newsfirstkannada.com

Kaveri Water: 3ನೇ ದಿನವೂ ತಮಿಳುನಾಡಿಗೆ ನೀರು ಬಿಡುಗಡೆ ಮುಂದುವರಿಕೆ.. ಇಂದು KRS ಡ್ಯಾಂ ನೀರಿನ ಮಟ್ಟ ಎಷ್ಟಿದೆ?

Share :

01-09-2023

    ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮುಂದುವರಿಕೆ

    ಕಾವೇರಿ ಪ್ರಾಧಿಕಾರ ಆದೇಶದ ಮೇರೆಗೆ ನೀರು ಬಿಡುಗಡೆ

    ಮಂಗಳವಾರ ರಾತ್ರಿಯಿಂದಲೇ ನೀರು ಬಿಡಲಾಗುತ್ತಿದೆ

ಕರ್ನಾಟಕ ಮತ್ತು ತಮಿಳುನಾಡಿನ ಮಧ್ಯೆ ಕಾವೇರಿ ವಿವಾದ ತಾರಕಕ್ಕೇರಿದ್ದು, ಕಾವೇರಿ ಪ್ರಾಧಿಕಾರ ಸುಪ್ರೀಂಕೋರ್ಟ್​ಗೆ ಅಫಿಡವಿಟ್​ ಸಲ್ಲಿಕೆ ಮಾಡಿದೆ. ಸುಪ್ರೀಂಕೋರ್ಟ್​ ಸೂಚನೆಯಂತೆ ಪ್ರಾಧಿಕಾರವು ಸಭೆ ನಡೆಸಿ, ವರದಿಯನ್ನು ಸಿದ್ದಪಡಿಸಿದೆ. ಅದರಂತೆಯೇ ಇಂದು ಇದೇ ವಿಚಾರವಾಗಿ ವಿಚಾರಣೆ ನಡೆಯಬೇಕಾಗಿದ್ದು, ಆರ್ಟಿಕಲ್ 370 ವಿಚಾರಣೆ ಇರುವ ಕಾರಣ ಕಾವೇರಿ ವಿವಾದದ ಬಗ್ಗೆ ಚರ್ಚೆ ಡೌಟ್​ ಎನ್ನಲಾಗುತ್ತಿದೆ.

ಕಾವೇರಿ ವಿಚಾರವಾಗಿ ಅತ್ತ ರೈತರು ಹೋರಾಟ ಮಾಡಿದರು ಸಹ ಕಳೆದ ಮೂರು ದಿನದ ಬಳಿಕದಿಂದ KRS ಡ್ಯಾಂನ ನಿಂದ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ. ರಾಜ್ಯ ಸರ್ಕಾರ ಕಾವೇರಿ ಪ್ರಾಧಿಕಾರ ಆದೇಶದ ಮೇರೆಗೆ ನೀರು ಹರಿಸುತ್ತಿದೆ.

ಮಂಗಳವಾರ ರಾತ್ರಿಯಿಂದಲೆ KRS ಡ್ಯಾಂನಿಂದ ತಮಿಳುನಾಡಿಗೆ ನೀರು ಹರಿಬಿಡಲಾಗುತ್ತಿದೆ. ಅದರಂತೆಯೇ ಇಂದು ಡ್ಯಾಂನಿಂದ 7,180 ಕ್ಯೂಸೆಕ್ ನೀರು ನದಿಗೆ ಬಿಡಲಾಗಿದೆ. 1500 ಕ್ಯೂಸೆಕ್ ಕುಡಿಯುವ ನೀರಿಗೆ ಬಿಡುಗಡೆ ಮಾಡಿದೆ. 5,680 ಕ್ಯೂಸೆಕ್ ನೀರು ಮೆಟ್ಟೂರು ಡ್ಯಾಂಗೆ ಬಿಡುಗಡೆ ಮಾಡಲಾಗಿದೆ.

ಸದ್ಯ ಡ್ಯಾಂನ ಹೊರ ಹರಿವು 7,230 ಕ್ಯೂಸೆಕ್ ಇದೆ. ಇನ್ನು ಡ್ಯಾಂಗೆ ಹರಿದು ಬರ್ತಿದೆ 1535 ಕ್ಯೂಸೆಕ್ ಒಳಹರಿವು ಬರುತ್ತಾ ಇದೆ. ಈಗ ಡ್ಯಾಂನಲ್ಲಿ‌ 23.079 ಟಿಎಂಸಿ ನೀರು ಮಾತ್ರ ಸಂಗ್ರಹವಿದೆ.

ಕೆಆರ್‌ಎಸ್ ಡ್ಯಾಂ ನ ಇಂದಿನ ನೀರಿನ ಮಟ್ಟ ಗಮನಿಸುವುದಾದರೆ..

ಗರಿಷ್ಠ ಮಟ್ಟ – 124.80 ಅಡಿಗಳು
ಇಂದಿನ ಮಟ್ಟ – 100.34 ಅಡಿಗಳು
ಗರಿಷ್ಠ ಸಾಂದ್ರತೆ – 49.452 ಟಿಎಂಸಿ
ಇಂದಿನ ಸಾಂದ್ರತೆ – 23.079 ಟಿಎಂಸಿ
ಒಳ ಹರಿವು – 1,535 ಕ್ಯೂಸೆಕ್
ಹೊರ ಹರಿವು – 7,230 ಕ್ಯೂಸೆಕ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Kaveri Water: 3ನೇ ದಿನವೂ ತಮಿಳುನಾಡಿಗೆ ನೀರು ಬಿಡುಗಡೆ ಮುಂದುವರಿಕೆ.. ಇಂದು KRS ಡ್ಯಾಂ ನೀರಿನ ಮಟ್ಟ ಎಷ್ಟಿದೆ?

https://newsfirstlive.com/wp-content/uploads/2023/08/KRS-Dam-Mandya.jpg

    ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮುಂದುವರಿಕೆ

    ಕಾವೇರಿ ಪ್ರಾಧಿಕಾರ ಆದೇಶದ ಮೇರೆಗೆ ನೀರು ಬಿಡುಗಡೆ

    ಮಂಗಳವಾರ ರಾತ್ರಿಯಿಂದಲೇ ನೀರು ಬಿಡಲಾಗುತ್ತಿದೆ

ಕರ್ನಾಟಕ ಮತ್ತು ತಮಿಳುನಾಡಿನ ಮಧ್ಯೆ ಕಾವೇರಿ ವಿವಾದ ತಾರಕಕ್ಕೇರಿದ್ದು, ಕಾವೇರಿ ಪ್ರಾಧಿಕಾರ ಸುಪ್ರೀಂಕೋರ್ಟ್​ಗೆ ಅಫಿಡವಿಟ್​ ಸಲ್ಲಿಕೆ ಮಾಡಿದೆ. ಸುಪ್ರೀಂಕೋರ್ಟ್​ ಸೂಚನೆಯಂತೆ ಪ್ರಾಧಿಕಾರವು ಸಭೆ ನಡೆಸಿ, ವರದಿಯನ್ನು ಸಿದ್ದಪಡಿಸಿದೆ. ಅದರಂತೆಯೇ ಇಂದು ಇದೇ ವಿಚಾರವಾಗಿ ವಿಚಾರಣೆ ನಡೆಯಬೇಕಾಗಿದ್ದು, ಆರ್ಟಿಕಲ್ 370 ವಿಚಾರಣೆ ಇರುವ ಕಾರಣ ಕಾವೇರಿ ವಿವಾದದ ಬಗ್ಗೆ ಚರ್ಚೆ ಡೌಟ್​ ಎನ್ನಲಾಗುತ್ತಿದೆ.

ಕಾವೇರಿ ವಿಚಾರವಾಗಿ ಅತ್ತ ರೈತರು ಹೋರಾಟ ಮಾಡಿದರು ಸಹ ಕಳೆದ ಮೂರು ದಿನದ ಬಳಿಕದಿಂದ KRS ಡ್ಯಾಂನ ನಿಂದ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ. ರಾಜ್ಯ ಸರ್ಕಾರ ಕಾವೇರಿ ಪ್ರಾಧಿಕಾರ ಆದೇಶದ ಮೇರೆಗೆ ನೀರು ಹರಿಸುತ್ತಿದೆ.

ಮಂಗಳವಾರ ರಾತ್ರಿಯಿಂದಲೆ KRS ಡ್ಯಾಂನಿಂದ ತಮಿಳುನಾಡಿಗೆ ನೀರು ಹರಿಬಿಡಲಾಗುತ್ತಿದೆ. ಅದರಂತೆಯೇ ಇಂದು ಡ್ಯಾಂನಿಂದ 7,180 ಕ್ಯೂಸೆಕ್ ನೀರು ನದಿಗೆ ಬಿಡಲಾಗಿದೆ. 1500 ಕ್ಯೂಸೆಕ್ ಕುಡಿಯುವ ನೀರಿಗೆ ಬಿಡುಗಡೆ ಮಾಡಿದೆ. 5,680 ಕ್ಯೂಸೆಕ್ ನೀರು ಮೆಟ್ಟೂರು ಡ್ಯಾಂಗೆ ಬಿಡುಗಡೆ ಮಾಡಲಾಗಿದೆ.

ಸದ್ಯ ಡ್ಯಾಂನ ಹೊರ ಹರಿವು 7,230 ಕ್ಯೂಸೆಕ್ ಇದೆ. ಇನ್ನು ಡ್ಯಾಂಗೆ ಹರಿದು ಬರ್ತಿದೆ 1535 ಕ್ಯೂಸೆಕ್ ಒಳಹರಿವು ಬರುತ್ತಾ ಇದೆ. ಈಗ ಡ್ಯಾಂನಲ್ಲಿ‌ 23.079 ಟಿಎಂಸಿ ನೀರು ಮಾತ್ರ ಸಂಗ್ರಹವಿದೆ.

ಕೆಆರ್‌ಎಸ್ ಡ್ಯಾಂ ನ ಇಂದಿನ ನೀರಿನ ಮಟ್ಟ ಗಮನಿಸುವುದಾದರೆ..

ಗರಿಷ್ಠ ಮಟ್ಟ – 124.80 ಅಡಿಗಳು
ಇಂದಿನ ಮಟ್ಟ – 100.34 ಅಡಿಗಳು
ಗರಿಷ್ಠ ಸಾಂದ್ರತೆ – 49.452 ಟಿಎಂಸಿ
ಇಂದಿನ ಸಾಂದ್ರತೆ – 23.079 ಟಿಎಂಸಿ
ಒಳ ಹರಿವು – 1,535 ಕ್ಯೂಸೆಕ್
ಹೊರ ಹರಿವು – 7,230 ಕ್ಯೂಸೆಕ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More