newsfirstkannada.com

ಕೆ ಶಿವನ್ ನನಗೆ ಮುಖ್ಯಸ್ಥ ಹುದ್ದೆ ತಪ್ಪಿಸಲು ಯತ್ನಿಸಿದ್ದರು; ವಿವಾದದ ಬೆನ್ನಲ್ಲೇ ಆತ್ಮಕಥನ ಪ್ರಕಟಣೆಗೆ ಎಸ್.ಸೋಮನಾಥ್​ ಹಿಂದೇಟು

Share :

05-11-2023

    ‘ನಿಲುವು ಕುಡಿಚ ಸಿಂಹಗಳ್’ ಎಂಬ ಆತ್ಮಕಥನ

    ಕೆ ಶಿವನ್ ಬಗ್ಗೆ ಬರೆದುಕೊಂಡ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್​

    ಚರ್ಚೆಗೆ ಗ್ರಾಸವಾಗಿದೆ ಸೋಮನಾಥ್​ ಬರೆದ ಪುಸ್ತಕ, ಶುರುವಾಗಿದೆ ಶೀತಲಸಮರ

ಚಂದ್ರಯಾನ -3ರ ಯಶಸ್ಸಿನ ಬೆನ್ನಲ್ಲೇ ಇಸ್ರೋ ಸಂಸ್ಥೆಯ ಶೀತಲಸಮರ ಬೆಳಕಿಗೆ ಬಂದಿದೆ. ಇಸ್ರೋ ಮಾಜಿ ಅಧ್ಯಕ್ಷರಾಗಿದ್ದ ಕೆ ಶಿವನ್ ತಮಗೆ ಮುಖ್ಯಸ್ಥ ಹುದ್ದೆ ತಪ್ಪಿಸಲು ಯತ್ನಿಸಿದ್ದರು ಎಂದು ಹಾಲಿ ಅಧ್ಯಕ್ಷ ಎಸ್.ಸೋಮನಾಥ್​ ಆರೋಪ ಮಾಡಿದ್ದಾರೆ.

ಎಸ್ ಸೋಮನಾಥ್​ ‘ನಿಲುವು ಕುಡಿಚ ಸಿಂಹಗಳ್’ ಎಂಬ ಆತ್ಮಕಥನ ಬರೆದಿದ್ದು, ಅದರಲ್ಲಿ ಈ ಅಂಶಗಳು ದಾಖಲಾಗಿವೆ. ಇನ್ನು ಪುಸ್ತಕದಲ್ಲಿ ಚಂದ್ರಯಾನ – 2 ಸಾಫ್ಟ್​ವೇರ್ ಸಮಸ್ಯೆಯಿಂದ ವೈಫಲ್ಯತೆ ಕಂಡಿತ್ತು. ಆದರೆ ಶಿವನ್ ಲ್ಯಾಂಡರ್​ ಜೊತೆ ಸಂಪರ್ಕ ಆಗುತ್ತಿಲ್ಲ ಎಂದು ಸುಳ್ಳು ಘೋಷಿಸಿದ್ದರು ಎಂದು ಹೇಳಿದ್ದರು ಎಂಬುದನ್ನು ಬರೆದಿದ್ದಾರೆ.

ಕೆ ಶಿವನ್

ಹಾಗೆಯೇ ಪ್ರಧಾನಿ ನರೇಂದ್ರ ಮೋದಿ ಚಂದ್ರಯಾನ – 2 ನೌಕೆ ಚಂದ್ರನಲ್ಲಿ ಇಳಿಯುವ ದಿನ ಇಸ್ರೋಗೆ ಆಗಮಿಸಿದ್ದು, ಅಂದು ಅವರನ್ನು ಸ್ವಾಗತಿಸುವ ತಂಡದಲ್ಲಿ ನನ್ನನ್ನು ಹೊರಗಿಟ್ಟಿದ್ದರು ಅಂತ ಬರೆದಿದ್ದಾರೆ. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು ಸೋಮನಾಥ್​ ಪುಸ್ತಕ ಹಿಂಪಡೆಯುವುದಾಗಿ ತಿಳಿಸಿದ್ದಾರೆ.

ಸೋಮನಾಥ್​

ಇದಲ್ಲದೆ, ಪುಸ್ತಕದ ಕುರಿತಾಗಿಯೂ ಎಸ್​ ಸೋಮನಾಥ್​​ ಮಾತನಾಡಿದ್ದು, ‘‘ಪ್ರಮುಖ ಪಾತ್ರದಲ್ಲಿ ಬರುವ ವ್ಯಕ್ತಿಗಳು ಸಂಸ್ಥೆಯಲ್ಲಿ ಸ್ಥಾನಗಳನ್ನು ಭದ್ರಪಡಿಸುವುದು ಸೇರಿದಂತೆ ವಿವಿಧ ಸವಾಲುಗಳನ್ನು ಎದುರಿಸುತ್ತಾರೆ. ನನ್ನ ಉದ್ದೇಶವು ಯಾವುದೇ ನಿರ್ದಿಷ್ಟ ವ್ಯಕ್ತಿಯನ್ನು ಪ್ರತ್ಯೇಕಿಸುವುದಲ್ಲ. ನಾನು ನಿರ್ದಿಷ್ಟ ಅಂಶವನ್ನು ಹೈಲೈಟ್ಸ್​ ಮಾಡುವ ಗುರಿಯನ್ನು ಹೊಂದಿದ್ದೇನೆ.’’ಎಂದು ಹೇಳಿದ್ದಾರೆ.

‘‘ಪುಸ್ತಕ ನನ್ನ ಜೀವನದ ಕಥೆಯನ್ನು ನಿರೂಪಿಸುವ ಗುರಿಯನ್ನು ಹೊಂದಿಲ್ಲ.ಇದು ಜನರು ತಮ್ಮ ಕನಸನ್ನು ಮುಂದುವರಿಸಲು ಪ್ರೋತ್ಸಾಹಿಸುವ ಏಕೈಕ ಉದ್ದೇಶವನ್ನು ಹೊಂದಿದೆ’’ ಎಂದು ಸೋಮನಾಥ್​ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೆ ಶಿವನ್ ನನಗೆ ಮುಖ್ಯಸ್ಥ ಹುದ್ದೆ ತಪ್ಪಿಸಲು ಯತ್ನಿಸಿದ್ದರು; ವಿವಾದದ ಬೆನ್ನಲ್ಲೇ ಆತ್ಮಕಥನ ಪ್ರಕಟಣೆಗೆ ಎಸ್.ಸೋಮನಾಥ್​ ಹಿಂದೇಟು

https://newsfirstlive.com/wp-content/uploads/2023/11/S-Somanath.jpg

    ‘ನಿಲುವು ಕುಡಿಚ ಸಿಂಹಗಳ್’ ಎಂಬ ಆತ್ಮಕಥನ

    ಕೆ ಶಿವನ್ ಬಗ್ಗೆ ಬರೆದುಕೊಂಡ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್​

    ಚರ್ಚೆಗೆ ಗ್ರಾಸವಾಗಿದೆ ಸೋಮನಾಥ್​ ಬರೆದ ಪುಸ್ತಕ, ಶುರುವಾಗಿದೆ ಶೀತಲಸಮರ

ಚಂದ್ರಯಾನ -3ರ ಯಶಸ್ಸಿನ ಬೆನ್ನಲ್ಲೇ ಇಸ್ರೋ ಸಂಸ್ಥೆಯ ಶೀತಲಸಮರ ಬೆಳಕಿಗೆ ಬಂದಿದೆ. ಇಸ್ರೋ ಮಾಜಿ ಅಧ್ಯಕ್ಷರಾಗಿದ್ದ ಕೆ ಶಿವನ್ ತಮಗೆ ಮುಖ್ಯಸ್ಥ ಹುದ್ದೆ ತಪ್ಪಿಸಲು ಯತ್ನಿಸಿದ್ದರು ಎಂದು ಹಾಲಿ ಅಧ್ಯಕ್ಷ ಎಸ್.ಸೋಮನಾಥ್​ ಆರೋಪ ಮಾಡಿದ್ದಾರೆ.

ಎಸ್ ಸೋಮನಾಥ್​ ‘ನಿಲುವು ಕುಡಿಚ ಸಿಂಹಗಳ್’ ಎಂಬ ಆತ್ಮಕಥನ ಬರೆದಿದ್ದು, ಅದರಲ್ಲಿ ಈ ಅಂಶಗಳು ದಾಖಲಾಗಿವೆ. ಇನ್ನು ಪುಸ್ತಕದಲ್ಲಿ ಚಂದ್ರಯಾನ – 2 ಸಾಫ್ಟ್​ವೇರ್ ಸಮಸ್ಯೆಯಿಂದ ವೈಫಲ್ಯತೆ ಕಂಡಿತ್ತು. ಆದರೆ ಶಿವನ್ ಲ್ಯಾಂಡರ್​ ಜೊತೆ ಸಂಪರ್ಕ ಆಗುತ್ತಿಲ್ಲ ಎಂದು ಸುಳ್ಳು ಘೋಷಿಸಿದ್ದರು ಎಂದು ಹೇಳಿದ್ದರು ಎಂಬುದನ್ನು ಬರೆದಿದ್ದಾರೆ.

ಕೆ ಶಿವನ್

ಹಾಗೆಯೇ ಪ್ರಧಾನಿ ನರೇಂದ್ರ ಮೋದಿ ಚಂದ್ರಯಾನ – 2 ನೌಕೆ ಚಂದ್ರನಲ್ಲಿ ಇಳಿಯುವ ದಿನ ಇಸ್ರೋಗೆ ಆಗಮಿಸಿದ್ದು, ಅಂದು ಅವರನ್ನು ಸ್ವಾಗತಿಸುವ ತಂಡದಲ್ಲಿ ನನ್ನನ್ನು ಹೊರಗಿಟ್ಟಿದ್ದರು ಅಂತ ಬರೆದಿದ್ದಾರೆ. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು ಸೋಮನಾಥ್​ ಪುಸ್ತಕ ಹಿಂಪಡೆಯುವುದಾಗಿ ತಿಳಿಸಿದ್ದಾರೆ.

ಸೋಮನಾಥ್​

ಇದಲ್ಲದೆ, ಪುಸ್ತಕದ ಕುರಿತಾಗಿಯೂ ಎಸ್​ ಸೋಮನಾಥ್​​ ಮಾತನಾಡಿದ್ದು, ‘‘ಪ್ರಮುಖ ಪಾತ್ರದಲ್ಲಿ ಬರುವ ವ್ಯಕ್ತಿಗಳು ಸಂಸ್ಥೆಯಲ್ಲಿ ಸ್ಥಾನಗಳನ್ನು ಭದ್ರಪಡಿಸುವುದು ಸೇರಿದಂತೆ ವಿವಿಧ ಸವಾಲುಗಳನ್ನು ಎದುರಿಸುತ್ತಾರೆ. ನನ್ನ ಉದ್ದೇಶವು ಯಾವುದೇ ನಿರ್ದಿಷ್ಟ ವ್ಯಕ್ತಿಯನ್ನು ಪ್ರತ್ಯೇಕಿಸುವುದಲ್ಲ. ನಾನು ನಿರ್ದಿಷ್ಟ ಅಂಶವನ್ನು ಹೈಲೈಟ್ಸ್​ ಮಾಡುವ ಗುರಿಯನ್ನು ಹೊಂದಿದ್ದೇನೆ.’’ಎಂದು ಹೇಳಿದ್ದಾರೆ.

‘‘ಪುಸ್ತಕ ನನ್ನ ಜೀವನದ ಕಥೆಯನ್ನು ನಿರೂಪಿಸುವ ಗುರಿಯನ್ನು ಹೊಂದಿಲ್ಲ.ಇದು ಜನರು ತಮ್ಮ ಕನಸನ್ನು ಮುಂದುವರಿಸಲು ಪ್ರೋತ್ಸಾಹಿಸುವ ಏಕೈಕ ಉದ್ದೇಶವನ್ನು ಹೊಂದಿದೆ’’ ಎಂದು ಸೋಮನಾಥ್​ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More