newsfirstkannada.com

Kargil Vijay Diwas 2023: ಇಂದು 24ನೇ ಕಾರ್ಗಿಲ್​ ವಿಜಯ ದಿನ; ಕುತಂತ್ರಿ ಪಾಕ್ ಭಾರತಕ್ಕೆ​​ ಸೋತು ಓಡಿ ಹೋಗಿದ್ದು ಹೇಗೆ ಗೊತ್ತಾ? 

Share :

26-07-2023

    60 ದಿನಗಳಿಂತ ಹೆಚ್ಚು ದಿನಗಳ ಕಾಲ ನಡೆದ ಯುದ್ಧ

    1999ರಲ್ಲಿ ಕುತಂತ್ರಿ ಪಾಕಿಸ್ತಾನವನ್ನು ಸೆದೆಬಡಿದ ದಿನ

    ಟೈಗರ್​ ಹಿಲ್​ ಪ್ರದೇಶವನ್ನು ಮರಳಿ ಪಡೆದ ಹೆಮ್ಮೆಯ ದಿನ

ಇಂದು ಜುಲೈ 26. ಪ್ರತಿಯೊಬ್ಬ ಭಾರತೀಯ ಹೆಮ್ಮೆ ಪಡುವುದರ ಜೊತೆಗೆ ನೆನಪಲ್ಲಿ ಉಳಿಯುವ ದಿನವಾಗಿದೆ. ಕಾರಣ ಕಾರ್ಗಿಲ್​ ವಿಜಯ ದಿವಸವನ್ನು ಇಂದು ಆಚರಿಸಲಾಗುತ್ತಿದೆ.​

1999ರಲ್ಲಿ ಕುತಂತ್ರಿ ಪಾಕಿಸ್ತಾನವನ್ನು ಸೆದೆಬಡಿದ ಭಾರತೀಯ ಸೈನಿಕರು ದೇಶಕ್ಕೆ ವಿಜಯವನ್ನು ತಂದು ಕೊಟ್ಟ ದಿನವಾಗಿದೆ. ಹಾಗಾಗಿ ಈ ದಿನವನ್ನು ಭಾರತದ ಮೂಲೆ ಮೂಲೆಗಳಲ್ಲೂ ಆಚರಿಸಲಾಗುತ್ತಿದೆ. ಅಂದಹಾಗೆಯೇ ಭಾರತವು 24ನೇ ಕಾರ್ಗಿಲ್​ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ.

ಇತಿಹಾಸ

1999ರಲ್ಲಿ ನಡೆದ ಕಾರ್ಗಿಲ್​ ಯುದ್ಧವು ಜಮ್ಮು ಮತ್ತು ಕಾಶ್ಮೀರ ಕಾರ್ಗಿಲ್​ ಜಿಲ್ಲೆಯಲ್ಲಿ ನಡೆಯುತ್ತದೆ. ಪಾಕಿಸ್ತಾನವು ಕುತಂತ್ರಿ ಬುದ್ಧಿಯ ಜೊತೆಗೆ ಕಾರ್ಗಿಲ್​ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯನ್ನು ದಾಡಿ ಭಾರತದತ್ತ ನುಸುಳುತ್ತದೆ. ಈ ವೇಳೆ ಭಾರತೀಯ ಸೈನಿಕರು ಹೋರಾಡಿ ಪಾಕಿಸ್ತಾನವನ್ನು ಸೆದೆಬಡಿಯುತ್ತದೆ. ಆಪರೇಷನ್​ ವಿಜಯ್​​ ಅಡಿಯಲ್ಲಿ  ಟೈಗರ್​ ಹಿಲ್​ ಪ್ರದೇಶವನ್ನು ಮರಳಿ ಪಡೆಯುತ್ತೇವೆ. ಅಂದಹಾಗೆಯೇ ಈ ಯುದ್ಧದಲ್ಲಿ 527 ಸೈನಿಕರು ದೇಶಕ್ಕಾಗಿ ಪ್ರಾಣತೆತ್ತಿದ್ದಾರೆ. 60 ದಿನಗಳಿಂತ ಹೆಚ್ಚು ದಿನಗಳ ಕಾಲ ಯುದ್ಧ ನಡೆದು ಕೊನೆಗೆ ಜುಲೈ 26ರಂದು ಭಾರತವು ವಿಜಯಶಾಲಿಯಾಗುತ್ತದೆ.

ಕಾರ್ಗಿಲ್​ ವಿಜಯ್​ ದಿನ

ಇಂದು ಕಾರ್ಗಿಲ್​ ವಿಜಯದ ದಿನವನ್ನು ಸ್ಮರಿಸಿಕೊಂಡರು ಸಹ ಇದರ ಹಿಂದೆ ಸಾಕಷ್ಟು ಸಾವು ನೋವಿದೆ. ಭಾರತದ ಅನೇಕ ಸೈನಿಕರು ಕಾರ್ಗಿಲ್​ಗಾಗಿ ಹೋರಾಡಿ ಹತರಾದವರು ಇದ್ದಾರೆ. ಅಂದಹಾಗೆಯೇ ಪ್ರತಿ ವರ್ಷದಂತೆ ಇಂದು ಕೂಡ ಕಾರ್ಗಿಲ್​ ವಿಜಯದ ದಿನವನ್ನ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಪ್ರಧಾನ ಮಂತ್ರಿ ಇಂಡಿಯಾ ಗೇಟ್​​ನಲ್ಲಿರುವ ಅಮರ್​ ಜವಾನ್​ ಜ್ಯೋತಿಯಲ್ಲಿ ಹುತಾತ್ಮರಿಗೆ ಗೌರವ ಸಲ್ಲಿಸುತ್ತಾರೆ.

ಟೋಲೋಲಿಂಗ್​ ಬೆಟ್ಟದ ತಪ್ಪಲಿನಲ್ಲಿ ಡ್ರಾಸ್​​ ಕಾರ್ಗಿಲ್​ ಎಂಬ ಯುದ್ಧ ಸ್ಮಾರಕವಿದೆ. ಯುದ್ಧದ ಸಮಯದಲ್ಲಿ ಮಡಿದ ವೀರ ಸೈನಿಕರಿಗಾಗಿ ಈ ಸ್ಮಾರಕ ನಿರ್ಮಿಸಲಾಗಿದೆ.

ವೀರ ಸೈನಿಕರನ್ನು ನೆನಪಿಸಲೇಬೇಕು

ಕಾರ್ಗಿಲ್​ ಯುದ್ಧದಲ್ಲಿ 527 ಸೈನಿಕರು ಸಾವನ್ನಪ್ಪಿದರೆ, ಕೆಲವರಿಗೆ ಗಾಯಗಳಾಗಿವೆ. ಆದರೆ ಈ ಯುದ್ಧದಲ್ಲಿ ಕ್ಯಾಪ್ಟನ್​ ವಿಕ್ರಮ್​ ಬಾತ್ರಾ ಎಂಬ ಮಹಾನ್​ ಒಬ್ಬರನ್ನು ಕಳೆದುಕೊಳ್ಳಬೇಕಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

Kargil Vijay Diwas 2023: ಇಂದು 24ನೇ ಕಾರ್ಗಿಲ್​ ವಿಜಯ ದಿನ; ಕುತಂತ್ರಿ ಪಾಕ್ ಭಾರತಕ್ಕೆ​​ ಸೋತು ಓಡಿ ಹೋಗಿದ್ದು ಹೇಗೆ ಗೊತ್ತಾ? 

https://newsfirstlive.com/wp-content/uploads/2023/07/kargil-1.jpg

    60 ದಿನಗಳಿಂತ ಹೆಚ್ಚು ದಿನಗಳ ಕಾಲ ನಡೆದ ಯುದ್ಧ

    1999ರಲ್ಲಿ ಕುತಂತ್ರಿ ಪಾಕಿಸ್ತಾನವನ್ನು ಸೆದೆಬಡಿದ ದಿನ

    ಟೈಗರ್​ ಹಿಲ್​ ಪ್ರದೇಶವನ್ನು ಮರಳಿ ಪಡೆದ ಹೆಮ್ಮೆಯ ದಿನ

ಇಂದು ಜುಲೈ 26. ಪ್ರತಿಯೊಬ್ಬ ಭಾರತೀಯ ಹೆಮ್ಮೆ ಪಡುವುದರ ಜೊತೆಗೆ ನೆನಪಲ್ಲಿ ಉಳಿಯುವ ದಿನವಾಗಿದೆ. ಕಾರಣ ಕಾರ್ಗಿಲ್​ ವಿಜಯ ದಿವಸವನ್ನು ಇಂದು ಆಚರಿಸಲಾಗುತ್ತಿದೆ.​

1999ರಲ್ಲಿ ಕುತಂತ್ರಿ ಪಾಕಿಸ್ತಾನವನ್ನು ಸೆದೆಬಡಿದ ಭಾರತೀಯ ಸೈನಿಕರು ದೇಶಕ್ಕೆ ವಿಜಯವನ್ನು ತಂದು ಕೊಟ್ಟ ದಿನವಾಗಿದೆ. ಹಾಗಾಗಿ ಈ ದಿನವನ್ನು ಭಾರತದ ಮೂಲೆ ಮೂಲೆಗಳಲ್ಲೂ ಆಚರಿಸಲಾಗುತ್ತಿದೆ. ಅಂದಹಾಗೆಯೇ ಭಾರತವು 24ನೇ ಕಾರ್ಗಿಲ್​ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ.

ಇತಿಹಾಸ

1999ರಲ್ಲಿ ನಡೆದ ಕಾರ್ಗಿಲ್​ ಯುದ್ಧವು ಜಮ್ಮು ಮತ್ತು ಕಾಶ್ಮೀರ ಕಾರ್ಗಿಲ್​ ಜಿಲ್ಲೆಯಲ್ಲಿ ನಡೆಯುತ್ತದೆ. ಪಾಕಿಸ್ತಾನವು ಕುತಂತ್ರಿ ಬುದ್ಧಿಯ ಜೊತೆಗೆ ಕಾರ್ಗಿಲ್​ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯನ್ನು ದಾಡಿ ಭಾರತದತ್ತ ನುಸುಳುತ್ತದೆ. ಈ ವೇಳೆ ಭಾರತೀಯ ಸೈನಿಕರು ಹೋರಾಡಿ ಪಾಕಿಸ್ತಾನವನ್ನು ಸೆದೆಬಡಿಯುತ್ತದೆ. ಆಪರೇಷನ್​ ವಿಜಯ್​​ ಅಡಿಯಲ್ಲಿ  ಟೈಗರ್​ ಹಿಲ್​ ಪ್ರದೇಶವನ್ನು ಮರಳಿ ಪಡೆಯುತ್ತೇವೆ. ಅಂದಹಾಗೆಯೇ ಈ ಯುದ್ಧದಲ್ಲಿ 527 ಸೈನಿಕರು ದೇಶಕ್ಕಾಗಿ ಪ್ರಾಣತೆತ್ತಿದ್ದಾರೆ. 60 ದಿನಗಳಿಂತ ಹೆಚ್ಚು ದಿನಗಳ ಕಾಲ ಯುದ್ಧ ನಡೆದು ಕೊನೆಗೆ ಜುಲೈ 26ರಂದು ಭಾರತವು ವಿಜಯಶಾಲಿಯಾಗುತ್ತದೆ.

ಕಾರ್ಗಿಲ್​ ವಿಜಯ್​ ದಿನ

ಇಂದು ಕಾರ್ಗಿಲ್​ ವಿಜಯದ ದಿನವನ್ನು ಸ್ಮರಿಸಿಕೊಂಡರು ಸಹ ಇದರ ಹಿಂದೆ ಸಾಕಷ್ಟು ಸಾವು ನೋವಿದೆ. ಭಾರತದ ಅನೇಕ ಸೈನಿಕರು ಕಾರ್ಗಿಲ್​ಗಾಗಿ ಹೋರಾಡಿ ಹತರಾದವರು ಇದ್ದಾರೆ. ಅಂದಹಾಗೆಯೇ ಪ್ರತಿ ವರ್ಷದಂತೆ ಇಂದು ಕೂಡ ಕಾರ್ಗಿಲ್​ ವಿಜಯದ ದಿನವನ್ನ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಪ್ರಧಾನ ಮಂತ್ರಿ ಇಂಡಿಯಾ ಗೇಟ್​​ನಲ್ಲಿರುವ ಅಮರ್​ ಜವಾನ್​ ಜ್ಯೋತಿಯಲ್ಲಿ ಹುತಾತ್ಮರಿಗೆ ಗೌರವ ಸಲ್ಲಿಸುತ್ತಾರೆ.

ಟೋಲೋಲಿಂಗ್​ ಬೆಟ್ಟದ ತಪ್ಪಲಿನಲ್ಲಿ ಡ್ರಾಸ್​​ ಕಾರ್ಗಿಲ್​ ಎಂಬ ಯುದ್ಧ ಸ್ಮಾರಕವಿದೆ. ಯುದ್ಧದ ಸಮಯದಲ್ಲಿ ಮಡಿದ ವೀರ ಸೈನಿಕರಿಗಾಗಿ ಈ ಸ್ಮಾರಕ ನಿರ್ಮಿಸಲಾಗಿದೆ.

ವೀರ ಸೈನಿಕರನ್ನು ನೆನಪಿಸಲೇಬೇಕು

ಕಾರ್ಗಿಲ್​ ಯುದ್ಧದಲ್ಲಿ 527 ಸೈನಿಕರು ಸಾವನ್ನಪ್ಪಿದರೆ, ಕೆಲವರಿಗೆ ಗಾಯಗಳಾಗಿವೆ. ಆದರೆ ಈ ಯುದ್ಧದಲ್ಲಿ ಕ್ಯಾಪ್ಟನ್​ ವಿಕ್ರಮ್​ ಬಾತ್ರಾ ಎಂಬ ಮಹಾನ್​ ಒಬ್ಬರನ್ನು ಕಳೆದುಕೊಳ್ಳಬೇಕಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

Load More