ನೀವೇನು ಬೇಜಾರು ಮಾಡ್ಕೋಬೇಡಿ, ನಾನೇಲ್ಲ ನೋಡಿಕೊಳ್ತಿದ್ದೇನೆ
ಬಿಗ್ಬಾಸ್ ಮನೆಯಲ್ಲಿ ನೀವು ಗೆದ್ದು ಬಂದು ಮಾತು ಉಳಿಸಿಕೊಳ್ಳಿ
ವರ್ತೂರು ಸಂತೋಷ್ ಹೇಳಿದ್ದ ಮಾತಿಗೆ ಬೇಜರಾಗಿದ್ದ ವೀಕ್ಷಕರು..!
ವರ್ತೂರು ಸಂತೋಷ್ ಅವರು ಬಿಗ್ ಬಾಸ್ ಮನೆಯಿಂದ ಆಚೆ ಬರಬೇಕೆಂದು ನಿರ್ಧಾರ ಮಾಡಿದ್ದರು. ಸಂತೋಷ್ ಅವರ ಮನವೊಲಿಸಲು ಕಿಚ್ಚ ಸುದೀಪ್ ಕೂಡ ಒಂದಷ್ಟು ವಿಚಾರಗಳನ್ನು ಹೇಳಿ ಮನವೊಲಿಸಿದ್ದರು. ನಿಮಗೆ ಸಂಬಂಧಿಸಿದ ಎಲ್ಲರೂ ಕ್ಷೇಮವಾಗಿದ್ದು ಬೇಸರ ಬೇಡ ಆರಾಮಾಗಿ ಮನೆಯಲ್ಲಿರಿ ಎಂದು ಕಿಚ್ಚ ಹೇಳಿದ್ದರು. ದೀಪಾವಳಿ ಹಬ್ಬದ ಖುಷಿಯ ಜೊತೆ ಬಿಗ್ ಬಾಸ್ ವೀಕ್ಷಕರಿಗೆ ವರ್ತೂರು ಸಂತೋಷ್ ಕೊಂಚ ಬೇಸರ ತರಿಸಿದ್ದರು. ಸದ್ಯ ಈ ಬಗ್ಗೆ ಮಾತನಾಡಿದ ಅವರ ಮನೆಗೆಲಸದ ವ್ಯಕ್ತಿ ನೀವು ಗೆದ್ದುಕೊಂಡೆ ಬನ್ನಿ ಎಂದು ಪ್ರೋತ್ಸಾಹದ ಮಾತುಗಳನ್ನಾಡಿದ್ದಾರೆ.
ನಾವು ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದೇವೆ. ನಮ್ಮ ಮಾಲೀಕನನ್ನು ಬಿಗ್ಬಾಸ್ಗೆ ಕಳಿಸಿಕೊಟ್ಟಿದ್ದೇವೆ. ಅವರು ಬಿಗ್ಬಾಸ್ ಮನೆಗೆ ಹೋದ ಮೇಲೆ ಮನೆಯಲ್ಲಿನ ಹಳ್ಳಿಕಾರ್ ತಳಿಗಳ ದನಗಳನ್ನೆಲ್ಲ ನಾನೇ ನೋಡಿಕೊಳ್ಳುತ್ತಿದ್ದೇನೆ. ನೀವೇನು ಬೇಜಾರು ಮಾಡ್ಕೋಬೇಡಿ. ನಾನೇಲ್ಲ ನೋಡಿಕೊಳ್ಳುತ್ತೇನೆ. ಕ್ಷೇಮವಾಗಿ ಆಡಿಕೊಂಡು ಗೆದ್ದು ಬನ್ನಿ ಎಂದು ಸಂತೋಷ್ ಅವರಿಗೆ ಧೈರ್ಯ ತುಂಬಿದ್ದಾರೆ.
ದಿನಲೂ ಬಿಗ್ ಬಾಸ್ ನೋಡುತ್ತಿದ್ದೇನೆ. ವರ್ತೂರು ಸಂತೋಷ್ ಚೆನ್ನಾಗಿ ಆಡುತ್ತಿದ್ದಾರೆ. ಗೆದ್ದುಕೊಂಡು ಬರುತ್ತೇನೆಂದು ಮಾರಮ್ಮ ದೇವತೆಗೆ, ನನಗೆ ಮಾತುಕೊಟ್ಟು ಹೋಗಿದ್ದೀಯಾ. ಅದರಂತೆ ನೀನು ಅಲ್ಲಿ ಗೆದ್ದು ಮಾತು ಉಳಿಸಿಕೊಳ್ಳಬೇಕು ಎಂದು ಅವರ ಮನೆ ಕೆಲಸ ವ್ಯಕ್ತಿ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನೀವೇನು ಬೇಜಾರು ಮಾಡ್ಕೋಬೇಡಿ, ನಾನೇಲ್ಲ ನೋಡಿಕೊಳ್ತಿದ್ದೇನೆ
ಬಿಗ್ಬಾಸ್ ಮನೆಯಲ್ಲಿ ನೀವು ಗೆದ್ದು ಬಂದು ಮಾತು ಉಳಿಸಿಕೊಳ್ಳಿ
ವರ್ತೂರು ಸಂತೋಷ್ ಹೇಳಿದ್ದ ಮಾತಿಗೆ ಬೇಜರಾಗಿದ್ದ ವೀಕ್ಷಕರು..!
ವರ್ತೂರು ಸಂತೋಷ್ ಅವರು ಬಿಗ್ ಬಾಸ್ ಮನೆಯಿಂದ ಆಚೆ ಬರಬೇಕೆಂದು ನಿರ್ಧಾರ ಮಾಡಿದ್ದರು. ಸಂತೋಷ್ ಅವರ ಮನವೊಲಿಸಲು ಕಿಚ್ಚ ಸುದೀಪ್ ಕೂಡ ಒಂದಷ್ಟು ವಿಚಾರಗಳನ್ನು ಹೇಳಿ ಮನವೊಲಿಸಿದ್ದರು. ನಿಮಗೆ ಸಂಬಂಧಿಸಿದ ಎಲ್ಲರೂ ಕ್ಷೇಮವಾಗಿದ್ದು ಬೇಸರ ಬೇಡ ಆರಾಮಾಗಿ ಮನೆಯಲ್ಲಿರಿ ಎಂದು ಕಿಚ್ಚ ಹೇಳಿದ್ದರು. ದೀಪಾವಳಿ ಹಬ್ಬದ ಖುಷಿಯ ಜೊತೆ ಬಿಗ್ ಬಾಸ್ ವೀಕ್ಷಕರಿಗೆ ವರ್ತೂರು ಸಂತೋಷ್ ಕೊಂಚ ಬೇಸರ ತರಿಸಿದ್ದರು. ಸದ್ಯ ಈ ಬಗ್ಗೆ ಮಾತನಾಡಿದ ಅವರ ಮನೆಗೆಲಸದ ವ್ಯಕ್ತಿ ನೀವು ಗೆದ್ದುಕೊಂಡೆ ಬನ್ನಿ ಎಂದು ಪ್ರೋತ್ಸಾಹದ ಮಾತುಗಳನ್ನಾಡಿದ್ದಾರೆ.
ನಾವು ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದೇವೆ. ನಮ್ಮ ಮಾಲೀಕನನ್ನು ಬಿಗ್ಬಾಸ್ಗೆ ಕಳಿಸಿಕೊಟ್ಟಿದ್ದೇವೆ. ಅವರು ಬಿಗ್ಬಾಸ್ ಮನೆಗೆ ಹೋದ ಮೇಲೆ ಮನೆಯಲ್ಲಿನ ಹಳ್ಳಿಕಾರ್ ತಳಿಗಳ ದನಗಳನ್ನೆಲ್ಲ ನಾನೇ ನೋಡಿಕೊಳ್ಳುತ್ತಿದ್ದೇನೆ. ನೀವೇನು ಬೇಜಾರು ಮಾಡ್ಕೋಬೇಡಿ. ನಾನೇಲ್ಲ ನೋಡಿಕೊಳ್ಳುತ್ತೇನೆ. ಕ್ಷೇಮವಾಗಿ ಆಡಿಕೊಂಡು ಗೆದ್ದು ಬನ್ನಿ ಎಂದು ಸಂತೋಷ್ ಅವರಿಗೆ ಧೈರ್ಯ ತುಂಬಿದ್ದಾರೆ.
ದಿನಲೂ ಬಿಗ್ ಬಾಸ್ ನೋಡುತ್ತಿದ್ದೇನೆ. ವರ್ತೂರು ಸಂತೋಷ್ ಚೆನ್ನಾಗಿ ಆಡುತ್ತಿದ್ದಾರೆ. ಗೆದ್ದುಕೊಂಡು ಬರುತ್ತೇನೆಂದು ಮಾರಮ್ಮ ದೇವತೆಗೆ, ನನಗೆ ಮಾತುಕೊಟ್ಟು ಹೋಗಿದ್ದೀಯಾ. ಅದರಂತೆ ನೀನು ಅಲ್ಲಿ ಗೆದ್ದು ಮಾತು ಉಳಿಸಿಕೊಳ್ಳಬೇಕು ಎಂದು ಅವರ ಮನೆ ಕೆಲಸ ವ್ಯಕ್ತಿ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ