/newsfirstlive-kannada/media/post_attachments/wp-content/uploads/2024/11/SHABARIMALA.jpg)
ಅಯ್ಯಪ್ಪನ ಭಕ್ತರು ಶಬರಿಮಲೆಗೆ ತೆರಳಲು ಸಿದ್ಧತೆ ನಡೆಸ್ತಿದ್ದಾರೆ. ಮಂಡಲ-ಮಕರವಿಳಕ್ಕು ಋತುವಿನ ಅಂಗವಾಗಿ ಶಬರಿಮಲೆ ದೇವಸ್ಥಾನದ ಈಗಾಗಲೇ ತೆರೆಯಲಾಗಿದೆ. ನಿನ್ನೆ ಮುಂಜಾನೆಯಿಂದಲೇ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದೀಗ ಶಬರಿಮಲೆ ಅಯ್ಯಪ್ಪನ ಭಕ್ತರಿಗಾಗಿ ರೈಲ್ವೆ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ. ಹೈದರಾಬಾದ್​ನಿಂದ ಕೊಲ್ಲಂಗೆ ರೈಲುಗಳು ಸಂಚಾರ ಮಾಡಲಿವೆ.
ಕಾಚಿಗುಡದಿಂದ ಕಡಪ ಮೂಲಕ ಕೊಲ್ಲಂಗೆ 4 ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರೈಲು ಸಂಖ್ಯೆ 07133, 07134, 07141, 07140. ಈ ನಂಬರ್​ನ ಟ್ರೈನ್​​ ಅಯ್ಯಪ್ಪನ ಭಕ್ತರಿಗಾಗಿ ಓಡಾಟ ನಡೆಸಲಿವೆ. ರೈಲು ಸಂಖ್ಯೆ 07133 ಈ ತಿಂಗಳ 14, 21 ಮತ್ತು 28 ರಂದು ಭಕ್ತರಿಗೆ ಲಭ್ಯವಿರುತ್ತದೆ. ರೈಲು ಸಂಖ್ಯೆ 07134 ಈ ತಿಂಗಳ 15, 22 ಮತ್ತು 29 ರಂದು ಓಡಾಟ ನಡೆಸಲಿದೆ. ರೈಲು ಸಂಖ್ಯೆ 07139 ಈ ತಿಂಗಳ 16 ರಂದು ಓಡಾಟ ನಡೆಸಲಿದೆ.
ಇದನ್ನೂ ಓದಿ:ಅಯ್ಯಪ್ಪನ ಭಕ್ತರಿಗೆ KSRTC ಗುಡ್​ನ್ಯೂಸ್; ಶಬರಿಮಲೆಗೆ ಹೋಗಲು ವಿಶೇಷ ವ್ಯವಸ್ಥೆ..!
ಇನ್ನು, ಕರ್ನಾಟಕದ ಭಕ್ತರಿಗೆ ಕೆಎಸ್​ಆರ್​ಟಿಸಿ ಸಿಹಿ ಸುದ್ದಿ ನೀಡಿದೆ. ಬೆಂಗಳೂರಿನಿಂದ ಶಬರಿಮಲೆಗೆ KSRTC ವೋಲ್ವೋ ಬಸ್ ಬಿಡಲಿದೆ. ನವೆಂಬರ್ 29 ರಿಂದ ಬೆಂಗಳೂರು ಟು ಶಬರಿಮಲೆಗೆ ಬಸ್ ಸಂಚಾರ ಶುರುವಾಗಲಿದೆ. ಶಬರಿಮಲೆ ಅಯ್ಯಪ್ಪಸ್ವಾಮಿ ಸೀಸನ್ ಹಿನ್ನೆಲೆಯಲ್ಲಿ ಭಕ್ತರಿಗೆ ಅನುಕೂಲ ಆಗಲಿ ಎಂದು ಈ ವ್ಯವಸ್ಥೆ ಮಾಡಿದೆ. ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳ ಪ್ರಯಾಣಕ್ಕಾಗಿ ಮೊದಲ ಬಾರಿಗೆ ವೋಲ್ವೋ ಬಸ್ ಸಂಚಾರ ಮಾಡಲಿದೆ. ಶಾಂತಿನಗರದಿಂದ ಶಬರಿಮಲೆ ನೀಲಕ್ಕಲ್​ಗೆ ಬಸ್ ಪ್ರಯಾಣ ಬೆಳಸಲಿದೆ. ಶಾಂತಿನಗರದಿಂದ ನೀಲಕ್ಕಲ್ ಹಾಗೂ ನೀಲಕ್ಕಲ್​ನಿಂದ ಶಾಂತಿನಗರಕ್ಕೆ ಪ್ರಯಾಣ ಬೆಳೆಸಲಿದೆ. ಮಧ್ಯಾಹ್ನ 1.50ಕ್ಕೆ ಶಾಂತಿನಗರದಿಂದ ಹೊರಟು ಬೆಳಗ್ಗೆ 6.40ಕ್ಕೆ ನೀಲಕ್ಕಲ್ ತಲುಪಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us