newsfirstkannada.com

Breaking: ಸಿಇಟಿ ಫಲಿತಾಂಶ ಪ್ರಕಟ.. ಬಾಲಕಿಯರದ್ದೇ ಮೇಲುಗೈ; ಟಾಪ್ 10 ವಿದ್ಯಾರ್ಥಿಗಳ ಪಟ್ಟಿ ಇಲ್ಲಿದೆ

Share :

15-06-2023

    ಇದೇ ವರ್ಷದ ಮೇ 21 , 22 ರಂದು ಸಿಇಟಿ ಪರೀಕ್ಷೆ ‌ನಡೆಸಿತ್ತು

    2 ಲಕ್ಷಕ್ಕಿಂತ ಅಧಿಕ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು

    ಫಲಿತಾಂಶ ಬಿಡುಗಡೆ ಮಾಡಿದ ಸಚಿವ ಡಾ ಎಂ.ಸಿ ಸುಧಾಕರ್

ಬೆಂಗಳೂರು: ಇವತ್ತು ಸಿಇಟಿ ಫಲಿತಾಂಶ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ ಎಂ.ಸಿ ಸುಧಾಕರ್, ಉನ್ನತ ಶಿಕ್ಷಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಉಮಾಶಂಕರ್ ಹಾಗೂ ಕೆಇಎ ಬೋರ್ಡ್ ನಿರ್ದೇಶಕಿ ರಮ್ಯಾ ಮಾಧ್ಯಮಗೋಷ್ಠಿಯಲ್ಲಿ ಭಾಗಿಯಾಗಿದ್ದರು.

ಇದೇ ವೇಳೆ ಉನ್ನತ ಶಿಕ್ಷಣ ಸಚಿವ ಡಾ ಎಂ.ಸಿ ಸುಧಾಕರ್, ಸಿಇಟಿ ಫಲಿತಾಂಶ ಬಿಡುಗಡೆ ಮಾಡಿದರು.

ಇಂಜಿನಿಯರ್​ ವಿಭಾಗದಲ್ಲಿ ಟಾಪ್-​ 10 ಱಂಕ್​

  • ವಿಘ್ನೇಶ್​ ನಟರಾಜ್​ ಮೊದಲ ಱಂಕ್
  • 2ನೇ ಱಂಕ್ ಪಡೆದ ಅರ್ಜುನ್​ ಕೃಷ್ಣಸ್ವಾಮಿ
  • ಸಮೃಧ್​ ಶೆಟ್ಟಿ 3ನೇ ಱಂಕ್​ ಅನ್ನು ಪಡೆದಿದ್ದಾರೆ
  • ಸುಮೆದ್‌ ಎಸ್‌.ಎಸ್‌
  • ಮಾಧವ್ ಸೂರ್ಯ ತಡೆಪಲ್ಲಿ
  • ಸುಜಿತ್ ಅಡಿಗಾ
  • ಉಜ್ವಲ್ ಎಲ್. ಶಂಕರ್
  • ರಿಶಿತ ಗುಪ್ತ
  • ಅಭಿನವ್
  • ಭುವನ್ ಕೆ. ಪ್ರಸಾದ್

​ಈ ವರ್ಷದ ಸಿಇಟಿ ಪರೀಕ್ಷೆಯನ್ನು 2,44,345 ವಿದ್ಯಾರ್ಥಿಗಳು ಬರೆದಿದ್ದರು. ಇಂಜಿನಿಯರಿಂಗ್ ಕೋರ್ಸ್​ನಲ್ಲಿ 2,03,381 ಱಂಕ್ ಪಡೆದುಕೊಂಡಿದ್ದಾರೆ. ಕೃಷಿ ವಿಜ್ಞಾನ 1,64,187 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ.

ಪಶುಸಂಗೋಪನೆಯಲ್ಲಿ 1,66,756 ವಿದ್ಯಾರ್ಥಿಗಳು ಅರ್ಹರಾಗಿದ್ದು ಯೋಗ ಹಾಗೂ ನ್ಯಾಚುರೋಪತಿ 1,66,746 ಪಾಸ್ ಆಗಿದ್ದಾರೆ. ಬಿ.ಪಾರ್ಮ್ ಕೋರ್ಸ್​ಗೆ 2,06,191 ವಿದ್ಯಾರ್ಥಿಗಳು ಅರ್ಹರಾಗಿದ್ದು, ಒಟ್ಟು 1,68,808 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ.

ಮೇ 21 , 22 ರಂದು ಸಿಇಟಿ ಪರೀಕ್ಷೆ ‌ನಡೆಸಲಾಗಿತ್ತು. ಈಗಾಗಲೇ ‌ಕೀ ಉತ್ತರಗಳನ್ನ ಕೆಇಎ ಇಲಾಖೆ ಪ್ರಕಟ ಮಾಡಿದೆ. ಇನ್ನು 2 ಲಕ್ಷದ 39 ಸಾವಿರದ 716 ಜನ ವಿದ್ಯಾರ್ಥಿಗಳು ಪರೀಕ್ಷೆಯನ್ನು ತೆಗೆದುಕೊಂಡಿದ್ದರು. ಇದರಲ್ಲಿ ಶೇಕಡಾ 93 ರಷ್ಟು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Breaking: ಸಿಇಟಿ ಫಲಿತಾಂಶ ಪ್ರಕಟ.. ಬಾಲಕಿಯರದ್ದೇ ಮೇಲುಗೈ; ಟಾಪ್ 10 ವಿದ್ಯಾರ್ಥಿಗಳ ಪಟ್ಟಿ ಇಲ್ಲಿದೆ

https://newsfirstlive.com/wp-content/uploads/2023/06/MC_SUDHAKAR_1-1.jpg

    ಇದೇ ವರ್ಷದ ಮೇ 21 , 22 ರಂದು ಸಿಇಟಿ ಪರೀಕ್ಷೆ ‌ನಡೆಸಿತ್ತು

    2 ಲಕ್ಷಕ್ಕಿಂತ ಅಧಿಕ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು

    ಫಲಿತಾಂಶ ಬಿಡುಗಡೆ ಮಾಡಿದ ಸಚಿವ ಡಾ ಎಂ.ಸಿ ಸುಧಾಕರ್

ಬೆಂಗಳೂರು: ಇವತ್ತು ಸಿಇಟಿ ಫಲಿತಾಂಶ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ ಎಂ.ಸಿ ಸುಧಾಕರ್, ಉನ್ನತ ಶಿಕ್ಷಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಉಮಾಶಂಕರ್ ಹಾಗೂ ಕೆಇಎ ಬೋರ್ಡ್ ನಿರ್ದೇಶಕಿ ರಮ್ಯಾ ಮಾಧ್ಯಮಗೋಷ್ಠಿಯಲ್ಲಿ ಭಾಗಿಯಾಗಿದ್ದರು.

ಇದೇ ವೇಳೆ ಉನ್ನತ ಶಿಕ್ಷಣ ಸಚಿವ ಡಾ ಎಂ.ಸಿ ಸುಧಾಕರ್, ಸಿಇಟಿ ಫಲಿತಾಂಶ ಬಿಡುಗಡೆ ಮಾಡಿದರು.

ಇಂಜಿನಿಯರ್​ ವಿಭಾಗದಲ್ಲಿ ಟಾಪ್-​ 10 ಱಂಕ್​

  • ವಿಘ್ನೇಶ್​ ನಟರಾಜ್​ ಮೊದಲ ಱಂಕ್
  • 2ನೇ ಱಂಕ್ ಪಡೆದ ಅರ್ಜುನ್​ ಕೃಷ್ಣಸ್ವಾಮಿ
  • ಸಮೃಧ್​ ಶೆಟ್ಟಿ 3ನೇ ಱಂಕ್​ ಅನ್ನು ಪಡೆದಿದ್ದಾರೆ
  • ಸುಮೆದ್‌ ಎಸ್‌.ಎಸ್‌
  • ಮಾಧವ್ ಸೂರ್ಯ ತಡೆಪಲ್ಲಿ
  • ಸುಜಿತ್ ಅಡಿಗಾ
  • ಉಜ್ವಲ್ ಎಲ್. ಶಂಕರ್
  • ರಿಶಿತ ಗುಪ್ತ
  • ಅಭಿನವ್
  • ಭುವನ್ ಕೆ. ಪ್ರಸಾದ್

​ಈ ವರ್ಷದ ಸಿಇಟಿ ಪರೀಕ್ಷೆಯನ್ನು 2,44,345 ವಿದ್ಯಾರ್ಥಿಗಳು ಬರೆದಿದ್ದರು. ಇಂಜಿನಿಯರಿಂಗ್ ಕೋರ್ಸ್​ನಲ್ಲಿ 2,03,381 ಱಂಕ್ ಪಡೆದುಕೊಂಡಿದ್ದಾರೆ. ಕೃಷಿ ವಿಜ್ಞಾನ 1,64,187 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ.

ಪಶುಸಂಗೋಪನೆಯಲ್ಲಿ 1,66,756 ವಿದ್ಯಾರ್ಥಿಗಳು ಅರ್ಹರಾಗಿದ್ದು ಯೋಗ ಹಾಗೂ ನ್ಯಾಚುರೋಪತಿ 1,66,746 ಪಾಸ್ ಆಗಿದ್ದಾರೆ. ಬಿ.ಪಾರ್ಮ್ ಕೋರ್ಸ್​ಗೆ 2,06,191 ವಿದ್ಯಾರ್ಥಿಗಳು ಅರ್ಹರಾಗಿದ್ದು, ಒಟ್ಟು 1,68,808 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ.

ಮೇ 21 , 22 ರಂದು ಸಿಇಟಿ ಪರೀಕ್ಷೆ ‌ನಡೆಸಲಾಗಿತ್ತು. ಈಗಾಗಲೇ ‌ಕೀ ಉತ್ತರಗಳನ್ನ ಕೆಇಎ ಇಲಾಖೆ ಪ್ರಕಟ ಮಾಡಿದೆ. ಇನ್ನು 2 ಲಕ್ಷದ 39 ಸಾವಿರದ 716 ಜನ ವಿದ್ಯಾರ್ಥಿಗಳು ಪರೀಕ್ಷೆಯನ್ನು ತೆಗೆದುಕೊಂಡಿದ್ದರು. ಇದರಲ್ಲಿ ಶೇಕಡಾ 93 ರಷ್ಟು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More