newsfirstkannada.com

VIDEO: ಮೈತ್ರಿ ಏನಾಗುತ್ತೋ ಕಾದು ನೋಡಿ.. ಬಿಜೆಪಿ ಶಾಸಕ ಯತ್ನಾಳ್ ಅಚ್ಚರಿಯ ಹೇಳಿಕೆ

Share :

08-09-2023

    ​ದೆಹಲಿಯಲ್ಲಿ BJP ನಾಯಕರೊಂದಿಗೆ ಜೆಡಿಎಸ್​ನ ಹೆಚ್​.ಡಿ ದೇವೇಗೌಡ ಚರ್ಚೆ

    ಕಾದು ನೋಡುವ ತಂತ್ರಕ್ಕೆ ಮುಂದಾದ್ರಾ ಎಂಎಲ್​ಎ ಬಸನಗೌಡ ಯತ್ನಾಳ್?

    2024ರ ಲೋಕಸಭಾ ಎಲೆಕ್ಷನ್​, ಮೈತ್ರಿ ಬಗ್ಗೆ ರಾಜಕೀಯದಲ್ಲಿ ಭಾರೀ ಚರ್ಚೆ..!

ರಾಯಚೂರು: ರಾಜ್ಯ ರಾಜ್ಯಕೀಯದಲ್ಲಿ ಹೊಸ ರಾಜಕಾರಣದ ಅಲೆ ಎದ್ದಿದ್ದು, ಲೋಕಸಭಾ ಎಲೆಕ್ಷನ್​ನಲ್ಲಿ ಬಿಜೆಪಿ-ಜೆಡಿಎಸ್​ ಮೈತ್ರಿ ಮಾಡಿಕೊಂಡು ಸ್ಪರ್ಧೆ ಮಾಡಲಿವೆ ಎನ್ನಲಾಗ್ತಿದೆ. ಈ ಬಗ್ಗೆ ರಾಯಚೂರಿನಲ್ಲಿ ಮಾತನಾಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ ಅವರು, ಈ ಮೈತ್ರಿ ಏನಾಗುತ್ತೋ ಅಂತ ಕಾದು ನೋಡೋಣ ಎಂದು ಹೇಳಿದ್ದಾರೆ.

ಬಿಜೆಪಿ-ಜೆಡಿಎಸ್​ ಮೈತ್ರಿಯ ನಿರ್ಧಾರ ಬಿಜೆಪಿಗೆ ಲಾಭವಾಗುತ್ತೋ, ಜೆಡಿಎಸ್​ಗೆ ಹೆಚ್ಚು ಲಾಭವಾಗುತ್ತೋ ಎಂದು ಹೇಳುವುದಕ್ಕೆ ಆಗಲ್ಲ. ಮೈತ್ರಿ ಇನ್ನು ಆರಂಭ ಹಂತದಲ್ಲಿದ್ದು ಜೆಡಿಎಸ್ ಮೈತ್ರಿಯಿಂದ ಬಿಜೆಪಿಗೆ ದೊಡ್ಡ ಲಾಭವಾಗುತ್ತೆಂದು ಒಮ್ಮೆಲೇ ಹೇಳುವುದಕ್ಕೆ ಆಗಲ್ಲ. ಪಕ್ಷದ ಕಾರ್ಯಕರ್ತರ ಅಭಿಪ್ರಾಯವನ್ನು ಕೇಳಿ ಈ ಬಗ್ಗೆ ಅಧ್ಯಯನ ಮಾಡಬೇಕು. ಮುಂದಿನ ದಿನಗಳಲ್ಲಿ ಏನಾಗುತ್ತದೆ ಅಂತ ಕಾದು ನೋಡೋಣ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಇದನ್ನು ಓದಿ: BJP-JDS​ ಮೈತ್ರಿ ಬಗ್ಗೆ ಸಿಎಂ ಸಿದ್ದರಾಮಯ್ಯ ಏನಂದ್ರು? ಒಳ್ಳೆಯದಾಗಲಿ, ಚೆನ್ನಾಗಿರಲಿ ಅಂದಿದ್ದೇಕೆ ಡಿ.ಕೆ ಶಿವಕುಮಾರ್​

ದೆಹಲಿಯಲ್ಲಿ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದ ಹೆಚ್​.ಡಿ ದೇವೇಗೌಡ

ಇನ್ನು ಮಾತು ಮುಂದುವರೆಸಿದ ಯತ್ನಾಳ್ ಅವರು, ಪ್ರಧಾ‌ನಿ ಮೋದಿ 3ನೇ ಬಾರಿಗೆ ದೇಶದ ಚುಕ್ಕಾಣಿ ಹಿಡಿಯಲಿದ್ದಾರೆ. ರಾಜ್ಯದಲ್ಲಿ 25 ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದ್ದೇವೆ. ಬಿಜೆಪಿ-ಜೆಡಿಎಸ್ ಮೈತ್ರಿ ಯಾರಿಗೆ ಪ್ಲಸ್ ಯಾರಿಗೆ ಮೈನಸ್ ಈಗಲೇ ಹೇಳುವುದಕ್ಕೆ ಆಗಲ್ಲ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಮೈತ್ರಿ ಏನಾಗುತ್ತೋ ಕಾದು ನೋಡಿ.. ಬಿಜೆಪಿ ಶಾಸಕ ಯತ್ನಾಳ್ ಅಚ್ಚರಿಯ ಹೇಳಿಕೆ

https://newsfirstlive.com/wp-content/uploads/2023/09/RCR_YATNAL.jpg

    ​ದೆಹಲಿಯಲ್ಲಿ BJP ನಾಯಕರೊಂದಿಗೆ ಜೆಡಿಎಸ್​ನ ಹೆಚ್​.ಡಿ ದೇವೇಗೌಡ ಚರ್ಚೆ

    ಕಾದು ನೋಡುವ ತಂತ್ರಕ್ಕೆ ಮುಂದಾದ್ರಾ ಎಂಎಲ್​ಎ ಬಸನಗೌಡ ಯತ್ನಾಳ್?

    2024ರ ಲೋಕಸಭಾ ಎಲೆಕ್ಷನ್​, ಮೈತ್ರಿ ಬಗ್ಗೆ ರಾಜಕೀಯದಲ್ಲಿ ಭಾರೀ ಚರ್ಚೆ..!

ರಾಯಚೂರು: ರಾಜ್ಯ ರಾಜ್ಯಕೀಯದಲ್ಲಿ ಹೊಸ ರಾಜಕಾರಣದ ಅಲೆ ಎದ್ದಿದ್ದು, ಲೋಕಸಭಾ ಎಲೆಕ್ಷನ್​ನಲ್ಲಿ ಬಿಜೆಪಿ-ಜೆಡಿಎಸ್​ ಮೈತ್ರಿ ಮಾಡಿಕೊಂಡು ಸ್ಪರ್ಧೆ ಮಾಡಲಿವೆ ಎನ್ನಲಾಗ್ತಿದೆ. ಈ ಬಗ್ಗೆ ರಾಯಚೂರಿನಲ್ಲಿ ಮಾತನಾಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ ಅವರು, ಈ ಮೈತ್ರಿ ಏನಾಗುತ್ತೋ ಅಂತ ಕಾದು ನೋಡೋಣ ಎಂದು ಹೇಳಿದ್ದಾರೆ.

ಬಿಜೆಪಿ-ಜೆಡಿಎಸ್​ ಮೈತ್ರಿಯ ನಿರ್ಧಾರ ಬಿಜೆಪಿಗೆ ಲಾಭವಾಗುತ್ತೋ, ಜೆಡಿಎಸ್​ಗೆ ಹೆಚ್ಚು ಲಾಭವಾಗುತ್ತೋ ಎಂದು ಹೇಳುವುದಕ್ಕೆ ಆಗಲ್ಲ. ಮೈತ್ರಿ ಇನ್ನು ಆರಂಭ ಹಂತದಲ್ಲಿದ್ದು ಜೆಡಿಎಸ್ ಮೈತ್ರಿಯಿಂದ ಬಿಜೆಪಿಗೆ ದೊಡ್ಡ ಲಾಭವಾಗುತ್ತೆಂದು ಒಮ್ಮೆಲೇ ಹೇಳುವುದಕ್ಕೆ ಆಗಲ್ಲ. ಪಕ್ಷದ ಕಾರ್ಯಕರ್ತರ ಅಭಿಪ್ರಾಯವನ್ನು ಕೇಳಿ ಈ ಬಗ್ಗೆ ಅಧ್ಯಯನ ಮಾಡಬೇಕು. ಮುಂದಿನ ದಿನಗಳಲ್ಲಿ ಏನಾಗುತ್ತದೆ ಅಂತ ಕಾದು ನೋಡೋಣ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಇದನ್ನು ಓದಿ: BJP-JDS​ ಮೈತ್ರಿ ಬಗ್ಗೆ ಸಿಎಂ ಸಿದ್ದರಾಮಯ್ಯ ಏನಂದ್ರು? ಒಳ್ಳೆಯದಾಗಲಿ, ಚೆನ್ನಾಗಿರಲಿ ಅಂದಿದ್ದೇಕೆ ಡಿ.ಕೆ ಶಿವಕುಮಾರ್​

ದೆಹಲಿಯಲ್ಲಿ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದ ಹೆಚ್​.ಡಿ ದೇವೇಗೌಡ

ಇನ್ನು ಮಾತು ಮುಂದುವರೆಸಿದ ಯತ್ನಾಳ್ ಅವರು, ಪ್ರಧಾ‌ನಿ ಮೋದಿ 3ನೇ ಬಾರಿಗೆ ದೇಶದ ಚುಕ್ಕಾಣಿ ಹಿಡಿಯಲಿದ್ದಾರೆ. ರಾಜ್ಯದಲ್ಲಿ 25 ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದ್ದೇವೆ. ಬಿಜೆಪಿ-ಜೆಡಿಎಸ್ ಮೈತ್ರಿ ಯಾರಿಗೆ ಪ್ಲಸ್ ಯಾರಿಗೆ ಮೈನಸ್ ಈಗಲೇ ಹೇಳುವುದಕ್ಕೆ ಆಗಲ್ಲ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More