ಡೆಡ್ಲಿ ಬೌಲಿಂಗ್ ಅಟ್ಯಾಕ್ ತಂಡಕ್ಕೆ ಇದೇನಾಯ್ತು..?
ಲೀಗ್ ಫೈನಲ್ ಮ್ಯಾಚ್ನಲ್ಲಿ ಫೈರಿ ಸ್ಪೆಲ್ ಮಾಯ..!
ನೆದರ್ರ್ಲೆಂಡ್ಸ್ ವಿರುದ್ಧದ ಪರದಾಟಕ್ಕೆ ಕಾರಣವೇನು..?
ದಕ್ಷಿಣ ಆಫ್ರಿಕಾ 83 ರನ್ಗಳಿಗೆ ಆಲೌಟ್, ಶ್ರೀಲಂಕಾ 55 ರನ್ಗೆ ಆಟ ಕ್ಲೋಸ್, ಇಂಗ್ಲೆಂಡ್ 129 ರನ್ಗೆ ಸರ್ವಪತನ, ಪಾಕಿಸ್ತಾನ 192 ರನ್ಗಳಿಗೆ ಉಡೀಸ್. ವಿಶ್ವಕಪ್ನಲ್ಲಿ ಟೀಮ್ ಇಂಡಿಯಾದ ಬೆಂಕಿ ಬಿರುಗಾಳಿಗೆ ಬಲಿಷ್ಠ ತಂಡಗಳು ತತ್ತರಿಸಿದ ಪರಿ ಇದು. ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಇಂಗ್ಲೆಂಡ್ ಹಾಗೂ ಪಾಕಿಸ್ತಾನ, ಭಾರತದ ಡೆಡ್ಲಿ ಸ್ಪೆಲ್ಗೆ ಬೆಚ್ಚಿ ಬಿದ್ದಿತ್ತು. ಅದ್ಯಾವ ಮಟ್ಟಿಗೆ ಅಂದ್ರೆ ಈ ಎಲ್ಲಾ ತಂಡಗಳ ವಿರುದ್ಧ ಏಕಪಕ್ಷೀಯವಾಗಿ ಗೆದ್ದು ಬೌಲಿಂಗ್ ಪರಾಕ್ರಮ ಮೆರೆದಿತ್ತು.
8 ಪಂದ್ಯ ಒಕೆ..9ನೇ ಮ್ಯಾಚ್ನಲ್ಲಿ ಹೀಗ್ಯಾಕೆ..?
ಮೊದಲ 8 ಪಂದ್ಯಗಳಲ್ಲಿ ಜಬರ್ದಸ್ತ್ ಬೌಲಿಂಗ್ ಮಾಡಿ ಇಂಡಿಯನ್ ಕಲಿಗಳು ಸೈ ಅನ್ನಿಸಿಕೊಂಡಿದ್ರು. ಅಂತಹದೇ ಮತ್ತೊಂದು ಫೈರಿ ಬೌಲಿಂಗ್ ಸ್ಪೆಲ್ ನಿನ್ನೆ ಮೂಡಿ ಬರುತ್ತೆ ಎಂದು ಎಲ್ಲರೂ ಭಾವಿಸಿದ್ರು. ಯಾಕಂದ್ರೆ ಮೊದಲ ಎಂಟು ಟೀಮ್ಸ್ಗೆ ಹೋಲಿಸಿದ್ರೆ ನೆದರ್ರ್ಲೆಂಡ್ಸ್ ಡಮ್ಮಿ. ಆದರೆ ಚಿನ್ನಸ್ವಾಮಿಯಲ್ಲಿ ಮೈದಾನದಲ್ಲಿ ನಡೆದಿದ್ದೇ ಬೇರೆ.
ಪಂದ್ಯ ಗೆದ್ರೂ ಬೌಲಿಂಗ್ನಲ್ಲಿ ತಿಣುಕಾಟ..!
ನೆದರ್ರ್ಲೆಂಡ್ಸ್ ವಿರುದ್ಧ 160 ರನ್ಗಳಿಂದ ಗೆದ್ದು ಬೀಗ್ತು..ಅನ್ಬೀಟನ್ ಅನ್ನೋ ಟ್ಯಾಗ್ಲೈನ್ ಕಂಟಿನ್ಯೂ ಆಯ್ತು. ಎಲ್ಲವೂ ಸರಿ, ಆದರೆ ರೋಹಿತ್ ಪಡೆ ಪಂದ್ಯ ಗೆದ್ದರೂ ಬೌಲಿಂಗ್ನಲ್ಲಿ ಸೋತಿದೆ. ಹೌದು, ಬಲಾಡ್ಯವಲ್ಲದ ತಂಡದೆದುರು ಇಂಡಿಯನ್ ಬೌಲರ್ಸ್ ಇನ್ನಿಲ್ಲದಂತೆ ತಿಣುಕಾಡಿ ಬಿಟ್ರು. ಅದ್ಯಾವ ಮಟ್ಟಿಗೆ ಅಂದ್ರೆ ಘಟಾನುಘಟಿ ಬ್ಯಾಟ್ಸ್ಮನ್ಗಳನ್ನ ಗಿರಗಿರನೇ ತಿರುಗಿಸಿದ್ದ ಇಂಡಿಯನ್ ಬೌಲರ್ಸ್ ನಿನ್ನೆ ಮಾತ್ರ ವಿಕೆಟ್ ಪಡೆಯಲು ಏದುಸಿರು ಬಿಟ್ರು..!
ನೆದರ್ರ್ಲೆಂಡ್ಸ್ ವಿರುದ್ಧ ಇಂಡಿಯನ್ ಬೌಲರ್ಸ್..!
ಪವರ್ ಪ್ಲೇ ಸ್ಪೆಷಲಿಸ್ಟ್ ಮೊಹಮ್ಮದ್ ಸಿರಾಜ್ ನಿನ್ನೆ ಹಳೇ ಮೊನಚು ಕಳೆದುಕೊಂಡಿದ್ರು. 6 ಓವರ್ ಬೌಲಿಂಗ್ ಮಾಡಿದ ಸಿರಾಜ್ 29 ರನ್ ನೀಡಿ ಬರೀ 2 ವಿಕೆಟ್ ಕಬಳಿಸಿದ್ರು. ಇನ್ನು ಸ್ವಿಂಗ್ ಮಾಸ್ಟರ್ ಮೊಹಮ್ಮದ್ ಶಮಿ 6 ಬೌಲಿಂಗ್ ಮಾಡಿ 41 ರನ್ ನೀಡಿದ್ರೂ ಒಂದೂ ವಿಕೆಟ್ ಪಡೆಯದೇ ಇದ್ದದ್ದು ಅಚ್ಚರಿ ಮೂಡಿಸ್ತು. ಕುಲ್ದೀಪ್ ಯಾದವ್ 2 ವಿಕೆಟ್ ಕಬಳಿಸಿದ್ರೂ ರನ್ ನೀಡುವಿಕೆಯಲ್ಲಿ ದುಬಾರಿಯಾದ್ರು. ಆಲ್ರೌಂಡರ್ ಜಡೇಜಾ 9 ಬೌಲಿಂಗ್ ಮಾಡಿದ್ರೆ 49 ಬಿಟ್ಟುಕೊಟ್ಟು ಪಡೆದಿದ್ದು 2 ವಿಕೆಟ್ ಮಾತ್ರ.
ಬೌಲರ್ಸ್ ಪರದಾಟಕ್ಕೆ ಬೇಸತ್ತ ಕ್ಯಾಪ್ಟನ್ ರೋಹಿತ್..!
ವಿಕೆಟ್ ಪಡೆಯಲು ಬೌಲರ್ಸ್ ತಿಣುಕಾಟ ನಡೆಸಿದ್ದು ಕ್ಯಾಪ್ಟನ್ ರೋಹಿತ್ ಶರ್ಮಾರನ್ನ ಫ್ರಸ್ಟ್ರೇಶನ್ಗೆ ಒಳಗಾಗುವಂತೆ ಮಾಡಿತು. ಪದೇ ಪದೇ ಚೇಂಜ್ ಮಾಡಿದ್ರೂ ಕ್ಯಾಪ್ಟನ್ ತಂತ್ರ ಕೈಕೊಡ್ತು. ಆ ಬೇಸರ ರೋಹಿತ್ರ ಎಕ್ಸ್ಪ್ರೆಶನ್ ಹಾಗೂ ಕಳಪೆ ಫೀಲ್ಡಿಂಗ್ನಲ್ಲಿ ಕಂಡು ಬಂತು.
ಒಟ್ಟಿನಲ್ಲಿ 8 ಪಂದ್ಯದಲ್ಲಿ ದಮ್ದಾರ್ ಪರ್ಫಾಮೆನ್ಸ್ ನೀಡಿದ್ದ ಇಂಡಿಯನ್ ಬೌಲರ್ಸ್ ನಿನ್ನೆ ಮಾತ್ರ ಡಚ್ಚರ ವಿರುದ್ಧ ಪರದಾಡಿದ್ರು. ಸೆಮಿಸ್ ಟಿಕೆಟ್ ಆಲ್ರೆಡಿ ಫಿಕ್ಸ್ ಆಗಿದೆ. ಈ ಅತಿಯಾದ ಆತ್ಮವಿಶ್ವಾಸ ಬೌಲರ್ಗಳ ಫೈರಿ ಸ್ಪೆಷಲ್ ಮಾಯವಾಗುಂತೆ ಮಾಡಿದೆ. ಆದ್ರೆ ಸೆಮಿಸ್ ಬ್ಯಾಟಲ್ನಲ್ಲಿ ಕಿವೀಸ್ನಂತ ಬಲಿಷ್ಠ ತಂಡವನ್ನ ಬಗ್ಗುಬಡಿಯಬೇಕಾದ್ರೆ ನೆಗ್ಲಿಜೆನ್ಸ್ ಮೂಡ್ನಿಂದ ಹೊರಬರಲೇಬೇಕಿದೆ.
ಡೆಡ್ಲಿ ಬೌಲಿಂಗ್ ಅಟ್ಯಾಕ್ ತಂಡಕ್ಕೆ ಇದೇನಾಯ್ತು..?
ಲೀಗ್ ಫೈನಲ್ ಮ್ಯಾಚ್ನಲ್ಲಿ ಫೈರಿ ಸ್ಪೆಲ್ ಮಾಯ..!
ನೆದರ್ರ್ಲೆಂಡ್ಸ್ ವಿರುದ್ಧದ ಪರದಾಟಕ್ಕೆ ಕಾರಣವೇನು..?
ದಕ್ಷಿಣ ಆಫ್ರಿಕಾ 83 ರನ್ಗಳಿಗೆ ಆಲೌಟ್, ಶ್ರೀಲಂಕಾ 55 ರನ್ಗೆ ಆಟ ಕ್ಲೋಸ್, ಇಂಗ್ಲೆಂಡ್ 129 ರನ್ಗೆ ಸರ್ವಪತನ, ಪಾಕಿಸ್ತಾನ 192 ರನ್ಗಳಿಗೆ ಉಡೀಸ್. ವಿಶ್ವಕಪ್ನಲ್ಲಿ ಟೀಮ್ ಇಂಡಿಯಾದ ಬೆಂಕಿ ಬಿರುಗಾಳಿಗೆ ಬಲಿಷ್ಠ ತಂಡಗಳು ತತ್ತರಿಸಿದ ಪರಿ ಇದು. ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಇಂಗ್ಲೆಂಡ್ ಹಾಗೂ ಪಾಕಿಸ್ತಾನ, ಭಾರತದ ಡೆಡ್ಲಿ ಸ್ಪೆಲ್ಗೆ ಬೆಚ್ಚಿ ಬಿದ್ದಿತ್ತು. ಅದ್ಯಾವ ಮಟ್ಟಿಗೆ ಅಂದ್ರೆ ಈ ಎಲ್ಲಾ ತಂಡಗಳ ವಿರುದ್ಧ ಏಕಪಕ್ಷೀಯವಾಗಿ ಗೆದ್ದು ಬೌಲಿಂಗ್ ಪರಾಕ್ರಮ ಮೆರೆದಿತ್ತು.
8 ಪಂದ್ಯ ಒಕೆ..9ನೇ ಮ್ಯಾಚ್ನಲ್ಲಿ ಹೀಗ್ಯಾಕೆ..?
ಮೊದಲ 8 ಪಂದ್ಯಗಳಲ್ಲಿ ಜಬರ್ದಸ್ತ್ ಬೌಲಿಂಗ್ ಮಾಡಿ ಇಂಡಿಯನ್ ಕಲಿಗಳು ಸೈ ಅನ್ನಿಸಿಕೊಂಡಿದ್ರು. ಅಂತಹದೇ ಮತ್ತೊಂದು ಫೈರಿ ಬೌಲಿಂಗ್ ಸ್ಪೆಲ್ ನಿನ್ನೆ ಮೂಡಿ ಬರುತ್ತೆ ಎಂದು ಎಲ್ಲರೂ ಭಾವಿಸಿದ್ರು. ಯಾಕಂದ್ರೆ ಮೊದಲ ಎಂಟು ಟೀಮ್ಸ್ಗೆ ಹೋಲಿಸಿದ್ರೆ ನೆದರ್ರ್ಲೆಂಡ್ಸ್ ಡಮ್ಮಿ. ಆದರೆ ಚಿನ್ನಸ್ವಾಮಿಯಲ್ಲಿ ಮೈದಾನದಲ್ಲಿ ನಡೆದಿದ್ದೇ ಬೇರೆ.
ಪಂದ್ಯ ಗೆದ್ರೂ ಬೌಲಿಂಗ್ನಲ್ಲಿ ತಿಣುಕಾಟ..!
ನೆದರ್ರ್ಲೆಂಡ್ಸ್ ವಿರುದ್ಧ 160 ರನ್ಗಳಿಂದ ಗೆದ್ದು ಬೀಗ್ತು..ಅನ್ಬೀಟನ್ ಅನ್ನೋ ಟ್ಯಾಗ್ಲೈನ್ ಕಂಟಿನ್ಯೂ ಆಯ್ತು. ಎಲ್ಲವೂ ಸರಿ, ಆದರೆ ರೋಹಿತ್ ಪಡೆ ಪಂದ್ಯ ಗೆದ್ದರೂ ಬೌಲಿಂಗ್ನಲ್ಲಿ ಸೋತಿದೆ. ಹೌದು, ಬಲಾಡ್ಯವಲ್ಲದ ತಂಡದೆದುರು ಇಂಡಿಯನ್ ಬೌಲರ್ಸ್ ಇನ್ನಿಲ್ಲದಂತೆ ತಿಣುಕಾಡಿ ಬಿಟ್ರು. ಅದ್ಯಾವ ಮಟ್ಟಿಗೆ ಅಂದ್ರೆ ಘಟಾನುಘಟಿ ಬ್ಯಾಟ್ಸ್ಮನ್ಗಳನ್ನ ಗಿರಗಿರನೇ ತಿರುಗಿಸಿದ್ದ ಇಂಡಿಯನ್ ಬೌಲರ್ಸ್ ನಿನ್ನೆ ಮಾತ್ರ ವಿಕೆಟ್ ಪಡೆಯಲು ಏದುಸಿರು ಬಿಟ್ರು..!
ನೆದರ್ರ್ಲೆಂಡ್ಸ್ ವಿರುದ್ಧ ಇಂಡಿಯನ್ ಬೌಲರ್ಸ್..!
ಪವರ್ ಪ್ಲೇ ಸ್ಪೆಷಲಿಸ್ಟ್ ಮೊಹಮ್ಮದ್ ಸಿರಾಜ್ ನಿನ್ನೆ ಹಳೇ ಮೊನಚು ಕಳೆದುಕೊಂಡಿದ್ರು. 6 ಓವರ್ ಬೌಲಿಂಗ್ ಮಾಡಿದ ಸಿರಾಜ್ 29 ರನ್ ನೀಡಿ ಬರೀ 2 ವಿಕೆಟ್ ಕಬಳಿಸಿದ್ರು. ಇನ್ನು ಸ್ವಿಂಗ್ ಮಾಸ್ಟರ್ ಮೊಹಮ್ಮದ್ ಶಮಿ 6 ಬೌಲಿಂಗ್ ಮಾಡಿ 41 ರನ್ ನೀಡಿದ್ರೂ ಒಂದೂ ವಿಕೆಟ್ ಪಡೆಯದೇ ಇದ್ದದ್ದು ಅಚ್ಚರಿ ಮೂಡಿಸ್ತು. ಕುಲ್ದೀಪ್ ಯಾದವ್ 2 ವಿಕೆಟ್ ಕಬಳಿಸಿದ್ರೂ ರನ್ ನೀಡುವಿಕೆಯಲ್ಲಿ ದುಬಾರಿಯಾದ್ರು. ಆಲ್ರೌಂಡರ್ ಜಡೇಜಾ 9 ಬೌಲಿಂಗ್ ಮಾಡಿದ್ರೆ 49 ಬಿಟ್ಟುಕೊಟ್ಟು ಪಡೆದಿದ್ದು 2 ವಿಕೆಟ್ ಮಾತ್ರ.
ಬೌಲರ್ಸ್ ಪರದಾಟಕ್ಕೆ ಬೇಸತ್ತ ಕ್ಯಾಪ್ಟನ್ ರೋಹಿತ್..!
ವಿಕೆಟ್ ಪಡೆಯಲು ಬೌಲರ್ಸ್ ತಿಣುಕಾಟ ನಡೆಸಿದ್ದು ಕ್ಯಾಪ್ಟನ್ ರೋಹಿತ್ ಶರ್ಮಾರನ್ನ ಫ್ರಸ್ಟ್ರೇಶನ್ಗೆ ಒಳಗಾಗುವಂತೆ ಮಾಡಿತು. ಪದೇ ಪದೇ ಚೇಂಜ್ ಮಾಡಿದ್ರೂ ಕ್ಯಾಪ್ಟನ್ ತಂತ್ರ ಕೈಕೊಡ್ತು. ಆ ಬೇಸರ ರೋಹಿತ್ರ ಎಕ್ಸ್ಪ್ರೆಶನ್ ಹಾಗೂ ಕಳಪೆ ಫೀಲ್ಡಿಂಗ್ನಲ್ಲಿ ಕಂಡು ಬಂತು.
ಒಟ್ಟಿನಲ್ಲಿ 8 ಪಂದ್ಯದಲ್ಲಿ ದಮ್ದಾರ್ ಪರ್ಫಾಮೆನ್ಸ್ ನೀಡಿದ್ದ ಇಂಡಿಯನ್ ಬೌಲರ್ಸ್ ನಿನ್ನೆ ಮಾತ್ರ ಡಚ್ಚರ ವಿರುದ್ಧ ಪರದಾಡಿದ್ರು. ಸೆಮಿಸ್ ಟಿಕೆಟ್ ಆಲ್ರೆಡಿ ಫಿಕ್ಸ್ ಆಗಿದೆ. ಈ ಅತಿಯಾದ ಆತ್ಮವಿಶ್ವಾಸ ಬೌಲರ್ಗಳ ಫೈರಿ ಸ್ಪೆಷಲ್ ಮಾಯವಾಗುಂತೆ ಮಾಡಿದೆ. ಆದ್ರೆ ಸೆಮಿಸ್ ಬ್ಯಾಟಲ್ನಲ್ಲಿ ಕಿವೀಸ್ನಂತ ಬಲಿಷ್ಠ ತಂಡವನ್ನ ಬಗ್ಗುಬಡಿಯಬೇಕಾದ್ರೆ ನೆಗ್ಲಿಜೆನ್ಸ್ ಮೂಡ್ನಿಂದ ಹೊರಬರಲೇಬೇಕಿದೆ.