newsfirstkannada.com

ಟೀಂ ಇಂಡಿಯಾದಲ್ಲಿ ಮೇಜರ್​ ಸರ್ಜರಿ.. ವಿಂಡೀಸ್ ಪ್ರವಾಸದಿಂದ ಕೊಹ್ಲಿ, ರೋಹಿತ್​​ಗೆ ಕೊಕ್?

Share :

14-06-2023

    ಟೀಂ ಇಂಡಿಯಾದಲ್ಲಿ ಬದಲಾವಣೆಯ ಬಿರುಗಾಳಿ

    ಐಪಿಎಲ್​​​​, ಡೊಮೆಸ್ಟಿಕ್​​​ ಹೀರೋಗಳಿಗೆ ಜಾಕ್​ಪಾಟ್​​​

    ಟಿ-20 ಸರಣಿಯಲ್ಲಿ ಯಾರಿಗೆಲ್ಲ ಚಾನ್ಸ್​ ಸಿಗಬಹುದು ಗೊತ್ತಾ?

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​​​ ಸೋಲು ಬಿಸಿಸಿಐಯನ್ನು ಕಂಗೆಡಿಸಿದೆ. ಮುಂದೆ ಇಂತಹ ತಪ್ಪು ಮರುಕಳಿಸದಿರಲು ಬಿಗ್​​​​​ಬಾಸ್​​ಗಳು ಚಿಂತಿಸ್ತಿದ್ದಾರೆ. ಇದಕ್ಕಾಗಿ ಮೇಜರ್​ ಸರ್ಜರಿಗೆ ಮುಂದಾಗಿದ್ದು, ಟೀಂ ಇಂಡಿಯಾದಲ್ಲಿ ಬದಲಾವಣೆಯ ಬಿರುಗಾಳಿ ನಿಶ್ಚಿತವಾಗಿದೆ. ಬಿಗ್​​​​ಬಾಸ್​ಗಳ ಈ ನಡೆಯಿಂದ ಸೀನಿಯರ್​​​​​​ಗಳ ಎದೆಯಲ್ಲಿ ನಡುಕ ಶುರುವಾಗಿದೆ.

ವಿಶ್ವಟೆಸ್ಟ್ ಚಾಂಪಿಯನ್​​ಶಿಪ್​​​​ ಸೋಲಿನಿಂದ, ಟೀಂ ಇಂಡಿಯಾ ಮಾನ ವಿಶ್ವಮಟ್ಟದಲ್ಲಿ ಮತ್ತೊಮ್ಮೆ ಹರಾಜಾಗಿದೆ. ತಲೆಯೆತ್ತಿ ಮೆರೆಯುತ್ತಿದ್ದ ಬಿಸಿಸಿಐ ಎಲ್ಲರೆದುರು ತಲೆಗ್ಗಿಸುವಂತಾಗಿದೆ. ಈ ಅಪಮಾನ, ಹತಾಶೆ ಮತ್ತೊಮ್ಮೆ ಮರುಕಳಿಸದಿರಲು ಬಿಸಿಸಿಐ ನಿರ್ಧರಿಸಿದ್ದು, ತಂಡದಲ್ಲಿ ಮೇಜರ್​​ ಸರ್ಜರಿಗೆ ಮುಂದಾಗಿದೆ.

ಇಂಡೀಸ್ ಪ್ರವಾಸದಿಂದಲೇ ಮೇಜರ್ ಸರ್ಜರಿನಾ..!

ಜುಲೈ 12 ರಿಂದ ಭಾರತ-ವೆಸ್ಟ್​​ಇಂಡೀಸ್​​​​​​ ನಡುವೆ ದ್ವಿಪಕ್ಷೀಯ ಸರಣಿ ಆರಂಭಗೊಳ್ಳಲಿದೆ. ಸುದೀರ್ಘ ಒಂದು ತಿಂಗಳು ಹಣಾಹಣಿ ಏರ್ಪಡಲಿದೆ. ಮೆನ್​​ ಇನ್​ ಬ್ಲೂ ಪಡೆಗೆ ಇದು ಬರೀ ಸರಣಿ ಮಾತ್ರ ಅಲ್ಲ. WTC 3ನೆ ಆವೃತ್ತಿ ಇಲ್ಲಿಂದಲೇ ಸ್ಟಾರ್ಟ್​ ಆಗಲಿದ್ದು ಬದಲಾವಣೆಯ ರಣಕಹಳೆ ಊದಲು ಬಿಸಿಸಿಐ ಪ್ಲಾನ್ ಮಾಡಿದೆ.

‘ಯಂಗ್​ ಇಂಡಿಯಾ’ ಕಟ್ಟಲು ಬಿಗ್​​​ಬಾಸ್​​​​​ಗಳು ಪ್ಲಾನ್​

ಸಾಲು-ಸಾಲು ಐಸಿಸಿ ಟ್ರೋಫಿಗಳ ಸೋಲಿನಿಂದ ಬಿಸಿಸಿಐ ಅಕ್ಷಶಃ ಕಂಗೆಟ್ಟಿ ಹೋಗಿದೆ. ಕ್ರಿಕೆಟ್ ಪಡಸಾಲೆಯಲ್ಲಿ ಬದಲಾವಣೆಯ ಆಗ್ರಹ ಕೇಳಿ ಬರುತ್ತಿದೆ. ಇದು ಬಿಗ್​ಬಾಸ್​ಗಳಿಗೆ ನುಂಗಲಾರದ ಬಿಸಿತುಪ್ಪವಾಗಿ ಪರಿಣಿಮಿಸಿದೆ. ಸದ್ಯ ಬಿಸಿಸಿಐ ಮುಂದಿರೋದು ಒಂದೇ ದಾರಿ. ಅದುವೇ ಸರ್ಜರಿ. ಇದನ್ನರಿತೆ ಮುಂಬರೋ ವೆಸ್ಟ್​​​​ ಸರಣಿಯಲ್ಲಿ ಐಪಿಎಲ್​​​​​​ ಹಾಗೂ ಡೊಮೆಸ್ಟಿಕ್​​​​​ ಹೀರೋಗಳಿಗೆ ಮಣೆ ಹಾಕಲು ಸಿದ್ಧತೆ ನಡೆಸಿದೆ. ಹಾಗಾದ್ರೆ ಯಾವೆಲ್ಲ ಅನ್​ಕ್ಯಾಪ್ಡ್​​​ ಪ್ಲೇಯರ್ಸ್​ ಕೆರಿಬಿಯನ್ನರ ನಾಡಿಗೆ ಹಾರಬಹುದು?.

ಟಿ20 ಸರಣಿಯಲ್ಲಿ ಜೈಸ್ವಾಲ್​​, ರಿಂಕು ಸಿಂಗ್​ಗೆ ಚಾನ್ಸ್​..?

ಇಂಡೀಸ್ ಎದುರಿನ ಟಿ20 ಸರಣಿಗೆ ಐಪಿಎಲ್​ ಸೆನ್ಷೆಷನಲ್ ಸ್ಟಾರ್​​ಗಳಾದ ರಿಂಕು ಸಿಂಗ್​​​ ಹಾಗೂ ಯಶಸ್ವಿ ಜೈಸ್ವಾಲ್​​​​ ಆಯ್ಕೆ ಬಹುತೇಕ ಖಚಿತ ಎಂದು ಹೇಳಲಾಗ್ತಿದೆ. ಇಬ್ಬರು ಯಂಗ್​ಸ್ಟರ್ಸ್​ ಐಪಿಎಲ್​ನಲ್ಲಿ ರನ್​ ಹೊಳೆ ಹರಿಸಿದ್ರು. ಟಿ20ಗೆ ಇವರು ಹೇಳಿ ಮಾಡಿಸಿದ ಆಟಗಾರರು. ಇವರ ಜೊತೆ ವೇಗಿ ಮೋಹಿತ್ ಶರ್ಮಾ, ವಿಕೆಟ್ ಕೀಪರ್​​ ಜಿತೇಶ್ ಶರ್ಮಾ ಕೂಡ ರೇಸ್​​ನಲ್ಲಿದ್ದಾರೆ.
ದಿ ಲೆಜೆಂಡ್ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾರನ್ನ ಟಿ20 ತಂಡದಿಂದ ಕೈಬಿಡಲಾಗಿದೆ. 2022ರ ಟಿ20 ವಿಶ್ವಕಪ್​ ಬಳಿಕ ಒಂದು ಟಿ20 ಪಂದ್ಯ ಆಡಿಲ್ಲ. ಇವರ ಬದಲಿಗೆ ಯುವ ಆಟಗಾರರಿಗೆ ಬುಲಾವ್ ನೀಡಲು ಬಿಸಿಸಿಐ ಯೋಚಿಸುತ್ತಿದೆ.

ರೆಡ್​​ಬಾಲ್​​​ನಲ್ಲಿ ಅಬ್ಬರಿಸಲು ಜೈಸ್ವಾಲ್​​​, ಸರ್ಫರಾಜ್ ರೆಡಿ

ಇನ್ನು ಬರೀ ಟಿ20 ಮಾತ್ರವಲ್ಲ. ಟೆಸ್ಟ್​​ ತಂಡದಲ್ಲೂ ಬದಲಾವಣೆಯ ಬಿರುಗಾಳಿ ಬೀಸಲಿದೆ. ಸತತ ವೈಫಲ್ಯ ಅನುಭವಿಸುತ್ತಿರುವ ಚೇತೇಶ್ವರ್ ಪೂಜಾರ ಹಾಗೂ ಉಮೇಶ್​ ಯಾದವ್​​​ ಆಯ್ಕೆಗಾರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇವರಿಗೆ ತಂಡದಿಂದ ಗೇಟ್​ಪಾಸ್​​ ನೀಡಿ ಆಂಗ್ರಿಯಂಗ್​ ಮ್ಯಾನ್​​ ಯಶಸ್ವಿ ಜೈಸ್ವಾಲ್​​​, ವೇಗಿ ಮುಕೇಶ್​ ಕುಮಾರ್​​ ಹಾಗೂ ಸರ್ಫರಾಜ್​​​ ಖಾನ್​​​ಗೆ ಅವಕಾಶ ನೀಡಲು ಬಿಸಿಸಿಐ ಸದ್ದಿಲ್ಲದೇ ಸಿದ್ಧತೆ ನಡೆಸಿದೆ.

ಸೈಲೆಂಟಾಗಿ ಇಂಡೀಸ್ ಪ್ರವಾಸದಲ್ಲಿ ಮೇಜರ್ ಸರ್ಜರಿ ನಡೆಸಲು ಬಿಸಿಸಿಐ ಮುಂದಾಗಿರೋದು ನಿಜ. ಆದರೆ ಮೇಲಿನ ಯಂಗ್​​ಸ್ಟರ್ಸ್​ಗಳಲ್ಲಿ ಯಾರಿಗೆಲ್ಲ ಜಾಕ್​ಪಾಟ್​​ ಹೊಡೆಯುತ್ತೆ, ಯಾವೆಲ್ಲಾ ಸೀನಿಯರ್ ಪ್ಲೇಯರ್ಸ್​ ಕಿಕೌಟ್​ ಆಗಲಿದ್ದಾರೆ ಅನ್ನೋದು ಗೊತ್ತಾಗಬೇಕಾದ್ರೆ ಇನ್ನೂ ಸ್ವಲ್ಪ ದಿನ ಕಾಯಲೇಬೇಕು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಟೀಂ ಇಂಡಿಯಾದಲ್ಲಿ ಮೇಜರ್​ ಸರ್ಜರಿ.. ವಿಂಡೀಸ್ ಪ್ರವಾಸದಿಂದ ಕೊಹ್ಲಿ, ರೋಹಿತ್​​ಗೆ ಕೊಕ್?

https://newsfirstlive.com/wp-content/uploads/2023/06/RINKU_SINGH.jpg

    ಟೀಂ ಇಂಡಿಯಾದಲ್ಲಿ ಬದಲಾವಣೆಯ ಬಿರುಗಾಳಿ

    ಐಪಿಎಲ್​​​​, ಡೊಮೆಸ್ಟಿಕ್​​​ ಹೀರೋಗಳಿಗೆ ಜಾಕ್​ಪಾಟ್​​​

    ಟಿ-20 ಸರಣಿಯಲ್ಲಿ ಯಾರಿಗೆಲ್ಲ ಚಾನ್ಸ್​ ಸಿಗಬಹುದು ಗೊತ್ತಾ?

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​​​ ಸೋಲು ಬಿಸಿಸಿಐಯನ್ನು ಕಂಗೆಡಿಸಿದೆ. ಮುಂದೆ ಇಂತಹ ತಪ್ಪು ಮರುಕಳಿಸದಿರಲು ಬಿಗ್​​​​​ಬಾಸ್​​ಗಳು ಚಿಂತಿಸ್ತಿದ್ದಾರೆ. ಇದಕ್ಕಾಗಿ ಮೇಜರ್​ ಸರ್ಜರಿಗೆ ಮುಂದಾಗಿದ್ದು, ಟೀಂ ಇಂಡಿಯಾದಲ್ಲಿ ಬದಲಾವಣೆಯ ಬಿರುಗಾಳಿ ನಿಶ್ಚಿತವಾಗಿದೆ. ಬಿಗ್​​​​ಬಾಸ್​ಗಳ ಈ ನಡೆಯಿಂದ ಸೀನಿಯರ್​​​​​​ಗಳ ಎದೆಯಲ್ಲಿ ನಡುಕ ಶುರುವಾಗಿದೆ.

ವಿಶ್ವಟೆಸ್ಟ್ ಚಾಂಪಿಯನ್​​ಶಿಪ್​​​​ ಸೋಲಿನಿಂದ, ಟೀಂ ಇಂಡಿಯಾ ಮಾನ ವಿಶ್ವಮಟ್ಟದಲ್ಲಿ ಮತ್ತೊಮ್ಮೆ ಹರಾಜಾಗಿದೆ. ತಲೆಯೆತ್ತಿ ಮೆರೆಯುತ್ತಿದ್ದ ಬಿಸಿಸಿಐ ಎಲ್ಲರೆದುರು ತಲೆಗ್ಗಿಸುವಂತಾಗಿದೆ. ಈ ಅಪಮಾನ, ಹತಾಶೆ ಮತ್ತೊಮ್ಮೆ ಮರುಕಳಿಸದಿರಲು ಬಿಸಿಸಿಐ ನಿರ್ಧರಿಸಿದ್ದು, ತಂಡದಲ್ಲಿ ಮೇಜರ್​​ ಸರ್ಜರಿಗೆ ಮುಂದಾಗಿದೆ.

ಇಂಡೀಸ್ ಪ್ರವಾಸದಿಂದಲೇ ಮೇಜರ್ ಸರ್ಜರಿನಾ..!

ಜುಲೈ 12 ರಿಂದ ಭಾರತ-ವೆಸ್ಟ್​​ಇಂಡೀಸ್​​​​​​ ನಡುವೆ ದ್ವಿಪಕ್ಷೀಯ ಸರಣಿ ಆರಂಭಗೊಳ್ಳಲಿದೆ. ಸುದೀರ್ಘ ಒಂದು ತಿಂಗಳು ಹಣಾಹಣಿ ಏರ್ಪಡಲಿದೆ. ಮೆನ್​​ ಇನ್​ ಬ್ಲೂ ಪಡೆಗೆ ಇದು ಬರೀ ಸರಣಿ ಮಾತ್ರ ಅಲ್ಲ. WTC 3ನೆ ಆವೃತ್ತಿ ಇಲ್ಲಿಂದಲೇ ಸ್ಟಾರ್ಟ್​ ಆಗಲಿದ್ದು ಬದಲಾವಣೆಯ ರಣಕಹಳೆ ಊದಲು ಬಿಸಿಸಿಐ ಪ್ಲಾನ್ ಮಾಡಿದೆ.

‘ಯಂಗ್​ ಇಂಡಿಯಾ’ ಕಟ್ಟಲು ಬಿಗ್​​​ಬಾಸ್​​​​​ಗಳು ಪ್ಲಾನ್​

ಸಾಲು-ಸಾಲು ಐಸಿಸಿ ಟ್ರೋಫಿಗಳ ಸೋಲಿನಿಂದ ಬಿಸಿಸಿಐ ಅಕ್ಷಶಃ ಕಂಗೆಟ್ಟಿ ಹೋಗಿದೆ. ಕ್ರಿಕೆಟ್ ಪಡಸಾಲೆಯಲ್ಲಿ ಬದಲಾವಣೆಯ ಆಗ್ರಹ ಕೇಳಿ ಬರುತ್ತಿದೆ. ಇದು ಬಿಗ್​ಬಾಸ್​ಗಳಿಗೆ ನುಂಗಲಾರದ ಬಿಸಿತುಪ್ಪವಾಗಿ ಪರಿಣಿಮಿಸಿದೆ. ಸದ್ಯ ಬಿಸಿಸಿಐ ಮುಂದಿರೋದು ಒಂದೇ ದಾರಿ. ಅದುವೇ ಸರ್ಜರಿ. ಇದನ್ನರಿತೆ ಮುಂಬರೋ ವೆಸ್ಟ್​​​​ ಸರಣಿಯಲ್ಲಿ ಐಪಿಎಲ್​​​​​​ ಹಾಗೂ ಡೊಮೆಸ್ಟಿಕ್​​​​​ ಹೀರೋಗಳಿಗೆ ಮಣೆ ಹಾಕಲು ಸಿದ್ಧತೆ ನಡೆಸಿದೆ. ಹಾಗಾದ್ರೆ ಯಾವೆಲ್ಲ ಅನ್​ಕ್ಯಾಪ್ಡ್​​​ ಪ್ಲೇಯರ್ಸ್​ ಕೆರಿಬಿಯನ್ನರ ನಾಡಿಗೆ ಹಾರಬಹುದು?.

ಟಿ20 ಸರಣಿಯಲ್ಲಿ ಜೈಸ್ವಾಲ್​​, ರಿಂಕು ಸಿಂಗ್​ಗೆ ಚಾನ್ಸ್​..?

ಇಂಡೀಸ್ ಎದುರಿನ ಟಿ20 ಸರಣಿಗೆ ಐಪಿಎಲ್​ ಸೆನ್ಷೆಷನಲ್ ಸ್ಟಾರ್​​ಗಳಾದ ರಿಂಕು ಸಿಂಗ್​​​ ಹಾಗೂ ಯಶಸ್ವಿ ಜೈಸ್ವಾಲ್​​​​ ಆಯ್ಕೆ ಬಹುತೇಕ ಖಚಿತ ಎಂದು ಹೇಳಲಾಗ್ತಿದೆ. ಇಬ್ಬರು ಯಂಗ್​ಸ್ಟರ್ಸ್​ ಐಪಿಎಲ್​ನಲ್ಲಿ ರನ್​ ಹೊಳೆ ಹರಿಸಿದ್ರು. ಟಿ20ಗೆ ಇವರು ಹೇಳಿ ಮಾಡಿಸಿದ ಆಟಗಾರರು. ಇವರ ಜೊತೆ ವೇಗಿ ಮೋಹಿತ್ ಶರ್ಮಾ, ವಿಕೆಟ್ ಕೀಪರ್​​ ಜಿತೇಶ್ ಶರ್ಮಾ ಕೂಡ ರೇಸ್​​ನಲ್ಲಿದ್ದಾರೆ.
ದಿ ಲೆಜೆಂಡ್ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾರನ್ನ ಟಿ20 ತಂಡದಿಂದ ಕೈಬಿಡಲಾಗಿದೆ. 2022ರ ಟಿ20 ವಿಶ್ವಕಪ್​ ಬಳಿಕ ಒಂದು ಟಿ20 ಪಂದ್ಯ ಆಡಿಲ್ಲ. ಇವರ ಬದಲಿಗೆ ಯುವ ಆಟಗಾರರಿಗೆ ಬುಲಾವ್ ನೀಡಲು ಬಿಸಿಸಿಐ ಯೋಚಿಸುತ್ತಿದೆ.

ರೆಡ್​​ಬಾಲ್​​​ನಲ್ಲಿ ಅಬ್ಬರಿಸಲು ಜೈಸ್ವಾಲ್​​​, ಸರ್ಫರಾಜ್ ರೆಡಿ

ಇನ್ನು ಬರೀ ಟಿ20 ಮಾತ್ರವಲ್ಲ. ಟೆಸ್ಟ್​​ ತಂಡದಲ್ಲೂ ಬದಲಾವಣೆಯ ಬಿರುಗಾಳಿ ಬೀಸಲಿದೆ. ಸತತ ವೈಫಲ್ಯ ಅನುಭವಿಸುತ್ತಿರುವ ಚೇತೇಶ್ವರ್ ಪೂಜಾರ ಹಾಗೂ ಉಮೇಶ್​ ಯಾದವ್​​​ ಆಯ್ಕೆಗಾರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇವರಿಗೆ ತಂಡದಿಂದ ಗೇಟ್​ಪಾಸ್​​ ನೀಡಿ ಆಂಗ್ರಿಯಂಗ್​ ಮ್ಯಾನ್​​ ಯಶಸ್ವಿ ಜೈಸ್ವಾಲ್​​​, ವೇಗಿ ಮುಕೇಶ್​ ಕುಮಾರ್​​ ಹಾಗೂ ಸರ್ಫರಾಜ್​​​ ಖಾನ್​​​ಗೆ ಅವಕಾಶ ನೀಡಲು ಬಿಸಿಸಿಐ ಸದ್ದಿಲ್ಲದೇ ಸಿದ್ಧತೆ ನಡೆಸಿದೆ.

ಸೈಲೆಂಟಾಗಿ ಇಂಡೀಸ್ ಪ್ರವಾಸದಲ್ಲಿ ಮೇಜರ್ ಸರ್ಜರಿ ನಡೆಸಲು ಬಿಸಿಸಿಐ ಮುಂದಾಗಿರೋದು ನಿಜ. ಆದರೆ ಮೇಲಿನ ಯಂಗ್​​ಸ್ಟರ್ಸ್​ಗಳಲ್ಲಿ ಯಾರಿಗೆಲ್ಲ ಜಾಕ್​ಪಾಟ್​​ ಹೊಡೆಯುತ್ತೆ, ಯಾವೆಲ್ಲಾ ಸೀನಿಯರ್ ಪ್ಲೇಯರ್ಸ್​ ಕಿಕೌಟ್​ ಆಗಲಿದ್ದಾರೆ ಅನ್ನೋದು ಗೊತ್ತಾಗಬೇಕಾದ್ರೆ ಇನ್ನೂ ಸ್ವಲ್ಪ ದಿನ ಕಾಯಲೇಬೇಕು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Load More