newsfirstkannada.com

ಪರಿಷತ್ 3 ಸ್ಥಾನಕ್ಕಾಗಿ ಕಣಕ್ಕಿಳಿದ ‘ಕೈ’ಕಲಿಗಳು.. ಬಿಜೆಪಿ, ಜೆಡಿಎಸ್ ಕತೆ ಏನು..?

Share :

20-06-2023

    ಕಲ್ಯಾಣ ಕ್ಷೇತ್ರದ ಕಲಬುರಗಿ, ರಾಯಚೂರಿಗಾಗಿ ರಣತಂತ್ರ

    ಕಿತ್ತೂರು ಕರ್ನಾಟಕದಲ್ಲಿ ಲಿಂಗಾಯತ ಅಸ್ತ್ರ ಹೂಡಿದ ಹಸ್ತ

    ಶೆಟ್ಟರ್​​​ ಮೂಲಕ ಲೋಕಸಭೆ ಎಲೆಕ್ಷನ್​​ ಗೆಲ್ಲಲು ರಣತಂತ್ರ

ವಿಧಾನ ಪರಿಷತ್‌ನ ಮೂರು ಸ್ಥಾನಗಳಿಗೆ ಕಾಂಗ್ರೆಸ್‌ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಮಾಜಿ ಸಿಎಂ ಶೆಟ್ಟರ್, ಸಚಿವ ಬೋಸರಾಜು, ತಿಪ್ಪಣ್ಣಪ್ಪ ಕಮಕನೂರು ಕಣಕ್ಕಿಳಿದಿದ್ದಾರೆ. ಈ ವೇಳೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವ ಎಂಬಿಪಿ, ಮಧು ಬಂಗಾರಪ್ಪ ಸೇರಿ ಹಲವರು ಉಪಸ್ಥಿತರಿದ್ರು. ಈ ಮೂವರನ್ನ ಅಖಾಡಕ್ಕಿಳಿಸುವ ಹಿಂದೆ ಕಾಂಗ್ರೆಸ್​​ ಲೋಕಸಭೆಯತ್ತ ಕಣ್ಣಿಟ್ಟಿರುವುದು ಸ್ಪಷ್ಟವಾಗಿದೆ.

ಲೋಕಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್​​​, ವಿಧಾನ ಪರಿಷತ್​ಗೆ ಅಳೆದುತೂಗಿ ಅಭ್ಯರ್ಥಿಗಳನ್ನ ಆಯ್ಕೆ ಮಾಡ್ತಿದೆ. ವಿಧಾನ ಪರಿಷತ್​ನ ಮೂರು ಸ್ಥಾನಗಳಿಗೆ ಉಪ ಚುನಾವಣೆ ಹಿನ್ನೆಲೆ ಲೋಕಸಭೆಗೆ ಗೋಲ್​ ಹೊಡೆದಿದೆ. ಜಾತಿವಾರು ಮತ್ತು ಪ್ರದೇಶವಾರು ಲೆಕ್ಕಾಚಾರ ಹಾಕಿ ಮಣೆ ಹಾಕ್ತಿದೆ. ಈ 3 ಕ್ಷೇತ್ರಗಳಲ್ಲಿ ಎರಡು ಕಲ್ಯಾಣ ಕರ್ನಾಟಕ, ಒಂದು ಕಿತ್ತೂರು ಭಾಗಕ್ಕೆ ಟಿಕೆಟ್​​ ಕೊಟ್ಟಿದೆ.

ಕಿತ್ತೂರು ಕರ್ನಾಟಕದಲ್ಲಿ ಲಿಂಗಾಯತ ಅಸ್ತ್ರ ಹೂಡಿದ ಹಸ್ತ!

ಪರಿಷತ್ತಿನ ಮೂರು ಸ್ಥಾನಗಳಿಗೆ ನಡೆಯಲಿರುವ ಉಪಚುನಾವಣೆಗೆ ಕಾಂಗ್ರೆಸ್ ಹೈಕಮಾಂಡ್ ಅಭ್ಯರ್ಥಿಗಳನ್ನ ಕಣಕ್ಕಿಳಿಸಿದೆ. ನಿರೀಕ್ಷೆಯಂತೆ ಮಾಜಿ ಸಿಎಂ ಜಗದೀಶ್ ಶೆಟ್ಟರ್​, ಸಚಿವ ಭೋಸರಾಜುಗೆ ಟಿಕೆಟ್​ ನೀಡಿದೆ. ತಿಪ್ಪಣ್ಣಪ್ಪ ಕಮಕನೂರ್​ ಈ ಬಾರಿ ಅಚ್ಚರಿ ಅಭ್ಯರ್ಥಿ ಆಗಿದ್ದಾರೆ. ಸವದಿ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಶೆಟ್ಟರ್, ಆರ್. ಶಂಕರ್​ರಿಂದ ತೆರವಾದ ಸ್ಥಾನಕ್ಕೆ ಕಮಕನೂರ್​​ಗೆ ಅವಕಾಶ ಲಭಿಸಿದೆ. ಚಿಂಚನಸೂರ್​ ಸ್ಥಾನಕ್ಕೆ ಹಾಲಿ ಸಚಿವ ಬೋಸರಾಜುಗೆ ಅವಕಾಶ ಕಲ್ಪಿಸಿದೆ.

ಜೂನ್​ 30ರಂದು ನಡೆಯುಲಿರುವ ಚುನಾವಣೆಗೆ ಮಾಜಿ ಸಿಎಂ ಶೆಟ್ಟರ್​, ತಿಪ್ಪಣ್ಣಪ್ಪ ಕಮಕನೂರು, ಸಚಿವ ಭೋಸರಾಜು ನಾಮಪತ್ರ ಸಲ್ಲಿಸಿದ್ರು. ವಿಧಾನಸಭೆ ಕಾರ್ಯದರ್ಶಿ ಹಾಗೂ ಚುನಾವಣಾಧಿಕಾರಿ ಎಂ.ಕೆ ವಿಶಾಲಾಕ್ಷಿ ನಾಮಪತ್ರ ಸ್ವೀಕರಿಸಿದ್ರು. ವಿಧಾನಸಭೆಯಲ್ಲಿ ಪೂರ್ಣ ಬಹುಮತ ಹೊಂದಿರುವ ಕಾರಣ ಮೂರು ಸ್ಥಾನಗಳು ಕಾಂಗ್ರೆಸ್‌ ಪಾಲಾಗುವುದು ಖಚಿತವಾಗಿದೆ. ಹೀಗಾಗಿ ಬಿಜೆಪಿ, ಜೆಡಿಎಸ್​​ ಅಭ್ಯರ್ಥಿಗಳನ್ನ ಕಣಕ್ಕಿಳಿಸದಿರಲು ನಿರ್ಧರಿಸಿವೆ.

ಶೆಟ್ಟರ್​​​ ಮೂಲಕ ಲೋಕಸಭೆ ಎಲೆಕ್ಷನ್​​ ಗೆಲ್ಲಲು ರಣತಂತ್ರ!

ಮಾಜಿ ಸಿಎಂ ಜಗದೀಶ್​​ ಶೆಟ್ಟರ್​, ಕಿತ್ತೂರು ಕರ್ನಾಟಕದ ಪ್ರಭಾವಿ ನಾಯಕ.. ಹುಬ್ಬಳ್ಳಿ ಧಾರವಾಡ ಕೇಂದ್ರ ಕ್ಷೇತ್ರದಲ್ಲಿ ಸೋತಿರುವ ಶೆಟ್ಟರ್​​​ರನ್ನ ತಾವು ಕೈಬಿಟ್ಟಿಲ್ಲ ಅನ್ನೋ ಸಂದೇಶ ಕಾಂಗ್ರೆಸ್​​​ ರವಾನಿಸಿದೆ.. ವಿಧಾನಸಭೆಯಲ್ಲಿ ಲಿಂಗಾಯತ ಮತ ವಿಭಜನೆಯಿಂದ ಕಾಂಗ್ರೆಸ್​​ ಭರ್ಜರಿ ಮೆಜಾರಿಟಿ ಪಡೆದಿದೆ.. ಹಾಗಾಗಿ ಪ್ರಭಾವಿ ಲಿಂಗಾಯತ ನಾಯಕನನ್ನ ಲೋಕಸಭೆ ಪ್ರಚಾರದಲ್ಲಿ ಪ್ರಬಲವಾಗಿ ಬಳಸಿಕೊಳ್ಳುವ ಲೆಕ್ಕಾಚಾರ ಕಾಂಗ್ರೆಸ್​​ ಹೆಣೆದಂತಿದೆ.. ಬೆಳಗಾವಿ, ಚಿಕ್ಕೋಡಿ, ಧಾರವಾಡ, ಗದಗ-ಹಾವೇರಿ, ಬಾಗಲಕೋಟೆಯಲ್ಲಿ ಶೆಟ್ಟರ್​​​ ಚಕ್ರವ್ಯೂಹ ಹೆಣೆಯಲಿದ್ದಾರೆ.

ಸಚಿವ ಬೋಸರಾಜುಗೆ ವರ್ಷದ ಹೊಣೆಗಾರಿಕೆ

ಚಿಂಚನಸೂರ್​ರಿಂದ ತೆರವಾದ ಸ್ಥಾನಕ್ಕೆ ಸಚಿವ ಬೋಸರಾಜು ಸ್ಪರ್ಧಿಸಿದ್ದು, ಕೇವಲ ಒಂದು ವರ್ಷದ ಅವಧಿಗೆ ಅವಕಾಶ ಇದೆ. ತೆಲಂಗಾಣ ಕಾಂಗ್ರೆಸ್​​​ನ ಉಸ್ತುವಾರಿ ಆಗಿರುವ ಬೋಸರಾಜುಗೆ ಡಿಸೆಂಬರ್​​​ನಲ್ಲಿ ನಡೆಯುವ ಚುನಾವಣೆಯಲ್ಲಿ ಕೈಗೆ ಬಲ ತುಂಬುವ ಜವಾಬ್ದಾರಿ ಇದೆ. ಜೊತೆಗೆ ಲೋಕಸಭಾ ಚುನಾವಣೆಯಲ್ಲಿ ರಾಯಚೂರು ಕ್ಷೇತ್ರ ಗೆಲ್ಲಿಸಲು ಟಾಸ್ಕ್​​ ನೀಡಲಾಗಿದೆ.

ಕಲಬುರಗಿಯಲ್ಲಿ ಮತಭದ್ರಕ್ಕೆ ‘ಕೈ’ಹಾಕಿದ ಖರ್ಗೆ

ಚಿಂಚನಸೂರ್​ಗೆ ಅನಾರೋಗ್ಯದ ಕಾರಣ ಅವಕಾಶ ಕೈತಪ್ಪಿದೆ. ಅದೇ ಕೋಲಿ ಸಮಾಜದ ಗೌರವಾಧ್ಯಕ್ಷರಾಗಿರುವ ತಿಪ್ಪಣ್ಣಪ್ಪ ಕಮಕನೂರುಗೆ ಅವಕಾಶ ನೀಡಲಾಗಿದೆ. ಇದರ ಹಿಂದೆ ಖರ್ಗೆ ಹಿತಾಸಕ್ತಿ ಇದ್ದು, ತಮ್ಮ ಶಿಷ್ಯನಿಗೆ ಮಣೆ ಹಾಕಿದ್ದು, ಲೋಕಸಭಾ ಎಲೆಕ್ಷನ್​​ ಗೆಲ್ಲಲು ತಂತ್ರ ಹಣೆದಿದ್ದಾರೆ. ಕಲಬುರ್ಗಿ ಕ್ಷೇತ್ರದಲ್ಲಿ ಕೋಲಿ ಸಮಾಜದ ಮತಗಳು ನಿರ್ಣಾಯಕ ಆಗಿದ್ದು, ಈಗ ತಿಪ್ಪಣ್ಣಪ್ಪ ಮೂಲಕ ಮತಕ್ರೋಢೀಕರಣದ ಲೆಕ್ಕಾಚಾರ ಹೊಂದಿದ್ದಾರೆ.

ಒಟ್ಟಾರೆ, ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುವು ಗುರಿ ಹೊಂದಿರುವ ಕಾಂಗ್ರೆಸ್​​ ಸದ್ಯ ಈ ಮೂರು ಸ್ಥಾನಗಳನ್ನ ಫಿಲ್​ ಮಾಡಿದೆ. ಇದೇ ತಿಂಗಳಲ್ಲಿ ತೆರವಾಗುವ ನಾಮ ನಿರ್ದೇಶನದ ಮೂರು ಸ್ಥಾನಗಳು ದಕ್ಷಿಣ ಭಾಗಕ್ಕೆ ದಕ್ಕುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪರಿಷತ್ 3 ಸ್ಥಾನಕ್ಕಾಗಿ ಕಣಕ್ಕಿಳಿದ ‘ಕೈ’ಕಲಿಗಳು.. ಬಿಜೆಪಿ, ಜೆಡಿಎಸ್ ಕತೆ ಏನು..?

https://newsfirstlive.com/wp-content/uploads/2023/06/CONGRESS-3.jpg

    ಕಲ್ಯಾಣ ಕ್ಷೇತ್ರದ ಕಲಬುರಗಿ, ರಾಯಚೂರಿಗಾಗಿ ರಣತಂತ್ರ

    ಕಿತ್ತೂರು ಕರ್ನಾಟಕದಲ್ಲಿ ಲಿಂಗಾಯತ ಅಸ್ತ್ರ ಹೂಡಿದ ಹಸ್ತ

    ಶೆಟ್ಟರ್​​​ ಮೂಲಕ ಲೋಕಸಭೆ ಎಲೆಕ್ಷನ್​​ ಗೆಲ್ಲಲು ರಣತಂತ್ರ

ವಿಧಾನ ಪರಿಷತ್‌ನ ಮೂರು ಸ್ಥಾನಗಳಿಗೆ ಕಾಂಗ್ರೆಸ್‌ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಮಾಜಿ ಸಿಎಂ ಶೆಟ್ಟರ್, ಸಚಿವ ಬೋಸರಾಜು, ತಿಪ್ಪಣ್ಣಪ್ಪ ಕಮಕನೂರು ಕಣಕ್ಕಿಳಿದಿದ್ದಾರೆ. ಈ ವೇಳೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವ ಎಂಬಿಪಿ, ಮಧು ಬಂಗಾರಪ್ಪ ಸೇರಿ ಹಲವರು ಉಪಸ್ಥಿತರಿದ್ರು. ಈ ಮೂವರನ್ನ ಅಖಾಡಕ್ಕಿಳಿಸುವ ಹಿಂದೆ ಕಾಂಗ್ರೆಸ್​​ ಲೋಕಸಭೆಯತ್ತ ಕಣ್ಣಿಟ್ಟಿರುವುದು ಸ್ಪಷ್ಟವಾಗಿದೆ.

ಲೋಕಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್​​​, ವಿಧಾನ ಪರಿಷತ್​ಗೆ ಅಳೆದುತೂಗಿ ಅಭ್ಯರ್ಥಿಗಳನ್ನ ಆಯ್ಕೆ ಮಾಡ್ತಿದೆ. ವಿಧಾನ ಪರಿಷತ್​ನ ಮೂರು ಸ್ಥಾನಗಳಿಗೆ ಉಪ ಚುನಾವಣೆ ಹಿನ್ನೆಲೆ ಲೋಕಸಭೆಗೆ ಗೋಲ್​ ಹೊಡೆದಿದೆ. ಜಾತಿವಾರು ಮತ್ತು ಪ್ರದೇಶವಾರು ಲೆಕ್ಕಾಚಾರ ಹಾಕಿ ಮಣೆ ಹಾಕ್ತಿದೆ. ಈ 3 ಕ್ಷೇತ್ರಗಳಲ್ಲಿ ಎರಡು ಕಲ್ಯಾಣ ಕರ್ನಾಟಕ, ಒಂದು ಕಿತ್ತೂರು ಭಾಗಕ್ಕೆ ಟಿಕೆಟ್​​ ಕೊಟ್ಟಿದೆ.

ಕಿತ್ತೂರು ಕರ್ನಾಟಕದಲ್ಲಿ ಲಿಂಗಾಯತ ಅಸ್ತ್ರ ಹೂಡಿದ ಹಸ್ತ!

ಪರಿಷತ್ತಿನ ಮೂರು ಸ್ಥಾನಗಳಿಗೆ ನಡೆಯಲಿರುವ ಉಪಚುನಾವಣೆಗೆ ಕಾಂಗ್ರೆಸ್ ಹೈಕಮಾಂಡ್ ಅಭ್ಯರ್ಥಿಗಳನ್ನ ಕಣಕ್ಕಿಳಿಸಿದೆ. ನಿರೀಕ್ಷೆಯಂತೆ ಮಾಜಿ ಸಿಎಂ ಜಗದೀಶ್ ಶೆಟ್ಟರ್​, ಸಚಿವ ಭೋಸರಾಜುಗೆ ಟಿಕೆಟ್​ ನೀಡಿದೆ. ತಿಪ್ಪಣ್ಣಪ್ಪ ಕಮಕನೂರ್​ ಈ ಬಾರಿ ಅಚ್ಚರಿ ಅಭ್ಯರ್ಥಿ ಆಗಿದ್ದಾರೆ. ಸವದಿ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಶೆಟ್ಟರ್, ಆರ್. ಶಂಕರ್​ರಿಂದ ತೆರವಾದ ಸ್ಥಾನಕ್ಕೆ ಕಮಕನೂರ್​​ಗೆ ಅವಕಾಶ ಲಭಿಸಿದೆ. ಚಿಂಚನಸೂರ್​ ಸ್ಥಾನಕ್ಕೆ ಹಾಲಿ ಸಚಿವ ಬೋಸರಾಜುಗೆ ಅವಕಾಶ ಕಲ್ಪಿಸಿದೆ.

ಜೂನ್​ 30ರಂದು ನಡೆಯುಲಿರುವ ಚುನಾವಣೆಗೆ ಮಾಜಿ ಸಿಎಂ ಶೆಟ್ಟರ್​, ತಿಪ್ಪಣ್ಣಪ್ಪ ಕಮಕನೂರು, ಸಚಿವ ಭೋಸರಾಜು ನಾಮಪತ್ರ ಸಲ್ಲಿಸಿದ್ರು. ವಿಧಾನಸಭೆ ಕಾರ್ಯದರ್ಶಿ ಹಾಗೂ ಚುನಾವಣಾಧಿಕಾರಿ ಎಂ.ಕೆ ವಿಶಾಲಾಕ್ಷಿ ನಾಮಪತ್ರ ಸ್ವೀಕರಿಸಿದ್ರು. ವಿಧಾನಸಭೆಯಲ್ಲಿ ಪೂರ್ಣ ಬಹುಮತ ಹೊಂದಿರುವ ಕಾರಣ ಮೂರು ಸ್ಥಾನಗಳು ಕಾಂಗ್ರೆಸ್‌ ಪಾಲಾಗುವುದು ಖಚಿತವಾಗಿದೆ. ಹೀಗಾಗಿ ಬಿಜೆಪಿ, ಜೆಡಿಎಸ್​​ ಅಭ್ಯರ್ಥಿಗಳನ್ನ ಕಣಕ್ಕಿಳಿಸದಿರಲು ನಿರ್ಧರಿಸಿವೆ.

ಶೆಟ್ಟರ್​​​ ಮೂಲಕ ಲೋಕಸಭೆ ಎಲೆಕ್ಷನ್​​ ಗೆಲ್ಲಲು ರಣತಂತ್ರ!

ಮಾಜಿ ಸಿಎಂ ಜಗದೀಶ್​​ ಶೆಟ್ಟರ್​, ಕಿತ್ತೂರು ಕರ್ನಾಟಕದ ಪ್ರಭಾವಿ ನಾಯಕ.. ಹುಬ್ಬಳ್ಳಿ ಧಾರವಾಡ ಕೇಂದ್ರ ಕ್ಷೇತ್ರದಲ್ಲಿ ಸೋತಿರುವ ಶೆಟ್ಟರ್​​​ರನ್ನ ತಾವು ಕೈಬಿಟ್ಟಿಲ್ಲ ಅನ್ನೋ ಸಂದೇಶ ಕಾಂಗ್ರೆಸ್​​​ ರವಾನಿಸಿದೆ.. ವಿಧಾನಸಭೆಯಲ್ಲಿ ಲಿಂಗಾಯತ ಮತ ವಿಭಜನೆಯಿಂದ ಕಾಂಗ್ರೆಸ್​​ ಭರ್ಜರಿ ಮೆಜಾರಿಟಿ ಪಡೆದಿದೆ.. ಹಾಗಾಗಿ ಪ್ರಭಾವಿ ಲಿಂಗಾಯತ ನಾಯಕನನ್ನ ಲೋಕಸಭೆ ಪ್ರಚಾರದಲ್ಲಿ ಪ್ರಬಲವಾಗಿ ಬಳಸಿಕೊಳ್ಳುವ ಲೆಕ್ಕಾಚಾರ ಕಾಂಗ್ರೆಸ್​​ ಹೆಣೆದಂತಿದೆ.. ಬೆಳಗಾವಿ, ಚಿಕ್ಕೋಡಿ, ಧಾರವಾಡ, ಗದಗ-ಹಾವೇರಿ, ಬಾಗಲಕೋಟೆಯಲ್ಲಿ ಶೆಟ್ಟರ್​​​ ಚಕ್ರವ್ಯೂಹ ಹೆಣೆಯಲಿದ್ದಾರೆ.

ಸಚಿವ ಬೋಸರಾಜುಗೆ ವರ್ಷದ ಹೊಣೆಗಾರಿಕೆ

ಚಿಂಚನಸೂರ್​ರಿಂದ ತೆರವಾದ ಸ್ಥಾನಕ್ಕೆ ಸಚಿವ ಬೋಸರಾಜು ಸ್ಪರ್ಧಿಸಿದ್ದು, ಕೇವಲ ಒಂದು ವರ್ಷದ ಅವಧಿಗೆ ಅವಕಾಶ ಇದೆ. ತೆಲಂಗಾಣ ಕಾಂಗ್ರೆಸ್​​​ನ ಉಸ್ತುವಾರಿ ಆಗಿರುವ ಬೋಸರಾಜುಗೆ ಡಿಸೆಂಬರ್​​​ನಲ್ಲಿ ನಡೆಯುವ ಚುನಾವಣೆಯಲ್ಲಿ ಕೈಗೆ ಬಲ ತುಂಬುವ ಜವಾಬ್ದಾರಿ ಇದೆ. ಜೊತೆಗೆ ಲೋಕಸಭಾ ಚುನಾವಣೆಯಲ್ಲಿ ರಾಯಚೂರು ಕ್ಷೇತ್ರ ಗೆಲ್ಲಿಸಲು ಟಾಸ್ಕ್​​ ನೀಡಲಾಗಿದೆ.

ಕಲಬುರಗಿಯಲ್ಲಿ ಮತಭದ್ರಕ್ಕೆ ‘ಕೈ’ಹಾಕಿದ ಖರ್ಗೆ

ಚಿಂಚನಸೂರ್​ಗೆ ಅನಾರೋಗ್ಯದ ಕಾರಣ ಅವಕಾಶ ಕೈತಪ್ಪಿದೆ. ಅದೇ ಕೋಲಿ ಸಮಾಜದ ಗೌರವಾಧ್ಯಕ್ಷರಾಗಿರುವ ತಿಪ್ಪಣ್ಣಪ್ಪ ಕಮಕನೂರುಗೆ ಅವಕಾಶ ನೀಡಲಾಗಿದೆ. ಇದರ ಹಿಂದೆ ಖರ್ಗೆ ಹಿತಾಸಕ್ತಿ ಇದ್ದು, ತಮ್ಮ ಶಿಷ್ಯನಿಗೆ ಮಣೆ ಹಾಕಿದ್ದು, ಲೋಕಸಭಾ ಎಲೆಕ್ಷನ್​​ ಗೆಲ್ಲಲು ತಂತ್ರ ಹಣೆದಿದ್ದಾರೆ. ಕಲಬುರ್ಗಿ ಕ್ಷೇತ್ರದಲ್ಲಿ ಕೋಲಿ ಸಮಾಜದ ಮತಗಳು ನಿರ್ಣಾಯಕ ಆಗಿದ್ದು, ಈಗ ತಿಪ್ಪಣ್ಣಪ್ಪ ಮೂಲಕ ಮತಕ್ರೋಢೀಕರಣದ ಲೆಕ್ಕಾಚಾರ ಹೊಂದಿದ್ದಾರೆ.

ಒಟ್ಟಾರೆ, ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುವು ಗುರಿ ಹೊಂದಿರುವ ಕಾಂಗ್ರೆಸ್​​ ಸದ್ಯ ಈ ಮೂರು ಸ್ಥಾನಗಳನ್ನ ಫಿಲ್​ ಮಾಡಿದೆ. ಇದೇ ತಿಂಗಳಲ್ಲಿ ತೆರವಾಗುವ ನಾಮ ನಿರ್ದೇಶನದ ಮೂರು ಸ್ಥಾನಗಳು ದಕ್ಷಿಣ ಭಾಗಕ್ಕೆ ದಕ್ಕುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More