newsfirstkannada.com

ಸ್ನೇಹಿತನಿಂದಲೇ ಜೆಡಿಎಸ್​​ ಮುಖಂಡನ ಮುಗಿಸಲು ಯತ್ನ; ಅಸಲಿಗೆ ನಡೆದಿದ್ದೇನು?

Share :

12-08-2023

    ಜೆಡಿಎಸ್ ಮುಖಂಡ ಅಪ್ಪುಗೌಡ ಮೇಲೆ ಮರ್ಡರ್ ಅಟ್ಯಾಕ್

    ದೇವರಿಗೆ ಕೈ ಮುಗಿವಾಗ ಕೊಲೆಗೆ ಯತ್ನಿಸಿದ ದುಷ್ಕರ್ಮಿಗಳು

    ಅದೃಷ್ಟವಶಾತ್​ ಪ್ರಾಣಾಪಾಯದಿಂದ ಅಪ್ಪುಗೌಡ ಪಾರಾದ್ರು!

ಮಂಡ್ಯ: ಜೆಡಿಎಸ್​ ಮುಖಂಡ ಅಪ್ಪುಗೌಡರನ್ನು ದುಷ್ಕರ್ಮಿಗಳು ಕೊಲೆ ಮಾಡಲು ಯತ್ನಿಸಿರೋ ಘಟನೆ ಜಿಲ್ಲೆಯ ಮದ್ದೂರಿನ ಆಂಜನೇಯಸ್ವಾಮಿ ದೇಗುಲದಲ್ಲಿ ನಡೆದಿದೆ. ದುಷ್ಕರ್ಮಿಗಳು ಕೊಲೆಗೆ ಯತ್ನಿಸಿರೋ ಭಯಾನಕ ದೃಶ್ಯ ಸಿಸಿಟಿವಿ ಕ್ಯಾಮೆರದಲ್ಲಿ ಸೆರೆಯಾಗಿದೆ.

ದೇವರ ದರ್ಶನಕ್ಕೆಂದು ಬಂದಿದ್ದ ವೇಳೆ ಅಪ್ಪುಗೌಡರ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ಪರಾರಿಯಾಗುತ್ತಿದ್ದ ಆರೋಪಿಗಳನ್ನು ಅಲ್ಲೆ ಇದ್ದ ಪೊಲೀಸ್ ಪೇದೆಯೊಬ್ಬರು ಬೆನ್ನಟ್ಟಿದ್ದಾರೆ. ಪರಿಣಾಮ ಸ್ಥಳದಲ್ಲೇ ಲಾಂಗ್ ಬಿಟ್ಟು ಆರೋಪಿಗಳು ಎಸ್ಕೇಪ್​​ ಆಗಲು ಮುಂದಾಗಿದ್ದರು. ಸದ್ಯ ಈ ಕೇಸ್​​ ಸಂಬಂಧ ಕೊಲೆಗೆ ಯತ್ನಿಸಿದ್ದ ಆರು ಆರೋಪಿಗಳನ್ನು ಮದ್ದೂರು ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಸದ್ಯ ಗಂಭೀರವಾಗಿ ಗಾಯಗೊಂಡ ಜೆಡಿಎಸ್​ ಮುಖಂಡ ಅಪ್ಪುಗೌಡ ಅವರಿಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಹಿಂದೆ ಅಪ್ಪುಗೌಡನ ಸ್ನೇಹಿತ, ಬಿಸಿನೆಸ್ ಪಾರ್ಟ್ನರ್ ಮಧು ಈ ಹತ್ಯೆಗೆ ಸ್ಕೆಚ್ ಹಾಕಿದ್ದಾರೆ ಎನ್ನಲಾಗಿದೆ. ವ್ಯವಹಾರದಲ್ಲಿ ಮನಸ್ತಾಪ ಉಂಟಾಗಿದ್ದರಿಂದ ಗೆಳೆಯರು ದೂರಾಗಿದ್ದರು. ಅಪ್ಪುಗೌಡ ಮಧು ವಿರುದ್ಧ ಚೆಕ್ ಬೌನ್ಸ್ ಕೇಸ್ ಹಾಕಿದ್ದರು. ಹೀಗಾಗಿ ಸಿಟ್ಟಿಗೆದ್ದ ಮಧು ಅಪ್ಪುಗೌಡನ‌ ಕೊಲೆಗೆ ನಿರ್ಧಾರ ಮಾಡಿದ್ದರಂತೆ ಎಂದು ಪೊಲೀಸ್​ ತನಿಖೆ ಮೂಲಕ ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

ಸ್ನೇಹಿತನಿಂದಲೇ ಜೆಡಿಎಸ್​​ ಮುಖಂಡನ ಮುಗಿಸಲು ಯತ್ನ; ಅಸಲಿಗೆ ನಡೆದಿದ್ದೇನು?

https://newsfirstlive.com/wp-content/uploads/2023/08/appu-gowda.jpg

    ಜೆಡಿಎಸ್ ಮುಖಂಡ ಅಪ್ಪುಗೌಡ ಮೇಲೆ ಮರ್ಡರ್ ಅಟ್ಯಾಕ್

    ದೇವರಿಗೆ ಕೈ ಮುಗಿವಾಗ ಕೊಲೆಗೆ ಯತ್ನಿಸಿದ ದುಷ್ಕರ್ಮಿಗಳು

    ಅದೃಷ್ಟವಶಾತ್​ ಪ್ರಾಣಾಪಾಯದಿಂದ ಅಪ್ಪುಗೌಡ ಪಾರಾದ್ರು!

ಮಂಡ್ಯ: ಜೆಡಿಎಸ್​ ಮುಖಂಡ ಅಪ್ಪುಗೌಡರನ್ನು ದುಷ್ಕರ್ಮಿಗಳು ಕೊಲೆ ಮಾಡಲು ಯತ್ನಿಸಿರೋ ಘಟನೆ ಜಿಲ್ಲೆಯ ಮದ್ದೂರಿನ ಆಂಜನೇಯಸ್ವಾಮಿ ದೇಗುಲದಲ್ಲಿ ನಡೆದಿದೆ. ದುಷ್ಕರ್ಮಿಗಳು ಕೊಲೆಗೆ ಯತ್ನಿಸಿರೋ ಭಯಾನಕ ದೃಶ್ಯ ಸಿಸಿಟಿವಿ ಕ್ಯಾಮೆರದಲ್ಲಿ ಸೆರೆಯಾಗಿದೆ.

ದೇವರ ದರ್ಶನಕ್ಕೆಂದು ಬಂದಿದ್ದ ವೇಳೆ ಅಪ್ಪುಗೌಡರ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ಪರಾರಿಯಾಗುತ್ತಿದ್ದ ಆರೋಪಿಗಳನ್ನು ಅಲ್ಲೆ ಇದ್ದ ಪೊಲೀಸ್ ಪೇದೆಯೊಬ್ಬರು ಬೆನ್ನಟ್ಟಿದ್ದಾರೆ. ಪರಿಣಾಮ ಸ್ಥಳದಲ್ಲೇ ಲಾಂಗ್ ಬಿಟ್ಟು ಆರೋಪಿಗಳು ಎಸ್ಕೇಪ್​​ ಆಗಲು ಮುಂದಾಗಿದ್ದರು. ಸದ್ಯ ಈ ಕೇಸ್​​ ಸಂಬಂಧ ಕೊಲೆಗೆ ಯತ್ನಿಸಿದ್ದ ಆರು ಆರೋಪಿಗಳನ್ನು ಮದ್ದೂರು ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಸದ್ಯ ಗಂಭೀರವಾಗಿ ಗಾಯಗೊಂಡ ಜೆಡಿಎಸ್​ ಮುಖಂಡ ಅಪ್ಪುಗೌಡ ಅವರಿಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಹಿಂದೆ ಅಪ್ಪುಗೌಡನ ಸ್ನೇಹಿತ, ಬಿಸಿನೆಸ್ ಪಾರ್ಟ್ನರ್ ಮಧು ಈ ಹತ್ಯೆಗೆ ಸ್ಕೆಚ್ ಹಾಕಿದ್ದಾರೆ ಎನ್ನಲಾಗಿದೆ. ವ್ಯವಹಾರದಲ್ಲಿ ಮನಸ್ತಾಪ ಉಂಟಾಗಿದ್ದರಿಂದ ಗೆಳೆಯರು ದೂರಾಗಿದ್ದರು. ಅಪ್ಪುಗೌಡ ಮಧು ವಿರುದ್ಧ ಚೆಕ್ ಬೌನ್ಸ್ ಕೇಸ್ ಹಾಕಿದ್ದರು. ಹೀಗಾಗಿ ಸಿಟ್ಟಿಗೆದ್ದ ಮಧು ಅಪ್ಪುಗೌಡನ‌ ಕೊಲೆಗೆ ನಿರ್ಧಾರ ಮಾಡಿದ್ದರಂತೆ ಎಂದು ಪೊಲೀಸ್​ ತನಿಖೆ ಮೂಲಕ ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

Load More