ಬರೋಬ್ಬರಿ 11 ತಿಂಗಳ ಬಳಿಕ ಬೂಮ್ರಾ ಕಂಬ್ಯಾಕ್
ಐರ್ಲೆಂಡ್ ವಿರುದ್ಧದ ಪಂದ್ಯಕ್ಕೆ ಕ್ಯಾಪ್ಟನ್ ಆಗಿ ವಾಪಸ್
ಮೊದಲ ಪಂದ್ಯ DLS ನಿಯಮದ ಪ್ರಕಾರ ಭಾರತಕ್ಕೆ ಗೆಲುವು
ಟೀಂ ಇಂಡಿಯಾ ಸ್ಟಾರ್ ವೇಗಿ ಜಸ್ಪ್ರಿತ್ ಬೂಮ್ರಾ ತಂಡಕ್ಕೆ ಸ್ಟ್ರಾಂಗ್ ಕಂಬ್ಯಾಕ್ ಮಾಡಿದ್ದಾರೆ. ಐರ್ಲೆಂಡ್ ವಿರುದ್ಧದ ಟಿ-20 ಪ್ರವಾಸದಲ್ಲಿ ಕ್ಯಾಪ್ಟನ್ ಆಗಿ, ಮೊದಲ ಪಂದ್ಯವನ್ನು ಎದುರಿಸಿ ಶೈನ್ ಆಗಿದ್ದಾರೆ.
ಬರೋಬ್ಬರಿ 11 ತಿಂಗಳ ಬಳಿಕ ತಂಡಕ್ಕೆ ಕಂಬ್ಯಾಕ್ ಮಾಡಿರುವ ಬೂಮ್ರಾ, ನಿನ್ನೆ ದೊಡ್ಡ ಮೊಟ್ಟದಲ್ಲಿ ಮತ್ತೊಮ್ಮೆ ಗಾಯಕ್ಕೆ ತುತ್ತಾಗಬೇಕಿತ್ತು. ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಭೂಮ್ರಾ ಅಪಾಯದಿಂದ ಪಾರಾಗಿದ್ದು, ಅಭಿಮಾನಿಗಳು ‘ಥ್ಯಾಂಕ್ ಗಾಡ್’ ಎಂದು ಉದ್ಘಾರ ತೆಗೆಯುತ್ತಿದ್ದಾರೆ.
ಹೌದು, ಐರ್ಲೆಂಡ್ ವಿರುದ್ಧದ 14ನೇ ಓವರ್ನಲ್ಲಿ ಬಾಲ್ ಬೌಂಡರಿ ಲೈನ್ಗೆ ಬರುತ್ತಿತ್ತು. ಅದನ್ನು ತಡೆಯಲು ಬೂಮ್ರಾ, ವಾಷಿಂಗ್ಟನ್ ಸುಂದರ್ ಮತ್ತು ರವಿ ಬಿಷ್ಣೋಯಿ ಚೇಸಿಂಗ್ ಮಾಡುತ್ತಿದ್ದರು. ಬಾಲ್ ಬೌಂಡರಿ ಲೈನ್ ಬಳಿ ಬರುತ್ತಿದ್ದಂತೆಯೇ, ಸುಂದರ್ ಬಾಲ್ ಹಿಡಿಯಲು ಡಿಫ್ರೆಂಟ್ ಡೈರೆಕ್ಷನ್ನಿಂದ ಬಂದು ಡೈ ಹೊಡೆದರು. ಆದರೆ ಬಾಲ್ನ ಬೆನ್ನು ಹಿಂದೆ ಬಿದ್ದಿದ್ದ ಬೂಮ್ರಾ, ಸುಂದರ್ಗೆ ಡಿಕ್ಕಿ ಹೊಡೆಯುವ ಪರಿಸ್ಥಿತಿ ಎದುರಾಗಿತ್ತು. ಅನಾಹುತ ಆಗುವುದನ್ನು ಎಚ್ಚೆತ್ತುಕೊಂಡ ಬೂಮ್ರಾ, ಜಂಪ್ ಮಾಡಿ ಬೌಂಡರಿಲೈನ್ ಆಚೆ ಜಿಗಿಯುತ್ತಾರೆ. ಈ ಮೂಲಕ ದೊಡ್ಡ ಗಾಯದ ಸಮಸ್ಯೆಯಿಂದ ಬೂಮ್ರಾ ಪಾರಾಗಿದ್ದಾರೆ.
ಟೀಂ ಇಂಡಿಯಾ ಆಟಗಾರರಿಗೆ ಗಾಯದ ಸಮಸ್ಯೆ ತುಂಬಾ ಗಂಭೀರವಾಗಿ ಕಾಡುತ್ತಿದೆ. ಸದ್ಯ ಭಾರತ ತಂಡವು ಏಷ್ಯಾ ಕಪ್, ವಿಶ್ವಕಪ್ ಪಂದ್ಯಗಳನ್ನು ಎದುರು ನೋಡುತ್ತಿದೆ. ಈ ಹಿನ್ನೆಲೆಯಲ್ಲಿ ಓರ್ವ ಆಟಗಾರ ಕೂಡ ಗಾಯಗೊಂಡರೂ ಕೂಡ ತಂಡಕ್ಕೆ ದೊಡ್ಡ ಹೊಡೆತ ಬೀಳಲಿದೆ. ಇನ್ನು ನಿನ್ನೆಯ ಪಂದ್ಯವನ್ನು ಭಾರತ ಗೆದ್ದುಕೊಂಡಿದೆ.
— No-No-Crix (@Hanji_CricDekho) August 18, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಬರೋಬ್ಬರಿ 11 ತಿಂಗಳ ಬಳಿಕ ಬೂಮ್ರಾ ಕಂಬ್ಯಾಕ್
ಐರ್ಲೆಂಡ್ ವಿರುದ್ಧದ ಪಂದ್ಯಕ್ಕೆ ಕ್ಯಾಪ್ಟನ್ ಆಗಿ ವಾಪಸ್
ಮೊದಲ ಪಂದ್ಯ DLS ನಿಯಮದ ಪ್ರಕಾರ ಭಾರತಕ್ಕೆ ಗೆಲುವು
ಟೀಂ ಇಂಡಿಯಾ ಸ್ಟಾರ್ ವೇಗಿ ಜಸ್ಪ್ರಿತ್ ಬೂಮ್ರಾ ತಂಡಕ್ಕೆ ಸ್ಟ್ರಾಂಗ್ ಕಂಬ್ಯಾಕ್ ಮಾಡಿದ್ದಾರೆ. ಐರ್ಲೆಂಡ್ ವಿರುದ್ಧದ ಟಿ-20 ಪ್ರವಾಸದಲ್ಲಿ ಕ್ಯಾಪ್ಟನ್ ಆಗಿ, ಮೊದಲ ಪಂದ್ಯವನ್ನು ಎದುರಿಸಿ ಶೈನ್ ಆಗಿದ್ದಾರೆ.
ಬರೋಬ್ಬರಿ 11 ತಿಂಗಳ ಬಳಿಕ ತಂಡಕ್ಕೆ ಕಂಬ್ಯಾಕ್ ಮಾಡಿರುವ ಬೂಮ್ರಾ, ನಿನ್ನೆ ದೊಡ್ಡ ಮೊಟ್ಟದಲ್ಲಿ ಮತ್ತೊಮ್ಮೆ ಗಾಯಕ್ಕೆ ತುತ್ತಾಗಬೇಕಿತ್ತು. ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಭೂಮ್ರಾ ಅಪಾಯದಿಂದ ಪಾರಾಗಿದ್ದು, ಅಭಿಮಾನಿಗಳು ‘ಥ್ಯಾಂಕ್ ಗಾಡ್’ ಎಂದು ಉದ್ಘಾರ ತೆಗೆಯುತ್ತಿದ್ದಾರೆ.
ಹೌದು, ಐರ್ಲೆಂಡ್ ವಿರುದ್ಧದ 14ನೇ ಓವರ್ನಲ್ಲಿ ಬಾಲ್ ಬೌಂಡರಿ ಲೈನ್ಗೆ ಬರುತ್ತಿತ್ತು. ಅದನ್ನು ತಡೆಯಲು ಬೂಮ್ರಾ, ವಾಷಿಂಗ್ಟನ್ ಸುಂದರ್ ಮತ್ತು ರವಿ ಬಿಷ್ಣೋಯಿ ಚೇಸಿಂಗ್ ಮಾಡುತ್ತಿದ್ದರು. ಬಾಲ್ ಬೌಂಡರಿ ಲೈನ್ ಬಳಿ ಬರುತ್ತಿದ್ದಂತೆಯೇ, ಸುಂದರ್ ಬಾಲ್ ಹಿಡಿಯಲು ಡಿಫ್ರೆಂಟ್ ಡೈರೆಕ್ಷನ್ನಿಂದ ಬಂದು ಡೈ ಹೊಡೆದರು. ಆದರೆ ಬಾಲ್ನ ಬೆನ್ನು ಹಿಂದೆ ಬಿದ್ದಿದ್ದ ಬೂಮ್ರಾ, ಸುಂದರ್ಗೆ ಡಿಕ್ಕಿ ಹೊಡೆಯುವ ಪರಿಸ್ಥಿತಿ ಎದುರಾಗಿತ್ತು. ಅನಾಹುತ ಆಗುವುದನ್ನು ಎಚ್ಚೆತ್ತುಕೊಂಡ ಬೂಮ್ರಾ, ಜಂಪ್ ಮಾಡಿ ಬೌಂಡರಿಲೈನ್ ಆಚೆ ಜಿಗಿಯುತ್ತಾರೆ. ಈ ಮೂಲಕ ದೊಡ್ಡ ಗಾಯದ ಸಮಸ್ಯೆಯಿಂದ ಬೂಮ್ರಾ ಪಾರಾಗಿದ್ದಾರೆ.
ಟೀಂ ಇಂಡಿಯಾ ಆಟಗಾರರಿಗೆ ಗಾಯದ ಸಮಸ್ಯೆ ತುಂಬಾ ಗಂಭೀರವಾಗಿ ಕಾಡುತ್ತಿದೆ. ಸದ್ಯ ಭಾರತ ತಂಡವು ಏಷ್ಯಾ ಕಪ್, ವಿಶ್ವಕಪ್ ಪಂದ್ಯಗಳನ್ನು ಎದುರು ನೋಡುತ್ತಿದೆ. ಈ ಹಿನ್ನೆಲೆಯಲ್ಲಿ ಓರ್ವ ಆಟಗಾರ ಕೂಡ ಗಾಯಗೊಂಡರೂ ಕೂಡ ತಂಡಕ್ಕೆ ದೊಡ್ಡ ಹೊಡೆತ ಬೀಳಲಿದೆ. ಇನ್ನು ನಿನ್ನೆಯ ಪಂದ್ಯವನ್ನು ಭಾರತ ಗೆದ್ದುಕೊಂಡಿದೆ.
— No-No-Crix (@Hanji_CricDekho) August 18, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ