SAFF Championshipನಲ್ಲಿ 2ನೇ ಬಾರಿ ಜಯಭೇರಿ ಬಾರಿಸಿದ ಭಾರತ
ಭಾರತ ಜಯದ ಬೆನ್ನಲ್ಲೇ ಒಟ್ಟಾಗಿ ‘ವಂದೇ ಮಾತರಂ’ ಹಾಡಿದ ಪ್ರೇಕ್ಷಕರು
ಇದು ನೀಲಿ ಹುಲಿಗಳು ಸರ್ವೋಚ್ಚ ಆಳ್ವಿಕೆ ಎಂದು ಕರೆದ ಮೋದಿ
ಭಾರತದ ಫುಟ್ಬಾಲ್ ತಂಡ 2023ರ SAFF ಚಾಂಪಿಯನ್ನಲ್ಲಿ 2ನೇ ಬಾರಿ ಜಯಭೇರಿ ಬಾರಿಸಿದೆ. ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ಕುವೈತ್ ತಂಡವನ್ನು ಸೋಲಿಸುವ ಮೂಲಕ ಜಯ ತಮ್ಮದಾಗಿಸಿಕೊಂಡಿದೆ.
ಸುನಿಲ್ ಛೆಟ್ರಿ ನಾಯಕತ್ವದಲ್ಲಿ ಭಾರತ ತಂಡ ಜಯಭೇರಿ ಬಾರಿಸುತ್ತಿದ್ದಂತೆ ಮೈದಾನದಲ್ಲಿ ಅಚ್ಚರಿ ಘಟನೆಯೊಂದು ಸಾಕ್ಷಿಯಾಯಿತು, ಪೆವಿಲಿಯನ್ನಲ್ಲಿ ಕುಳಿತು ತಂಡದ ಜಯವನ್ನು ಕಣ್ಣಾರೆ ಕಂಡ ಅಭಿಮಾನಿಗಳ ಬಾಯಲ್ಲಿ ಏಕಕಾಲದಲ್ಲಿ ‘ವಂದೇ ಮಾತರಂ’ ಮತ್ತು ‘ಮಾ ತುಜೆ ಸಲಾ’ ಗೀತೆ ಮೊಳಗಿತು. ಇತ್ತ ಮೈದಾನದಲ್ಲಿದ್ದ ಭಾರತ ತಂಡ ಆಟಗಾರರು ಪೆವಿಲಿಯನ್ ಸುತ್ತಲೂ ಕೇಳಿಬರುತ್ತಿರುವ ಗೀತೆಗೆ ದಿಗ್ಭ್ರಮೆಗೊಂಡರು.
ಕಂಠೀರವ ಸ್ಟೇಡಿಯಂ ತುಂಬೆಲ್ಲಾ ಸೇರಿದ್ದ 26 ಸಾವಿರ ಜನರು ವಂದೇ ಮಾತರಂ ಗೀತೆ ಹಾಡಿದ್ದಾರೆ. ಸದ್ಯ ಈ ವಿಡಿಯೋ ಅನೇಕರ ಸ್ಮಾರ್ಟ್ಫೋನ್ನಲ್ಲಿ ಸೆರೆಹಿಡಿಯಲಾಗಿದೆ. ಅತ್ತ ಭಾರತ ತಂಡದ ಜಯದ ಜೊತೆಗೆ ಈ ಅಚ್ಚರಿಯ ದೃಶ್ಯ ಸಾಕ್ಷಿಯಾಗಿದ್ದನ್ನು ಕಂಡು ಪ್ರಧಾನಿ ಮೋದಿ ಕೂಡ ಟ್ವೀಟ್ ಮಾಡಿದ್ದಾರೆ.
ಬೆಂಗಳೂರಿನ ಕಂಠೀರವಾ ಕ್ರೀಡಾಂಗಣದಲ್ಲಿ ನಡೆದ 2023ನೇ ಸಾಲಿನ ಸ್ಯಾಫ್ ಫುಟ್ಬಾಲ್ ಫೈನಲ್ ಪಂದ್ಯದಲ್ಲಿ ಭಾರತ ತಂಡ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಇತಿಹಾಸದಲ್ಲಿ 9ನೇ ಬಾರಿ ಟ್ರೋಫಿ ಗೆದ್ದು ಈ ಮೂಲಕ ದಾಖಲೆ ನಿರ್ಮಿಸಿದೆ.
ಇದಕ್ಕೂ ಮುನ್ನ 26 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಕ್ರೀಡಾಂಗಣದಲ್ಲಿ ವಂದೇ ಮಾತರಂ ಹಾಡಿದರು. ಇಡೀ ಮೈದಾನವನ್ನೇ… pic.twitter.com/lNSztZOxRE— NewsFirst Kannada (@NewsFirstKan) July 5, 2023
View this post on Instagram
ನೀಲಿ ಹುಲಿಗಳೆಂದ ಪ್ರಧಾನಿ ಮೋದಿ
ಸುನಿಲ್ ಛೆಟ್ರಿ ನಾಯಕತ್ವದಲ್ಲಿ ಭಾರತದ ಫುಟ್ಬಾಲ್ ತಂಡ 2023ರ SAFF ಚಾಂಪಿಯನ್ನಲ್ಲಿ ಜಯಭೇರಿ ಬಾರಿಸಿದ ವಿಚಾರವಾಗಿ ಟ್ವೀಟ್ ಮಾಡಿದ್ದಾರೆ. ಟ್ವೀಟ್ನಲ್ಲಿ ಭಾರತಕ್ಕೆ ಮತ್ತೊಮ್ಮೆ ಚಾಂಪಿಯನ್ ಪಟ್ಟ. #SAFFCchampionship2023 ನಲ್ಲಿ ನೀಲಿ ಹುಲಿಗಳು ಸರ್ವೋಚ್ಚ ಆಳ್ವಿಕೆ ನಡೆಸುತ್ತವೆ. ನಮ್ಮ ಆಟಗಾರರಿಗೆ ಅಭಿನಂದನೆಗಳು. ಈ ಅಥ್ಲೀಟ್ಗಳ ಸಂಕಲ್ಪ ಮತ್ತು ದೃಢತೆಯಿಂದ ನಡೆಸಲ್ಪಡುವ ಭಾರತೀಯ ತಂಡದ ಗಮನಾರ್ಹ ಪ್ರಯಾಣವು ಮುಂಬರುವ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡುವುದನ್ನು ಮುಂದುವರಿಸುತ್ತದೆ ಎಂದು ಹೇಳುವ ಮೂಲಕ ಆಟಗಾರರಿಗೆ ಶುಭಾಶಯ ಹೇಳಿದ್ದಾರೆ.
India crowned champions, yet again! The Blue Tigers reign supreme at the #SAFFChampionship2023! Congrats to our players. The Indian Team’s remarkable journey, powered by the determination and tenacity of these athletes, will continue to inspire upcoming sportspersons. pic.twitter.com/DitI0NunmD
— Narendra Modi (@narendramodi) July 5, 2023
2011ರಲ್ಲಿ ಧೋನಿ ನಾಯಕತ್ವದ ಟೀಂ ಇಂಡಿಯಾ ಕೂಡ ಚಾಂಪಿಯನ್ ಆಗುವಾಗ ಇದೇ ರೀತಿವ ‘ವಂದೇ ಮಾತರಂ’ ಗೀತೆ ಮೊಳಗಿತ್ತು. ಈ ಘಟನೆ ಧೋನಿ ಮಾತ್ರವಲ್ಲ ಕ್ರೀಡಾ ಪ್ರೇಮಿಗಳ ನೆನಪಲ್ಲಿ ಅಚ್ಚಳಿಯಾಗಿ ಉಳಿದಿದೆ. ಅನೇಕರು ಈ ಘಟನೆಯನ್ನ ಸಾಮಾಜಿಕ ಜಾಲತಾಣದ ಮೂಲಕ ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಿರುತ್ತಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
SAFF Championshipನಲ್ಲಿ 2ನೇ ಬಾರಿ ಜಯಭೇರಿ ಬಾರಿಸಿದ ಭಾರತ
ಭಾರತ ಜಯದ ಬೆನ್ನಲ್ಲೇ ಒಟ್ಟಾಗಿ ‘ವಂದೇ ಮಾತರಂ’ ಹಾಡಿದ ಪ್ರೇಕ್ಷಕರು
ಇದು ನೀಲಿ ಹುಲಿಗಳು ಸರ್ವೋಚ್ಚ ಆಳ್ವಿಕೆ ಎಂದು ಕರೆದ ಮೋದಿ
ಭಾರತದ ಫುಟ್ಬಾಲ್ ತಂಡ 2023ರ SAFF ಚಾಂಪಿಯನ್ನಲ್ಲಿ 2ನೇ ಬಾರಿ ಜಯಭೇರಿ ಬಾರಿಸಿದೆ. ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ಕುವೈತ್ ತಂಡವನ್ನು ಸೋಲಿಸುವ ಮೂಲಕ ಜಯ ತಮ್ಮದಾಗಿಸಿಕೊಂಡಿದೆ.
ಸುನಿಲ್ ಛೆಟ್ರಿ ನಾಯಕತ್ವದಲ್ಲಿ ಭಾರತ ತಂಡ ಜಯಭೇರಿ ಬಾರಿಸುತ್ತಿದ್ದಂತೆ ಮೈದಾನದಲ್ಲಿ ಅಚ್ಚರಿ ಘಟನೆಯೊಂದು ಸಾಕ್ಷಿಯಾಯಿತು, ಪೆವಿಲಿಯನ್ನಲ್ಲಿ ಕುಳಿತು ತಂಡದ ಜಯವನ್ನು ಕಣ್ಣಾರೆ ಕಂಡ ಅಭಿಮಾನಿಗಳ ಬಾಯಲ್ಲಿ ಏಕಕಾಲದಲ್ಲಿ ‘ವಂದೇ ಮಾತರಂ’ ಮತ್ತು ‘ಮಾ ತುಜೆ ಸಲಾ’ ಗೀತೆ ಮೊಳಗಿತು. ಇತ್ತ ಮೈದಾನದಲ್ಲಿದ್ದ ಭಾರತ ತಂಡ ಆಟಗಾರರು ಪೆವಿಲಿಯನ್ ಸುತ್ತಲೂ ಕೇಳಿಬರುತ್ತಿರುವ ಗೀತೆಗೆ ದಿಗ್ಭ್ರಮೆಗೊಂಡರು.
ಕಂಠೀರವ ಸ್ಟೇಡಿಯಂ ತುಂಬೆಲ್ಲಾ ಸೇರಿದ್ದ 26 ಸಾವಿರ ಜನರು ವಂದೇ ಮಾತರಂ ಗೀತೆ ಹಾಡಿದ್ದಾರೆ. ಸದ್ಯ ಈ ವಿಡಿಯೋ ಅನೇಕರ ಸ್ಮಾರ್ಟ್ಫೋನ್ನಲ್ಲಿ ಸೆರೆಹಿಡಿಯಲಾಗಿದೆ. ಅತ್ತ ಭಾರತ ತಂಡದ ಜಯದ ಜೊತೆಗೆ ಈ ಅಚ್ಚರಿಯ ದೃಶ್ಯ ಸಾಕ್ಷಿಯಾಗಿದ್ದನ್ನು ಕಂಡು ಪ್ರಧಾನಿ ಮೋದಿ ಕೂಡ ಟ್ವೀಟ್ ಮಾಡಿದ್ದಾರೆ.
ಬೆಂಗಳೂರಿನ ಕಂಠೀರವಾ ಕ್ರೀಡಾಂಗಣದಲ್ಲಿ ನಡೆದ 2023ನೇ ಸಾಲಿನ ಸ್ಯಾಫ್ ಫುಟ್ಬಾಲ್ ಫೈನಲ್ ಪಂದ್ಯದಲ್ಲಿ ಭಾರತ ತಂಡ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಇತಿಹಾಸದಲ್ಲಿ 9ನೇ ಬಾರಿ ಟ್ರೋಫಿ ಗೆದ್ದು ಈ ಮೂಲಕ ದಾಖಲೆ ನಿರ್ಮಿಸಿದೆ.
ಇದಕ್ಕೂ ಮುನ್ನ 26 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಕ್ರೀಡಾಂಗಣದಲ್ಲಿ ವಂದೇ ಮಾತರಂ ಹಾಡಿದರು. ಇಡೀ ಮೈದಾನವನ್ನೇ… pic.twitter.com/lNSztZOxRE— NewsFirst Kannada (@NewsFirstKan) July 5, 2023
View this post on Instagram
ನೀಲಿ ಹುಲಿಗಳೆಂದ ಪ್ರಧಾನಿ ಮೋದಿ
ಸುನಿಲ್ ಛೆಟ್ರಿ ನಾಯಕತ್ವದಲ್ಲಿ ಭಾರತದ ಫುಟ್ಬಾಲ್ ತಂಡ 2023ರ SAFF ಚಾಂಪಿಯನ್ನಲ್ಲಿ ಜಯಭೇರಿ ಬಾರಿಸಿದ ವಿಚಾರವಾಗಿ ಟ್ವೀಟ್ ಮಾಡಿದ್ದಾರೆ. ಟ್ವೀಟ್ನಲ್ಲಿ ಭಾರತಕ್ಕೆ ಮತ್ತೊಮ್ಮೆ ಚಾಂಪಿಯನ್ ಪಟ್ಟ. #SAFFCchampionship2023 ನಲ್ಲಿ ನೀಲಿ ಹುಲಿಗಳು ಸರ್ವೋಚ್ಚ ಆಳ್ವಿಕೆ ನಡೆಸುತ್ತವೆ. ನಮ್ಮ ಆಟಗಾರರಿಗೆ ಅಭಿನಂದನೆಗಳು. ಈ ಅಥ್ಲೀಟ್ಗಳ ಸಂಕಲ್ಪ ಮತ್ತು ದೃಢತೆಯಿಂದ ನಡೆಸಲ್ಪಡುವ ಭಾರತೀಯ ತಂಡದ ಗಮನಾರ್ಹ ಪ್ರಯಾಣವು ಮುಂಬರುವ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡುವುದನ್ನು ಮುಂದುವರಿಸುತ್ತದೆ ಎಂದು ಹೇಳುವ ಮೂಲಕ ಆಟಗಾರರಿಗೆ ಶುಭಾಶಯ ಹೇಳಿದ್ದಾರೆ.
India crowned champions, yet again! The Blue Tigers reign supreme at the #SAFFChampionship2023! Congrats to our players. The Indian Team’s remarkable journey, powered by the determination and tenacity of these athletes, will continue to inspire upcoming sportspersons. pic.twitter.com/DitI0NunmD
— Narendra Modi (@narendramodi) July 5, 2023
2011ರಲ್ಲಿ ಧೋನಿ ನಾಯಕತ್ವದ ಟೀಂ ಇಂಡಿಯಾ ಕೂಡ ಚಾಂಪಿಯನ್ ಆಗುವಾಗ ಇದೇ ರೀತಿವ ‘ವಂದೇ ಮಾತರಂ’ ಗೀತೆ ಮೊಳಗಿತ್ತು. ಈ ಘಟನೆ ಧೋನಿ ಮಾತ್ರವಲ್ಲ ಕ್ರೀಡಾ ಪ್ರೇಮಿಗಳ ನೆನಪಲ್ಲಿ ಅಚ್ಚಳಿಯಾಗಿ ಉಳಿದಿದೆ. ಅನೇಕರು ಈ ಘಟನೆಯನ್ನ ಸಾಮಾಜಿಕ ಜಾಲತಾಣದ ಮೂಲಕ ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಿರುತ್ತಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ