Advertisment

ಸೋಲಿಲ್ಲದ ಸರದಾರ.. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದ ಕಾಳಿ ಇನ್ನಿಲ್ಲ; ಅಭಿಮಾನಿಗಳ ಕಂಬನಿ

author-image
Veena Gangani
Updated On
ಸೋಲಿಲ್ಲದ ಸರದಾರ.. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದ ಕಾಳಿ ಇನ್ನಿಲ್ಲ; ಅಭಿಮಾನಿಗಳ ಕಂಬನಿ
Advertisment
  • ಮನೆ ಮಗನಂತೆ ಟಗರಿಗೆ ಅಂತ್ಯಸಂಸ್ಕಾರ ಮಾಡಿದ್ದ ಮಾಲೀಕ
  • ಕಾಳಿಗೆ 10 ಲಕ್ಷ ಕೊಡುವುದಾಗಿ ಕೇಳಿದ್ರು ಕಾಳಿಯನ್ನ ಮಾರಿಲ್ಲ
  • ಹೋದ ಕಡೆ ಸೋಲೆ ಕಾಣದ ಮೆರೆದಿದ್ದ ಬೆಳ್ಳೂಡಿ ಕಾಳಿ ಟಗರು

ದಾವಣಗೆರೆ: ಅದು ಅಂತಿಂಥಾ ಟಗರಲ್ಲ, ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಟಗರು. ಆದ್ರೆ, ಅದೇ ಟಗರಿನ ಅಗಲಿಕೆಯಿಂದ ಇದೀಗ ಇಡೀ ಗ್ರಾಮದಲ್ಲಿ ಮೌನ ಆವರಿಸಿದೆ.

Advertisment

ಇದನ್ನೂ ಓದಿ: BBK11: ಬಿಗ್​ಬಾಸ್​ ಮನೆಯಿಂದ ಆಚೆ ಬಂದ ಧರ್ಮನಿಗೆ ತಂದೆಯಿಂದ ಹೆಮ್ಮೆಯ ಮಾತು; ಹೇಳಿದ್ದೇನು?

publive-image

ಹೌದು, ಹರಿಹರ ತಾಲೂಕಿನ ಬೆಳ್ಳೂಡಿ ಗ್ರಾಮದ ರಘು ಎಂಬುವವರಿಗೆ ಸೇರಿದ ಕಾಳಿ ಟಗರು ಅನಾರೋಗ್ಯದಿಂದ ಬಳಲಿ ಸಾವನ್ನಪ್ಪಿದೆ. ಈ ಕಾಳಿ ಟಗರು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿತ್ತು. 8 ವರ್ಷಗಳಿಂದ ಸೋಲಿಲ್ಲದ ಸರದಾರನಾಗಿ ಟಗರು ಮೆರೆದಿತ್ತು. ಹೋದ ಕಡೆ ಸೋಲನ್ನೇ ಕಾಣದ ಟಗರು, ಎರಡು ಬುಲೆಟ್ ಸೇರಿದಂತೆ 6 ಬೈಕ್​​ ಗೆದ್ದಿತ್ತು.

publive-image

ವಿಶೇಷ ಅಂದ್ರೆ ಕಾಳಿಗೆ 10 ಲಕ್ಷ ಕೊಡುವುದಾಗಿ ಕೇಳಿದ್ರು ಕಾಳಿಯನ್ನ ಮಾರಿರಲಿಲ್ಲ. ಇದೀಗ ಇದೇ ಕಾಳಿ ಟಗರು ಅನಾರೋಗ್ಯದಿಂದ ಬಳಲಿ ಸಾವನ್ನಪ್ಪಿದೆ. ರಾಜ್ಯಾದ್ಯಂತ ಸಾವಿರಾರು ಅಭಿಮಾನಿಗಳನ್ನು ಅಗಲಿದೆ. ಇನ್ನು ಈ ಟಗರಿನ ಮಾಲೀಕ ರಘು ಮನೆ ಮಗನಂತಿದ್ದ ಟಗರಿಗೆ ಅಂತ್ಯಸಂಸ್ಕಾರ ಮಾಡಿದ್ದಾರೆ. ಇನ್ನೈ ಕಾಳಿ ಟಗರು ಸಾವಿಗೆ ಗ್ರಾಮದ ಜನರು ಸಂತಾಪ ಸೂಚಿಸಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment