ಅಂದು 125 ರನ್ಗಳ ಹೀನಾಯ ಸೋಲು ಕಂಡಿದ್ದ ಭಾರತ
ಇಂದು ಆಸೀಸ್ ವಿರುದ್ಧ ಬಡ್ಡಿ ಸಮೇತ ಜಯ ವಾಪಸ್ಸು ಪಡೆಯುವ ದಿನ
ಅಂದು ದಾಂಡಿಗ, ಇಂದು ಮುಖ್ಯ ಕೋಚ್.. ದ್ರಾವಿಡ್ ಸೇಡು ತಿರೀಸೋದು ಪಕ್ಕಾ!
ಅದು ಮಾರ್ಚ್ 23,2003. ಜೋಹಾನ್ಸ್ಬರ್ಗ್ನಲ್ಲಿ ಟೀಂ ಇಂಡಿಯಾ ಮತ್ತು ಆಸೀಸ್ ತಂಡ ಮುಖಾಮುಖಿಯಾದ ದಿನ. ಭಾರತದ ವಿರುದ್ಧ ಮೊದಲು ಬ್ಯಾಟಿಂಗ್ಗೆ ಇಳಿದ ಆಸ್ಟ್ರೇಲಿಯಾ ತಂದ ಭರ್ಜರಿಯಾಗಿ ಬ್ಯಾಟ್ ಬೀಸಿತ್ತು. ರಿಕ್ಕಿ ಪಾಂಟಿಂಗ್ 140 ರನ್ಗಳ ಸ್ಫೋಟಕ ಆಟದೊಂದಿಗೆ ತಂಡಕ್ಕೆ 359 ರನ್ಗಳನ್ನು ಪೇರಿಸಿದ್ದರು. ಆದರೆ ಈ ರನ್ ಗುರಿಮುಟ್ಟಲು ಅಂದು ಟೀಂ ಇಂಡಿಯಾ ಎಡವಿತ್ತು.
ಆಸೀಸ್ ನೀಡಿದ ಗುರಿಯ ಬೆನ್ನಟ್ಟಲು ಮುಂದಾದ ಸಚಿನ್ ತೆಂಡೂಲ್ಕರ್ ಮೊದಲ ಓವರ್ನಲ್ಲೇ ಎಡವಿದರು. ಇದು ಅಭಿಮಾನಿಗಳಿಗೆ ಮಾತ್ರವಲ್ಲದೆ ತಂಡಕ್ಕೂ ದೊಡ್ಡ ಶಾಕ್ ಕೊಟ್ಟಿತ್ತು. ಕಾರಣ ಗ್ಲೆನ್ ಮೆಕ್ಗ್ರೌತ್ 5ನೇ ಎಸೆತಕ್ಕೆ ಔಟಾದರು. ಬಳಿಕ ವಿರೇಂದ್ರ ಸೆಹ್ವಾಗ್ 81 ರನ್ ಮತ್ತು ದ್ರಾವಿಡ್ 47 ರನ್ ಹೊರತುಪಡಿಸಿ ಒಬ್ಬರನ್ನೊಬ್ಬರು ಔಟಾಗುತ್ತಲೇ ಹೋದರು. ಈ ಪಂದ್ಯಲ್ಲಿ ಟೀಂ ಇಂಡಿಯಾ 125 ರನ್ಗಳ ಹೀನಾಯ ಸೋಲನ್ನು ಕಂಡಿತ್ತು.
ಇದನ್ನು ಓದಿ: World Cup 2023: ಯಾರಿಗುಂಟು.. ಯಾರಿಗಿಲ್ಲ! ಭಾರತ ಗೆದ್ದರೆ 100 ಕೋಟಿ ರೂಪಾಯಿ ನೀಡುತ್ತೇನೆಂದ ಆಸ್ಟ್ರೋಟಾಕ್ ಸಿಇಒ!
ಆದರೀಗ ಮತ್ತೆ ಅಂದು ಕಂಡ ಸೋಲಿಗೆ ಸೇಡು ತೀರಿಸಿಕೊಳ್ಳುವ ದಿನ. 7547 ದಿನಗಳ ಅಂತರದಲ್ಲಿ ಭಾರತವು ಆಸೀಸ್ ಅನ್ನು ಮಣ್ಣು ಮುಕ್ಕಿಸಬೇಕಾದ ದಿನ ಮತ್ತೆ ಬಂದಿದೆ. ಮಾತ್ರವಲ್ಲದೆ, ಅಂದು ಟೀಂ ಇಂಡಿಯಾದ ತಂಡದಲ್ಲಿದ್ದ ರಾಹುಲ್ ದ್ರಾವಿಡ್ ಇಂದು ತಂಡದ ಕೋಚ್ ಆಗಿದ್ದಾರೆ. ಬಡ್ಡಿ ಸಮೇತ ಜಯವನ್ನು ವಾಪಾಸು ತರಲು ಕಾಯುತ್ತಿದ್ದಾರೆ.
ಒಟ್ಟಿನಲ್ಲಿ ಟೀಂ ಇಂಡಿಯಾದ ಮೇಲೆ ನಿರೀಕ್ಷೆ ಮಾತ್ರ ದುಪ್ಪಟ್ಟಾಗಿದ್ದು, ಇಂಡಿಯನ್ಸ್ ಫ್ಯಾನ್ಸ್ ಮಾತ್ರ ಈ ಬಾರಿ ಟ್ರೋಫಿ ನಮ್ದೇ ಎಂದು ಜಪಿಸುತ್ತಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಅಂದು 125 ರನ್ಗಳ ಹೀನಾಯ ಸೋಲು ಕಂಡಿದ್ದ ಭಾರತ
ಇಂದು ಆಸೀಸ್ ವಿರುದ್ಧ ಬಡ್ಡಿ ಸಮೇತ ಜಯ ವಾಪಸ್ಸು ಪಡೆಯುವ ದಿನ
ಅಂದು ದಾಂಡಿಗ, ಇಂದು ಮುಖ್ಯ ಕೋಚ್.. ದ್ರಾವಿಡ್ ಸೇಡು ತಿರೀಸೋದು ಪಕ್ಕಾ!
ಅದು ಮಾರ್ಚ್ 23,2003. ಜೋಹಾನ್ಸ್ಬರ್ಗ್ನಲ್ಲಿ ಟೀಂ ಇಂಡಿಯಾ ಮತ್ತು ಆಸೀಸ್ ತಂಡ ಮುಖಾಮುಖಿಯಾದ ದಿನ. ಭಾರತದ ವಿರುದ್ಧ ಮೊದಲು ಬ್ಯಾಟಿಂಗ್ಗೆ ಇಳಿದ ಆಸ್ಟ್ರೇಲಿಯಾ ತಂದ ಭರ್ಜರಿಯಾಗಿ ಬ್ಯಾಟ್ ಬೀಸಿತ್ತು. ರಿಕ್ಕಿ ಪಾಂಟಿಂಗ್ 140 ರನ್ಗಳ ಸ್ಫೋಟಕ ಆಟದೊಂದಿಗೆ ತಂಡಕ್ಕೆ 359 ರನ್ಗಳನ್ನು ಪೇರಿಸಿದ್ದರು. ಆದರೆ ಈ ರನ್ ಗುರಿಮುಟ್ಟಲು ಅಂದು ಟೀಂ ಇಂಡಿಯಾ ಎಡವಿತ್ತು.
ಆಸೀಸ್ ನೀಡಿದ ಗುರಿಯ ಬೆನ್ನಟ್ಟಲು ಮುಂದಾದ ಸಚಿನ್ ತೆಂಡೂಲ್ಕರ್ ಮೊದಲ ಓವರ್ನಲ್ಲೇ ಎಡವಿದರು. ಇದು ಅಭಿಮಾನಿಗಳಿಗೆ ಮಾತ್ರವಲ್ಲದೆ ತಂಡಕ್ಕೂ ದೊಡ್ಡ ಶಾಕ್ ಕೊಟ್ಟಿತ್ತು. ಕಾರಣ ಗ್ಲೆನ್ ಮೆಕ್ಗ್ರೌತ್ 5ನೇ ಎಸೆತಕ್ಕೆ ಔಟಾದರು. ಬಳಿಕ ವಿರೇಂದ್ರ ಸೆಹ್ವಾಗ್ 81 ರನ್ ಮತ್ತು ದ್ರಾವಿಡ್ 47 ರನ್ ಹೊರತುಪಡಿಸಿ ಒಬ್ಬರನ್ನೊಬ್ಬರು ಔಟಾಗುತ್ತಲೇ ಹೋದರು. ಈ ಪಂದ್ಯಲ್ಲಿ ಟೀಂ ಇಂಡಿಯಾ 125 ರನ್ಗಳ ಹೀನಾಯ ಸೋಲನ್ನು ಕಂಡಿತ್ತು.
ಇದನ್ನು ಓದಿ: World Cup 2023: ಯಾರಿಗುಂಟು.. ಯಾರಿಗಿಲ್ಲ! ಭಾರತ ಗೆದ್ದರೆ 100 ಕೋಟಿ ರೂಪಾಯಿ ನೀಡುತ್ತೇನೆಂದ ಆಸ್ಟ್ರೋಟಾಕ್ ಸಿಇಒ!
ಆದರೀಗ ಮತ್ತೆ ಅಂದು ಕಂಡ ಸೋಲಿಗೆ ಸೇಡು ತೀರಿಸಿಕೊಳ್ಳುವ ದಿನ. 7547 ದಿನಗಳ ಅಂತರದಲ್ಲಿ ಭಾರತವು ಆಸೀಸ್ ಅನ್ನು ಮಣ್ಣು ಮುಕ್ಕಿಸಬೇಕಾದ ದಿನ ಮತ್ತೆ ಬಂದಿದೆ. ಮಾತ್ರವಲ್ಲದೆ, ಅಂದು ಟೀಂ ಇಂಡಿಯಾದ ತಂಡದಲ್ಲಿದ್ದ ರಾಹುಲ್ ದ್ರಾವಿಡ್ ಇಂದು ತಂಡದ ಕೋಚ್ ಆಗಿದ್ದಾರೆ. ಬಡ್ಡಿ ಸಮೇತ ಜಯವನ್ನು ವಾಪಾಸು ತರಲು ಕಾಯುತ್ತಿದ್ದಾರೆ.
ಒಟ್ಟಿನಲ್ಲಿ ಟೀಂ ಇಂಡಿಯಾದ ಮೇಲೆ ನಿರೀಕ್ಷೆ ಮಾತ್ರ ದುಪ್ಪಟ್ಟಾಗಿದ್ದು, ಇಂಡಿಯನ್ಸ್ ಫ್ಯಾನ್ಸ್ ಮಾತ್ರ ಈ ಬಾರಿ ಟ್ರೋಫಿ ನಮ್ದೇ ಎಂದು ಜಪಿಸುತ್ತಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ