ಬಂದ್ರೆ ಕೋಟಿ.. ಕೋಟಿ... ಯಾಮಾರಿದ್ರೆ ಟಾಟಾ ಬೈ ಬೈ..!
ಬ್ಯಾಕ್ ಟು ಬ್ಯಾಕ್ ಪಂದ್ಯ, ರೆಸ್ಟ್ ಬಗ್ಗೆ ಕೇಳಂಗಿಲ್ಲ..!
ಯಾಮಾರಿದ್ರೆ ಬ್ಯಾಂಕ್ ಬ್ಯಾಲೆನ್ಸ್ ಬೀಳುತ್ತೆ ಗುನ್ನ..!
ಇಂಡಿಯನ್ ಪ್ರೀಮಿಯರ್ ಲೀಗ್, ಮುಕ್ತಾಯದ ಹಂತ ತಲುಪಿದೆ. ಇನ್ನು ಕೇವಲ 2 ಪಂದ್ಯಗಳು ಮಾತ್ರ ಬಾಕಿ ಉಳಿದಿದ್ದು, ಯಾವ ತಂಡ ಕಪ್ ಗೆಲ್ಲುತ್ತೆ ಅನ್ನೋ ಪ್ರಿಡಿಕ್ಷನ್ಗಳು ಜೋರಾಗಿವೆ. ಈ ಅಬ್ಬರದ ನಡುವೆ ಹಲ ಆಟಗಾರರ ಭವಿಷ್ಯ ಸೈಲೆಂಟ್ ಆಗೇ ಮುಗಿದೇ ಹೋಗೋ ಹಂತ ತಲುಪಿದೆ. ಇದು ಭರ್ಜರಿ ಎಂಟರ್ಟೈನ್ಮೆಂಟ್ ನೀಡಿ ರಂಜಿಸೋ ಕಲರ್ ಫುಲ್ ಲೀಗ್ನ ಇನ್ನೊಂದು ಮುಖ.!
ಬಂದ್ರೆ ಕೋಟಿ.. ಕೋಟಿ… ಯಾಮಾರಿದ್ರೆ ಟಾಟಾ ಬೈ ಬೈ..!
ಐಪಿಎಲ್ ಆಡಿದ್ರೆ ಕೋಟಿ ಕೋಟಿ ದುಡ್ಡು ಬರುತ್ತೆ. ಇದ್ರಲ್ಲಿ ನೋ ಡೌಟ್..! ಫ್ರಾಂಚೈಸಿಗಳು ಆಟಗಾರರ ಮೇಲೆ ಕೋಟಿ ಕೋಟಿ ಹಣ ಸುರಿಯುತ್ವೆ. ಏನೋ ಆಗಿದ್ದ ಪ್ಲೇಯರ್ಸ್ ರಾತ್ರೋ ರಾತ್ರಿ ಶ್ರೀಮಂತರಾಗ್ತಾರೆ. ಜಿಂದಗಿನೇ ಬದಲ್ಗಯಾ ಅಂತಾರೆ. ಆದ್ರೆ, ಇದೆಲ್ಲದರ ಜೊತೆ ರಿಸ್ಕ್ ಕೂಡ ಫ್ರಿ ಆಗೇ ಬಂದಿರುತ್ತೆ, ಸ್ವಲ್ಪ ಯಾಮಾರಿದ್ರೂ ಕರಿಯರ್ ಖತಃ ಆಗಿಬಿಡುತ್ತೆ ಗೊತ್ತಾ.?
ಬ್ಯಾಕ್ ಟು ಬ್ಯಾಕ್ ಪಂದ್ಯ, ರೆಸ್ಟ್ ಬಗ್ಗೆ ಕೇಳಂಗಿಲ್ಲ..!
ಹೌದು… ಅಭಿಮಾನಿಗಳ ಪಾಲಿಗೆ ಐಪಿಎಲ್ ಅಂದ್ರೆ, 2 ತಿಂಗಳ ಕಾಲ ಕ್ರಿಕೆಟ್ ಜಾತ್ರೆ. ಸುಮಾರು 2 ತಿಂಗಳ ಕಾಲ ಎಂಟರ್ಟೈನ್ಮೆಂಟ್ ಮಿಸ್ಸೇ ಇಲ್ಲ. ಆದ್ರೆ, ಇದೇ ವೇಳೆ ಪ್ಲೇಯರ್ಸ್ ಬ್ಯಾಕ್ ಟು ಬ್ಯಾಕ್ ಪಂದ್ಯಗಳನ್ನಾಡಬೇಕಾಗುತ್ತೆ. ಒಂದು ಪಂದ್ಯವನ್ನಾಡಿದ ಬಳಿಕ, ಪ್ರಾಕ್ಟಿಸ್ ಸೆಷನ್. ಪ್ರಾಕ್ಟಿಸ್ ಸೆಷನ್ ಮುಗಿದ್ರೆ ಮತ್ತೆ ಮ್ಯಾಚ್. ಆಟಗಾರರ 2 ತಿಂಗಳ ರೂಟಿನ್ ಹೀಗೆ ಇರುತ್ತೆ.. ಇದರಿಂದ ದೈಹಿಕ ಆರೋಗ್ಯ ಕುಂದಲಿದೆ. ಈ ಸೀಸನ್ನಲ್ಲಿ ಆಗಿರುವ ಸ್ಟ್ರೆಸ್ ಫ್ರಾಕ್ಚರ್ನ ಪ್ರಕರಣಗಳೇ ಇದಕ್ಕೆ ಬೆಸ್ಟ್ ಎಕ್ಸಾಂಪಲ್.!
ಯಾಮಾರಿದ್ರೆ ಬ್ಯಾಂಕ್ ಬ್ಯಾಲೆನ್ಸ್ ಬೀಳುತ್ತೆ ಗುನ್ನ..!
ಒಂದೆಡೆ ಬ್ಯಾಕ್ ಟು ಬ್ಯಾಕ್ ಪಂದ್ಯಗಳು.. ಇನ್ನೊಂದೆಡೆ ಫ್ಯಾಮಿಲಿ, ರಾಜ್ಯ, ದೇಶಗಳನ್ನ ಬಿಟ್ಟು ಬಂದ ಬೇಸರ ಆಟಗಾರರಲ್ಲಿ ಇರುತ್ತೆ. ಇದರ ಜೊತೆಗೆ ಐಪಿಎಲ್ನಲ್ಲಿ ಪರ್ಫಾಮ್ ಮಾಡಲೇ ಬೇಕಾದ ಒತ್ತಡ ಎಲ್ಲಾ ಪ್ಲೇಯರ್ಸ್ ಮೇಲಿರುತ್ತೆ. ಯಾಕಂದ್ರೆ, ಇಲ್ಲೇನಾದ್ರೂ ಪ್ಲಾಫ್ ಆದ್ರೆ, ಕ್ರಿಕೆಟ್ ಕರಿಯರ್ಗೆ ಕೊನೆ ಮೊಳೆ ಬೀಳಲಿದೆ. ಅಟ್ಟರ್ಪ್ಲಾಫ್ ಆದ್ರಂತೂ ನ್ಯಾಷನಲ್ ಟೀಮ್ನಿಂದ ಹೊರಬೀಳೋದು ಕನ್ಫರ್ಮ್. ಇನ್ನು, ಮತ್ತೆ ಐಪಿಎಲ್ ಕಾಂಟ್ರ್ಯಾಕ್ಟ್ ಸಿಗುತ್ತೆ ಅನ್ನೋದಂತೂ ಹಗಲುಗನಸು..! ಅಲ್ಲಿಗೆ ಬ್ಯಾಂಕ್ ಬ್ಯಾಲೆನ್ಸ್ಗೂ ಗುನ್ನ ಬೀಳೋದು ಪಕ್ಕಾ..!
ಇಂಜುರಿಯಾದ್ರೆ ಕಥೆ ಹರೋ ಹರ.!
ಸತತ ಕ್ರಿಕೆಟ್ ಆಡೋದ್ರಿಂದ ಇಂಜುರಿ ಆಗೋ ಸಾಧ್ಯತೆ ಅತಿ ಹೆಚ್ಚು ಇರುತ್ತೆ. ಅಪ್ಪಿ ತಪ್ಪಿ ಇಂಜುರಿಗೆ ತುತ್ತಾದ್ರೆ, ಮುಗೀತು ಕಥೆ. ಈ ಬಾರಿಯ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿದು ಇಂಜುರಿಗೆ ತುತ್ತಾದ ಜೋಫ್ರಾ ಆರ್ಚರ್, ಮಹತ್ವದ ಆ್ಯಷಸ್ ಟೆಸ್ಟ್ ಸರಣಿಯಿಂದ ಈಗಾಗಲೇ ಹೊರ ಬಿದ್ದಿದ್ದಾರೆ. ಇನ್ನು ಲಕ್ನೋ ತಂಡದ ನಾಯಕನಾಗಿದ್ದ ರಾಹುಲ್, ಸರ್ಜರಿಗೆ ಒಳಗಾಗಿ 6ರಿಂದ 7 ತಿಂಗಳು ಕ್ರಿಕೆಟ್ನಿಂದ ದೂರವಾಗಿದ್ದಾರೆ. ಇದು ಸದ್ಯಕ್ಕಿರೋ ತಾಜಾ ಎಕ್ಸಾಂಪಲ್.
ಒಂದು ಓವರ್, ಒಂದು ಬಾಲ್, ಕ್ಷಣ ಕ್ಷಣಕ್ಕೂ ಆತಂಕ.!
ಐಪಿಎಲ್ ಆಡೋ ಆಟಗಾರರ ಹಣೆ ಬರಹ ಒಂದು ಓವರ್. ಒಂದು ಬಾಲ್. ಒಂದು ಸಿಕ್ಸರ್.. ಕ್ಷಣ ಕ್ಷಣಕ್ಕೂ ಬದಲಾಗುತ್ತೆ. ಜೀರೋ ಆಗಿದ್ದವ ಹೀರೋ ಆಗ್ತಾನೆ. ಅದ್ರ ಜೊತೆಗೆ ಹೀರೋ ಆಗಿದ್ದವನು ಕೂಡ ಜೀರೋ ಆಗ್ತಾನೆ. ಇದಕ್ಕೆ ಈ ಸೀಸನ್ನ ಒಂದು ಓವರ್ನಲ್ಲಿ 5 ಸಿಕ್ಸರ್ ಬಾರಿಸಿ ಹಿರೋ ಆದ ರಿಂಕು ಸಿಂಗ್, ಹೊಡೆಸಿಕೊಂಡು ವಿಲನ್ ಆದ ಯಶ್ ದಯಾಳ್ ಕಥೆಯೇ ಸಾಕ್ಷಿ. ರಿಂಕು ಸಿಂಗ್ ಟೀಮ್ ಇಂಡಿಯಾ ಕದ ತಟ್ತಾ ಇದ್ರೆ, ಪ್ಲಾಫ್ ಶೋ ನೀಡಿದ ಯಶ್ ದಯಾಳ್, ಡಿಪ್ರೆಶನ್ಗೆ ಹೋಗಿ ಒದ್ದಾಡ್ತಿದ್ದಾರೆ.
ಮಾನಸಿಕ ಆರೋಗ್ಯದ ಕಥೆ.. ಅದೊಂದು ವ್ಯಥೆ..!
ಹೌದು..! ಐಪಿಎಲ್ನಲ್ಲಿ ನೀಡೋ ಪ್ರದರ್ಶನ ಭವಿಷ್ಯವನ್ನೇ ನಿರ್ಧರಿಸುತ್ತೆ. ಪ್ಲಾಫ್ ಶೋ ನೀಡಿದ್ರೆ, ಏನಪ್ಪಾ ಕಥೆ ಅನ್ನೋ ಚಿಂತೆಯೇ ಸಾಕು, ಆಟಗಾರರ ಆಟವನ್ನೇ ಹಾಳು ಮಾಡಿಬಿಡುತ್ತೆ. ಭವಿಷ್ಯದ ಅಭದ್ರತೆಗೆ ಸಿಲುಕಿ ಒದ್ದಾಡ್ತಿರುವ ನಮ್ಮ ಮಯಾಂಕ್ ಅಗರ್ವಾಲ್, ಮನೀಷ್ ಪಾಂಡೆ, ದೇವದತ್ ಪಡಿಕ್ಕಲ್ ಆಟವನ್ನ ನೀವೆ ನೋಡಿದ್ದಿರಲ್ವಾ..?
ಇಷ್ಟೇ ಅಲ್ಲ. ಐಪಿಎಲ್ನಿಂದ ಆಗೋ ನೆಗೆಟಿವ್ ಇಂಪ್ಯಾಕ್ಟ್ಗಳ ಲಿಸ್ಟ್ ಇನ್ನೂ ದೊಡ್ಡದಿದೆ. ಇತ್ತೀಚೆಗಂತೂ ಒಂದೇ ಒಂದು ಪ್ಲಾಫ್ ಶೋ ನೀಡಿದ್ರೆ ಸಾಕು. ಆಟಗಾರರನ್ನ ಗುರಿಯಾಗಿಸಿ ಮಾಡೋ ಟ್ರೋಲ್ಗಳು, ಟೀಕೆಗಳಂತೂ ಇದಕ್ಕೆ ಇನ್ನಷ್ಟು ಕುಗ್ಗಿಸ್ತವೆ. ಹೀಗಾಗಿ ಈ ವಿಚಾರದಲ್ಲಿ ಅಭಿಮಾನಿಗಳೂ ಕೂಡ ಜವಾಬ್ದಾರಿಯನ್ನ ಅರಿಯಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಬಂದ್ರೆ ಕೋಟಿ.. ಕೋಟಿ... ಯಾಮಾರಿದ್ರೆ ಟಾಟಾ ಬೈ ಬೈ..!
ಬ್ಯಾಕ್ ಟು ಬ್ಯಾಕ್ ಪಂದ್ಯ, ರೆಸ್ಟ್ ಬಗ್ಗೆ ಕೇಳಂಗಿಲ್ಲ..!
ಯಾಮಾರಿದ್ರೆ ಬ್ಯಾಂಕ್ ಬ್ಯಾಲೆನ್ಸ್ ಬೀಳುತ್ತೆ ಗುನ್ನ..!
ಇಂಡಿಯನ್ ಪ್ರೀಮಿಯರ್ ಲೀಗ್, ಮುಕ್ತಾಯದ ಹಂತ ತಲುಪಿದೆ. ಇನ್ನು ಕೇವಲ 2 ಪಂದ್ಯಗಳು ಮಾತ್ರ ಬಾಕಿ ಉಳಿದಿದ್ದು, ಯಾವ ತಂಡ ಕಪ್ ಗೆಲ್ಲುತ್ತೆ ಅನ್ನೋ ಪ್ರಿಡಿಕ್ಷನ್ಗಳು ಜೋರಾಗಿವೆ. ಈ ಅಬ್ಬರದ ನಡುವೆ ಹಲ ಆಟಗಾರರ ಭವಿಷ್ಯ ಸೈಲೆಂಟ್ ಆಗೇ ಮುಗಿದೇ ಹೋಗೋ ಹಂತ ತಲುಪಿದೆ. ಇದು ಭರ್ಜರಿ ಎಂಟರ್ಟೈನ್ಮೆಂಟ್ ನೀಡಿ ರಂಜಿಸೋ ಕಲರ್ ಫುಲ್ ಲೀಗ್ನ ಇನ್ನೊಂದು ಮುಖ.!
ಬಂದ್ರೆ ಕೋಟಿ.. ಕೋಟಿ… ಯಾಮಾರಿದ್ರೆ ಟಾಟಾ ಬೈ ಬೈ..!
ಐಪಿಎಲ್ ಆಡಿದ್ರೆ ಕೋಟಿ ಕೋಟಿ ದುಡ್ಡು ಬರುತ್ತೆ. ಇದ್ರಲ್ಲಿ ನೋ ಡೌಟ್..! ಫ್ರಾಂಚೈಸಿಗಳು ಆಟಗಾರರ ಮೇಲೆ ಕೋಟಿ ಕೋಟಿ ಹಣ ಸುರಿಯುತ್ವೆ. ಏನೋ ಆಗಿದ್ದ ಪ್ಲೇಯರ್ಸ್ ರಾತ್ರೋ ರಾತ್ರಿ ಶ್ರೀಮಂತರಾಗ್ತಾರೆ. ಜಿಂದಗಿನೇ ಬದಲ್ಗಯಾ ಅಂತಾರೆ. ಆದ್ರೆ, ಇದೆಲ್ಲದರ ಜೊತೆ ರಿಸ್ಕ್ ಕೂಡ ಫ್ರಿ ಆಗೇ ಬಂದಿರುತ್ತೆ, ಸ್ವಲ್ಪ ಯಾಮಾರಿದ್ರೂ ಕರಿಯರ್ ಖತಃ ಆಗಿಬಿಡುತ್ತೆ ಗೊತ್ತಾ.?
ಬ್ಯಾಕ್ ಟು ಬ್ಯಾಕ್ ಪಂದ್ಯ, ರೆಸ್ಟ್ ಬಗ್ಗೆ ಕೇಳಂಗಿಲ್ಲ..!
ಹೌದು… ಅಭಿಮಾನಿಗಳ ಪಾಲಿಗೆ ಐಪಿಎಲ್ ಅಂದ್ರೆ, 2 ತಿಂಗಳ ಕಾಲ ಕ್ರಿಕೆಟ್ ಜಾತ್ರೆ. ಸುಮಾರು 2 ತಿಂಗಳ ಕಾಲ ಎಂಟರ್ಟೈನ್ಮೆಂಟ್ ಮಿಸ್ಸೇ ಇಲ್ಲ. ಆದ್ರೆ, ಇದೇ ವೇಳೆ ಪ್ಲೇಯರ್ಸ್ ಬ್ಯಾಕ್ ಟು ಬ್ಯಾಕ್ ಪಂದ್ಯಗಳನ್ನಾಡಬೇಕಾಗುತ್ತೆ. ಒಂದು ಪಂದ್ಯವನ್ನಾಡಿದ ಬಳಿಕ, ಪ್ರಾಕ್ಟಿಸ್ ಸೆಷನ್. ಪ್ರಾಕ್ಟಿಸ್ ಸೆಷನ್ ಮುಗಿದ್ರೆ ಮತ್ತೆ ಮ್ಯಾಚ್. ಆಟಗಾರರ 2 ತಿಂಗಳ ರೂಟಿನ್ ಹೀಗೆ ಇರುತ್ತೆ.. ಇದರಿಂದ ದೈಹಿಕ ಆರೋಗ್ಯ ಕುಂದಲಿದೆ. ಈ ಸೀಸನ್ನಲ್ಲಿ ಆಗಿರುವ ಸ್ಟ್ರೆಸ್ ಫ್ರಾಕ್ಚರ್ನ ಪ್ರಕರಣಗಳೇ ಇದಕ್ಕೆ ಬೆಸ್ಟ್ ಎಕ್ಸಾಂಪಲ್.!
ಯಾಮಾರಿದ್ರೆ ಬ್ಯಾಂಕ್ ಬ್ಯಾಲೆನ್ಸ್ ಬೀಳುತ್ತೆ ಗುನ್ನ..!
ಒಂದೆಡೆ ಬ್ಯಾಕ್ ಟು ಬ್ಯಾಕ್ ಪಂದ್ಯಗಳು.. ಇನ್ನೊಂದೆಡೆ ಫ್ಯಾಮಿಲಿ, ರಾಜ್ಯ, ದೇಶಗಳನ್ನ ಬಿಟ್ಟು ಬಂದ ಬೇಸರ ಆಟಗಾರರಲ್ಲಿ ಇರುತ್ತೆ. ಇದರ ಜೊತೆಗೆ ಐಪಿಎಲ್ನಲ್ಲಿ ಪರ್ಫಾಮ್ ಮಾಡಲೇ ಬೇಕಾದ ಒತ್ತಡ ಎಲ್ಲಾ ಪ್ಲೇಯರ್ಸ್ ಮೇಲಿರುತ್ತೆ. ಯಾಕಂದ್ರೆ, ಇಲ್ಲೇನಾದ್ರೂ ಪ್ಲಾಫ್ ಆದ್ರೆ, ಕ್ರಿಕೆಟ್ ಕರಿಯರ್ಗೆ ಕೊನೆ ಮೊಳೆ ಬೀಳಲಿದೆ. ಅಟ್ಟರ್ಪ್ಲಾಫ್ ಆದ್ರಂತೂ ನ್ಯಾಷನಲ್ ಟೀಮ್ನಿಂದ ಹೊರಬೀಳೋದು ಕನ್ಫರ್ಮ್. ಇನ್ನು, ಮತ್ತೆ ಐಪಿಎಲ್ ಕಾಂಟ್ರ್ಯಾಕ್ಟ್ ಸಿಗುತ್ತೆ ಅನ್ನೋದಂತೂ ಹಗಲುಗನಸು..! ಅಲ್ಲಿಗೆ ಬ್ಯಾಂಕ್ ಬ್ಯಾಲೆನ್ಸ್ಗೂ ಗುನ್ನ ಬೀಳೋದು ಪಕ್ಕಾ..!
ಇಂಜುರಿಯಾದ್ರೆ ಕಥೆ ಹರೋ ಹರ.!
ಸತತ ಕ್ರಿಕೆಟ್ ಆಡೋದ್ರಿಂದ ಇಂಜುರಿ ಆಗೋ ಸಾಧ್ಯತೆ ಅತಿ ಹೆಚ್ಚು ಇರುತ್ತೆ. ಅಪ್ಪಿ ತಪ್ಪಿ ಇಂಜುರಿಗೆ ತುತ್ತಾದ್ರೆ, ಮುಗೀತು ಕಥೆ. ಈ ಬಾರಿಯ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿದು ಇಂಜುರಿಗೆ ತುತ್ತಾದ ಜೋಫ್ರಾ ಆರ್ಚರ್, ಮಹತ್ವದ ಆ್ಯಷಸ್ ಟೆಸ್ಟ್ ಸರಣಿಯಿಂದ ಈಗಾಗಲೇ ಹೊರ ಬಿದ್ದಿದ್ದಾರೆ. ಇನ್ನು ಲಕ್ನೋ ತಂಡದ ನಾಯಕನಾಗಿದ್ದ ರಾಹುಲ್, ಸರ್ಜರಿಗೆ ಒಳಗಾಗಿ 6ರಿಂದ 7 ತಿಂಗಳು ಕ್ರಿಕೆಟ್ನಿಂದ ದೂರವಾಗಿದ್ದಾರೆ. ಇದು ಸದ್ಯಕ್ಕಿರೋ ತಾಜಾ ಎಕ್ಸಾಂಪಲ್.
ಒಂದು ಓವರ್, ಒಂದು ಬಾಲ್, ಕ್ಷಣ ಕ್ಷಣಕ್ಕೂ ಆತಂಕ.!
ಐಪಿಎಲ್ ಆಡೋ ಆಟಗಾರರ ಹಣೆ ಬರಹ ಒಂದು ಓವರ್. ಒಂದು ಬಾಲ್. ಒಂದು ಸಿಕ್ಸರ್.. ಕ್ಷಣ ಕ್ಷಣಕ್ಕೂ ಬದಲಾಗುತ್ತೆ. ಜೀರೋ ಆಗಿದ್ದವ ಹೀರೋ ಆಗ್ತಾನೆ. ಅದ್ರ ಜೊತೆಗೆ ಹೀರೋ ಆಗಿದ್ದವನು ಕೂಡ ಜೀರೋ ಆಗ್ತಾನೆ. ಇದಕ್ಕೆ ಈ ಸೀಸನ್ನ ಒಂದು ಓವರ್ನಲ್ಲಿ 5 ಸಿಕ್ಸರ್ ಬಾರಿಸಿ ಹಿರೋ ಆದ ರಿಂಕು ಸಿಂಗ್, ಹೊಡೆಸಿಕೊಂಡು ವಿಲನ್ ಆದ ಯಶ್ ದಯಾಳ್ ಕಥೆಯೇ ಸಾಕ್ಷಿ. ರಿಂಕು ಸಿಂಗ್ ಟೀಮ್ ಇಂಡಿಯಾ ಕದ ತಟ್ತಾ ಇದ್ರೆ, ಪ್ಲಾಫ್ ಶೋ ನೀಡಿದ ಯಶ್ ದಯಾಳ್, ಡಿಪ್ರೆಶನ್ಗೆ ಹೋಗಿ ಒದ್ದಾಡ್ತಿದ್ದಾರೆ.
ಮಾನಸಿಕ ಆರೋಗ್ಯದ ಕಥೆ.. ಅದೊಂದು ವ್ಯಥೆ..!
ಹೌದು..! ಐಪಿಎಲ್ನಲ್ಲಿ ನೀಡೋ ಪ್ರದರ್ಶನ ಭವಿಷ್ಯವನ್ನೇ ನಿರ್ಧರಿಸುತ್ತೆ. ಪ್ಲಾಫ್ ಶೋ ನೀಡಿದ್ರೆ, ಏನಪ್ಪಾ ಕಥೆ ಅನ್ನೋ ಚಿಂತೆಯೇ ಸಾಕು, ಆಟಗಾರರ ಆಟವನ್ನೇ ಹಾಳು ಮಾಡಿಬಿಡುತ್ತೆ. ಭವಿಷ್ಯದ ಅಭದ್ರತೆಗೆ ಸಿಲುಕಿ ಒದ್ದಾಡ್ತಿರುವ ನಮ್ಮ ಮಯಾಂಕ್ ಅಗರ್ವಾಲ್, ಮನೀಷ್ ಪಾಂಡೆ, ದೇವದತ್ ಪಡಿಕ್ಕಲ್ ಆಟವನ್ನ ನೀವೆ ನೋಡಿದ್ದಿರಲ್ವಾ..?
ಇಷ್ಟೇ ಅಲ್ಲ. ಐಪಿಎಲ್ನಿಂದ ಆಗೋ ನೆಗೆಟಿವ್ ಇಂಪ್ಯಾಕ್ಟ್ಗಳ ಲಿಸ್ಟ್ ಇನ್ನೂ ದೊಡ್ಡದಿದೆ. ಇತ್ತೀಚೆಗಂತೂ ಒಂದೇ ಒಂದು ಪ್ಲಾಫ್ ಶೋ ನೀಡಿದ್ರೆ ಸಾಕು. ಆಟಗಾರರನ್ನ ಗುರಿಯಾಗಿಸಿ ಮಾಡೋ ಟ್ರೋಲ್ಗಳು, ಟೀಕೆಗಳಂತೂ ಇದಕ್ಕೆ ಇನ್ನಷ್ಟು ಕುಗ್ಗಿಸ್ತವೆ. ಹೀಗಾಗಿ ಈ ವಿಚಾರದಲ್ಲಿ ಅಭಿಮಾನಿಗಳೂ ಕೂಡ ಜವಾಬ್ದಾರಿಯನ್ನ ಅರಿಯಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ