ವಿಶ್ವಕಪ್ ಟೂರ್ನಿ, ಕನ್ನಡಿಗ ಕೆ.ಎಲ್ ರಾಹುಲ್ ಮೇಲೆ ಎಲ್ಲರ ಚಿತ್ತ
ಏಷ್ಯಾಕಪ್ನ ಎರಡು ಪಂದ್ಯ ಮಿಸ್ ಮಾಡಿಕೊಂಡಿರೋ ರಾಹುಲ್
ಈಗಾಗಲೇ ವಿಶ್ವಕಪ್ ತಂಡವನ್ನು ಫೈನಲ್ ಮಾಡಿರೋ ಅಗರ್ಕರ್
ಏಕದಿನ ವಿಶ್ವಕಪ್ ಟೂರ್ನಿಗೆ ಇಂದು ಟೀಮ್ ಇಂಡಿಯಾ ಪ್ರಕಟವಾಗುವುದು ಬಹುತೇಕ ಕನ್ಫರ್ಮ್ ಆಗಿದ್ದು ಇಂಜುರಿ ಹಿನ್ನೆಲೆಯಲ್ಲಿ ಈಗಾಗಲೇ ಏಷ್ಯಾಕಪ್ ಟೂರ್ನಿಯ 2 ಪಂದ್ಯ ಕಳೆದುಕೊಂಡಿರುವ ಕನ್ನಡಿಗ ಕೆ.ಎಲ್ ರಾಹುಲ್ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಇನ್ನು ವರ್ಲ್ಡ್ಕಪ್ನ 15 ಸದಸ್ಯರ ತಂಡವನ್ನು ಇಂದು ಮಧ್ಯಾಹ್ನ 1:30ಕ್ಕೆ ಪ್ರಕಟ ಮಾಡಲು ಬಿಸಿಸಿಐ ಸಿದ್ಧತೆ ಮಾಡಿಕೊಂಡಿದೆ.
ಕಳೆದ ಐಪಿಎಲ್ ಟೂರ್ನಿಯಲ್ಲಿ ಗಾಯಕ್ಕೆ ತುತ್ತಾಗಿದ್ದ ವಿಕೆಟ್ ಕೀಪರ್ ಕಂ ಬ್ಯಾಟ್ಸ್ಮನ್ ಕೆ.ಎಲ್ ರಾಹುಲ್ ಅವರು ಬಳಿಕ ಚಿಕಿತ್ಸೆ ಪಡೆದು ಚೇತರಿಕೆ ಕಂಡಿದ್ದರು. ಆದ್ರೆ ಇದೀಗ ನಡೆಯುತ್ತಿರುವ ಏಷ್ಯಾಕಪ್ನ ಮೊದಲೆರಡು ಪಂದ್ಯಗಳನ್ನು ರಾಹುಲ್ ಮಿಸ್ ಮಾಡಿಕೊಂಡಿದ್ದಾರೆ. ಹೀಗಾಗಿ ಏಕದಿನ ವಿಶ್ವಕಪ್ಗೆ ಆಯ್ಕೆ ಆಗುತ್ತಾರೋ, ಇಲ್ವೋ ಎಂಬ ಕುತೂಹಲ ಕ್ರಿಕೆಟ್ ಅಭಿಮಾನಿಗಳನ್ನ ಕಾಡತೊಡಗಿದೆ.
ಕಳೆದ ವಾರ ಅಜಿತ್ ಅಗರ್ಕರ್ ಅವರು ಶ್ರೀಲಂಕಾಗೆ ತೆರಳಿ ಕ್ಯಾಪ್ಟನ್ ರೋಹಿತ್ ಶರ್ಮಾ, ಮುಖ್ಯಕೋಚ್ ರಾಹುಲ್ ದ್ರಾವಿಡ್ರನ್ನ ಭೇಟಿ ಮಾಡಿ ವಿಶ್ವಕಪ್ ತಂಡವನ್ನು ಫೈನಲ್ ಲಿಸ್ಟ್ ಸಿದ್ಧ ಮಾಡಿದ್ದಾರೆ. ಈ ಲಿಸ್ಟ್ನಲ್ಲಿ ಗಾಯದಿಂದ ಬಳಲಿ ಚೇತರಿಸಿಕೊಂಡಿದ್ದ ಕೆಎಲ್ ರಾಹುಲ್ ಮತ್ತು ಜಸ್ಪ್ರೀತ್ ಬುಮ್ರಾ ಸೇರಿದಂತೆ ಕೆಲವೇ ಕೆಲ ಸ್ಟಾರ್ ಆಟಗಾರರ ಹೆಸರು ಪರಿಗಣಿಸಲಾಗಿದಿಯೋ ಅಥವಾ ಕೈ ಬಿಡಲಾಗಿದಿಯೋ ಎಂಬುದು ಇಂದು ಅಧಿಕೃತವಾಗಿ ಗೊತ್ತಾಗಲಿದೆ ಎಂದು ತಿಳಿದು ಬಂದಿದೆ.
ಇನ್ನು ಅಕ್ಟೋಬರ್ 5 ರಿಂದ ಗುಜರಾತ್ನ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ವಿಶ್ವಕಪ್ನ ಮೊದಲ ಪಂದ್ಯ ಪ್ರಾರಂಭವಾಗಲಿದೆ. ಹೀಗಾಗಿ ತಾತ್ಕಾಲಿಕವಾಗಿ ಆಟಗಾರರ ಲಿಸ್ಟ್ ಬಿಸಿಸಿಐ ಇಂದು ಘೋಷಣೆ ಮಾಡಲಿದೆ. ಪಟ್ಟಿಯಲ್ಲಿ ಇನ್ನಷ್ಟು ಪ್ರಮುಖ ಬದಲಾವಣೆಗಳನ್ನು ಸೆಪ್ಟೆಂಬರ್ 28ರೊಳಗೆ ಮಾಡಬಹುದು. ತದನಂತರ ಯಾವುದೇ ಬದಲಾವಣೆಗಳನ್ನು ಮಾಡಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ವಿಶ್ವಕಪ್ ಟೂರ್ನಿ, ಕನ್ನಡಿಗ ಕೆ.ಎಲ್ ರಾಹುಲ್ ಮೇಲೆ ಎಲ್ಲರ ಚಿತ್ತ
ಏಷ್ಯಾಕಪ್ನ ಎರಡು ಪಂದ್ಯ ಮಿಸ್ ಮಾಡಿಕೊಂಡಿರೋ ರಾಹುಲ್
ಈಗಾಗಲೇ ವಿಶ್ವಕಪ್ ತಂಡವನ್ನು ಫೈನಲ್ ಮಾಡಿರೋ ಅಗರ್ಕರ್
ಏಕದಿನ ವಿಶ್ವಕಪ್ ಟೂರ್ನಿಗೆ ಇಂದು ಟೀಮ್ ಇಂಡಿಯಾ ಪ್ರಕಟವಾಗುವುದು ಬಹುತೇಕ ಕನ್ಫರ್ಮ್ ಆಗಿದ್ದು ಇಂಜುರಿ ಹಿನ್ನೆಲೆಯಲ್ಲಿ ಈಗಾಗಲೇ ಏಷ್ಯಾಕಪ್ ಟೂರ್ನಿಯ 2 ಪಂದ್ಯ ಕಳೆದುಕೊಂಡಿರುವ ಕನ್ನಡಿಗ ಕೆ.ಎಲ್ ರಾಹುಲ್ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಇನ್ನು ವರ್ಲ್ಡ್ಕಪ್ನ 15 ಸದಸ್ಯರ ತಂಡವನ್ನು ಇಂದು ಮಧ್ಯಾಹ್ನ 1:30ಕ್ಕೆ ಪ್ರಕಟ ಮಾಡಲು ಬಿಸಿಸಿಐ ಸಿದ್ಧತೆ ಮಾಡಿಕೊಂಡಿದೆ.
ಕಳೆದ ಐಪಿಎಲ್ ಟೂರ್ನಿಯಲ್ಲಿ ಗಾಯಕ್ಕೆ ತುತ್ತಾಗಿದ್ದ ವಿಕೆಟ್ ಕೀಪರ್ ಕಂ ಬ್ಯಾಟ್ಸ್ಮನ್ ಕೆ.ಎಲ್ ರಾಹುಲ್ ಅವರು ಬಳಿಕ ಚಿಕಿತ್ಸೆ ಪಡೆದು ಚೇತರಿಕೆ ಕಂಡಿದ್ದರು. ಆದ್ರೆ ಇದೀಗ ನಡೆಯುತ್ತಿರುವ ಏಷ್ಯಾಕಪ್ನ ಮೊದಲೆರಡು ಪಂದ್ಯಗಳನ್ನು ರಾಹುಲ್ ಮಿಸ್ ಮಾಡಿಕೊಂಡಿದ್ದಾರೆ. ಹೀಗಾಗಿ ಏಕದಿನ ವಿಶ್ವಕಪ್ಗೆ ಆಯ್ಕೆ ಆಗುತ್ತಾರೋ, ಇಲ್ವೋ ಎಂಬ ಕುತೂಹಲ ಕ್ರಿಕೆಟ್ ಅಭಿಮಾನಿಗಳನ್ನ ಕಾಡತೊಡಗಿದೆ.
ಕಳೆದ ವಾರ ಅಜಿತ್ ಅಗರ್ಕರ್ ಅವರು ಶ್ರೀಲಂಕಾಗೆ ತೆರಳಿ ಕ್ಯಾಪ್ಟನ್ ರೋಹಿತ್ ಶರ್ಮಾ, ಮುಖ್ಯಕೋಚ್ ರಾಹುಲ್ ದ್ರಾವಿಡ್ರನ್ನ ಭೇಟಿ ಮಾಡಿ ವಿಶ್ವಕಪ್ ತಂಡವನ್ನು ಫೈನಲ್ ಲಿಸ್ಟ್ ಸಿದ್ಧ ಮಾಡಿದ್ದಾರೆ. ಈ ಲಿಸ್ಟ್ನಲ್ಲಿ ಗಾಯದಿಂದ ಬಳಲಿ ಚೇತರಿಸಿಕೊಂಡಿದ್ದ ಕೆಎಲ್ ರಾಹುಲ್ ಮತ್ತು ಜಸ್ಪ್ರೀತ್ ಬುಮ್ರಾ ಸೇರಿದಂತೆ ಕೆಲವೇ ಕೆಲ ಸ್ಟಾರ್ ಆಟಗಾರರ ಹೆಸರು ಪರಿಗಣಿಸಲಾಗಿದಿಯೋ ಅಥವಾ ಕೈ ಬಿಡಲಾಗಿದಿಯೋ ಎಂಬುದು ಇಂದು ಅಧಿಕೃತವಾಗಿ ಗೊತ್ತಾಗಲಿದೆ ಎಂದು ತಿಳಿದು ಬಂದಿದೆ.
ಇನ್ನು ಅಕ್ಟೋಬರ್ 5 ರಿಂದ ಗುಜರಾತ್ನ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ವಿಶ್ವಕಪ್ನ ಮೊದಲ ಪಂದ್ಯ ಪ್ರಾರಂಭವಾಗಲಿದೆ. ಹೀಗಾಗಿ ತಾತ್ಕಾಲಿಕವಾಗಿ ಆಟಗಾರರ ಲಿಸ್ಟ್ ಬಿಸಿಸಿಐ ಇಂದು ಘೋಷಣೆ ಮಾಡಲಿದೆ. ಪಟ್ಟಿಯಲ್ಲಿ ಇನ್ನಷ್ಟು ಪ್ರಮುಖ ಬದಲಾವಣೆಗಳನ್ನು ಸೆಪ್ಟೆಂಬರ್ 28ರೊಳಗೆ ಮಾಡಬಹುದು. ತದನಂತರ ಯಾವುದೇ ಬದಲಾವಣೆಗಳನ್ನು ಮಾಡಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ