newsfirstkannada.com

‘ಲುಲುಕುಮಾರ್ʼಗಿಂತ ಬೆಸ್ಟ್‌ ಎಕನಾಮಿಸ್ಟ್‌ ಇನ್ನೊಬ್ಬರಿಲ್ಲ; ಡಿಕೆಶಿ ವಿರುದ್ಧ ಜೆಡಿಎಸ್​ ಟೀಕಾಪ್ರಹಾರ

Share :

05-07-2023

    ಸತ್ಯಕ್ಕೆ ಸಮಾಧಿ ಕಟ್ಟುವುದು ಕಾಂಗ್ರೆಸ್ ಚಾಳಿ ಎಂದ ಜೆಡಿಎಸ್​

    ಹೊಲ ಉತ್ತಿ, ಬೀಜ ಬಿತ್ತಿ ತೆಗೆದ ಫಸಲಿಗೆ ಲುಲು ಮಾಡಬಹುದಾ?

    ಕಾಂಗ್ರೆಸ್ ವಿರುದ್ಧ​ ಸರಣಿ ಟ್ವೀಟ್​ ಮಾಡುವ ಮೂಲಕ ಜೆಡಿಎಸ್​​ ಟಾಂಗ್​

ವೆಸ್ಟ್‌ ಎಂಡ್‌ ಹೋಟೆಲ್​ನಲ್ಲಿ ಒಂದು ದಿನದ ಬಾಡಿಗೆ ಎಷ್ಟು ಎಂದು ಪ್ರಶ್ನಿಸಿದ್ದ  ಕಾಂಗ್ರೆಸ್‌ʼಗೆ ಜೆಡಿಎಸ್‌ ಚಾಟಿ ಬೀಸಿದೆ. ಬೆಳಂ ಬೆಳಗ್ಗೆಯೇ ಸರಣಿ ಟ್ವೀಟ್‌ ಮೂಲಕ ಟಾಂಗ್​ ಕೊಟ್ಟಿದೆ.

‘ಕಮೀಷನ್ ಕಾಂಗ್ರೆಸ್ʼ

ಸತ್ಯಕ್ಕೆ ಸಮಾಧಿ ಕಟ್ಟುವುದು ಕಾಂಗ್ರೆಸ್ ಚಾಳಿ, ಅದು ಮೂಲತಃ ಸುಳ್ಳುಗಳ ವಾಚಾಳಿ‌. ಮುಖದ ಮೇಲೆ ಕೊಚ್ಚೆ ಹಾಕಿಕೊಂಡವನು ಆ ಗಲೀಜು ಅನ್ಯರ ಕಣ್ಣಿಗೆ ಬೀಳದಿರಲೆಂದು ಇನ್ನೊಬ್ಬರ ಮೇಲೆ ಅದನ್ನೇ ಎರಚಿ ಕುಣಿದನಂತೆ!. ‘ಕಮೀಷನ್ ಕಾಂಗ್ರೆಸ್ʼನ ಹೊಸ ವರಸೆ ಮತ್ತು ಹೊಸ ಕಸವರಿಕೆ!! ¼ ಎಂದು ಟ್ವೀಟ್​ ಮಾಡುವ ಮೂಲಕ ಟೀಕಿಸಿದ್ದಾರೆ. ಅದರ ಜೊತೆಗೆ #ಕಮೀಷನ್_ಕಾಂಗ್ರೆಸ್ ಎಂದು ಹ್ಯಾಷ್‌ʼಟ್ಯಾಗ್‌ ಬರೆಯುವ ಮೂಲಕ ಟ್ವೀಟ್​​ ಮಾಡಿದ್ದಾರೆ.

ಬೂಟಾಟಿಕೆ ದಾಸಯ್ಯನಿಗೆ ಮೈಯ್ಯೆಲ್ಲಾ ಪಂಗನಾಮ

ವೆಸ್ಟ್‌ ಎಂಡ್‌ ಲೆಕ್ಕ ಇರಲಿ, ಸಿಎಂ ಟಿಪ್ಪಣಿ ಬಿಕರಿಗೆ ಲೆಕ್ಕ ಇಡಿ. ಒಂದು ಎಸಿ ಹುದ್ದೆ, ಮೂರು ಟಿಪ್ಪಣಿ!! ಇದ್ಯಾವ ಅರ್ಥಶಾಸ್ತ್ರ?? ಕೌಟಿಲ್ಯನೂ ಬೆಚ್ಚಿಬೀಳುವಂಥ ರಾಜನೀತಿಯಾ!!.  ಈ 3 ಟಿಪ್ಪಣಿಗಳ ಹಣ ಪಕ್ಷದ ಮಂಡಿಗೋ ಅಥವಾ #YstTax ಹುಂಡಿಗೋ?. ಬೂಟಾಟಿಕೆ ದಾಸಯ್ಯನಿಗೆ ಮೈಯ್ಯೆಲ್ಲಾ ಪಂಗನಾಮ!! ಎಂದು ಸರಣಿ ಟ್ವೀಟ್​​ ಮಾಡಿದ್ದಾರೆ.

#YstTax

ಬಳಿಕ ಮಾಜಿ ಮುಖ್ಯಮಂತ್ರಿಗಳಾದ ಹೆಚ್‌ಡಿಕೆ ಅವರು #YstTax ಬಗ್ಗೆ ಹೇಳಿದ್ದಾರೆ. ಕಾಸಿಗಾಗಿ ಹುದ್ದೆ ದಂಧೆಯನ್ನು ದಾಖಲೆ ಸಮೇತ ಬಿಚ್ಚಿಟ್ಟಿದ್ದಾರೆ. ಆ ಅಸಹ್ಯ ತನ್ನದಲ್ಲ ಎನ್ನುವ ʼಅವಿವೇಕʼ ಕಾಂಗ್ರೆಸ್ ಪಕ್ಷದ್ದು. ಅವಿವೇಕವನ್ನು ಮುಚ್ಚಿಕೊಳ್ಳಲು ಈಗ ವೆಸ್ಟ್ʼಎಂಡ್ ವಿಷಯ ತೆಗೆದಿದೆ ಎಂದು ಮಗದೊಂದು ಟ್ವೀಟ್​​ ಮಾಡಿದೆ.

‘ಲುಲುಕುಮಾರ್ʼ

ವೆಸ್ಟ್‌ʼಎಂಡ್‌ ಬಾಡಿಗೆ ಮಾತಿರಲಿ; ಲುಲು ಮಾಲು ವಿಷಯಕ್ಕೆ ಬರೋಣ. ಹೊಲ ಉತ್ತಿ, ಬೀಜ ಬಿತ್ತಿ ಬೆವರಿನ ಹೊಳೆ ಹರಿಸಿ ತೆಗೆದ ಫಸಲಿಗೆ ಲುಲು ಮಾಡಬಹುದಾ?. ಮಾಡಬಹುದಾದರೆ, ನಿಮ್ಮ ‘ಲುಲುಕುಮಾರ್ʼಗಿಂತ ಬೆಸ್ಟ್‌ ಎಕನಾಮಿಸ್ಟ್‌ ಇನ್ನೊಬ್ಬರಿಲ್ಲ. ಅವರನ್ನೇ ವಿತ್ತಮಂತ್ರಿ ಮಾಡಬಹುದಿತ್ತಲ್ಲ ಎಂದು ಜೆಡಿಎಸ್​ ಪ್ರಶ್ನೆಸಿದೆ. ಜೊತೆಗೆ ಟ್ವಿಟ್ಟರ್​ನಲ್ಲಿ #LuLuKumar ಎಂದು ಡಿಕೆ ಶಿವಕುಮಾರ್​ಗೂ ಟಾಂಗ್ ಕೊಟ್ಟಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಲುಲುಕುಮಾರ್ʼಗಿಂತ ಬೆಸ್ಟ್‌ ಎಕನಾಮಿಸ್ಟ್‌ ಇನ್ನೊಬ್ಬರಿಲ್ಲ; ಡಿಕೆಶಿ ವಿರುದ್ಧ ಜೆಡಿಎಸ್​ ಟೀಕಾಪ್ರಹಾರ

https://newsfirstlive.com/wp-content/uploads/2023/07/Dk-Shivakumar.jpg

    ಸತ್ಯಕ್ಕೆ ಸಮಾಧಿ ಕಟ್ಟುವುದು ಕಾಂಗ್ರೆಸ್ ಚಾಳಿ ಎಂದ ಜೆಡಿಎಸ್​

    ಹೊಲ ಉತ್ತಿ, ಬೀಜ ಬಿತ್ತಿ ತೆಗೆದ ಫಸಲಿಗೆ ಲುಲು ಮಾಡಬಹುದಾ?

    ಕಾಂಗ್ರೆಸ್ ವಿರುದ್ಧ​ ಸರಣಿ ಟ್ವೀಟ್​ ಮಾಡುವ ಮೂಲಕ ಜೆಡಿಎಸ್​​ ಟಾಂಗ್​

ವೆಸ್ಟ್‌ ಎಂಡ್‌ ಹೋಟೆಲ್​ನಲ್ಲಿ ಒಂದು ದಿನದ ಬಾಡಿಗೆ ಎಷ್ಟು ಎಂದು ಪ್ರಶ್ನಿಸಿದ್ದ  ಕಾಂಗ್ರೆಸ್‌ʼಗೆ ಜೆಡಿಎಸ್‌ ಚಾಟಿ ಬೀಸಿದೆ. ಬೆಳಂ ಬೆಳಗ್ಗೆಯೇ ಸರಣಿ ಟ್ವೀಟ್‌ ಮೂಲಕ ಟಾಂಗ್​ ಕೊಟ್ಟಿದೆ.

‘ಕಮೀಷನ್ ಕಾಂಗ್ರೆಸ್ʼ

ಸತ್ಯಕ್ಕೆ ಸಮಾಧಿ ಕಟ್ಟುವುದು ಕಾಂಗ್ರೆಸ್ ಚಾಳಿ, ಅದು ಮೂಲತಃ ಸುಳ್ಳುಗಳ ವಾಚಾಳಿ‌. ಮುಖದ ಮೇಲೆ ಕೊಚ್ಚೆ ಹಾಕಿಕೊಂಡವನು ಆ ಗಲೀಜು ಅನ್ಯರ ಕಣ್ಣಿಗೆ ಬೀಳದಿರಲೆಂದು ಇನ್ನೊಬ್ಬರ ಮೇಲೆ ಅದನ್ನೇ ಎರಚಿ ಕುಣಿದನಂತೆ!. ‘ಕಮೀಷನ್ ಕಾಂಗ್ರೆಸ್ʼನ ಹೊಸ ವರಸೆ ಮತ್ತು ಹೊಸ ಕಸವರಿಕೆ!! ¼ ಎಂದು ಟ್ವೀಟ್​ ಮಾಡುವ ಮೂಲಕ ಟೀಕಿಸಿದ್ದಾರೆ. ಅದರ ಜೊತೆಗೆ #ಕಮೀಷನ್_ಕಾಂಗ್ರೆಸ್ ಎಂದು ಹ್ಯಾಷ್‌ʼಟ್ಯಾಗ್‌ ಬರೆಯುವ ಮೂಲಕ ಟ್ವೀಟ್​​ ಮಾಡಿದ್ದಾರೆ.

ಬೂಟಾಟಿಕೆ ದಾಸಯ್ಯನಿಗೆ ಮೈಯ್ಯೆಲ್ಲಾ ಪಂಗನಾಮ

ವೆಸ್ಟ್‌ ಎಂಡ್‌ ಲೆಕ್ಕ ಇರಲಿ, ಸಿಎಂ ಟಿಪ್ಪಣಿ ಬಿಕರಿಗೆ ಲೆಕ್ಕ ಇಡಿ. ಒಂದು ಎಸಿ ಹುದ್ದೆ, ಮೂರು ಟಿಪ್ಪಣಿ!! ಇದ್ಯಾವ ಅರ್ಥಶಾಸ್ತ್ರ?? ಕೌಟಿಲ್ಯನೂ ಬೆಚ್ಚಿಬೀಳುವಂಥ ರಾಜನೀತಿಯಾ!!.  ಈ 3 ಟಿಪ್ಪಣಿಗಳ ಹಣ ಪಕ್ಷದ ಮಂಡಿಗೋ ಅಥವಾ #YstTax ಹುಂಡಿಗೋ?. ಬೂಟಾಟಿಕೆ ದಾಸಯ್ಯನಿಗೆ ಮೈಯ್ಯೆಲ್ಲಾ ಪಂಗನಾಮ!! ಎಂದು ಸರಣಿ ಟ್ವೀಟ್​​ ಮಾಡಿದ್ದಾರೆ.

#YstTax

ಬಳಿಕ ಮಾಜಿ ಮುಖ್ಯಮಂತ್ರಿಗಳಾದ ಹೆಚ್‌ಡಿಕೆ ಅವರು #YstTax ಬಗ್ಗೆ ಹೇಳಿದ್ದಾರೆ. ಕಾಸಿಗಾಗಿ ಹುದ್ದೆ ದಂಧೆಯನ್ನು ದಾಖಲೆ ಸಮೇತ ಬಿಚ್ಚಿಟ್ಟಿದ್ದಾರೆ. ಆ ಅಸಹ್ಯ ತನ್ನದಲ್ಲ ಎನ್ನುವ ʼಅವಿವೇಕʼ ಕಾಂಗ್ರೆಸ್ ಪಕ್ಷದ್ದು. ಅವಿವೇಕವನ್ನು ಮುಚ್ಚಿಕೊಳ್ಳಲು ಈಗ ವೆಸ್ಟ್ʼಎಂಡ್ ವಿಷಯ ತೆಗೆದಿದೆ ಎಂದು ಮಗದೊಂದು ಟ್ವೀಟ್​​ ಮಾಡಿದೆ.

‘ಲುಲುಕುಮಾರ್ʼ

ವೆಸ್ಟ್‌ʼಎಂಡ್‌ ಬಾಡಿಗೆ ಮಾತಿರಲಿ; ಲುಲು ಮಾಲು ವಿಷಯಕ್ಕೆ ಬರೋಣ. ಹೊಲ ಉತ್ತಿ, ಬೀಜ ಬಿತ್ತಿ ಬೆವರಿನ ಹೊಳೆ ಹರಿಸಿ ತೆಗೆದ ಫಸಲಿಗೆ ಲುಲು ಮಾಡಬಹುದಾ?. ಮಾಡಬಹುದಾದರೆ, ನಿಮ್ಮ ‘ಲುಲುಕುಮಾರ್ʼಗಿಂತ ಬೆಸ್ಟ್‌ ಎಕನಾಮಿಸ್ಟ್‌ ಇನ್ನೊಬ್ಬರಿಲ್ಲ. ಅವರನ್ನೇ ವಿತ್ತಮಂತ್ರಿ ಮಾಡಬಹುದಿತ್ತಲ್ಲ ಎಂದು ಜೆಡಿಎಸ್​ ಪ್ರಶ್ನೆಸಿದೆ. ಜೊತೆಗೆ ಟ್ವಿಟ್ಟರ್​ನಲ್ಲಿ #LuLuKumar ಎಂದು ಡಿಕೆ ಶಿವಕುಮಾರ್​ಗೂ ಟಾಂಗ್ ಕೊಟ್ಟಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More