ ಭರತ್ ಸ್ಥಾನ ಭದ್ರ..!

ಡಬಲ್​ ಸೆಂಚುರಿಮ್ಯಾನ್​ ಇಶನ್​ ಕಿಶನ್​​​ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಏಕದಿನ ಹಾಗೂ ಟೆಸ್ಟ್​​​​​​ ಸರಣಿಗೆ ಲೆಫ್ಟಿ ಬ್ಯಾಟರ್ ಆಯ್ಕೆಯಾಗಿದ್ದು, ಕೆಪಾಸಿಟಿ ಪ್ರೂವ್ ಮಾಡಲು ಮತ್ತೊಂದು ಅವಕಾಶ ಸಿಕ್ಕಂತಾಗಿದೆ. ಇವರ ಜೊತೆ ವಿಕೆಟ್ ಕೀಪರ್​​ ಕೆಎಸ್​ ಭರತ್ ಟೆಸ್ಟ್​​ನಲ್ಲಿ ಸ್ಥಾನ ಭದ್ರ ಪಡಿಸಿಕೊಂಡಿದ್ದಾರೆ. ರಿಷಬ್​​ ಪಂತ್ ಆಬ್​ಸನ್ಸ್​​​​​ ಭರತ್​ಗೆ ವರದಾನವಾಗಿದೆ. ಇನ್ನು ವೇಗಿ ಜಯ್​ದೇವ್ ಉನಾದ್ಕಟ್​​​ ಸ್ಥಾನ ಭದ್ರವಾಗಿದೆ.

ಪೂಜಾರಗೆ ಕೊಕ್.. ಟೆಸ್ಟ್​ ಕರಿಯರ್​​​​ ಕ್ಲೋಸ್​​..?

ಅಸ್ಥಿರ ಪರ್ಫಾಮೆನ್ಸ್​ ನಿಂದ ಟೀಕೆಗೆ ಗುರಿ ಎದುರಿಸಿದ್ದ ಚೇತೇಶ್ವರ್ ಪೂಜಾರನ್ನ ಇಂಡೀಸ್ ಟೆಸ್ಟ್​ ಸರಣಿಯಿಂದ ಡ್ರಾಪ್ ಮಾಡ್ತಾರೆ ಎಂದು ಹೇಳಾಗ್ತಿತ್ತು. ಸದ್ಯ ಅದು ನಿಜವಾಗಿದೆ. ನಂಬಿಗಸ್ಥ ಪೂಜಾರ ಅವರಿಗೆ ರೆಡ್​​ಬಾಲ್​ ಕ್ರಿಕೆಟ್​​​​​ನಿಂದ ಗೇಟ್​ಪಾಸ್​ ನೀಡಿದೆ. ಇವರ ಬದಲಿ ಯಂಗ್​​​​​ಗನ್​ ಯಶಸ್ವಿ ಜೈಸ್ವಾಲ್​​ಗೆ ಮಣೆ ಹಾಕಲಾಗಿದೆ. ಒಂದು ವೇಳೆ ಯಶಸ್ವಿ ಜೈಸ್ವಾಲ್​​​​ ಉತ್ತಮ ಪ್ರದರ್ಶನ ನೀಡಿದ್ದೆ ಆದಲ್ಲಿ ಟೆಸ್ಟ್​ ಸ್ಪೆಷಲಿಸ್ಟ್​ ಪೂಜಾರರ ಟೆಸ್ಟ್ ಕರಿಯರ್​​ ಬಹುತೇಕ ಕ್ಲೊಸ್ ಆಗಲಿದೆ.

ಅಜಿಂಕ್ಯಾ ರಹಾನೆಗೆ ಮತ್ತೆ ವೈಸ್​ ಕ್ಯಾಪ್ಟನ್ಸಿ ಪಟ್ಟ

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​​ ಫೈನಲ್​ ಮೂಲಕ ತಂಡಕ್ಕೆ ಮರಳಿದ್ದ ಅಜಿಂಕ್ಯಾ ರಹಾನೆಗೆ ವೈಸ್​ ಕ್ಯಾಪ್ಟನ್ಸಿ ಪಟ್ಟ ಕಟ್ಟಲಾಗಿದೆ. ಈ ಹಿಂದೆ ರಹಾನೆ ತಂಡದ ಉಪನಾಯಕನಾಗಿದ್ರು. ಸದ್ಯ ಪೂಜಾರಗೆ ತಂಡದಿಂದ ಗೇಟ್​ಪಾಸ್ ನೀಡಿದ್ದರಿಂದ ರಹಾನೆಗೆ ಈ ಜವಾಬ್ದಾರಿ ನೀಡಲಾಗಿದೆ. ಆ ಮೂಲಕ ಬಿಸಿಸಿಐ ರೋಹಿತ್ ಶರ್ಮಾ ಬಳಿಕ ರಹಾನೆಗೆ ಟೆಸ್ಟ್​​ ಕ್ಯಾಪ್ಟನ್ಸಿ ನೀಡುವ ಹಿಂಟ್​​ ನೀಡಿದೆ.

ಮೊಹಮ್ಮದ್ ಶಮಿಗೆ ವಿಶ್ರಾಂತಿ ನೀಡಿದ BCCI

ವಿಂಡೀಸ್ ಸರಣಿ ವೇಳೆ ವಿರಾಟ್ ಹಾಗೂ ರೋಹಿತ್​ಗೆ ರೆಸ್ಟ್ ನೀಡೋ ಚರ್ಚೆ ನಡೆದಿತ್ತು. ಆದ್ರೆ ಸೆಲೆಕ್ಷನ್ ಕಮಿಟಿ ವರ್ಕ್​ಲೋಡ್ ಮ್ಯಾನೇಜ್​ಮೆಂಟ್ ಅಡಿಯಲ್ಲಿ ಮೊಹಮ್ಮದ್ ಶಮಿಗೆ ರೆಸ್ಟ್​ ನೀಡಿದೆ. ಇದೇ ಕಾರಣಕ್ಕೆ ನವದೀಪ್ ಸೈನಿಗೆ ಬುಲಾವ್ ನೀಡಿರೋ ಆಯ್ಕೆ ಸಮಿತಿ, ಟಿ20 ಸರಣಿ ವೇಳೆ ಮೊಹಮ್ಮದ್​ ಶಮಿಗೆ ಚಾನ್ಸ್​ ನೀಡೋ ಸಾಧ್ಯತೆ ಇದೆ.

ಆಯ್ಕೆ ಸಮಿತಿ ಅಳೆದು ತೂಗಿ ತಂಡವನ್ನ ಪ್ರಕಟಿಸಿದೆ. ಹತ್ತಾರು ಲೆಕ್ಕಚಾರಗಳು ಅಡಗಿವೆ. ಇದ್ರಲ್ಲಿ ಬಿಗ್​​ಬಾಸ್​ಗಳು ಸಕ್ಸಸ್​​​​​​​ ಕಾಣ್ತರಾ?, ಫೇಲಾಗ್ತಾರಾ? ಅನ್ನೋದು ಇಂಡೀಸ್​​​​ ಪ್ರವಾಸದ ಬಳಿಕವೇ ಗೊತ್ತಾಗಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Load More