ವಿಶ್ವಕಪ್ ಮುಖಭಂಗದಿಂದ ಪಾರಾಗಲು ಬಿಸಿಸಿಐ ಪ್ಲಾನ್
ಲಿಸ್ಟ್ನಲ್ಲಿ ಜೈಸ್ವಾಲ್, ರಿಂಕು ಸಿಂಗ್ ಸೇರಿ ಇನ್ಯಾರಿಗೆ ಮಣೆ?
ಇಂಗ್ಲೆಂಡ್ನಿಂದ ನೇರ ವೆಸ್ಟ್ ಇಂಡೀಸ್ಗೆ ಪ್ರಯಾಣ
ಇಂಗ್ಲೆಂಡ್ನಲ್ಲಿ ನಡೆದ ಟೆಸ್ಟ್ ಚಾಂಪಿಯನ್ಶಿಪ್ ಅಲ್ಲಿ ಭಾರತ ತಂಡ ಆಸೀಸ್ ವಿರುದ್ಧ ಮುಗ್ಗರಿಸಿದೆ. ಸದ್ಯ ಇದರ ಬೆನ್ನಲ್ಲೆ ವೆಸ್ಟ್ ಇಂಡೀಸ್ ವಿರುದ್ಧ ಒನ್ ಡೇ, ಟೆಸ್ಟ್, ಟಿ20 ಸರಣಿಗಳನ್ನು ಟೀಂ ಇಂಡಿಯಾ ಆಡಲಿದೆ. ಜುಲೈ 12 ರಿಂದ ಆರಂಭಗೊಳ್ಳಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಹೊಸ ಕ್ರಿಕೆಟ್ ಆಟಗಾರರರಿಗೆ ಅವಕಾಶ ನೀಡಲು ಬಿಸಿಸಿಐ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ. ಟೆಸ್ಟ್ ವಿಶ್ವಕಪ್ ಸೋಲು, 2022ರ ಟಿ20 ವಿಶ್ವಕಪ್ ಹಿನ್ನಡೆಯಿಂದ ಪಾರಾಗಲು ಬಿಸಿಸಿಐ ಬಯಸಿದ್ದು, ಯುವ ಆಟಗಾರರಾದ ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್, ಜಿತೇಶ್ ಶರ್ಮಾ ಹಾಗೂ ಗಾಯಕ್ವಾಡ್ಗೆ ಮಣೆ ಹಾಕಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.
ವಿಂಡೀಸ್ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡ 2 ಟೆಸ್ಟ್, 3 ಏಕದಿನ ಮತ್ತು 5 ಟಿ20 ಪಂದ್ಯಗಳನ್ನ ಆಡಲಿದೆ. ಭಾರತ ತಂಡ ಈಗಾಗಲೇ ಇಂಗ್ಲೆಂಡ್ನಲ್ಲಿದ್ದು, ಇಲ್ಲಿಂದಲೇ ನೇರವಾಗಿ ವೆಸ್ಟ್ ಇಂಡೀಸ್ಗೆ ಪ್ರಯಾಣ ಬೆಳೆಸಿ ಕ್ರಿಕೆಟ್ ಅನ್ನು ಆಡಲಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ವಿಶ್ವಕಪ್ ಮುಖಭಂಗದಿಂದ ಪಾರಾಗಲು ಬಿಸಿಸಿಐ ಪ್ಲಾನ್
ಲಿಸ್ಟ್ನಲ್ಲಿ ಜೈಸ್ವಾಲ್, ರಿಂಕು ಸಿಂಗ್ ಸೇರಿ ಇನ್ಯಾರಿಗೆ ಮಣೆ?
ಇಂಗ್ಲೆಂಡ್ನಿಂದ ನೇರ ವೆಸ್ಟ್ ಇಂಡೀಸ್ಗೆ ಪ್ರಯಾಣ
ಇಂಗ್ಲೆಂಡ್ನಲ್ಲಿ ನಡೆದ ಟೆಸ್ಟ್ ಚಾಂಪಿಯನ್ಶಿಪ್ ಅಲ್ಲಿ ಭಾರತ ತಂಡ ಆಸೀಸ್ ವಿರುದ್ಧ ಮುಗ್ಗರಿಸಿದೆ. ಸದ್ಯ ಇದರ ಬೆನ್ನಲ್ಲೆ ವೆಸ್ಟ್ ಇಂಡೀಸ್ ವಿರುದ್ಧ ಒನ್ ಡೇ, ಟೆಸ್ಟ್, ಟಿ20 ಸರಣಿಗಳನ್ನು ಟೀಂ ಇಂಡಿಯಾ ಆಡಲಿದೆ. ಜುಲೈ 12 ರಿಂದ ಆರಂಭಗೊಳ್ಳಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಹೊಸ ಕ್ರಿಕೆಟ್ ಆಟಗಾರರರಿಗೆ ಅವಕಾಶ ನೀಡಲು ಬಿಸಿಸಿಐ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ. ಟೆಸ್ಟ್ ವಿಶ್ವಕಪ್ ಸೋಲು, 2022ರ ಟಿ20 ವಿಶ್ವಕಪ್ ಹಿನ್ನಡೆಯಿಂದ ಪಾರಾಗಲು ಬಿಸಿಸಿಐ ಬಯಸಿದ್ದು, ಯುವ ಆಟಗಾರರಾದ ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್, ಜಿತೇಶ್ ಶರ್ಮಾ ಹಾಗೂ ಗಾಯಕ್ವಾಡ್ಗೆ ಮಣೆ ಹಾಕಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.
ವಿಂಡೀಸ್ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡ 2 ಟೆಸ್ಟ್, 3 ಏಕದಿನ ಮತ್ತು 5 ಟಿ20 ಪಂದ್ಯಗಳನ್ನ ಆಡಲಿದೆ. ಭಾರತ ತಂಡ ಈಗಾಗಲೇ ಇಂಗ್ಲೆಂಡ್ನಲ್ಲಿದ್ದು, ಇಲ್ಲಿಂದಲೇ ನೇರವಾಗಿ ವೆಸ್ಟ್ ಇಂಡೀಸ್ಗೆ ಪ್ರಯಾಣ ಬೆಳೆಸಿ ಕ್ರಿಕೆಟ್ ಅನ್ನು ಆಡಲಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ