newsfirstkannada.com

ಚಂದ್ರನ ಅಂಗಳದಲ್ಲಿ ಇಸ್ರೋದ ಮತ್ತೊಂದು ಪ್ರಯೋಗ ಯಶಸ್ವಿ.. ಏನದು..?

Share :

05-09-2023

    ಚಂದ್ರನಲ್ಲಿ ಬೆಳಕಿನ ನಂತರ ಮತ್ತೆ ಕಾರ್ಯಾಚರಣೆಗೆ ಪೂರ್ವ ತಯಾರಿ

    ಶಿವಶಕ್ತಿ ಪಾಯಿಂಟ್​ನಿಂದ ಜಿಗಿದು ವಿಕ್ರಮ್ ಲ್ಯಾಂಡರ್​​ ಸಾಫ್ಟ್​ ಲ್ಯಾಂಡ್​!

    ಭವಿಷ್ಯದಲ್ಲಿ ಮಾನವನನ್ನು ಕಳಿಸಿ ವಾಪಸ್​ ತರುವ ಯೋಜನೆಗೆ ಪೂರಕ

ಭಾರತದ ಹೆಮ್ಮೆಯ ಸಂಸ್ಥೆ ಇಸ್ರೋ, ಚಂದ್ರನ ಅಂಗಳದಲ್ಲಿ ಮತ್ತೊಂದು ಮಹತ್ವದ ಪ್ರಯೋಗವನ್ನು ಯಶಸ್ವಿಗೊಳಿಸಿದೆ. ಶಿವಶಕ್ತಿ ಪಾಯಿಂಟ್​ನಿಂದ ವಿಕ್ರಮ್​ ಲ್ಯಾಂಡರ್​ನ್ನು ಮೇಲಕ್ಕೆ ಹಾರಿಸಿ, ಮತ್ತೊಮ್ಮೆ ಸಾಫ್ಟ್​ ಲ್ಯಾಂಡಿಂಗ್​ ಮಾಡಿಸಲಾಗಿದೆ. ಇದರಿಂದ ಭವಿಷ್ಯದ ಕಾರ್ಯಾಚರಣೆಗಳ ಬಗ್ಗೆ ಇಸ್ರೋ ಹೋಪ್​ನ್ನು ಮತ್ತಷ್ಟು ಹೆಚ್ಚಿಸಿದೆ. ಆಗಸ್ಟ್​ 23 ಇಡೀ ವಿಶ್ವಕ್ಕೆ ಭಾರತ ತನ್ನ ಸಾಧನೆಯನ್ನು ತೋರಿದ ದಿನ. ಚಂದ್ರನ ದಕ್ಷಿಣ ಧ್ರುವದ ಮೇಲೆ ವಿಕ್ರಮ್ ಲ್ಯಾಂಡರ್ ಮೃದುವಾಗಿ ಲ್ಯಾಂಡ್​ ಆಗಿ ಚಂದ್ರಯಾನ 3 ಯಶಸ್ವಿಯಾಗಿತ್ತು. ಸದ್ಯ ಚಂದ್ರನಲ್ಲಿ ಕತ್ತಲು ಆವರಿಸಿದ್ದು, ರೋವರ್​ ಮತ್ತು ವಿಕ್ರಮ್​ನನ್ನು ಸ್ಲೀಪ್​ ಮೋಡ್​ಗೆ ಹಾಕಲಾಗಿದೆ. ಈ ಪ್ರಕ್ರಿಯೆ ನಂತರವೂ ಇಸ್ರೋ ಚಂದ್ರನ ಅಂಗಳದಲ್ಲಿ ಮತ್ತೊಂದು ಮಹತ್ವದ ಪ್ರಯೋಗವನ್ನು ಯಶಸ್ವಿಗೊಳಿಸಿದೆ.

ಚಂದ್ರನ ಅಂಗಳದಲ್ಲಿ ಇಸ್ರೋನ ಮತ್ತೊಂದು ಪ್ರಯೋಗ ಯಶಸ್ವಿ

ಇಸ್ರೋದ ಚಂದ್ರಯಾನ 3 ಯೋಜನೆಯ ವಿಕ್ರಮ್​ ಲ್ಯಾಂಡರ್ ಚಂದ್ರನ ಮೇಲ್ಮೈಯಿಂದ ಸ್ವಲ್ಪ ಮೇಲೆತ್ತಲು ತನ್ನ ಇಂಜಿನ್‌ಗಳನ್ನು ಹಾರಿಸುವ ಹೋಪ್​​ ಪ್ರಯೋಗದ ನಂತರ ಚಂದ್ರನ ಮೇಲೆ ಎರಡನೇ ಯಶಸ್ವಿ ಸಾಫ್ಟ್ ಲ್ಯಾಂಡಿಂಗ್ ಮಾಡಿದೆ. ವಿಕ್ರಮ್ ಲ್ಯಾಂಡರ್ ಇಳಿದ ಶಿವಶಕ್ತಿ ಪಾಯಿಂಟ್​ನಲ್ಲಿ ಸುಮಾರು 40 ಸೆಂಟಿ ಮೀಟರ್ ಎತ್ತರಕ್ಕೆ ಲ್ಯಾಂಡರ್ ಹಾರಿದೆ. ಬಳಿಕ 30 ರಿಂದ 40 ಸೆ.ಮೀ ನಷ್ಟು ಪಕ್ಕಕ್ಕೆ ಸಾಫ್ಟ್​ ಲ್ಯಾಂಡ್ ಆಗುವಲ್ಲಿ ಸಕ್ಸಸ್​ ಆಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಇಸ್ರೋ ವಿಡಿಯೋ ಹಂಚಿಕೊಂಡಿದೆ.

ಭವಿಷ್ಯದಲ್ಲಿ ಮಾನವನನ್ನು ಕಳಿಸಿ ವಾಪಸ್​ ತರುವ ಯೋಜನೆಗೆ ಪೂರಕ

ಕಿಕ್ ಸ್ಟಾರ್ಟ್‌ನಿಂದ ಭವಿಷ್ಯದಲ್ಲಿ ಕಾರ್ಯಾಚರಣೆಗೆ ಸಹಕಾರಿ ಆಗಲಿದೆ. ಚಂದ್ರನಲ್ಲಿ ಬೆಳಕಿನ ನಂತರ ಮತ್ತೆ ಕಾರ್ಯಾಚರಣೆಗೆ ಪೂರ್ವ ತಯಾರಿ ಇದಾಗಿದೆ. ಇನ್ನು ಭವಿಷ್ಯದಲ್ಲಿ ಚಂದ್ರನ ಅಂಗಳಕ್ಕೆ ಮಾನವನನ್ನು ಕಳಿಸಿ ವಾಪಸ್​ ತರುವ ಯೋಜನೆಗೆ ಇದು ಪೂರಕವಾಗಿದೆ. ಸದ್ಯ ವಿಕ್ರಮ್​ ಲ್ಯಾಂಡರ್​ ಇಸ್ರೋ ಆಜ್ಞೆಗಳನ್ನು ಚಾಚು ತಪ್ಪದಂತೆ ಪಾಲಿಸುತ್ತಿದ್ದು. ಯೋಜನೆ ಉದ್ದೇಶಗಳನ್ನು ಮೀರಿದ ಯಶಸ್ಸು ಕಾಣುತ್ತಿದೆ. ವಿಕ್ರಮ್‌ ಲ್ಯಾಂಡರ್‌ನ ಎಲ್ಲ ವ್ಯವಸ್ಥೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಆರೋಗ್ಯಕರವಾಗಿವೆ. ನಿಯೋಜಿತ ರ‍್ಯಾಂಪ್‌, ChaSTE ಮತ್ತು ILSAಗಳನ್ನು ಮಾಡಲಾಗಿತ್ತು. ಪ್ರಯೋಗದ ನಂತರ ಅವುಗಳನ್ನು ಯಶಸ್ವಿಯಾಗಿ ಮರು ನಿಯೋಜಿಸಲಾಗಿದೆ.

ಚಂದ್ರಯಾನ-3 ಕೌಂಟ್​ಡೌನ್ ದನಿಯಾಗಿದ್ದ ಇಸ್ರೋ ವಿಜ್ಞಾನಿ ನಿಧನ

ಭಾರತದ ಸ್ಥಾನಮಾನವನ್ನು ಉತ್ತಂಗಕ್ಕೇರಿಸಿದ ಚಂದ್ರಯಾನ-3 ಉಡಾವಣೆ ಸಮಯದಲ್ಲಿ ಹಿಂದಿನ ಧ್ವನಿಯಾಗಿದ್ದ ವಿಜ್ಞಾನಿ ಕೊನೆಯುಸಿರೆಳೆದಿದ್ದಾರೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ವಿಜ್ಞಾನಿ ವಲರ್ಮತಿ ಅವರು ಚೆನ್ನೈನಲ್ಲಿ ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ. ಚಂದ್ರಯಾನ ಸೇರಿ ಹಲವು ಲಾಂಚ್​ಗಳಿಗೆ ಕೌಂಟ್​ಡೌನ್ ಕೊಡುತ್ತಿದ್ದ ವಿಜ್ಞಾನಿ ವಲರಮತಿ, ಶ್ರೀಹರಿಕೋಟಾದಿಂದ ಲಾಂಚ್ ಆಗಿದ್ದ ಚಂದ್ರಯಾನ-3 ರಾಕೆಟ್ ಲಾಂಚ್​ನಲ್ಲೆ ಕೊಟ್ಟಿದ್ದ ಕೌಂಟ್​ಡೌನ್​ ಇವರ ಕಡೆಯ ದನಿಯಾಗಿದೆ. ಚಂದ್ರಯಾನ-3 ಯೋಜನೆಯ ಯಶಸ್ವಿಯಾಗಿ ಸಾಗಿತ್ತು, ಸೆಪ್ಟೆಂಬರ್​ 22ಕ್ಕೆ ವಿಕ್ರಮ್​ ಮತ್ತು ರೋವರ್​ ಮತ್ತೆ ಕಾರ್ಯಾಚರಣೆ ಶುರು ಮಾಡ್ತಾವಾ ಅನ್ನೋದನ್ನ ಕಾದುನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಂದ್ರನ ಅಂಗಳದಲ್ಲಿ ಇಸ್ರೋದ ಮತ್ತೊಂದು ಪ್ರಯೋಗ ಯಶಸ್ವಿ.. ಏನದು..?

https://newsfirstlive.com/wp-content/uploads/2023/09/chandrayana-10.jpg

    ಚಂದ್ರನಲ್ಲಿ ಬೆಳಕಿನ ನಂತರ ಮತ್ತೆ ಕಾರ್ಯಾಚರಣೆಗೆ ಪೂರ್ವ ತಯಾರಿ

    ಶಿವಶಕ್ತಿ ಪಾಯಿಂಟ್​ನಿಂದ ಜಿಗಿದು ವಿಕ್ರಮ್ ಲ್ಯಾಂಡರ್​​ ಸಾಫ್ಟ್​ ಲ್ಯಾಂಡ್​!

    ಭವಿಷ್ಯದಲ್ಲಿ ಮಾನವನನ್ನು ಕಳಿಸಿ ವಾಪಸ್​ ತರುವ ಯೋಜನೆಗೆ ಪೂರಕ

ಭಾರತದ ಹೆಮ್ಮೆಯ ಸಂಸ್ಥೆ ಇಸ್ರೋ, ಚಂದ್ರನ ಅಂಗಳದಲ್ಲಿ ಮತ್ತೊಂದು ಮಹತ್ವದ ಪ್ರಯೋಗವನ್ನು ಯಶಸ್ವಿಗೊಳಿಸಿದೆ. ಶಿವಶಕ್ತಿ ಪಾಯಿಂಟ್​ನಿಂದ ವಿಕ್ರಮ್​ ಲ್ಯಾಂಡರ್​ನ್ನು ಮೇಲಕ್ಕೆ ಹಾರಿಸಿ, ಮತ್ತೊಮ್ಮೆ ಸಾಫ್ಟ್​ ಲ್ಯಾಂಡಿಂಗ್​ ಮಾಡಿಸಲಾಗಿದೆ. ಇದರಿಂದ ಭವಿಷ್ಯದ ಕಾರ್ಯಾಚರಣೆಗಳ ಬಗ್ಗೆ ಇಸ್ರೋ ಹೋಪ್​ನ್ನು ಮತ್ತಷ್ಟು ಹೆಚ್ಚಿಸಿದೆ. ಆಗಸ್ಟ್​ 23 ಇಡೀ ವಿಶ್ವಕ್ಕೆ ಭಾರತ ತನ್ನ ಸಾಧನೆಯನ್ನು ತೋರಿದ ದಿನ. ಚಂದ್ರನ ದಕ್ಷಿಣ ಧ್ರುವದ ಮೇಲೆ ವಿಕ್ರಮ್ ಲ್ಯಾಂಡರ್ ಮೃದುವಾಗಿ ಲ್ಯಾಂಡ್​ ಆಗಿ ಚಂದ್ರಯಾನ 3 ಯಶಸ್ವಿಯಾಗಿತ್ತು. ಸದ್ಯ ಚಂದ್ರನಲ್ಲಿ ಕತ್ತಲು ಆವರಿಸಿದ್ದು, ರೋವರ್​ ಮತ್ತು ವಿಕ್ರಮ್​ನನ್ನು ಸ್ಲೀಪ್​ ಮೋಡ್​ಗೆ ಹಾಕಲಾಗಿದೆ. ಈ ಪ್ರಕ್ರಿಯೆ ನಂತರವೂ ಇಸ್ರೋ ಚಂದ್ರನ ಅಂಗಳದಲ್ಲಿ ಮತ್ತೊಂದು ಮಹತ್ವದ ಪ್ರಯೋಗವನ್ನು ಯಶಸ್ವಿಗೊಳಿಸಿದೆ.

ಚಂದ್ರನ ಅಂಗಳದಲ್ಲಿ ಇಸ್ರೋನ ಮತ್ತೊಂದು ಪ್ರಯೋಗ ಯಶಸ್ವಿ

ಇಸ್ರೋದ ಚಂದ್ರಯಾನ 3 ಯೋಜನೆಯ ವಿಕ್ರಮ್​ ಲ್ಯಾಂಡರ್ ಚಂದ್ರನ ಮೇಲ್ಮೈಯಿಂದ ಸ್ವಲ್ಪ ಮೇಲೆತ್ತಲು ತನ್ನ ಇಂಜಿನ್‌ಗಳನ್ನು ಹಾರಿಸುವ ಹೋಪ್​​ ಪ್ರಯೋಗದ ನಂತರ ಚಂದ್ರನ ಮೇಲೆ ಎರಡನೇ ಯಶಸ್ವಿ ಸಾಫ್ಟ್ ಲ್ಯಾಂಡಿಂಗ್ ಮಾಡಿದೆ. ವಿಕ್ರಮ್ ಲ್ಯಾಂಡರ್ ಇಳಿದ ಶಿವಶಕ್ತಿ ಪಾಯಿಂಟ್​ನಲ್ಲಿ ಸುಮಾರು 40 ಸೆಂಟಿ ಮೀಟರ್ ಎತ್ತರಕ್ಕೆ ಲ್ಯಾಂಡರ್ ಹಾರಿದೆ. ಬಳಿಕ 30 ರಿಂದ 40 ಸೆ.ಮೀ ನಷ್ಟು ಪಕ್ಕಕ್ಕೆ ಸಾಫ್ಟ್​ ಲ್ಯಾಂಡ್ ಆಗುವಲ್ಲಿ ಸಕ್ಸಸ್​ ಆಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಇಸ್ರೋ ವಿಡಿಯೋ ಹಂಚಿಕೊಂಡಿದೆ.

ಭವಿಷ್ಯದಲ್ಲಿ ಮಾನವನನ್ನು ಕಳಿಸಿ ವಾಪಸ್​ ತರುವ ಯೋಜನೆಗೆ ಪೂರಕ

ಕಿಕ್ ಸ್ಟಾರ್ಟ್‌ನಿಂದ ಭವಿಷ್ಯದಲ್ಲಿ ಕಾರ್ಯಾಚರಣೆಗೆ ಸಹಕಾರಿ ಆಗಲಿದೆ. ಚಂದ್ರನಲ್ಲಿ ಬೆಳಕಿನ ನಂತರ ಮತ್ತೆ ಕಾರ್ಯಾಚರಣೆಗೆ ಪೂರ್ವ ತಯಾರಿ ಇದಾಗಿದೆ. ಇನ್ನು ಭವಿಷ್ಯದಲ್ಲಿ ಚಂದ್ರನ ಅಂಗಳಕ್ಕೆ ಮಾನವನನ್ನು ಕಳಿಸಿ ವಾಪಸ್​ ತರುವ ಯೋಜನೆಗೆ ಇದು ಪೂರಕವಾಗಿದೆ. ಸದ್ಯ ವಿಕ್ರಮ್​ ಲ್ಯಾಂಡರ್​ ಇಸ್ರೋ ಆಜ್ಞೆಗಳನ್ನು ಚಾಚು ತಪ್ಪದಂತೆ ಪಾಲಿಸುತ್ತಿದ್ದು. ಯೋಜನೆ ಉದ್ದೇಶಗಳನ್ನು ಮೀರಿದ ಯಶಸ್ಸು ಕಾಣುತ್ತಿದೆ. ವಿಕ್ರಮ್‌ ಲ್ಯಾಂಡರ್‌ನ ಎಲ್ಲ ವ್ಯವಸ್ಥೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಆರೋಗ್ಯಕರವಾಗಿವೆ. ನಿಯೋಜಿತ ರ‍್ಯಾಂಪ್‌, ChaSTE ಮತ್ತು ILSAಗಳನ್ನು ಮಾಡಲಾಗಿತ್ತು. ಪ್ರಯೋಗದ ನಂತರ ಅವುಗಳನ್ನು ಯಶಸ್ವಿಯಾಗಿ ಮರು ನಿಯೋಜಿಸಲಾಗಿದೆ.

ಚಂದ್ರಯಾನ-3 ಕೌಂಟ್​ಡೌನ್ ದನಿಯಾಗಿದ್ದ ಇಸ್ರೋ ವಿಜ್ಞಾನಿ ನಿಧನ

ಭಾರತದ ಸ್ಥಾನಮಾನವನ್ನು ಉತ್ತಂಗಕ್ಕೇರಿಸಿದ ಚಂದ್ರಯಾನ-3 ಉಡಾವಣೆ ಸಮಯದಲ್ಲಿ ಹಿಂದಿನ ಧ್ವನಿಯಾಗಿದ್ದ ವಿಜ್ಞಾನಿ ಕೊನೆಯುಸಿರೆಳೆದಿದ್ದಾರೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ವಿಜ್ಞಾನಿ ವಲರ್ಮತಿ ಅವರು ಚೆನ್ನೈನಲ್ಲಿ ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ. ಚಂದ್ರಯಾನ ಸೇರಿ ಹಲವು ಲಾಂಚ್​ಗಳಿಗೆ ಕೌಂಟ್​ಡೌನ್ ಕೊಡುತ್ತಿದ್ದ ವಿಜ್ಞಾನಿ ವಲರಮತಿ, ಶ್ರೀಹರಿಕೋಟಾದಿಂದ ಲಾಂಚ್ ಆಗಿದ್ದ ಚಂದ್ರಯಾನ-3 ರಾಕೆಟ್ ಲಾಂಚ್​ನಲ್ಲೆ ಕೊಟ್ಟಿದ್ದ ಕೌಂಟ್​ಡೌನ್​ ಇವರ ಕಡೆಯ ದನಿಯಾಗಿದೆ. ಚಂದ್ರಯಾನ-3 ಯೋಜನೆಯ ಯಶಸ್ವಿಯಾಗಿ ಸಾಗಿತ್ತು, ಸೆಪ್ಟೆಂಬರ್​ 22ಕ್ಕೆ ವಿಕ್ರಮ್​ ಮತ್ತು ರೋವರ್​ ಮತ್ತೆ ಕಾರ್ಯಾಚರಣೆ ಶುರು ಮಾಡ್ತಾವಾ ಅನ್ನೋದನ್ನ ಕಾದುನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More