ಅತ್ತ ಏಷ್ಯಾಕಪ್..ಇತ್ತ ಟೀಮ್ ಅನೌನ್ಸ್..!
ಈ ಸರಣಿ ಭಾರತಕ್ಕೆ ವೆರಿ ಇಂಪಾರ್ಟೆಂಟ್ ಏಕೆ..?
ಅನ್ಫಿಟ್ ಶ್ರೇಯಸ್ಗೆ ಚಾನ್ಸ್ ಸಿಗುತ್ತಾ..?
ಏಷ್ಯಾಕಪ್ನಲ್ಲಿ ಫೈನಲ್ ತಲುಪಿರೋ ಟೀಮ್ ಇಂಡಿಯಾ ಚರಿತ್ರೆ ಸೃಷ್ಟಿಸುವ ಹೊಸ್ತಿಲಲ್ಲಿದೆ. ಅತ್ತ ರೋಹಿತ್ ಪಡೆ ಪ್ರಶಸ್ತಿ ಗೆಲ್ಲಲು ತವಕಿಸ್ತಿದ್ರೆ ಇತ್ತ ಆಯ್ಕೆ ಸಮಿತಿ ಸದ್ದಿಲ್ಲದೇ ಆಸ್ಟ್ರೇಲಿಯಾ ಸರಣಿಗೆ ತಂಡ ಪ್ರಕಟಿಸಲು ಸಜ್ಜಾಗಿದೆ. ಇನ್ನೆರಡು ದಿನದಲ್ಲಿ ತಂಡ ಅನೌನ್ಸ್ ಅಗಲಿದೆ. ವಿಶ್ವಕಪ್ ಮುನ್ನ ಆಡುವ ಕೊನೆ ಸರಣಿ ಇದ್ದಾಗಿದ್ದು ತುಂಬಾ ಮಹತ್ವ ಪಡೆದುಕೊಂಡಿದೆ.
ನಾನ್ಸ್ಟಾಪ್ ಕ್ರಿಕೆಟ್.. ಬಿಡುವಿಲ್ಲದ ವೇಳಾಪಟ್ಟಿ. ಒಂದಾದ ಮೇಲೊಂದರಂತೆ ದ್ವಿಪಕ್ಷೀಯ ಸರಣಿ. ಈ ಕಾರಣಕ್ಕಾಗಿಯೇ ಟೀಮ್ ಇಂಡಿಯಾ ವಿಶ್ವದ ಮೋಸ್ಟ್ ಬ್ಯುಸಿ ತಂಡವೆನಿಸಿದೆ. ಏಷ್ಯಾಕಪ್ ದಂಗಲ್ ನಾಳೆ ಮುಗಿಯಲಿದೆ. ಆಗಲೇ ಟೀಮ್ ಇಂಡಿಯಾ ಮತ್ತೊಂದು ಅಸೈನ್ಮೆಂಟ್ಗೆ ರೆಡಿಯಾಗಿದೆ. ರೋಹಿತ್ ಪಡೆ ಫೈನಲ್ಗೆ ಎಂಟ್ರಿಕೊಟ್ಟಿರುವ ಬೆನ್ನಲ್ಲೇ ಬಿಸಿಸಿಐ ಆಯ್ಕೆ ಸಮಿತಿ ಮುಂಬರೋ ಆಸ್ಟ್ರೇಲಿಯಾ ಸರಣಿಗೆ ತಂಡ ಪ್ರಕಟಿಸಲು ಸಜ್ಜಾಗಿದೆ.
ಅತ್ತ ಏಷ್ಯಾಕಪ್ ಫೈನಲ್.. ಇತ್ತ ಟೀಮ್ ಅನೌನ್ಸ್..!
ಏಷ್ಯಾಕಪ್ ಬ್ಯಾಟಲ್ ನಾಳೆಗೆ ಕೊನೆಗೊಳ್ಳಲಿದೆ. ಮುಂದೆನಪ್ಪಾ ಅಂತ ನೀವು ಯೋಚಿಸಬೇಕಿಲ್ಲ. ಯಾಕಂದ್ರೆ ನಿಮ್ಮನ್ನ ರಂಜಿಸಲು ಮತ್ತೊಂದು ಮೆಗಾ ದ್ವಿಪಕ್ಷೀಯ ಸರಣಿ ಬರ್ತಿದೆ. ಅದುವೇ ಭಾರತ-ಆಸ್ಟ್ರೇಲಿಯಾ ಏಕದಿನ ಸರಣಿ. ಸೆಪ್ಟೆಂಬರ್ 22 ರಿಂದ ಕ್ರಿಕೆಟ್ನ ಮದಗಜಗಳಾದ ಇಂಡೋ-ಆಸಿಸ್ ನಡುವೆ ಫಿಫ್ಟಿ ಓವರ್ ಬ್ಯಾಟಲ್ ಆರಂಭಗೊಳ್ಳಲಿದ್ದು, ಇನ್ನೆರಡು ದಿನದಲ್ಲಿ ಟೀಮ್ ಇಂಡಿಯಾ ಅನೌನ್ಸ್ ಆಗಲಿದೆ.
ಒನ್ಡೇ ವಿಶ್ವಕಪ್ಗೆ ಈ ಸರಣಿ ರಹದಾರಿ..!
ಇಂಡೋ-ಆಸೀಸ್ ಕಾಳಗ ಒನ್ಡೇ ವಿಶ್ವಕಪ್ಗೆ ರಹದಾರಿ ಅಂದ್ರು ತಪ್ಪಲ್ಲ. ಯಾಕಂದ್ರೆ ಮಹಾಸಮರಕ್ಕೂ ಮುನ್ನ ಟೀಮ್ ಇಂಡಿಯಾ ಆಡುವ ಕೊನೆ ಸರಣಿ ಇದಾಗಿದೆ. ಸೆಪ್ಟೆಂಬರ್ 27ಕ್ಕೆ ಸರಣಿ ಮುಗಿಸಿಕೊಂಡು ನೇರವಾಗಿ ಒನ್ಡೇ ವಿಶ್ವಕಪ್ ಅಖಾಡಕ್ಕೆ ಧುಮುಕಲಿದೆ. ಹೀಗಾಗಿ ರೋಹಿತ್ ಪಡೆ ಏನೇ ಪ್ರಯೋಗ ಮಾಡೋದಿದ್ರೂ ಈ ಸರಣಿಯಲ್ಲೇ ಮಾಡಬೇಕಿದೆ.
ಯಾಕಂದ್ರೆ ವಿಶ್ವಕಪ್ನಂತ ಬಿಗ್ ಸ್ಟೇಜ್ನಲ್ಲಿ ಪ್ರಯೋಗಕ್ಕೆ ಕೈ ಹಾಕಿದ್ರೆ ಅದರಿಂದ ತಂಡಕ್ಕೆ ಆಪತ್ತೆ ಹೆಚ್ಚು. ಸಾಕಷ್ಟು ಅಳೆದು ತೂಗಿ ಪರ್ಫೆಕ್ಟ್ ತಂಡವನ್ನು ಕಣಕ್ಕಿಳಿಸಬೇಕಿದೆ. ಆಡುವ ಹನ್ನೊಂದರ ಬಳಗದಲ್ಲಿ ಸ್ವಲ್ಪ ಯಾಮಾರಿದ್ರೂ ಟ್ರೋಫಿ ಆಸೆ ಕೈಚೆಲ್ಲಬೇಕಾಗುತ್ತೆ. ಅದಕ್ಕೆ ಆಸ್ಪದ ನೀಡಬಾರದು ಅಂದರೆ ಕೊನೆ ಚಾನ್ಸ್ ಅನ್ನಪ್ರಯೋಗದ ಸರಣಿಯನ್ನಾಗಿ ಬಳಸಿಕೊಳ್ಳಬೇಕಿದೆ.
ಸ್ಟ್ರೆಂಥ್ ಅಂಡ್ ವೀಕ್ನೆಸ್ ಅರಿಯಲು ಇದು ಕೊನೆ ಚಾನ್ಸ್
ವಿಶ್ವಕಪ್ನಂಥ ಪ್ರತಿಷ್ಠೆ ಟೂರ್ನಿ ಗೆಲ್ಲಬೇಕಾದ್ರೆ ಕ್ಯಾಪ್ಟನ್ ಆದವರಿಗೆ ತಂಡದ ಸ್ಟ್ರೆಂಥ್ ಮತ್ತು ವೀಕ್ನೆಸ್ ಚೆನ್ನಾಗಿ ಗೊತ್ತಿರಬೇಕು. ಆಗಲಷ್ಟೇ ನಿರೀಕ್ಷಿತ ಪ್ರದರ್ಶನ ಮೂಡಿಬರಲು ಸಾಧ್ಯ. ಭಾರತ ತಂಡ ಮೇಲ್ನೊಟಕ್ಕೆ ಸ್ಟ್ರಾಂಗ್ ಆಗಿ ಕಾಣಿಸಬಹುದು. ಹಾಗಂತ ತಂಡ ಪರ್ಫೆಕ್ಟ್ ಆಗಿದೆ ಎಂದಲ್ಲ. ಹಲವು ನ್ಯೂನತೆಗಳಿವೆ. 4 ಮತ್ತು 5ನೇ ಸ್ಲಾಟ್ ಆಯ್ಕೆಗೆ ಇಲ್ಲಿಯತನಕ ಕ್ಲಾರಿಟಿ ಸಿಕ್ಕಿಲ್ಲ. ಕೆಳ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯ ಹಾಗೂ ತಂಡದ ಫೀಲ್ಡಿಂಗ್ ಬಗ್ಗೆ ಪ್ರಶ್ನೆ ಎದ್ದಿದೆ. ಜತೆಗೆ ಬೌಲಿಂಗ್ ಕಾಂಬಿನೇಷನ್ ಬಗ್ಗೆಯೂ ಗೊಂದಲ ಇದೆ. ಈ ಎಲ್ಲದಕ್ಕೂ ಆಸಿಸ್ ಸಿರಿಸ್ನಲ್ಲೇ ಆನ್ಸರ್ ಕಂಡುಕೊಳ್ಳಬೇಕಿದೆ.
ಸ್ಟಾರ್ಸ್ ಪ್ಲೇಯರ್ಸ್ ಆಡ್ತಾರಾ? ರೆಸ್ಟ್ ನೀಡ್ತಾರಾ?
ಆಸೀಸ್ ಏಕದಿನ ಸರಣಿಯಲ್ಲಿ ಮೇನ್ ಪ್ಲೇಯರ್ಸ್ ಆಡ್ತಾರಾ? ಅಥವಾ ಇಲ್ವಾ ಅನ್ನೋ ಪ್ರಶ್ನೆ ಕಾಡ್ತಿದೆ. ಟೀಮ್ ಇಂಡಿಯಾದ ಬಿಡುವಿಲ್ಲದೇ ಕ್ರಿಕೆಟ್ ಆಡ್ತಿದೆ. ಇದರಿಂದ ಆಟಗಾರರು ಸಾಕಷ್ಟು ಬಳಲಿದ್ದಾರೆ. ಹಾಗಾಗಿ ಬಾಂಗ್ಲಾ ಎದುರಿನ ಏಷ್ಯಾಕಪ್ ಸೂಪರ್-4 ಪಂದ್ಯದಿಂದ ಐವರಿಗೆ ರೆಸ್ಟ್ ನೀಡಲಾಗಿತ್ತು. ಇದೇ ಸ್ಟ್ರಾಟಜಿಯನ್ನು ಆಸೀಸ್ ಸರಣಿಯಲ್ಲಿ ಫಾಲೋ ಮಾಡಿದ್ರೂ ಆಶ್ಚರ್ಯವಿಲ್ಲ. ಯಾಕಂದ್ರೆ ವಿಶ್ವಕಪ್ ಒಂದು ತಿಂಗಳಿಗೂ ಅಧಿಕ ಕಾಲ ನಡೆಯಲಿದೆ. ಈ ಅವಧಿಯಲ್ಲಿ ಇಂಜುರಿಯಾಗುವ ಸಾಧ್ಯತೆ ಇರುತ್ತೆ. ಇದನ್ನ ಗಮನದಲ್ಲಿರಿಸಿ ತಂಡದಲ್ಲಿನ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿದ್ರೂ ನೀಡಬಹುದು.
ಅನ್ಫಿಟ್ ಶ್ರೇಯಸ್ಗೆ ಚಾನ್ಸ್ ಸಿಗುತ್ತಾ?
ಬೆನ್ನನೋವಿನಿಂದ ಬಳಲುತ್ತಿರುವ ಶ್ರೇಯಸ್ ಅಯ್ಯರ್ ಆಸೀಸ್ ಸರಣಿಗೆ ಸೆಲೆಕ್ಟ್ ಆಗ್ತಾರಾ ? ಇಲ್ವ ಅನ್ನೋದು ಯಕ್ಷಪ್ರಶ್ನೆಯಾಗಿದೆ. ಏಷ್ಯಾಕಪ್ ಸೂಪರ್-4 ಪಂದ್ಯದಿಂದ ಶ್ರೇಯಸ್ ಹೊರಗುಳಿದಿದ್ದಾರೆ. ಫೈನಲ್ ಪಂದ್ಯ ಆಡುವುದು ಅನುಮಾನ ಎಂದು ಹೇಳಲಾಗ್ತಿದೆ. ಇಂತಹ ಅನ್ಫಿಟ್ ಆಟಗಾರನಿ ಆಸೀಸ್ ಸರಣಿಯಲ್ಲಿ ಆಡಲು ಚಾನ್ಸ್ ಸಿಗುತ್ತಾ ಅನ್ನೋದು ಕುತೂಹಲ ಮೂಡಿಸಿದೆ.
ಸಂಜು ಸ್ಯಾಮ್ಸನ್ ಹಾಗೂ ತಿಲಕ್ ವರ್ಮಾಗೆ ಕೊಕ್ ನೀಡುವುದು ಪಕ್ಕಾ ಆಗಿದೆ. ಯಾಕಂದ್ರೆ ಇಬ್ಬರು ಹೊಡಿಬಡಿ ಆಟಗಾರರನ್ನು ವಿಶ್ವಕಪ್ಗೆ ಪರಿಗಣಿಸಿಲ್ಲ. ಬಹುತೇಕ ಅದೇ ತಂಡವನ್ನೇ ಆಸೀಸ್ ವಿರುದ್ಧ ಕಣಕ್ಕಿಳಿಯಲಿದೆ. ಹಾಗೊಂದು ವೇಳೆ ಶ್ರೇಯಸ್ ಫಿಟ್ ಆಗದಿದ್ದಲ್ಲಿ ತಿಲಕ್ ವರ್ಮಾಗೆ ಅದೃಷ್ಟ ಖುಲಾಯಿಸಬಹುದು. ಬಿಟ್ಟರೆ ಆಸ್ಟ್ರೇಲಿಯಾ ಸರಣಿಗೆ ಪ್ರಕಟಗೊಳ್ಳುವ ತಂಡದಲ್ಲಿ ಹೆಚ್ಚೇನೂ ಸರ್ಪ್ರೈಸ್ ನಿರೀಕ್ಷಿಸಲು ಸಾಧ್ಯವಿಲ್ಲ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಅತ್ತ ಏಷ್ಯಾಕಪ್..ಇತ್ತ ಟೀಮ್ ಅನೌನ್ಸ್..!
ಈ ಸರಣಿ ಭಾರತಕ್ಕೆ ವೆರಿ ಇಂಪಾರ್ಟೆಂಟ್ ಏಕೆ..?
ಅನ್ಫಿಟ್ ಶ್ರೇಯಸ್ಗೆ ಚಾನ್ಸ್ ಸಿಗುತ್ತಾ..?
ಏಷ್ಯಾಕಪ್ನಲ್ಲಿ ಫೈನಲ್ ತಲುಪಿರೋ ಟೀಮ್ ಇಂಡಿಯಾ ಚರಿತ್ರೆ ಸೃಷ್ಟಿಸುವ ಹೊಸ್ತಿಲಲ್ಲಿದೆ. ಅತ್ತ ರೋಹಿತ್ ಪಡೆ ಪ್ರಶಸ್ತಿ ಗೆಲ್ಲಲು ತವಕಿಸ್ತಿದ್ರೆ ಇತ್ತ ಆಯ್ಕೆ ಸಮಿತಿ ಸದ್ದಿಲ್ಲದೇ ಆಸ್ಟ್ರೇಲಿಯಾ ಸರಣಿಗೆ ತಂಡ ಪ್ರಕಟಿಸಲು ಸಜ್ಜಾಗಿದೆ. ಇನ್ನೆರಡು ದಿನದಲ್ಲಿ ತಂಡ ಅನೌನ್ಸ್ ಅಗಲಿದೆ. ವಿಶ್ವಕಪ್ ಮುನ್ನ ಆಡುವ ಕೊನೆ ಸರಣಿ ಇದ್ದಾಗಿದ್ದು ತುಂಬಾ ಮಹತ್ವ ಪಡೆದುಕೊಂಡಿದೆ.
ನಾನ್ಸ್ಟಾಪ್ ಕ್ರಿಕೆಟ್.. ಬಿಡುವಿಲ್ಲದ ವೇಳಾಪಟ್ಟಿ. ಒಂದಾದ ಮೇಲೊಂದರಂತೆ ದ್ವಿಪಕ್ಷೀಯ ಸರಣಿ. ಈ ಕಾರಣಕ್ಕಾಗಿಯೇ ಟೀಮ್ ಇಂಡಿಯಾ ವಿಶ್ವದ ಮೋಸ್ಟ್ ಬ್ಯುಸಿ ತಂಡವೆನಿಸಿದೆ. ಏಷ್ಯಾಕಪ್ ದಂಗಲ್ ನಾಳೆ ಮುಗಿಯಲಿದೆ. ಆಗಲೇ ಟೀಮ್ ಇಂಡಿಯಾ ಮತ್ತೊಂದು ಅಸೈನ್ಮೆಂಟ್ಗೆ ರೆಡಿಯಾಗಿದೆ. ರೋಹಿತ್ ಪಡೆ ಫೈನಲ್ಗೆ ಎಂಟ್ರಿಕೊಟ್ಟಿರುವ ಬೆನ್ನಲ್ಲೇ ಬಿಸಿಸಿಐ ಆಯ್ಕೆ ಸಮಿತಿ ಮುಂಬರೋ ಆಸ್ಟ್ರೇಲಿಯಾ ಸರಣಿಗೆ ತಂಡ ಪ್ರಕಟಿಸಲು ಸಜ್ಜಾಗಿದೆ.
ಅತ್ತ ಏಷ್ಯಾಕಪ್ ಫೈನಲ್.. ಇತ್ತ ಟೀಮ್ ಅನೌನ್ಸ್..!
ಏಷ್ಯಾಕಪ್ ಬ್ಯಾಟಲ್ ನಾಳೆಗೆ ಕೊನೆಗೊಳ್ಳಲಿದೆ. ಮುಂದೆನಪ್ಪಾ ಅಂತ ನೀವು ಯೋಚಿಸಬೇಕಿಲ್ಲ. ಯಾಕಂದ್ರೆ ನಿಮ್ಮನ್ನ ರಂಜಿಸಲು ಮತ್ತೊಂದು ಮೆಗಾ ದ್ವಿಪಕ್ಷೀಯ ಸರಣಿ ಬರ್ತಿದೆ. ಅದುವೇ ಭಾರತ-ಆಸ್ಟ್ರೇಲಿಯಾ ಏಕದಿನ ಸರಣಿ. ಸೆಪ್ಟೆಂಬರ್ 22 ರಿಂದ ಕ್ರಿಕೆಟ್ನ ಮದಗಜಗಳಾದ ಇಂಡೋ-ಆಸಿಸ್ ನಡುವೆ ಫಿಫ್ಟಿ ಓವರ್ ಬ್ಯಾಟಲ್ ಆರಂಭಗೊಳ್ಳಲಿದ್ದು, ಇನ್ನೆರಡು ದಿನದಲ್ಲಿ ಟೀಮ್ ಇಂಡಿಯಾ ಅನೌನ್ಸ್ ಆಗಲಿದೆ.
ಒನ್ಡೇ ವಿಶ್ವಕಪ್ಗೆ ಈ ಸರಣಿ ರಹದಾರಿ..!
ಇಂಡೋ-ಆಸೀಸ್ ಕಾಳಗ ಒನ್ಡೇ ವಿಶ್ವಕಪ್ಗೆ ರಹದಾರಿ ಅಂದ್ರು ತಪ್ಪಲ್ಲ. ಯಾಕಂದ್ರೆ ಮಹಾಸಮರಕ್ಕೂ ಮುನ್ನ ಟೀಮ್ ಇಂಡಿಯಾ ಆಡುವ ಕೊನೆ ಸರಣಿ ಇದಾಗಿದೆ. ಸೆಪ್ಟೆಂಬರ್ 27ಕ್ಕೆ ಸರಣಿ ಮುಗಿಸಿಕೊಂಡು ನೇರವಾಗಿ ಒನ್ಡೇ ವಿಶ್ವಕಪ್ ಅಖಾಡಕ್ಕೆ ಧುಮುಕಲಿದೆ. ಹೀಗಾಗಿ ರೋಹಿತ್ ಪಡೆ ಏನೇ ಪ್ರಯೋಗ ಮಾಡೋದಿದ್ರೂ ಈ ಸರಣಿಯಲ್ಲೇ ಮಾಡಬೇಕಿದೆ.
ಯಾಕಂದ್ರೆ ವಿಶ್ವಕಪ್ನಂತ ಬಿಗ್ ಸ್ಟೇಜ್ನಲ್ಲಿ ಪ್ರಯೋಗಕ್ಕೆ ಕೈ ಹಾಕಿದ್ರೆ ಅದರಿಂದ ತಂಡಕ್ಕೆ ಆಪತ್ತೆ ಹೆಚ್ಚು. ಸಾಕಷ್ಟು ಅಳೆದು ತೂಗಿ ಪರ್ಫೆಕ್ಟ್ ತಂಡವನ್ನು ಕಣಕ್ಕಿಳಿಸಬೇಕಿದೆ. ಆಡುವ ಹನ್ನೊಂದರ ಬಳಗದಲ್ಲಿ ಸ್ವಲ್ಪ ಯಾಮಾರಿದ್ರೂ ಟ್ರೋಫಿ ಆಸೆ ಕೈಚೆಲ್ಲಬೇಕಾಗುತ್ತೆ. ಅದಕ್ಕೆ ಆಸ್ಪದ ನೀಡಬಾರದು ಅಂದರೆ ಕೊನೆ ಚಾನ್ಸ್ ಅನ್ನಪ್ರಯೋಗದ ಸರಣಿಯನ್ನಾಗಿ ಬಳಸಿಕೊಳ್ಳಬೇಕಿದೆ.
ಸ್ಟ್ರೆಂಥ್ ಅಂಡ್ ವೀಕ್ನೆಸ್ ಅರಿಯಲು ಇದು ಕೊನೆ ಚಾನ್ಸ್
ವಿಶ್ವಕಪ್ನಂಥ ಪ್ರತಿಷ್ಠೆ ಟೂರ್ನಿ ಗೆಲ್ಲಬೇಕಾದ್ರೆ ಕ್ಯಾಪ್ಟನ್ ಆದವರಿಗೆ ತಂಡದ ಸ್ಟ್ರೆಂಥ್ ಮತ್ತು ವೀಕ್ನೆಸ್ ಚೆನ್ನಾಗಿ ಗೊತ್ತಿರಬೇಕು. ಆಗಲಷ್ಟೇ ನಿರೀಕ್ಷಿತ ಪ್ರದರ್ಶನ ಮೂಡಿಬರಲು ಸಾಧ್ಯ. ಭಾರತ ತಂಡ ಮೇಲ್ನೊಟಕ್ಕೆ ಸ್ಟ್ರಾಂಗ್ ಆಗಿ ಕಾಣಿಸಬಹುದು. ಹಾಗಂತ ತಂಡ ಪರ್ಫೆಕ್ಟ್ ಆಗಿದೆ ಎಂದಲ್ಲ. ಹಲವು ನ್ಯೂನತೆಗಳಿವೆ. 4 ಮತ್ತು 5ನೇ ಸ್ಲಾಟ್ ಆಯ್ಕೆಗೆ ಇಲ್ಲಿಯತನಕ ಕ್ಲಾರಿಟಿ ಸಿಕ್ಕಿಲ್ಲ. ಕೆಳ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯ ಹಾಗೂ ತಂಡದ ಫೀಲ್ಡಿಂಗ್ ಬಗ್ಗೆ ಪ್ರಶ್ನೆ ಎದ್ದಿದೆ. ಜತೆಗೆ ಬೌಲಿಂಗ್ ಕಾಂಬಿನೇಷನ್ ಬಗ್ಗೆಯೂ ಗೊಂದಲ ಇದೆ. ಈ ಎಲ್ಲದಕ್ಕೂ ಆಸಿಸ್ ಸಿರಿಸ್ನಲ್ಲೇ ಆನ್ಸರ್ ಕಂಡುಕೊಳ್ಳಬೇಕಿದೆ.
ಸ್ಟಾರ್ಸ್ ಪ್ಲೇಯರ್ಸ್ ಆಡ್ತಾರಾ? ರೆಸ್ಟ್ ನೀಡ್ತಾರಾ?
ಆಸೀಸ್ ಏಕದಿನ ಸರಣಿಯಲ್ಲಿ ಮೇನ್ ಪ್ಲೇಯರ್ಸ್ ಆಡ್ತಾರಾ? ಅಥವಾ ಇಲ್ವಾ ಅನ್ನೋ ಪ್ರಶ್ನೆ ಕಾಡ್ತಿದೆ. ಟೀಮ್ ಇಂಡಿಯಾದ ಬಿಡುವಿಲ್ಲದೇ ಕ್ರಿಕೆಟ್ ಆಡ್ತಿದೆ. ಇದರಿಂದ ಆಟಗಾರರು ಸಾಕಷ್ಟು ಬಳಲಿದ್ದಾರೆ. ಹಾಗಾಗಿ ಬಾಂಗ್ಲಾ ಎದುರಿನ ಏಷ್ಯಾಕಪ್ ಸೂಪರ್-4 ಪಂದ್ಯದಿಂದ ಐವರಿಗೆ ರೆಸ್ಟ್ ನೀಡಲಾಗಿತ್ತು. ಇದೇ ಸ್ಟ್ರಾಟಜಿಯನ್ನು ಆಸೀಸ್ ಸರಣಿಯಲ್ಲಿ ಫಾಲೋ ಮಾಡಿದ್ರೂ ಆಶ್ಚರ್ಯವಿಲ್ಲ. ಯಾಕಂದ್ರೆ ವಿಶ್ವಕಪ್ ಒಂದು ತಿಂಗಳಿಗೂ ಅಧಿಕ ಕಾಲ ನಡೆಯಲಿದೆ. ಈ ಅವಧಿಯಲ್ಲಿ ಇಂಜುರಿಯಾಗುವ ಸಾಧ್ಯತೆ ಇರುತ್ತೆ. ಇದನ್ನ ಗಮನದಲ್ಲಿರಿಸಿ ತಂಡದಲ್ಲಿನ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿದ್ರೂ ನೀಡಬಹುದು.
ಅನ್ಫಿಟ್ ಶ್ರೇಯಸ್ಗೆ ಚಾನ್ಸ್ ಸಿಗುತ್ತಾ?
ಬೆನ್ನನೋವಿನಿಂದ ಬಳಲುತ್ತಿರುವ ಶ್ರೇಯಸ್ ಅಯ್ಯರ್ ಆಸೀಸ್ ಸರಣಿಗೆ ಸೆಲೆಕ್ಟ್ ಆಗ್ತಾರಾ ? ಇಲ್ವ ಅನ್ನೋದು ಯಕ್ಷಪ್ರಶ್ನೆಯಾಗಿದೆ. ಏಷ್ಯಾಕಪ್ ಸೂಪರ್-4 ಪಂದ್ಯದಿಂದ ಶ್ರೇಯಸ್ ಹೊರಗುಳಿದಿದ್ದಾರೆ. ಫೈನಲ್ ಪಂದ್ಯ ಆಡುವುದು ಅನುಮಾನ ಎಂದು ಹೇಳಲಾಗ್ತಿದೆ. ಇಂತಹ ಅನ್ಫಿಟ್ ಆಟಗಾರನಿ ಆಸೀಸ್ ಸರಣಿಯಲ್ಲಿ ಆಡಲು ಚಾನ್ಸ್ ಸಿಗುತ್ತಾ ಅನ್ನೋದು ಕುತೂಹಲ ಮೂಡಿಸಿದೆ.
ಸಂಜು ಸ್ಯಾಮ್ಸನ್ ಹಾಗೂ ತಿಲಕ್ ವರ್ಮಾಗೆ ಕೊಕ್ ನೀಡುವುದು ಪಕ್ಕಾ ಆಗಿದೆ. ಯಾಕಂದ್ರೆ ಇಬ್ಬರು ಹೊಡಿಬಡಿ ಆಟಗಾರರನ್ನು ವಿಶ್ವಕಪ್ಗೆ ಪರಿಗಣಿಸಿಲ್ಲ. ಬಹುತೇಕ ಅದೇ ತಂಡವನ್ನೇ ಆಸೀಸ್ ವಿರುದ್ಧ ಕಣಕ್ಕಿಳಿಯಲಿದೆ. ಹಾಗೊಂದು ವೇಳೆ ಶ್ರೇಯಸ್ ಫಿಟ್ ಆಗದಿದ್ದಲ್ಲಿ ತಿಲಕ್ ವರ್ಮಾಗೆ ಅದೃಷ್ಟ ಖುಲಾಯಿಸಬಹುದು. ಬಿಟ್ಟರೆ ಆಸ್ಟ್ರೇಲಿಯಾ ಸರಣಿಗೆ ಪ್ರಕಟಗೊಳ್ಳುವ ತಂಡದಲ್ಲಿ ಹೆಚ್ಚೇನೂ ಸರ್ಪ್ರೈಸ್ ನಿರೀಕ್ಷಿಸಲು ಸಾಧ್ಯವಿಲ್ಲ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್