newsfirstkannada.com

RCB ತಂಡದಲ್ಲಿ ಕನ್ನಡಿಗರ ಕಡೆಗಣನೆ; ಮ್ಯಾನೇಜ್​ಮೆಂಟ್​​ಗೆ ಹಿಗ್ಗಾಮುಗ್ಗಾ ಜಾಡಿಸಿದ ಮಾಜಿ ಕೋಚ್​

Share :

24-05-2023

    ಮ್ಯಾನೇಜ್​ಮೆಂಟ್​ ವಿರುದ್ಧ ರೊಚ್ಚಿ ಗೆದ್ದ ಕನ್ನಡಿಗರು

    ಮ್ಯಾನೇಜ್​ಮೆಂಟ್​​ಗೆ ಹಿಗ್ಗಾಮುಗ್ಗಾ ಜಾಡಿಸಿದ ಮಾಜಿ ಕೋಚ್​

    ಬದಲಾಗಬೇಕು ಮ್ಯಾನೇಜ್​ಮೆಂಟ್​​, ಇಲ್ದಿದ್ರೆ ಕಪ್​ ಕನಸೆ

ಪ್ರತಿ ಬಾರಿ ಆರ್​​ಸಿಬಿ ಐಪಿಎಲ್​​ನಿಂದ ಹೊರ ಬಿದ್ದಾಗ್ಲೂ ಈ ಸಲ ಕಪ್​ ನಮ್ದೇ ಅನ್ನೋ ಅಭಿಮಾನಿಗಳು ಮುಂದಿನ ಸಲ ಕಪ್​ ನಮ್ದೇ ಅಂತಿದ್ರು. ಆದ್ರೆ, ಈ ಸೀಸನ್​ನಲ್ಲಿ ಅದು ಬದಲಾಗಿದೆ. ಕಪ್​ಗಾಗಿ ಕಾದು ಕಾದು ಸಾಕಾದ ಅಭಿಮಾನಿಗಳ ತಾಳ್ಮೆಯ ಕಟ್ಟೆಯೊಡೆದಿದೆ. ಫ್ಯಾನ್ಸ್​ ಮಾತ್ರವಲ್ಲ. ಕರ್ನಾಟಕದ ಮಾಜಿ ಕ್ರಿಕೆಟರ್​ಗಳು ಕೂಡ ಆಕ್ರೋಶ ಹೊರ ಹಾಕ್ತಿದ್ದಾರೆ.

ಐಪಿಎಲ್​ ಅಂದ್ರೆ ಆರ್​​ಸಿಬಿ, ಆರ್​​ಸಿಬಿ ಅಂದ್ರೆ ಎಂಟರ್​​ಟೈನ್​ಮೆಂಟ್​​. ಸೋಲಲಿ ಗೆಲ್ಲಲಿ ಆರ್​​ಸಿಬಿ ನಮ್​ ಪ್ರಾಣ, ಆರ್​​ಸಿಬಿನೇ ಜೀವ, 6 ಸಲ ಸೋತ್ರೂ ಆರ್​​ಸಿಬಿ, 60 ಸಲ ಸೋತ್ರೂ ಆರ್​​ಸಿಬಿ.. ಅಬ್ಬಾ..! ಒಂದಾ ಎರಡಾ ಪ್ರತಿ ಬಾರಿ ಸೀಸನ್​ ಆರಂಭಕ್ಕೂ ಮುನ್ನ ಕಪ್​ ನಮ್ದೇ ಅನ್ನೋ ಫ್ಯಾನ್ಸ್​, ಅಂತ್ಯದಲ್ಲಿ ಹೇಳೋ ಡೈಲಾಗ್​ಗಳಿವು.

ಈ ಸೀಸನ್​ನಲ್ಲೂ ಅದೇ ರಾಗ, ಅದೇ ಹಾಡು..!
ಐಪಿಎಲ್​ ಸೀಸನ್​ 16 ಆರಂಭಕ್ಕೂ ಮುನ್ನ ಆರ್​​ಸಿಬಿ ಅಭಿಮಾನಿಗಳ ಅಬ್ಬರ ಮುಗಿಲುಮುಟ್ಟಿತ್ತು. ಈ ಸಲ ಕಪ್​ ನಮ್ದೇ ಆನ್ನೋ ಮಾತು ಸೋಷಿಯಲ್​ ಮೀಡಿಯಾಗಳಿಂದ ಹಿಡಿದು, ಚಿನ್ನಸ್ವಾಮಿ ಅಂಗಳದವರೆಗೆ ಮಾರ್ಧನಿಸಿತ್ತು.. ಆದ್ರೆ, ಅಂತ್ಯದಲ್ಲಿ ಕಪ್​ ನಮ್ದೇ ಅನ್ನೋ ಕನಸು ನುಚ್ಚು ನೂರಾಯ್ತು.

ಮ್ಯಾನೇಜ್​ಮೆಂಟ್​ ವಿರುದ್ಧ ರೊಚ್ಚಿ ಗೆದ್ದ ಕನ್ನಡಿಗರು.!
ಒಂದಲ್ಲ ಎರಡಲ್ಲ.. ಇದು ಸೇರಿ 16 ಸೀಸನ್​ ಕಳೀತು.. ಕಪ್​ ಮಾತ್ರ ನಮ್ಮದಾಗಲಿಲ್ಲ. ಕೊನೆ ಪಕ್ಷ ತಂಡದಲ್ಲೂ ಕನ್ನಡಿಗರಿಗೆ ತಂಡದಲ್ಲಿ ಸ್ಥಾನ ಸಿಗಲ್ಲ.. ಅಪ್ಪಿ ತಪ್ಪಿ ಪ್ಲೇಯಿಂಗ್​ ಇಲೆವೆನ್​ನಲ್ಲಿ ಅವಕಾಶ ಸಿಕ್ರೂ, ಒಂದು ಫ್ಲಾಫ್​ ಶೋ ನೀಡಿದ್ರೆ ಗೇಟ್​ಪಾಸ್​ ಫಿಕ್ಸ್​. ಅದೇ ಬೇರೆ ರಾಜ್ಯದವಾದ್ರೆ, ನೆಕ್ಸ್ಟ್​​ ಲೆವೆಲ್​ಗೆ ಬ್ಯಾಕ್​ ಮಾಡ್ತಾರೆ. ಅನುಜ್​ ರಾವತ್​, ಮಹಿಪಾಲ್​ ಲೋಮ್ರರ್​, ಶಹಬಾಜ್​ ಅಹಮ್ಮದ್​, ದಿನೇಶ್​ ಕಾರ್ತಿಕ್​, ಸುಯಶ್​ ಪ್ರಭುದೇಸಾಯಿ. ಇವರೆಲ್ಲಾ ಕಡಿದು ಗುಡ್ಡೆ ಹಾಕಿದ್ದು ಏನಿಲ್ಲ.. ಆದ್ರೂ, ಆರ್​​ಸಿಬಿ ಟ್ಯಾಲೆಂಟ್​​ ಸ್ಕೌಟ್​ ಹಾಗೂ ಮ್ಯಾನೇಜ್​ಮೆಂಟ್​ಗೆ ಇವರೆಲ್ಲಾ ಭವಿಷ್ಯದ ಲೆಜೆಂಡ್ಸ್​​.

ಮ್ಯಾನೇಜ್​ಮೆಂಟ್​​ಗೆ ಹಿಗ್ಗಾಮುಗ್ಗಾ ಜಾಡಿಸಿದ ಮಾಜಿ ಕೋಚ್​.!
ಕರ್ನಾಟಕದ ಆಟಗಾರರು ಮಾತ್ರವಲ್ಲ. ಸಪೋರ್ಟ್​​ ಸ್ಟಾಫ್​ಗಳ ಆಯ್ಕೆ ವಿಚಾರದಲ್ಲೂ ಕನ್ನಡಿಗರನ್ನ ಫ್ರಾಂಚೈಸಿ ಮೂಲೆಗುಂಪು ಮಾಡ್ತಿದೆ. ಇಷ್ಟು ದಿನ ಫ್ಯಾನ್ಸ್​ ಮಾತ್ರ, ಫ್ರಾಂಚೈಸಿಯ ಈ ನಡೆಯನ್ನ ಪ್ರಶ್ನೆ ಮಾಡ್ತಿದ್ರು. ಇದೀಗ ಕರ್ನಾಟಕದ ಕ್ರಿಕೆಟಿಗರು ಕೂಡ ಏನ್​ ನಡೀತಾ ಇದೆ ಅಂತಾ ಬಹಿರಂಗವಾಗಿ ಕೇಳ್ತಿದ್ದಾರೆ. ಟೀಮ್​ ಇಂಡಿಯಾ ಮಾಜಿ ಕ್ರಿಕೆಟಿಗ, ಇದೇ ಆರ್​​ಸಿಬಿಯ ಮಾಜಿ ಅಸಿಸ್ಟೆಂಟ್​ ಕೋಚ್​, ಕನ್ನಡಿಗ ವಿಜಯ್​ ಭಾರದ್ವಾಜ್​ ಆರ್​​ಸಿಬಿ ಮ್ಯಾನೇಜ್​ಮೆಂಟ್​ ವಿರುದ್ಧ ಕೆಂಡ ಕಾರಿದ್ದಾರೆ.

ಆರ್​​ಸಿಬಿ ಇನ್​ಸೈಡರ್​ನಲ್ಲಿ ಕುಂಬ್ಳೆ ಕಿಡಿನುಡಿ.!
ತಮಿಳುನಾಡಿನವರು ಆರ್​​ಸಿಬಿ ಟೀಮ್​ನಲ್ಲಿ ಕೆಲಸ ಮಾಡಬಾರ್ದು ಅಂತೇನಿಲ್ಲ.. ಹಾಗಂತ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಅಂತಾ ಹೆಸರಿಟ್ಟುಕೊಂಡು, ಕನ್ನಡಿಗರನ್ನ ಸಂಪೂರ್ಣವಾಗಿ ಮೂಲೆಗುಂಪು ಮಾಡೋದು ಎಷ್ಟು ಸರಿ..? ಮಾಜಿ ಕ್ರಿಕೆಟಿಗ, ಆರ್​​ಸಿಬಿ ಮಾಜಿ ಕ್ಯಾಪ್ಟನ್​ ಅನಿಲ್​​ ಕುಂಬ್ಳೆ ಈ ಬಗ್ಗೆ ಆರ್​​ಸಿಬಿಯ ಇನ್​ಸೈಡರ್​​ ಶೋನಲ್ಲೇ ನೇರಾನೇರವಾಗಿ ಮಾತನಾಡಿದ್ದಾರೆ.

ಕಾದು ಕಾದು ಸಾಕಾಯ್ತು, ಫ್ಯಾನ್ಸ್​ಗೂ ಸುಸ್ತಾಯ್ತು.!
ಫ್ಯಾನ್ಸ್​ ಮುಖದ ಮೇಲಿರೋ ನಿರಾಸೆ, ಹತಾಶೆಯೇ ಎಲ್ಲವನ್ನ ಹೇಳುತ್ತೆ.. ಈ ಸೀಸನ್​, ನೆಕ್ಸ್ಟ್​​​ ಸೀಸನ್​ ಅಂತಾ ಕಾದು ಕಾದು ಅಭಿಮಾನಿಗಳು ರೋಸಿ ಹೋಗಿದ್ದಾರೆ. ಇಷ್ಟೆಲ್ಲಾ ಆದ ಮೇಲೆ ಅಭಿಮಾನಿಗಳ ಅಪರಿಮಿತ ಅಭಿಮಾನ ಆರ್​​ಸಿಬಿಗೆ ಬಂಡವಾಳವಾಗಿಬಿಟ್ಟಿದ್ಯಾ.? ಅನ್ನೋ ಪ್ರಶ್ನೆ ಹುಟ್ಟದೆ ಇರಲ್ಲ..

ಬದಲಾಗಬೇಕು ಮ್ಯಾನೇಜ್​ಮೆಂಟ್​​, ಇಲ್ದಿದ್ರೆ ಕಪ್​ ಕನಸೆ.!
ಆರ್​​ಸಿಬಿಯಲ್ಲಿ ಕನ್ನಡಿಗಿರ ಕಡೆಗಣನೆ ಅತಿರೇಕದ ಹಂತ ತಲುಪಿದ್ದು, ಓನರ್​ಶಿಪ್​ ಬದಲಾದ ಮೇಲೆ.. ಸದ್ಯ ಇರೋ ಮ್ಯಾನೇಜ್​ಮೆಂಟ್​​ ಬಂದ ಮೇಲಂತೂ ಮೆಗಾ ಹರಾಜಿನಲ್ಲಿ 3ರಿಂದ 4 ಸ್ಟಾರ್​ಗಳನ್ನ ಕೋಟಿ ಕೋಟಿ ಸುರಿ ಖರೀದಿಸೋದು, ಸ್ಪಾನ್ಸರ್​ಶಿಪ್​ ಡೀಲ್​ಗಳನ್ನ ಸೆಳೆದುಕೊಳ್ಳೋದಷ್ಟೇ ಕೆಲಸವಾಗಿಬಿಟ್ಟಿದೆ. ಈ ಇನ್​ಕಮ್​ ಲೆಕ್ಕಾಚಾರದಲ್ಲಿ ಕ್ರಿಕೆಟ್​ ಆಡೋದು ನಮ್ಮ ತಂಡದ ಕೆಲಸ ಅನ್ನೋದೆ ಮರೆತಂತಾಗಿಬಿಟ್ಟಿದೆ. ಈ ವಿಚಾರದಲ್ಲಿ ಮುಂದಾದ್ರೂ ಎಚ್ಚೆತ್ತು ಕೊಳ್ಳಬೇಕು.. ಇಲ್ಲದಿದ್ರೆ, ಸತತ ನಿರಾಸೆ ಮೂಡಿಸಿದ್ರೂ, ಬೆಂಬಲಿಸಿ, ಪ್ರೀತಿಸ್ತಾ ಇರೋ ಫ್ಯಾನ್ಸ್​ ತಿರುಗಿಬೀಳೋದ್ರಲ್ಲಿ ಅನುಮಾನವೇ ಬೇಡ..

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

RCB ತಂಡದಲ್ಲಿ ಕನ್ನಡಿಗರ ಕಡೆಗಣನೆ; ಮ್ಯಾನೇಜ್​ಮೆಂಟ್​​ಗೆ ಹಿಗ್ಗಾಮುಗ್ಗಾ ಜಾಡಿಸಿದ ಮಾಜಿ ಕೋಚ್​

https://newsfirstlive.com/wp-content/uploads/2023/05/RCB-13.jpg

    ಮ್ಯಾನೇಜ್​ಮೆಂಟ್​ ವಿರುದ್ಧ ರೊಚ್ಚಿ ಗೆದ್ದ ಕನ್ನಡಿಗರು

    ಮ್ಯಾನೇಜ್​ಮೆಂಟ್​​ಗೆ ಹಿಗ್ಗಾಮುಗ್ಗಾ ಜಾಡಿಸಿದ ಮಾಜಿ ಕೋಚ್​

    ಬದಲಾಗಬೇಕು ಮ್ಯಾನೇಜ್​ಮೆಂಟ್​​, ಇಲ್ದಿದ್ರೆ ಕಪ್​ ಕನಸೆ

ಪ್ರತಿ ಬಾರಿ ಆರ್​​ಸಿಬಿ ಐಪಿಎಲ್​​ನಿಂದ ಹೊರ ಬಿದ್ದಾಗ್ಲೂ ಈ ಸಲ ಕಪ್​ ನಮ್ದೇ ಅನ್ನೋ ಅಭಿಮಾನಿಗಳು ಮುಂದಿನ ಸಲ ಕಪ್​ ನಮ್ದೇ ಅಂತಿದ್ರು. ಆದ್ರೆ, ಈ ಸೀಸನ್​ನಲ್ಲಿ ಅದು ಬದಲಾಗಿದೆ. ಕಪ್​ಗಾಗಿ ಕಾದು ಕಾದು ಸಾಕಾದ ಅಭಿಮಾನಿಗಳ ತಾಳ್ಮೆಯ ಕಟ್ಟೆಯೊಡೆದಿದೆ. ಫ್ಯಾನ್ಸ್​ ಮಾತ್ರವಲ್ಲ. ಕರ್ನಾಟಕದ ಮಾಜಿ ಕ್ರಿಕೆಟರ್​ಗಳು ಕೂಡ ಆಕ್ರೋಶ ಹೊರ ಹಾಕ್ತಿದ್ದಾರೆ.

ಐಪಿಎಲ್​ ಅಂದ್ರೆ ಆರ್​​ಸಿಬಿ, ಆರ್​​ಸಿಬಿ ಅಂದ್ರೆ ಎಂಟರ್​​ಟೈನ್​ಮೆಂಟ್​​. ಸೋಲಲಿ ಗೆಲ್ಲಲಿ ಆರ್​​ಸಿಬಿ ನಮ್​ ಪ್ರಾಣ, ಆರ್​​ಸಿಬಿನೇ ಜೀವ, 6 ಸಲ ಸೋತ್ರೂ ಆರ್​​ಸಿಬಿ, 60 ಸಲ ಸೋತ್ರೂ ಆರ್​​ಸಿಬಿ.. ಅಬ್ಬಾ..! ಒಂದಾ ಎರಡಾ ಪ್ರತಿ ಬಾರಿ ಸೀಸನ್​ ಆರಂಭಕ್ಕೂ ಮುನ್ನ ಕಪ್​ ನಮ್ದೇ ಅನ್ನೋ ಫ್ಯಾನ್ಸ್​, ಅಂತ್ಯದಲ್ಲಿ ಹೇಳೋ ಡೈಲಾಗ್​ಗಳಿವು.

ಈ ಸೀಸನ್​ನಲ್ಲೂ ಅದೇ ರಾಗ, ಅದೇ ಹಾಡು..!
ಐಪಿಎಲ್​ ಸೀಸನ್​ 16 ಆರಂಭಕ್ಕೂ ಮುನ್ನ ಆರ್​​ಸಿಬಿ ಅಭಿಮಾನಿಗಳ ಅಬ್ಬರ ಮುಗಿಲುಮುಟ್ಟಿತ್ತು. ಈ ಸಲ ಕಪ್​ ನಮ್ದೇ ಆನ್ನೋ ಮಾತು ಸೋಷಿಯಲ್​ ಮೀಡಿಯಾಗಳಿಂದ ಹಿಡಿದು, ಚಿನ್ನಸ್ವಾಮಿ ಅಂಗಳದವರೆಗೆ ಮಾರ್ಧನಿಸಿತ್ತು.. ಆದ್ರೆ, ಅಂತ್ಯದಲ್ಲಿ ಕಪ್​ ನಮ್ದೇ ಅನ್ನೋ ಕನಸು ನುಚ್ಚು ನೂರಾಯ್ತು.

ಮ್ಯಾನೇಜ್​ಮೆಂಟ್​ ವಿರುದ್ಧ ರೊಚ್ಚಿ ಗೆದ್ದ ಕನ್ನಡಿಗರು.!
ಒಂದಲ್ಲ ಎರಡಲ್ಲ.. ಇದು ಸೇರಿ 16 ಸೀಸನ್​ ಕಳೀತು.. ಕಪ್​ ಮಾತ್ರ ನಮ್ಮದಾಗಲಿಲ್ಲ. ಕೊನೆ ಪಕ್ಷ ತಂಡದಲ್ಲೂ ಕನ್ನಡಿಗರಿಗೆ ತಂಡದಲ್ಲಿ ಸ್ಥಾನ ಸಿಗಲ್ಲ.. ಅಪ್ಪಿ ತಪ್ಪಿ ಪ್ಲೇಯಿಂಗ್​ ಇಲೆವೆನ್​ನಲ್ಲಿ ಅವಕಾಶ ಸಿಕ್ರೂ, ಒಂದು ಫ್ಲಾಫ್​ ಶೋ ನೀಡಿದ್ರೆ ಗೇಟ್​ಪಾಸ್​ ಫಿಕ್ಸ್​. ಅದೇ ಬೇರೆ ರಾಜ್ಯದವಾದ್ರೆ, ನೆಕ್ಸ್ಟ್​​ ಲೆವೆಲ್​ಗೆ ಬ್ಯಾಕ್​ ಮಾಡ್ತಾರೆ. ಅನುಜ್​ ರಾವತ್​, ಮಹಿಪಾಲ್​ ಲೋಮ್ರರ್​, ಶಹಬಾಜ್​ ಅಹಮ್ಮದ್​, ದಿನೇಶ್​ ಕಾರ್ತಿಕ್​, ಸುಯಶ್​ ಪ್ರಭುದೇಸಾಯಿ. ಇವರೆಲ್ಲಾ ಕಡಿದು ಗುಡ್ಡೆ ಹಾಕಿದ್ದು ಏನಿಲ್ಲ.. ಆದ್ರೂ, ಆರ್​​ಸಿಬಿ ಟ್ಯಾಲೆಂಟ್​​ ಸ್ಕೌಟ್​ ಹಾಗೂ ಮ್ಯಾನೇಜ್​ಮೆಂಟ್​ಗೆ ಇವರೆಲ್ಲಾ ಭವಿಷ್ಯದ ಲೆಜೆಂಡ್ಸ್​​.

ಮ್ಯಾನೇಜ್​ಮೆಂಟ್​​ಗೆ ಹಿಗ್ಗಾಮುಗ್ಗಾ ಜಾಡಿಸಿದ ಮಾಜಿ ಕೋಚ್​.!
ಕರ್ನಾಟಕದ ಆಟಗಾರರು ಮಾತ್ರವಲ್ಲ. ಸಪೋರ್ಟ್​​ ಸ್ಟಾಫ್​ಗಳ ಆಯ್ಕೆ ವಿಚಾರದಲ್ಲೂ ಕನ್ನಡಿಗರನ್ನ ಫ್ರಾಂಚೈಸಿ ಮೂಲೆಗುಂಪು ಮಾಡ್ತಿದೆ. ಇಷ್ಟು ದಿನ ಫ್ಯಾನ್ಸ್​ ಮಾತ್ರ, ಫ್ರಾಂಚೈಸಿಯ ಈ ನಡೆಯನ್ನ ಪ್ರಶ್ನೆ ಮಾಡ್ತಿದ್ರು. ಇದೀಗ ಕರ್ನಾಟಕದ ಕ್ರಿಕೆಟಿಗರು ಕೂಡ ಏನ್​ ನಡೀತಾ ಇದೆ ಅಂತಾ ಬಹಿರಂಗವಾಗಿ ಕೇಳ್ತಿದ್ದಾರೆ. ಟೀಮ್​ ಇಂಡಿಯಾ ಮಾಜಿ ಕ್ರಿಕೆಟಿಗ, ಇದೇ ಆರ್​​ಸಿಬಿಯ ಮಾಜಿ ಅಸಿಸ್ಟೆಂಟ್​ ಕೋಚ್​, ಕನ್ನಡಿಗ ವಿಜಯ್​ ಭಾರದ್ವಾಜ್​ ಆರ್​​ಸಿಬಿ ಮ್ಯಾನೇಜ್​ಮೆಂಟ್​ ವಿರುದ್ಧ ಕೆಂಡ ಕಾರಿದ್ದಾರೆ.

ಆರ್​​ಸಿಬಿ ಇನ್​ಸೈಡರ್​ನಲ್ಲಿ ಕುಂಬ್ಳೆ ಕಿಡಿನುಡಿ.!
ತಮಿಳುನಾಡಿನವರು ಆರ್​​ಸಿಬಿ ಟೀಮ್​ನಲ್ಲಿ ಕೆಲಸ ಮಾಡಬಾರ್ದು ಅಂತೇನಿಲ್ಲ.. ಹಾಗಂತ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಅಂತಾ ಹೆಸರಿಟ್ಟುಕೊಂಡು, ಕನ್ನಡಿಗರನ್ನ ಸಂಪೂರ್ಣವಾಗಿ ಮೂಲೆಗುಂಪು ಮಾಡೋದು ಎಷ್ಟು ಸರಿ..? ಮಾಜಿ ಕ್ರಿಕೆಟಿಗ, ಆರ್​​ಸಿಬಿ ಮಾಜಿ ಕ್ಯಾಪ್ಟನ್​ ಅನಿಲ್​​ ಕುಂಬ್ಳೆ ಈ ಬಗ್ಗೆ ಆರ್​​ಸಿಬಿಯ ಇನ್​ಸೈಡರ್​​ ಶೋನಲ್ಲೇ ನೇರಾನೇರವಾಗಿ ಮಾತನಾಡಿದ್ದಾರೆ.

ಕಾದು ಕಾದು ಸಾಕಾಯ್ತು, ಫ್ಯಾನ್ಸ್​ಗೂ ಸುಸ್ತಾಯ್ತು.!
ಫ್ಯಾನ್ಸ್​ ಮುಖದ ಮೇಲಿರೋ ನಿರಾಸೆ, ಹತಾಶೆಯೇ ಎಲ್ಲವನ್ನ ಹೇಳುತ್ತೆ.. ಈ ಸೀಸನ್​, ನೆಕ್ಸ್ಟ್​​​ ಸೀಸನ್​ ಅಂತಾ ಕಾದು ಕಾದು ಅಭಿಮಾನಿಗಳು ರೋಸಿ ಹೋಗಿದ್ದಾರೆ. ಇಷ್ಟೆಲ್ಲಾ ಆದ ಮೇಲೆ ಅಭಿಮಾನಿಗಳ ಅಪರಿಮಿತ ಅಭಿಮಾನ ಆರ್​​ಸಿಬಿಗೆ ಬಂಡವಾಳವಾಗಿಬಿಟ್ಟಿದ್ಯಾ.? ಅನ್ನೋ ಪ್ರಶ್ನೆ ಹುಟ್ಟದೆ ಇರಲ್ಲ..

ಬದಲಾಗಬೇಕು ಮ್ಯಾನೇಜ್​ಮೆಂಟ್​​, ಇಲ್ದಿದ್ರೆ ಕಪ್​ ಕನಸೆ.!
ಆರ್​​ಸಿಬಿಯಲ್ಲಿ ಕನ್ನಡಿಗಿರ ಕಡೆಗಣನೆ ಅತಿರೇಕದ ಹಂತ ತಲುಪಿದ್ದು, ಓನರ್​ಶಿಪ್​ ಬದಲಾದ ಮೇಲೆ.. ಸದ್ಯ ಇರೋ ಮ್ಯಾನೇಜ್​ಮೆಂಟ್​​ ಬಂದ ಮೇಲಂತೂ ಮೆಗಾ ಹರಾಜಿನಲ್ಲಿ 3ರಿಂದ 4 ಸ್ಟಾರ್​ಗಳನ್ನ ಕೋಟಿ ಕೋಟಿ ಸುರಿ ಖರೀದಿಸೋದು, ಸ್ಪಾನ್ಸರ್​ಶಿಪ್​ ಡೀಲ್​ಗಳನ್ನ ಸೆಳೆದುಕೊಳ್ಳೋದಷ್ಟೇ ಕೆಲಸವಾಗಿಬಿಟ್ಟಿದೆ. ಈ ಇನ್​ಕಮ್​ ಲೆಕ್ಕಾಚಾರದಲ್ಲಿ ಕ್ರಿಕೆಟ್​ ಆಡೋದು ನಮ್ಮ ತಂಡದ ಕೆಲಸ ಅನ್ನೋದೆ ಮರೆತಂತಾಗಿಬಿಟ್ಟಿದೆ. ಈ ವಿಚಾರದಲ್ಲಿ ಮುಂದಾದ್ರೂ ಎಚ್ಚೆತ್ತು ಕೊಳ್ಳಬೇಕು.. ಇಲ್ಲದಿದ್ರೆ, ಸತತ ನಿರಾಸೆ ಮೂಡಿಸಿದ್ರೂ, ಬೆಂಬಲಿಸಿ, ಪ್ರೀತಿಸ್ತಾ ಇರೋ ಫ್ಯಾನ್ಸ್​ ತಿರುಗಿಬೀಳೋದ್ರಲ್ಲಿ ಅನುಮಾನವೇ ಬೇಡ..

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Load More