ರಾತ್ರಿ ವೇಳೆ ಪಾಕ್ ಸೇನೆಯಿಂದ ಹುಚ್ಚಾಟ, ಯೋಧರಿಂದ ತಕ್ಕ ಪ್ರತ್ಯುತ್ತರ
ಗ್ರಾಮಸ್ಥರು ಊಟ ಮಾಡಿ ಮಲಗುವ ವೇಳೆಯೇ ಪಾಕ್ನಿಂದ ಫೈರಿಂಗ್.!
ಕದನ ವಿರಾಮ ನಿಯಮವನ್ನು ಉಲ್ಲಂಘಸಿ ಕ್ಯಾಂಪ್ಗಳ ಮೇಲೆ ದಾಳಿ
ಶ್ರೀನಗರ: ಪಾಕಿಸ್ತಾನ ಸೇನೆ ಕದನ ವಿರಾಮ ನಿಯಮ ಉಲ್ಲಂಘಸಿ ಭಾರತದ ಗಡಿಯಲ್ಲಿ ರಾತ್ರಿ 8 ಗಂಟೆ ಸುಮಾರಿಗೆ ಗುಂಡಿನ ದಾಳಿ ನಡೆಸಿದೆ. ಪರಿಣಾಮ ಓರ್ವ ಬಿಎಸ್ಎಫ್ ಯೋಧ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಬಿಎಸ್ಎಫ್ನ ಕರ್ನಾಟಕ ಮೂಲದ ಬಸವರಾಜ್ ಎಸ್ಆರ್ ಗಾಯಗೊಂಡ ಯೋಧ. ಸದ್ಯ ಇವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದು ಯಾವುದೇ ಅಪಾಯವಿಲ್ಲ ಎಂದು ತಿಳಿದು ಬಂದಿದೆ. ಕಾಶ್ಮೀರದ ಆರ್.ಎಸ್ ಪುರದ ಅರ್ನಿಯಾ ಪ್ರದೇಶದಲ್ಲಿ ಬಿಎಸ್ಎಫ್ ಕ್ಯಾಂಪ್ಗಳ ಇದ್ದಿದ್ದರಿಂದ ಇವುಗಳನ್ನೇ ಟಾರ್ಗೆಟ್ ಮಾಡಿ ಹೆಚ್ಚಾಗಿ ದಾಳಿ ಮಾಡಲಾಗಿದೆ. ಇನ್ನು ಸಾಯಿ ಖುರ್ಡ್, ಬುರೆಜಲ್, ಚಕ್ಬುಲ್ಲಾ ಮತ್ತು ದೇವಿಗರ್ ಗ್ರಾಮಗಳ ಸುತ್ತಲೂ ಗುಂಡಿನ ಶಬ್ಧ ಕೇಳಿ ಬಂದಿದೆ. ಪಾಕ್ ಸೇನೆ ನಿರಂತರವಾಗಿ ಫೈರಿಂಗ್ ಮಾಡಿರುವುದಕ್ಕೆ ಭಾರತದ ಯೋಧರು ಕೂಡ ತಕ್ಕ ಉತ್ತರ ನೀಡಿದ್ದಾರೆ ಎಂದು ತಿಳಿದು ಬಂದಿದೆ.
Reports suggest that multiple Pakistan posts were destroyed near RS Pura, causing many Pak Ranger casualties.
Pakistan's ceasefire violation has reignited tensions, but India surely is giving it back this time. pic.twitter.com/QoKyq2nu0V
— Pradeep Bhandari(प्रदीप भंडारी)🇮🇳 (@pradip103) October 26, 2023
ಗ್ರಾಮಗಳ ಸುತ್ತ ರಾತ್ರಿ ಫೈರಿಂಗ್ ಶಬ್ಧ ಹೆಚ್ಚಾಗಿ ಕೇಳಿ ಬಂದಿದ್ದರಿಂದ ಗ್ರಾಮಸ್ಥರು ನಿದ್ದೆ ಮಾಡದೇ ರಾತ್ರಿಯೆಲ್ಲ ಆತಂಕದಲ್ಲೇ ಸಮಯ ಕಳೆದಿದ್ದಾರೆ. ಈ ವೇಳೆ ಅವರಿಗೆ ಯೋಧರು ಧೈರ್ಯ ತುಂಬಿದ್ದು ಯಾವುದೇ ಆತಂಕ ಬೇಡ ಮನೆಯಿಂದ ಹೊರಬರಬೇಡಿ ಎಂದಿದ್ದಾರೆ. ಇನ್ನು ಈ ಪ್ರದೇಶದಲ್ಲಿ 3 ವರ್ಷಗಳ ಬಳಿಕ ಮತ್ತೆ ಗುಂಡಿನ ಸದ್ದು ಕೇಳಿ ಬಂದಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ರಾತ್ರಿ ವೇಳೆ ಪಾಕ್ ಸೇನೆಯಿಂದ ಹುಚ್ಚಾಟ, ಯೋಧರಿಂದ ತಕ್ಕ ಪ್ರತ್ಯುತ್ತರ
ಗ್ರಾಮಸ್ಥರು ಊಟ ಮಾಡಿ ಮಲಗುವ ವೇಳೆಯೇ ಪಾಕ್ನಿಂದ ಫೈರಿಂಗ್.!
ಕದನ ವಿರಾಮ ನಿಯಮವನ್ನು ಉಲ್ಲಂಘಸಿ ಕ್ಯಾಂಪ್ಗಳ ಮೇಲೆ ದಾಳಿ
ಶ್ರೀನಗರ: ಪಾಕಿಸ್ತಾನ ಸೇನೆ ಕದನ ವಿರಾಮ ನಿಯಮ ಉಲ್ಲಂಘಸಿ ಭಾರತದ ಗಡಿಯಲ್ಲಿ ರಾತ್ರಿ 8 ಗಂಟೆ ಸುಮಾರಿಗೆ ಗುಂಡಿನ ದಾಳಿ ನಡೆಸಿದೆ. ಪರಿಣಾಮ ಓರ್ವ ಬಿಎಸ್ಎಫ್ ಯೋಧ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಬಿಎಸ್ಎಫ್ನ ಕರ್ನಾಟಕ ಮೂಲದ ಬಸವರಾಜ್ ಎಸ್ಆರ್ ಗಾಯಗೊಂಡ ಯೋಧ. ಸದ್ಯ ಇವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದು ಯಾವುದೇ ಅಪಾಯವಿಲ್ಲ ಎಂದು ತಿಳಿದು ಬಂದಿದೆ. ಕಾಶ್ಮೀರದ ಆರ್.ಎಸ್ ಪುರದ ಅರ್ನಿಯಾ ಪ್ರದೇಶದಲ್ಲಿ ಬಿಎಸ್ಎಫ್ ಕ್ಯಾಂಪ್ಗಳ ಇದ್ದಿದ್ದರಿಂದ ಇವುಗಳನ್ನೇ ಟಾರ್ಗೆಟ್ ಮಾಡಿ ಹೆಚ್ಚಾಗಿ ದಾಳಿ ಮಾಡಲಾಗಿದೆ. ಇನ್ನು ಸಾಯಿ ಖುರ್ಡ್, ಬುರೆಜಲ್, ಚಕ್ಬುಲ್ಲಾ ಮತ್ತು ದೇವಿಗರ್ ಗ್ರಾಮಗಳ ಸುತ್ತಲೂ ಗುಂಡಿನ ಶಬ್ಧ ಕೇಳಿ ಬಂದಿದೆ. ಪಾಕ್ ಸೇನೆ ನಿರಂತರವಾಗಿ ಫೈರಿಂಗ್ ಮಾಡಿರುವುದಕ್ಕೆ ಭಾರತದ ಯೋಧರು ಕೂಡ ತಕ್ಕ ಉತ್ತರ ನೀಡಿದ್ದಾರೆ ಎಂದು ತಿಳಿದು ಬಂದಿದೆ.
Reports suggest that multiple Pakistan posts were destroyed near RS Pura, causing many Pak Ranger casualties.
Pakistan's ceasefire violation has reignited tensions, but India surely is giving it back this time. pic.twitter.com/QoKyq2nu0V
— Pradeep Bhandari(प्रदीप भंडारी)🇮🇳 (@pradip103) October 26, 2023
ಗ್ರಾಮಗಳ ಸುತ್ತ ರಾತ್ರಿ ಫೈರಿಂಗ್ ಶಬ್ಧ ಹೆಚ್ಚಾಗಿ ಕೇಳಿ ಬಂದಿದ್ದರಿಂದ ಗ್ರಾಮಸ್ಥರು ನಿದ್ದೆ ಮಾಡದೇ ರಾತ್ರಿಯೆಲ್ಲ ಆತಂಕದಲ್ಲೇ ಸಮಯ ಕಳೆದಿದ್ದಾರೆ. ಈ ವೇಳೆ ಅವರಿಗೆ ಯೋಧರು ಧೈರ್ಯ ತುಂಬಿದ್ದು ಯಾವುದೇ ಆತಂಕ ಬೇಡ ಮನೆಯಿಂದ ಹೊರಬರಬೇಡಿ ಎಂದಿದ್ದಾರೆ. ಇನ್ನು ಈ ಪ್ರದೇಶದಲ್ಲಿ 3 ವರ್ಷಗಳ ಬಳಿಕ ಮತ್ತೆ ಗುಂಡಿನ ಸದ್ದು ಕೇಳಿ ಬಂದಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ