newsfirstkannada.com

ನಾಯಿಗಳ ಕಚ್ಚಾಟಕ್ಕೆ ಜಗಳ.. ರೊಚ್ಚಿಗೆದ್ದು ಇಬ್ಬರನ್ನು ಗುಂಡಿಟ್ಟು ಕೊಂದ ಸೆಕ್ಯೂರಿಟಿ.. 6 ಮಂದಿ ಗಂಭೀರ..!

Share :

18-08-2023

    ರಾತ್ರಿ 10 ಗಂಟೆ ಸುಮಾರಿಗೆ ನಡೆಯಿತು ಮಾರಣಹೋಮ

    ನಾಯಿಗಳು ಜಗಳವಾಡಿದ್ದಕ್ಕೆ ಕೋಪಗೊಂಡ ಸೆಕ್ಯೂರಿಟಿ..!

    ಮನೆಯ ಟೆರೆಸ್​​ನಿಂದ ಶೂಟ್ ಮಾಡಿ ಕೊಂದ ಕಿರಾತಕ

ಇಂದೋರ್​: ಸಾಕು ನಾಯಿಗಳ ಬಗ್ಗೆ ನಡೆದ ವಾಗ್ವಾದದಲ್ಲಿ ವ್ಯಕ್ತಿಯೊಬ್ಬರು ನೆರೆ ಹೊರೆಯವರ ಮೇಲೆ ಗುಂಡು ಹಾರಿಸಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು 6 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆಯು ಮಧ್ಯಪ್ರದೇಶದ ಇಂದೋರ್​ನ ಖಜ್ರಾನಾ ಪೊಲೀಸ್​ ಠಾಣಾ ವ್ಯಾಪ್ತಿಯ ಕೃಷ್ಣಾ ಬಾಘ್​ ಕಾಲೋನಿಯಲ್ಲಿ ರಾತ್ರಿ 10 ಗಂಟೆಗೆ ನಡೆದಿದೆ.

ವಿಮಲ್​ (35), ರಾಹುಲ್ ವರ್ಮಾ (28) ಮೃತ ದುರ್ದೈವಿಗಳು. ಇನ್ನು 6 ಜನರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬರೋಡಾ ಬ್ಯಾಂಕ್​ನ ಸೆಕ್ಯೂರಿಟಿ ಗಾರ್ಡ್​ ಆಗಿರುವ ರಾಜ್​ಪಾಲ್​ ರಾಜವಾತ್​ ಫೈರಿಂಗ್ ಮಾಡಿದ ಆರೋಪಿ ಆಗಿದ್ದು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ರಾತ್ರಿ ವೇಳೆ ರಾಜ್​ಪಾಲ್​ ರಾಜವಾತ್ ತನ್ನ ಸಾಕು ನಾಯಿ ಜೊತೆ ವಾಕಿಂಗ್ ಮಾಡಲು ರಸ್ತೆಯಲ್ಲಿ ಹೋಗುತ್ತಿರುವಾಗಲೇ ಅದೇ ಕಾಲೋನಿಯ ಇನ್ನೊಬ್ಬರು ಕೂಡ ತಮ್ಮ ನಾಯಿ ಜೊತೆ ತೆರಳುತ್ತಿದ್ದರು. ಆಗ ಎರಡು ನಾಯಿಗಳು ಪರಸ್ಪರ ಕಚ್ಚಾಡಿಕೊಂಡಿವೆ. ಇದರಿಂದ ಇಬ್ಬರು ವ್ಯಕ್ತಿಗಳು ವಾಗ್ವಾದಕ್ಕೆ ಇಳಿದಿದ್ದು, ಜನರು ಗುಂಪಾಗಿ ಸೇರಿದ್ದಾರೆ. ಇದು ತೀವ್ರ ಪಡೆದುಕೊಳ್ಳುತ್ತಿದ್ದಂತೆ ಆರೋಪಿ ರಾಜ್​ವಾತ್​ ತನ್ನ ಮನೆಗೆ ಹೋಗಿ ಲೈಸನ್ಸ್​ ಇರುವ ಗನ್​ ತೆಗೆದುಕೊಂಡು ಟೆರಸ್ ಮೇಲಿಂದ ಜನರ ಮೇಲೆ ಎರಡು ಸುತ್ತು ಗುಂಡು ಹಾರಿಸಿದ್ದಾರೆ.

ಶೂಟ್​ ಮಾಡಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, 6 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದು ಆತನ ಡಬಲ್ ಬ್ಯಾರೆಲ್​ 12 ಬೋರ್​ ಗನ್​ ಸೀಜ್ ಮಾಡಲಾಗಿದೆ ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಾಯಿಗಳ ಕಚ್ಚಾಟಕ್ಕೆ ಜಗಳ.. ರೊಚ್ಚಿಗೆದ್ದು ಇಬ್ಬರನ್ನು ಗುಂಡಿಟ್ಟು ಕೊಂದ ಸೆಕ್ಯೂರಿಟಿ.. 6 ಮಂದಿ ಗಂಭೀರ..!

https://newsfirstlive.com/wp-content/uploads/2023/08/MP.jpg

    ರಾತ್ರಿ 10 ಗಂಟೆ ಸುಮಾರಿಗೆ ನಡೆಯಿತು ಮಾರಣಹೋಮ

    ನಾಯಿಗಳು ಜಗಳವಾಡಿದ್ದಕ್ಕೆ ಕೋಪಗೊಂಡ ಸೆಕ್ಯೂರಿಟಿ..!

    ಮನೆಯ ಟೆರೆಸ್​​ನಿಂದ ಶೂಟ್ ಮಾಡಿ ಕೊಂದ ಕಿರಾತಕ

ಇಂದೋರ್​: ಸಾಕು ನಾಯಿಗಳ ಬಗ್ಗೆ ನಡೆದ ವಾಗ್ವಾದದಲ್ಲಿ ವ್ಯಕ್ತಿಯೊಬ್ಬರು ನೆರೆ ಹೊರೆಯವರ ಮೇಲೆ ಗುಂಡು ಹಾರಿಸಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು 6 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆಯು ಮಧ್ಯಪ್ರದೇಶದ ಇಂದೋರ್​ನ ಖಜ್ರಾನಾ ಪೊಲೀಸ್​ ಠಾಣಾ ವ್ಯಾಪ್ತಿಯ ಕೃಷ್ಣಾ ಬಾಘ್​ ಕಾಲೋನಿಯಲ್ಲಿ ರಾತ್ರಿ 10 ಗಂಟೆಗೆ ನಡೆದಿದೆ.

ವಿಮಲ್​ (35), ರಾಹುಲ್ ವರ್ಮಾ (28) ಮೃತ ದುರ್ದೈವಿಗಳು. ಇನ್ನು 6 ಜನರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬರೋಡಾ ಬ್ಯಾಂಕ್​ನ ಸೆಕ್ಯೂರಿಟಿ ಗಾರ್ಡ್​ ಆಗಿರುವ ರಾಜ್​ಪಾಲ್​ ರಾಜವಾತ್​ ಫೈರಿಂಗ್ ಮಾಡಿದ ಆರೋಪಿ ಆಗಿದ್ದು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ರಾತ್ರಿ ವೇಳೆ ರಾಜ್​ಪಾಲ್​ ರಾಜವಾತ್ ತನ್ನ ಸಾಕು ನಾಯಿ ಜೊತೆ ವಾಕಿಂಗ್ ಮಾಡಲು ರಸ್ತೆಯಲ್ಲಿ ಹೋಗುತ್ತಿರುವಾಗಲೇ ಅದೇ ಕಾಲೋನಿಯ ಇನ್ನೊಬ್ಬರು ಕೂಡ ತಮ್ಮ ನಾಯಿ ಜೊತೆ ತೆರಳುತ್ತಿದ್ದರು. ಆಗ ಎರಡು ನಾಯಿಗಳು ಪರಸ್ಪರ ಕಚ್ಚಾಡಿಕೊಂಡಿವೆ. ಇದರಿಂದ ಇಬ್ಬರು ವ್ಯಕ್ತಿಗಳು ವಾಗ್ವಾದಕ್ಕೆ ಇಳಿದಿದ್ದು, ಜನರು ಗುಂಪಾಗಿ ಸೇರಿದ್ದಾರೆ. ಇದು ತೀವ್ರ ಪಡೆದುಕೊಳ್ಳುತ್ತಿದ್ದಂತೆ ಆರೋಪಿ ರಾಜ್​ವಾತ್​ ತನ್ನ ಮನೆಗೆ ಹೋಗಿ ಲೈಸನ್ಸ್​ ಇರುವ ಗನ್​ ತೆಗೆದುಕೊಂಡು ಟೆರಸ್ ಮೇಲಿಂದ ಜನರ ಮೇಲೆ ಎರಡು ಸುತ್ತು ಗುಂಡು ಹಾರಿಸಿದ್ದಾರೆ.

ಶೂಟ್​ ಮಾಡಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, 6 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದು ಆತನ ಡಬಲ್ ಬ್ಯಾರೆಲ್​ 12 ಬೋರ್​ ಗನ್​ ಸೀಜ್ ಮಾಡಲಾಗಿದೆ ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More