ಭವಿಷ್ಯದ ದೃಷ್ಟಿಯಿಂದ ಈ ಯಂಗ್ ಪ್ಲೇಯರ್ಗೆ ಪಟ್ಟ ಕಟ್ಟುವುದು ಪಕ್ಕನಾ?
ಧೋನಿ ನಾಯಕತ್ವಗಿಂತ ಮೊದಲಿದ್ದ ಪರಿಸ್ಥಿತಿ ಈಗ ಟೀಮ್ ಇಂಡಿಯಾಲ್ಲಿದೆ
ಪಾಂಡ್ಯ ಟಿ20 ಕ್ಯಾಪ್ಟನ್ ಆದ್ರೆ, ಟೆಸ್ಟ್, ಒನ್ಡೇಗೆ ಕ್ಯಾಪ್ಟನ್ ಈ ಆಟಗಾರನಾ?
ಸದ್ಯಕ್ಕೆ ಟೀಮ್ ಇಂಡಿಯಾದ ನಾಯಕತ್ವ ಬದಲಾವಣೆಯಾಗೋದು ಅನುಮಾನ. ಆದ್ರೆ, 3 ತಿಂಗಳ ಬಳಿಕ ನಡೆಯೋ ಏಕದಿನ ವಿಶ್ವಕಪ್ ಬಳಿಕ ಟೀಮ್ ಇಂಡಿಯಾದ ನಾಯಕತ್ವದಲ್ಲಿ ಬದಲಾವಣೆ ಕನ್ಫರ್ಮ್. ಪಟ್ಟದಿಂದ ರೋಹಿತ್ ಶರ್ಮಾರನ್ನ ಕೆಳಗಿಳಿಸೋಕೆ ಸದ್ದಿಲ್ಲದೇ ಸಿದ್ಧತೆ ಆರಂಭವಾಗಿದೆ. ನ್ಯೂ ಪ್ರಿನ್ಸ್ಗೆ ಪಟ್ಟ ಕಟ್ಟೋಕೆ ಬಿಸಿಸಿಐ ವಲಯದಲ್ಲಿ ಪ್ಲಾನ್ ರೆಡಿಯಾಗಿದೆ.
ಭಾರತೀಯ ಕ್ರಿಕೆಟ್ನಲ್ಲೀಗ ಬದಲಾವಣೆಯದ್ದೆ ಸುದ್ದಿ. ಸೀನಿಯರ್ ಆಟಗಾರರಿಗೆ ಕೊಕ್ ಕೊಡಬೇಕು. ಯುವ ಆಟಗಾರರಿಗೆ ಅವಕಾಶ ನೀಡಬೇಕು ಅನ್ನೋ ಚರ್ಚೆ ನಡೆಯುತ್ತಿದೆ. ನಾಯಕತ್ವ ಬದಲಾವಣೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡ್ತಿದೆ. ಆದ್ರೆ, ಬಿಸಿಸಿಐ ಬಾಸ್ಗಳು ಮಾತ್ರ, ಈ ವಿಚಾರದಲ್ಲಿ ಸೈಲೆಂಟ್ ಆಗಿದ್ದಾರೆ. ಹಾಗಂತ ಸುಮ್ಮನೆ ಕುಳಿತ್ತಿಲ್ಲ. ಭವಿಷ್ಯಕ್ಕಾಗಿ ಪ್ಲಾನ್ ರೂಪಿಸಿದ್ದಾರೆ.
ಸೈಲೆಂಟಾಗಿರೋ ಬಿಗ್ಬಾಸ್ಗಳ ಮಾಸ್ಟರ್ ಪ್ಲಾನ್.!
ವಿಶ್ವಕಪ್ಗೆ ಇನ್ನು ಕೆಲವೇ ತಿಂಗಳು ಬಾಕಿ ಇದೆ. ಹಾಗಾಗಿ ಸದ್ಯಕ್ಕಂತೂ ಟೀಮ್ ಇಂಡಿಯಾ ನಾಯಕತ್ವ ಬದಲಾವಣೆಗೆ ಬಿಸಿಸಿಐ ಬಾಸ್ಗಳು ಕೈ ಹಾಕಲ್ಲ. ಆದ್ರೆ, ವಿಶ್ವಕಪ್ ಮುಗಿದ ಬೆನ್ನಲ್ಲೇ ಟೀಮ್ ಇಂಡಿಯಾದಲ್ಲಿ ನಾಯಕತ್ವ ಬದಲಾವಣೆ ಖಚಿತ. ಭವಿಷ್ಯದ ದೃಷ್ಟಿಯಿಂದ ಅದು ಅನಿವಾರ್ಯವೂ ಆಗಿದೆ. ಹೀಗಾಗಿ ಹಳೆ ಸೂತ್ರವೊಂದರ ಮೊರೆ ಹೋಗಿದ್ದಾರೆ. ಇದ್ರಿಂದ ಸಕ್ಸಸ್ ಸಿಕ್ಕೇ ಸಿಗುತ್ತೆ ಅನ್ನೋದು ಬಾಸ್ಗಳ ಲೆಕ್ಕಾಚಾರ.
ಹಳೆ ಫಾರ್ಮುಲಾ ಮೊರೆ ಹೋದ ಬಾಸ್ಗಳು.!
ಕಳೆದ 10 ವರ್ಷದಿಂದ ಐಸಿಸಿ ಟ್ರೋಫಿಯ ಬರ ಟೀಮ್ ಇಂಡಿಯಾವನ್ನ ಕಾಡ್ತಿದೆ. ಧೋನಿ ಬಳಿಕ ಭಾರತಕ್ಕೆ ಟ್ರೋಫಿ ಗೆದ್ದು ಕೊಡುವರು ಇಲ್ಲದಂತಾಗಿದೆ. ಅಸಲಿಗೆ ಧೋನಿ ನಾಯಕನ ಪಟ್ಟ ಅಲಂಕರಿಸೋಕು ಮುನ್ನ ಈಗ ಹೇಗಿದಿಯೋ ಅಂತದ್ದೇ ಪರಿಸ್ಥಿತಿಯಿತ್ತು. 2007ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಹೀನಾಯ ಸೋಲುಂಡು ತವರಿಗೆ ವಾಪಾಸ್ಸಾಗಿತ್ತು. ಆ ಮುಖಭಂಗ ಇಡೀ ಭಾರತದಲ್ಲಿ ಆಕ್ರೋಶದ ಕಿಚ್ಚನ್ನ ಹಚ್ಚಿತ್ತು. ಇಂತಹ ಸಂದಿಗ್ಧ ಪರಿಸ್ಥಿಯಲ್ಲಿ ಬಿಸಿಸಿಐ ಒಂದು ಖಡಕ್ ನಿರ್ಧಾರ ಕೈಗೊಳ್ತು. ಸೀನಿಯರ್ಗಳನ್ನ ಸೈಡ್ಲೈನ್ ಮಾಡಿ ಯಂಗ್ಗನ್ ಧೋನಿಗೆ ನಾಯಕನ ಪಟ್ಟ ಕಟ್ಟಿತ್ತು.
ಅಂದು ಘಟಾನುಘಟಿಗಳೇ ತಂಡದಲ್ಲಿದ್ರು. ಸಚಿನ್ ತೆಂಡುಲ್ಕರ್, ವೀರೆಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಅನಿಲ್ ಕುಂಬ್ಳೆ, ಹರ್ಭಜನ್ ಸಿಂಗ್ ಹೀಗೆ ಅದಾಗಲೇ ಕ್ರಿಕೆಟ್ ಲೋಕದಲ್ಲಿ ಸೂಪರ್ ಸ್ಟಾರ್ಗಳಾಗಿದ್ದ ಅನುಭವಿ ಆಟಗಾರರು ತಂಡದಲ್ಲಿದ್ರು. ಆದ್ರೆ, ಇದು ಯಾವುದನ್ನು ಗಣನೆಗೆ ತೆಗೆದುಕೊಳ್ಳದೇ ಧೋನಿಗೆ ಪಟ್ಟ ಕಟ್ಟಲಾಯಿತು. ಜವಾಬ್ದಾರಿ ಹೊತ್ತ ಧೋನಿ, ಟೀಮ್ ಇಂಡಿಯಾವನ್ನ ಯಶಸ್ಸಿನ ಉತ್ತುಂಗಕ್ಕೆ ಕೊಂಡೊಯ್ದರು.
ಅಂದು ಧೋನಿ, ಇಂದು ಶುಭಮನ್ ಸಾರಥಿ.?
ಧೋನಿ ಜವಾಬ್ದಾರಿ ಹೊತ್ತಾಗ ಏನಿತ್ತೋ ಅಂತದ್ದೇ ಸಂದರ್ಭ ಈಗ ಎದುರಾಗಿದೆ. ಸೀನಿಯರ್ಸ್ಗಳನ್ನ ಸೈಡ್ಲೈನ್ ಮಾಡಿ ಯಂಗ್ ಟೀಮ್ ಕಟ್ಟೋ ಸವಾಲು ಬಿಸಿಸಿಐ ಮುಂದಿದೆ. ಹೀಗಾಗಿ ಮತ್ತೊಂದು ಬೋಲ್ಡ್ ಡಿಸಿಷನ್ ತೆಗೆದುಕೊಳ್ಳುವ ಲೆಕ್ಕಾಚಾರದಲ್ಲಿ ಬಿಸಿಸಿಐಯಿದೆ. ಅಂದು ಧೋನಿಗೆ ನೀಡಿದಂತೆ, ಈಗ ಯುವ ಕ್ರಿಕೆಟಿಗ ಶುಭಮನ್ ಗಿಲ್ಗೆ ತಂಡದ ಸಾರಥ್ಯ ನೀಡಲು ಪ್ಲಾನ್ ಸಿದ್ಧಗೊಂಡಿದೆ.
ಟೀಮ್ನ ಭವಿಷ್ಯದ ದೃಷ್ಟಿಯಿಂದ ಶುಭಮನ್ ಗಿಲ್ಗೆ ಪಟ್ಟ ಕಟ್ಟೋದು ಬೆಸ್ಟ್. ಯುವ ಕ್ರಿಕೆಟಿಗ ಈಗಾಗಲೇ 3 ಮಾದರಿಯಲ್ಲಿ ತನ್ನ ಖದರ್ ತೋರಿಸಿದ್ದಾನೆ. ಕನ್ಸಿಸ್ಟೆಂಟ್ ಬ್ಯಾಟಿಂಗ್ ನೋಡಿ ಶುಭ್ಮನ್, ಲೆಜೆಂಡ್ ವಿರಾಟ್ ಕೊಹ್ಲಿಯ ಉತ್ತರಾಧಿಕಾರಿ ಎಂದು ಫ್ಯಾನ್ಸ್ ಫಿಕ್ಸ್ ಆಗಿದ್ದಾರೆ. ತನ್ನ ಕ್ಲಾಸಿಕ್ ಆಟದಿಂದ ಕಮಾಲ್ ಮಾಡಿರೋ ಗಿಲ್ ನಾಯಕತ್ವಕ್ಕೆ ಉತ್ತಮ ಆಯ್ಕೆ ಅನ್ನೋದ್ರಲ್ಲಿ ಎರಡು ಮಾತಿಲ್ಲ.
ಟೆಸ್ಟ್- ಏಕದಿನಕ್ಕೆ ಗಿಲ್, ಟಿ20ಗೆ ಹಾರ್ದಿಕ್.?
ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಈಗಾಗಲೇ ಟಿ20 ತಂಡದ ಕ್ಯಾಪ್ಟನ್ ಎಂದು ಬಿಂಬಿತವಾಗಿದ್ದಾರೆ. ತಂಡವನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸ್ತಿದ್ದಾರೆ. ಹೀಗಾಗಿ ಹಾರ್ದಿಕ್ರನ್ನ ಡಿಸ್ಟರ್ಬ್ ಮಾಡೋದು ಅನುಮಾನ. ಹೀಗಾಗಿ ವಿಶ್ವಕಪ್ ಬಳಿಕ ಟೆಸ್ಟ್, ಏಕದಿನ ತಂಡದಿಂದ ರೋಹಿತ್ರನ್ನ ಕೆಳಗಿಳಿಸಿ ಶುಭಮನ್ಗೆ ಪಟ್ಟಾಭಿಷೇಕ ಮಾಡುವ ಪ್ಲಾನ್ ಬಿಸಿಸಿಐದ್ದಾಗಿದೆ. ಆದ್ರೆ, ಇದು ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಭವಿಷ್ಯದ ದೃಷ್ಟಿಯಿಂದ ಈ ಯಂಗ್ ಪ್ಲೇಯರ್ಗೆ ಪಟ್ಟ ಕಟ್ಟುವುದು ಪಕ್ಕನಾ?
ಧೋನಿ ನಾಯಕತ್ವಗಿಂತ ಮೊದಲಿದ್ದ ಪರಿಸ್ಥಿತಿ ಈಗ ಟೀಮ್ ಇಂಡಿಯಾಲ್ಲಿದೆ
ಪಾಂಡ್ಯ ಟಿ20 ಕ್ಯಾಪ್ಟನ್ ಆದ್ರೆ, ಟೆಸ್ಟ್, ಒನ್ಡೇಗೆ ಕ್ಯಾಪ್ಟನ್ ಈ ಆಟಗಾರನಾ?
ಸದ್ಯಕ್ಕೆ ಟೀಮ್ ಇಂಡಿಯಾದ ನಾಯಕತ್ವ ಬದಲಾವಣೆಯಾಗೋದು ಅನುಮಾನ. ಆದ್ರೆ, 3 ತಿಂಗಳ ಬಳಿಕ ನಡೆಯೋ ಏಕದಿನ ವಿಶ್ವಕಪ್ ಬಳಿಕ ಟೀಮ್ ಇಂಡಿಯಾದ ನಾಯಕತ್ವದಲ್ಲಿ ಬದಲಾವಣೆ ಕನ್ಫರ್ಮ್. ಪಟ್ಟದಿಂದ ರೋಹಿತ್ ಶರ್ಮಾರನ್ನ ಕೆಳಗಿಳಿಸೋಕೆ ಸದ್ದಿಲ್ಲದೇ ಸಿದ್ಧತೆ ಆರಂಭವಾಗಿದೆ. ನ್ಯೂ ಪ್ರಿನ್ಸ್ಗೆ ಪಟ್ಟ ಕಟ್ಟೋಕೆ ಬಿಸಿಸಿಐ ವಲಯದಲ್ಲಿ ಪ್ಲಾನ್ ರೆಡಿಯಾಗಿದೆ.
ಭಾರತೀಯ ಕ್ರಿಕೆಟ್ನಲ್ಲೀಗ ಬದಲಾವಣೆಯದ್ದೆ ಸುದ್ದಿ. ಸೀನಿಯರ್ ಆಟಗಾರರಿಗೆ ಕೊಕ್ ಕೊಡಬೇಕು. ಯುವ ಆಟಗಾರರಿಗೆ ಅವಕಾಶ ನೀಡಬೇಕು ಅನ್ನೋ ಚರ್ಚೆ ನಡೆಯುತ್ತಿದೆ. ನಾಯಕತ್ವ ಬದಲಾವಣೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡ್ತಿದೆ. ಆದ್ರೆ, ಬಿಸಿಸಿಐ ಬಾಸ್ಗಳು ಮಾತ್ರ, ಈ ವಿಚಾರದಲ್ಲಿ ಸೈಲೆಂಟ್ ಆಗಿದ್ದಾರೆ. ಹಾಗಂತ ಸುಮ್ಮನೆ ಕುಳಿತ್ತಿಲ್ಲ. ಭವಿಷ್ಯಕ್ಕಾಗಿ ಪ್ಲಾನ್ ರೂಪಿಸಿದ್ದಾರೆ.
ಸೈಲೆಂಟಾಗಿರೋ ಬಿಗ್ಬಾಸ್ಗಳ ಮಾಸ್ಟರ್ ಪ್ಲಾನ್.!
ವಿಶ್ವಕಪ್ಗೆ ಇನ್ನು ಕೆಲವೇ ತಿಂಗಳು ಬಾಕಿ ಇದೆ. ಹಾಗಾಗಿ ಸದ್ಯಕ್ಕಂತೂ ಟೀಮ್ ಇಂಡಿಯಾ ನಾಯಕತ್ವ ಬದಲಾವಣೆಗೆ ಬಿಸಿಸಿಐ ಬಾಸ್ಗಳು ಕೈ ಹಾಕಲ್ಲ. ಆದ್ರೆ, ವಿಶ್ವಕಪ್ ಮುಗಿದ ಬೆನ್ನಲ್ಲೇ ಟೀಮ್ ಇಂಡಿಯಾದಲ್ಲಿ ನಾಯಕತ್ವ ಬದಲಾವಣೆ ಖಚಿತ. ಭವಿಷ್ಯದ ದೃಷ್ಟಿಯಿಂದ ಅದು ಅನಿವಾರ್ಯವೂ ಆಗಿದೆ. ಹೀಗಾಗಿ ಹಳೆ ಸೂತ್ರವೊಂದರ ಮೊರೆ ಹೋಗಿದ್ದಾರೆ. ಇದ್ರಿಂದ ಸಕ್ಸಸ್ ಸಿಕ್ಕೇ ಸಿಗುತ್ತೆ ಅನ್ನೋದು ಬಾಸ್ಗಳ ಲೆಕ್ಕಾಚಾರ.
ಹಳೆ ಫಾರ್ಮುಲಾ ಮೊರೆ ಹೋದ ಬಾಸ್ಗಳು.!
ಕಳೆದ 10 ವರ್ಷದಿಂದ ಐಸಿಸಿ ಟ್ರೋಫಿಯ ಬರ ಟೀಮ್ ಇಂಡಿಯಾವನ್ನ ಕಾಡ್ತಿದೆ. ಧೋನಿ ಬಳಿಕ ಭಾರತಕ್ಕೆ ಟ್ರೋಫಿ ಗೆದ್ದು ಕೊಡುವರು ಇಲ್ಲದಂತಾಗಿದೆ. ಅಸಲಿಗೆ ಧೋನಿ ನಾಯಕನ ಪಟ್ಟ ಅಲಂಕರಿಸೋಕು ಮುನ್ನ ಈಗ ಹೇಗಿದಿಯೋ ಅಂತದ್ದೇ ಪರಿಸ್ಥಿತಿಯಿತ್ತು. 2007ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಹೀನಾಯ ಸೋಲುಂಡು ತವರಿಗೆ ವಾಪಾಸ್ಸಾಗಿತ್ತು. ಆ ಮುಖಭಂಗ ಇಡೀ ಭಾರತದಲ್ಲಿ ಆಕ್ರೋಶದ ಕಿಚ್ಚನ್ನ ಹಚ್ಚಿತ್ತು. ಇಂತಹ ಸಂದಿಗ್ಧ ಪರಿಸ್ಥಿಯಲ್ಲಿ ಬಿಸಿಸಿಐ ಒಂದು ಖಡಕ್ ನಿರ್ಧಾರ ಕೈಗೊಳ್ತು. ಸೀನಿಯರ್ಗಳನ್ನ ಸೈಡ್ಲೈನ್ ಮಾಡಿ ಯಂಗ್ಗನ್ ಧೋನಿಗೆ ನಾಯಕನ ಪಟ್ಟ ಕಟ್ಟಿತ್ತು.
ಅಂದು ಘಟಾನುಘಟಿಗಳೇ ತಂಡದಲ್ಲಿದ್ರು. ಸಚಿನ್ ತೆಂಡುಲ್ಕರ್, ವೀರೆಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಅನಿಲ್ ಕುಂಬ್ಳೆ, ಹರ್ಭಜನ್ ಸಿಂಗ್ ಹೀಗೆ ಅದಾಗಲೇ ಕ್ರಿಕೆಟ್ ಲೋಕದಲ್ಲಿ ಸೂಪರ್ ಸ್ಟಾರ್ಗಳಾಗಿದ್ದ ಅನುಭವಿ ಆಟಗಾರರು ತಂಡದಲ್ಲಿದ್ರು. ಆದ್ರೆ, ಇದು ಯಾವುದನ್ನು ಗಣನೆಗೆ ತೆಗೆದುಕೊಳ್ಳದೇ ಧೋನಿಗೆ ಪಟ್ಟ ಕಟ್ಟಲಾಯಿತು. ಜವಾಬ್ದಾರಿ ಹೊತ್ತ ಧೋನಿ, ಟೀಮ್ ಇಂಡಿಯಾವನ್ನ ಯಶಸ್ಸಿನ ಉತ್ತುಂಗಕ್ಕೆ ಕೊಂಡೊಯ್ದರು.
ಅಂದು ಧೋನಿ, ಇಂದು ಶುಭಮನ್ ಸಾರಥಿ.?
ಧೋನಿ ಜವಾಬ್ದಾರಿ ಹೊತ್ತಾಗ ಏನಿತ್ತೋ ಅಂತದ್ದೇ ಸಂದರ್ಭ ಈಗ ಎದುರಾಗಿದೆ. ಸೀನಿಯರ್ಸ್ಗಳನ್ನ ಸೈಡ್ಲೈನ್ ಮಾಡಿ ಯಂಗ್ ಟೀಮ್ ಕಟ್ಟೋ ಸವಾಲು ಬಿಸಿಸಿಐ ಮುಂದಿದೆ. ಹೀಗಾಗಿ ಮತ್ತೊಂದು ಬೋಲ್ಡ್ ಡಿಸಿಷನ್ ತೆಗೆದುಕೊಳ್ಳುವ ಲೆಕ್ಕಾಚಾರದಲ್ಲಿ ಬಿಸಿಸಿಐಯಿದೆ. ಅಂದು ಧೋನಿಗೆ ನೀಡಿದಂತೆ, ಈಗ ಯುವ ಕ್ರಿಕೆಟಿಗ ಶುಭಮನ್ ಗಿಲ್ಗೆ ತಂಡದ ಸಾರಥ್ಯ ನೀಡಲು ಪ್ಲಾನ್ ಸಿದ್ಧಗೊಂಡಿದೆ.
ಟೀಮ್ನ ಭವಿಷ್ಯದ ದೃಷ್ಟಿಯಿಂದ ಶುಭಮನ್ ಗಿಲ್ಗೆ ಪಟ್ಟ ಕಟ್ಟೋದು ಬೆಸ್ಟ್. ಯುವ ಕ್ರಿಕೆಟಿಗ ಈಗಾಗಲೇ 3 ಮಾದರಿಯಲ್ಲಿ ತನ್ನ ಖದರ್ ತೋರಿಸಿದ್ದಾನೆ. ಕನ್ಸಿಸ್ಟೆಂಟ್ ಬ್ಯಾಟಿಂಗ್ ನೋಡಿ ಶುಭ್ಮನ್, ಲೆಜೆಂಡ್ ವಿರಾಟ್ ಕೊಹ್ಲಿಯ ಉತ್ತರಾಧಿಕಾರಿ ಎಂದು ಫ್ಯಾನ್ಸ್ ಫಿಕ್ಸ್ ಆಗಿದ್ದಾರೆ. ತನ್ನ ಕ್ಲಾಸಿಕ್ ಆಟದಿಂದ ಕಮಾಲ್ ಮಾಡಿರೋ ಗಿಲ್ ನಾಯಕತ್ವಕ್ಕೆ ಉತ್ತಮ ಆಯ್ಕೆ ಅನ್ನೋದ್ರಲ್ಲಿ ಎರಡು ಮಾತಿಲ್ಲ.
ಟೆಸ್ಟ್- ಏಕದಿನಕ್ಕೆ ಗಿಲ್, ಟಿ20ಗೆ ಹಾರ್ದಿಕ್.?
ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಈಗಾಗಲೇ ಟಿ20 ತಂಡದ ಕ್ಯಾಪ್ಟನ್ ಎಂದು ಬಿಂಬಿತವಾಗಿದ್ದಾರೆ. ತಂಡವನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸ್ತಿದ್ದಾರೆ. ಹೀಗಾಗಿ ಹಾರ್ದಿಕ್ರನ್ನ ಡಿಸ್ಟರ್ಬ್ ಮಾಡೋದು ಅನುಮಾನ. ಹೀಗಾಗಿ ವಿಶ್ವಕಪ್ ಬಳಿಕ ಟೆಸ್ಟ್, ಏಕದಿನ ತಂಡದಿಂದ ರೋಹಿತ್ರನ್ನ ಕೆಳಗಿಳಿಸಿ ಶುಭಮನ್ಗೆ ಪಟ್ಟಾಭಿಷೇಕ ಮಾಡುವ ಪ್ಲಾನ್ ಬಿಸಿಸಿಐದ್ದಾಗಿದೆ. ಆದ್ರೆ, ಇದು ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ