newsfirstkannada.com

ಮತ್ತೆ ಮೂರು DCM ಸ್ಥಾನ ಸೃಷ್ಟಿಸುವ ಕೆಎನ್​ ರಾಜಣ್ಣ ಹೇಳಿಕೆಗೆ ಡಿ.ಕೆ.ಶಿವಕುಮಾರ್ ಗರಂ; ಪ್ರತಿಕ್ರಿಯೆ ಹೇಗಿತ್ತು ಗೊತ್ತಾ..?

Share :

19-09-2023

    ಕೆ.ಎನ್. ರಾಜಣ್ಣರ ಮಾತಿಗೆ ‘ಕೈ’ ಪಾಳಯದಲ್ಲಿ ಕಂಪನ

    ರಾಜಣ್ಣ ಮಾತಲ್ಲಿ ತಪ್ಪಿಲ್ಲ ಅಂತ ಪರಮೇಶ್ವರ್​​​ ಬ್ಯಾಟ್

    ಕಾಂಗ್ರೆಸ್​​ ಪಕ್ಷದಲ್ಲಿ ಸಂಚಲನ ಸೃಷ್ಟಿ​​​ಸಿದ ಮೂರರ ಆಟ

ರಾಜ್ಯದಲ್ಲಿ ಮೂರು ಡಿಸಿಎಂ ಹುದ್ದೆ ಸೃಷ್ಟಿ ಚರ್ಚೆ ಬಿರುಸು ಪಡೆದಿದೆ. ನ್ಯೂಸ್​​ಫಸ್ಟ್​​​ ಬ್ರೇಕ್​​​ ಮಾಡಿದ ಈ ಸುದ್ದಿ, ಕಾಂಗ್ರೆಸ್​​ ಪಕ್ಷದಲ್ಲಿ ಸಂಚಲನ ಸೃಷ್ಟಿ​​​ ಮಾಡಿದೆ. ರಾಜಣ್ಣ ರಾಜಕಾರಣದಿಂದ ಹಾಲಿ-ಮಾಜಿ ಡಿಸಿಎಂ ಮಧ್ಯೆ ಮಾತಿನ ಭಿನ್ನತೆ ಸೃಷ್ಟಿಸಿದೆ. ಈ ಬಗ್ಗೆ ಮೊದಲ ಬಾರಿಗೆ ಡಿ.ಕೆ.ಶಿವಕುಮಾರ್ ರಿಯಾಕ್ಟ್​​ ಮಾಡಿದ್ದು, ಪಕ್ಷದೊಳಗಿನ ಎಲ್ಲಾ ಬೆಳವಣಿಗೆ ಕುರಿತು ಕಿಡಿಕಿಡಿ ಆಗಿದ್ದಾರೆ.

ಈ ಸುದ್ದಿ ಇಡೀ ಹಸ್ತಪಡೆಯಲ್ಲಿ ಭೂಕಂಪ ಸೃಷ್ಟಿಸಿದೆ. ಹರಿಪ್ರಸಾದ್​​ ಎತ್ತಿದ ಪ್ರಶ್ನೆಗೆ ಪ್ರತ್ಯುತ್ತರವಾಗಿ ಸಿದ್ದರಾಮಯ್ಯ ಕ್ಯಾಂಪ್​​​ಪ್ರಯೋಗಿಸಿದ ಅಸ್ತ್ರ ಇದು. ನ್ಯೂಸ್​​ಫಸ್ಟ್​​ನ ಮುಖಪುಟದಲ್ಲಿ ರಾಜಣ್ಣ ರಾರಾಜಿಸ್ತಿದ್ರೆ, ಒಳಪುಟದಲ್ಲಿ ಯಾರಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತಿರುವ ಸತ್ಯ. ಇವತ್ತು ಸರ್ಕಾರದ ನಂಬರ್​​​-2 ಪಟ್ಟಕ್ಕೆ ಫೈಟ್​​ ತಾರಕಕ್ಕೇರಿದ್ದು, ಡಿಸಿಎಂ ಡಿಕೆ ಶಿವಕುಮಾರ್​​ಗೆ ನಿದ್ರಾಭಂಗವಾಗಿದೆ.

ಸರ್ಕಾರ ರಚಿಸಿ ಮೂರೇ ತಿಂಗಳಲ್ಲಿ ಹಸ್ತದಲ್ಲಿ ಕಿತ್ತಾಟ!

ನ್ಯೂಸ್​ಫಸ್ಟ್ ಬ್ರೇಕ್​​​ ಮಾಡಿದ ಮೂರು ಡಿಸಿಎಂ ಹುದ್ದೆ ಸೃಷ್ಟಿ ಆಗಬೇಕು ಎಂಬ ರಾಜಣ್ಣ ಮಾತು, ರಾಜ್ಯದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ. ಈ ಚರ್ಚೆಯಲ್ಲಿ ಹಾಲಿ ಮತ್ತು ಮಾಜಿ ಡಿಸಿಎಂ ನಡುವೆ ಭಿನ್ನ ಹೇಳಿಕೆಗಳು ಮುಖಾಮುಖಿ ಆಗಿದ್ದು, ಸಂಘರ್ಷ ಜನ್ಮ ತಾಳುವಂತಾಗಿದೆ. ಈ ಮೂಲಕ ರಾಜ್ಯ ಕಾಂಗ್ರೆಸ್​ನ ಶಾಂತ ಸಾಗರವನ್ನ ಕಲಕಿದೆ. ಅದರಲ್ಲೂ ಡಿಕೆ ಮನದಲ್ಲಿ ರೋಷಾಗ್ನಿಯೇ ಉಕ್ಕಿದೆ.

ಸಚಿವ ರಾಜಣ್ಣ ಎತ್ತಿದ ಪ್ರಶ್ನೆಗೆ ಡಿಕೆ ಕೆಂಡಾಮಂಡಲ!
ಬೆಂಗಳೂರಿನಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್​, ಮೂರು ಡಿಸಿಎಂ ಸೃಷ್ಟಿ ಬಗ್ಗೆ ರಾಜಣ್ಣ ಎತ್ತಿದ ಪ್ರಶ್ನೆಗೆ ಕೆಂಡಾಮಂಡಲರಾದ್ರು. ಈ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿಗಳೇ ಉತ್ತರಿಸಬೇಕು ಅಂತ ಗರಂ ಆದರು. ಲೋಕಸಭೆ ಚುನಾವಣೆ ಸನಿಹದಲ್ಲಿ ಈ ತರಹದ ಬೇಡಿಕೆ ಸರಿನಾ ಎಂಬ ಪ್ರಶ್ನೆಗೂ ಸಿಎಂ ಕಡೆಗೆ ಡಿಸಿಎಂ ಡಿಕೆಶಿ ಬೊಟ್ಟು ಮಾಡಿದ್ದರು. ಇನ್ನು, ಯಾರು ಮಾತನಾಡಿದರೂ ಅವರ ಸ್ಥಾನಮಾನಕ್ಕೆ ತಕ್ಕಂತೆ ಮಾತನಾಡಬೇಕು. ಈಗ ರಾಜಣ್ಣ ಮಾತನಾಡಿದ್ದಾರೆ, ಅವರು ಮುಖ್ಯಮಂತ್ರಿಗಳ ಬಳಿ ಉತ್ತರ ಕೇಳಬೇಕು. ಹರಿಪ್ರಸಾದ್​ಗೆ ಉತ್ತರ ಹೇಳಬೇಕಾಗಿರುವುದು ಕಾಂಗ್ರೆಸ್​ ಹೈಕಮಾಂಡ್​. ನಾನು ಯಾರನ್ನು ಕೇಳಬೇಕು ಕೇಳ್ತೀನಿ. ಮುಲಾಜಿಲ್ಲದೇ ಕೇಳ್ತೀನಿ ಅಂತ ಸಿಟ್ಟಲ್ಲಿ ಸಿಡುಕಿದರು. ಇನ್ನು ನಿನ್ನೆಯಷ್ಟೇ ಸಿಎಂ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದರು. ಆಗ ಒಬ್ಬರೇ ಡಿಸಿಎಂ ಸಾಕು ಅಂದಿದ್ದರು. ಈಗ ಹೈಕಮಾಂಡ್ ಏನು ಹೇಳುತ್ತೋ ಹಾಗೆ ನಡೆದುಕೊಳ್ಳುತ್ತೇನೆ ಎಂದಿದ್ದಾರೆ.

ರಾಜಣ್ಣ ಮಾತಲ್ಲಿ ತಪ್ಪಿಲ್ಲ ಎಂದ ಪರಮೇಶ್ವರ್​​​!
ರಾಜಣ್ಣ ಪರ ಗೃಹ ಸಚಿವ ಜಿ. ಪರಮೇಶ್ವರ್​ ಬ್ಯಾಟ್​ ಬೀಸಿದ್ದಾರೆ. ರಾಜಣ್ಣ ಅಭಿಪ್ರಾಯ ಹೇಳಿದ್ದಾರೆ, ಅದ್ರಲ್ಲಿ ತಪ್ಪೇನೂ ಇಲ್ಲ ಎಂದಿದ್ದಾರೆ.  ಅವರವರ ಸಮುದಾಯಗಳಿಗೆ ಸ್ಥಾನ ಕೊಟ್ಟರೆ ಪಕ್ಷಕ್ಕೆ ಶಕ್ತಿ ಬರುತ್ತೆ ಎಂದು ವಾದಿಸಿದ್ದಾರೆ. ರಾಜಣ್ಣ ಮಾತಿಗೆ ಎಂಬಿ ಪಾಟೀಲ್​​ ಟಾಂಗ್​​ ಕೊಟ್ಟಿದ್ದಾರೆ. ವೈಯಕ್ತಿಕ ಹೇಳಿಕೆ ಕೊಟ್ಟರೆ ಅದಕ್ಕೆ ಮಾನ್ಯತೆ ಇಲ್ಲ ಎಂದಿದ್ದಾರೆ. ಒಟ್ಟಾರೆ, ಈ ಬೆಳವಣಿಗೆಯಿಂದ ಡಿಕೆಶಿ ತೀವ್ರ ಅಸಮಾಧಾನ ತರಿಸಿದೆ. ಅದರಲ್ಲೂ ರಾಜಣ್ಣ ಹೇಳಿಕೆಗೆ ಕೆಲ ಸಚಿವರು, ಶಾಸಕರು ಧ್ವನಿಗೂಡಿಸ್ತಿದ್ದು, ಡಿಕೆಶಿಯನ್ನ ಕೆರಳಿಸಿದೆ. ತಮಗೆ ಮುಜುಗರ ಮಾಡಲು ಈ ಅನಗತ್ಯ ಗೊಂದಲ ಅಂತ ಡಿಸಿಎಂ ನಂಬಿದಂತಿದೆ. ಹೀಗಾಗಿ ಈ ಹೇಳಿಕೆಗಳಿಗೆ ಕಡಿವಾಣ ಹೈಕಮಾಂಡ್​​ಗೆ ದೂರು ನೀಡುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮತ್ತೆ ಮೂರು DCM ಸ್ಥಾನ ಸೃಷ್ಟಿಸುವ ಕೆಎನ್​ ರಾಜಣ್ಣ ಹೇಳಿಕೆಗೆ ಡಿ.ಕೆ.ಶಿವಕುಮಾರ್ ಗರಂ; ಪ್ರತಿಕ್ರಿಯೆ ಹೇಗಿತ್ತು ಗೊತ್ತಾ..?

https://newsfirstlive.com/wp-content/uploads/2023/09/siddu-8.jpg

    ಕೆ.ಎನ್. ರಾಜಣ್ಣರ ಮಾತಿಗೆ ‘ಕೈ’ ಪಾಳಯದಲ್ಲಿ ಕಂಪನ

    ರಾಜಣ್ಣ ಮಾತಲ್ಲಿ ತಪ್ಪಿಲ್ಲ ಅಂತ ಪರಮೇಶ್ವರ್​​​ ಬ್ಯಾಟ್

    ಕಾಂಗ್ರೆಸ್​​ ಪಕ್ಷದಲ್ಲಿ ಸಂಚಲನ ಸೃಷ್ಟಿ​​​ಸಿದ ಮೂರರ ಆಟ

ರಾಜ್ಯದಲ್ಲಿ ಮೂರು ಡಿಸಿಎಂ ಹುದ್ದೆ ಸೃಷ್ಟಿ ಚರ್ಚೆ ಬಿರುಸು ಪಡೆದಿದೆ. ನ್ಯೂಸ್​​ಫಸ್ಟ್​​​ ಬ್ರೇಕ್​​​ ಮಾಡಿದ ಈ ಸುದ್ದಿ, ಕಾಂಗ್ರೆಸ್​​ ಪಕ್ಷದಲ್ಲಿ ಸಂಚಲನ ಸೃಷ್ಟಿ​​​ ಮಾಡಿದೆ. ರಾಜಣ್ಣ ರಾಜಕಾರಣದಿಂದ ಹಾಲಿ-ಮಾಜಿ ಡಿಸಿಎಂ ಮಧ್ಯೆ ಮಾತಿನ ಭಿನ್ನತೆ ಸೃಷ್ಟಿಸಿದೆ. ಈ ಬಗ್ಗೆ ಮೊದಲ ಬಾರಿಗೆ ಡಿ.ಕೆ.ಶಿವಕುಮಾರ್ ರಿಯಾಕ್ಟ್​​ ಮಾಡಿದ್ದು, ಪಕ್ಷದೊಳಗಿನ ಎಲ್ಲಾ ಬೆಳವಣಿಗೆ ಕುರಿತು ಕಿಡಿಕಿಡಿ ಆಗಿದ್ದಾರೆ.

ಈ ಸುದ್ದಿ ಇಡೀ ಹಸ್ತಪಡೆಯಲ್ಲಿ ಭೂಕಂಪ ಸೃಷ್ಟಿಸಿದೆ. ಹರಿಪ್ರಸಾದ್​​ ಎತ್ತಿದ ಪ್ರಶ್ನೆಗೆ ಪ್ರತ್ಯುತ್ತರವಾಗಿ ಸಿದ್ದರಾಮಯ್ಯ ಕ್ಯಾಂಪ್​​​ಪ್ರಯೋಗಿಸಿದ ಅಸ್ತ್ರ ಇದು. ನ್ಯೂಸ್​​ಫಸ್ಟ್​​ನ ಮುಖಪುಟದಲ್ಲಿ ರಾಜಣ್ಣ ರಾರಾಜಿಸ್ತಿದ್ರೆ, ಒಳಪುಟದಲ್ಲಿ ಯಾರಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತಿರುವ ಸತ್ಯ. ಇವತ್ತು ಸರ್ಕಾರದ ನಂಬರ್​​​-2 ಪಟ್ಟಕ್ಕೆ ಫೈಟ್​​ ತಾರಕಕ್ಕೇರಿದ್ದು, ಡಿಸಿಎಂ ಡಿಕೆ ಶಿವಕುಮಾರ್​​ಗೆ ನಿದ್ರಾಭಂಗವಾಗಿದೆ.

ಸರ್ಕಾರ ರಚಿಸಿ ಮೂರೇ ತಿಂಗಳಲ್ಲಿ ಹಸ್ತದಲ್ಲಿ ಕಿತ್ತಾಟ!

ನ್ಯೂಸ್​ಫಸ್ಟ್ ಬ್ರೇಕ್​​​ ಮಾಡಿದ ಮೂರು ಡಿಸಿಎಂ ಹುದ್ದೆ ಸೃಷ್ಟಿ ಆಗಬೇಕು ಎಂಬ ರಾಜಣ್ಣ ಮಾತು, ರಾಜ್ಯದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ. ಈ ಚರ್ಚೆಯಲ್ಲಿ ಹಾಲಿ ಮತ್ತು ಮಾಜಿ ಡಿಸಿಎಂ ನಡುವೆ ಭಿನ್ನ ಹೇಳಿಕೆಗಳು ಮುಖಾಮುಖಿ ಆಗಿದ್ದು, ಸಂಘರ್ಷ ಜನ್ಮ ತಾಳುವಂತಾಗಿದೆ. ಈ ಮೂಲಕ ರಾಜ್ಯ ಕಾಂಗ್ರೆಸ್​ನ ಶಾಂತ ಸಾಗರವನ್ನ ಕಲಕಿದೆ. ಅದರಲ್ಲೂ ಡಿಕೆ ಮನದಲ್ಲಿ ರೋಷಾಗ್ನಿಯೇ ಉಕ್ಕಿದೆ.

ಸಚಿವ ರಾಜಣ್ಣ ಎತ್ತಿದ ಪ್ರಶ್ನೆಗೆ ಡಿಕೆ ಕೆಂಡಾಮಂಡಲ!
ಬೆಂಗಳೂರಿನಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್​, ಮೂರು ಡಿಸಿಎಂ ಸೃಷ್ಟಿ ಬಗ್ಗೆ ರಾಜಣ್ಣ ಎತ್ತಿದ ಪ್ರಶ್ನೆಗೆ ಕೆಂಡಾಮಂಡಲರಾದ್ರು. ಈ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿಗಳೇ ಉತ್ತರಿಸಬೇಕು ಅಂತ ಗರಂ ಆದರು. ಲೋಕಸಭೆ ಚುನಾವಣೆ ಸನಿಹದಲ್ಲಿ ಈ ತರಹದ ಬೇಡಿಕೆ ಸರಿನಾ ಎಂಬ ಪ್ರಶ್ನೆಗೂ ಸಿಎಂ ಕಡೆಗೆ ಡಿಸಿಎಂ ಡಿಕೆಶಿ ಬೊಟ್ಟು ಮಾಡಿದ್ದರು. ಇನ್ನು, ಯಾರು ಮಾತನಾಡಿದರೂ ಅವರ ಸ್ಥಾನಮಾನಕ್ಕೆ ತಕ್ಕಂತೆ ಮಾತನಾಡಬೇಕು. ಈಗ ರಾಜಣ್ಣ ಮಾತನಾಡಿದ್ದಾರೆ, ಅವರು ಮುಖ್ಯಮಂತ್ರಿಗಳ ಬಳಿ ಉತ್ತರ ಕೇಳಬೇಕು. ಹರಿಪ್ರಸಾದ್​ಗೆ ಉತ್ತರ ಹೇಳಬೇಕಾಗಿರುವುದು ಕಾಂಗ್ರೆಸ್​ ಹೈಕಮಾಂಡ್​. ನಾನು ಯಾರನ್ನು ಕೇಳಬೇಕು ಕೇಳ್ತೀನಿ. ಮುಲಾಜಿಲ್ಲದೇ ಕೇಳ್ತೀನಿ ಅಂತ ಸಿಟ್ಟಲ್ಲಿ ಸಿಡುಕಿದರು. ಇನ್ನು ನಿನ್ನೆಯಷ್ಟೇ ಸಿಎಂ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದರು. ಆಗ ಒಬ್ಬರೇ ಡಿಸಿಎಂ ಸಾಕು ಅಂದಿದ್ದರು. ಈಗ ಹೈಕಮಾಂಡ್ ಏನು ಹೇಳುತ್ತೋ ಹಾಗೆ ನಡೆದುಕೊಳ್ಳುತ್ತೇನೆ ಎಂದಿದ್ದಾರೆ.

ರಾಜಣ್ಣ ಮಾತಲ್ಲಿ ತಪ್ಪಿಲ್ಲ ಎಂದ ಪರಮೇಶ್ವರ್​​​!
ರಾಜಣ್ಣ ಪರ ಗೃಹ ಸಚಿವ ಜಿ. ಪರಮೇಶ್ವರ್​ ಬ್ಯಾಟ್​ ಬೀಸಿದ್ದಾರೆ. ರಾಜಣ್ಣ ಅಭಿಪ್ರಾಯ ಹೇಳಿದ್ದಾರೆ, ಅದ್ರಲ್ಲಿ ತಪ್ಪೇನೂ ಇಲ್ಲ ಎಂದಿದ್ದಾರೆ.  ಅವರವರ ಸಮುದಾಯಗಳಿಗೆ ಸ್ಥಾನ ಕೊಟ್ಟರೆ ಪಕ್ಷಕ್ಕೆ ಶಕ್ತಿ ಬರುತ್ತೆ ಎಂದು ವಾದಿಸಿದ್ದಾರೆ. ರಾಜಣ್ಣ ಮಾತಿಗೆ ಎಂಬಿ ಪಾಟೀಲ್​​ ಟಾಂಗ್​​ ಕೊಟ್ಟಿದ್ದಾರೆ. ವೈಯಕ್ತಿಕ ಹೇಳಿಕೆ ಕೊಟ್ಟರೆ ಅದಕ್ಕೆ ಮಾನ್ಯತೆ ಇಲ್ಲ ಎಂದಿದ್ದಾರೆ. ಒಟ್ಟಾರೆ, ಈ ಬೆಳವಣಿಗೆಯಿಂದ ಡಿಕೆಶಿ ತೀವ್ರ ಅಸಮಾಧಾನ ತರಿಸಿದೆ. ಅದರಲ್ಲೂ ರಾಜಣ್ಣ ಹೇಳಿಕೆಗೆ ಕೆಲ ಸಚಿವರು, ಶಾಸಕರು ಧ್ವನಿಗೂಡಿಸ್ತಿದ್ದು, ಡಿಕೆಶಿಯನ್ನ ಕೆರಳಿಸಿದೆ. ತಮಗೆ ಮುಜುಗರ ಮಾಡಲು ಈ ಅನಗತ್ಯ ಗೊಂದಲ ಅಂತ ಡಿಸಿಎಂ ನಂಬಿದಂತಿದೆ. ಹೀಗಾಗಿ ಈ ಹೇಳಿಕೆಗಳಿಗೆ ಕಡಿವಾಣ ಹೈಕಮಾಂಡ್​​ಗೆ ದೂರು ನೀಡುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More