ಫ್ರೀ ಬಸ್ನಲ್ಲಿ ಧಾರ್ಮಿಕ ಕ್ಷೇತ್ರಗಳಿಗೆ ಹೋಗುವ ಮಹಿಳೆಯರಿಗೆ ಶಾಕ್
ಒಂದು ಬಸ್ನಲ್ಲಿ ಇಷ್ಟೇ ಮಂದಿ ಹೋಗಬೇಕು ಎಂದು ಹೊಸ ಕಂಡೀಷನ್
ಪ್ರಯಾಣಿಕರ ಹಿತದೃಷ್ಟಿಯಿಂದ ಕಾಂಗ್ರೆಸ್ ಸರ್ಕಾರದಿಂದ ಮಹತ್ವದ ನಿರ್ಧಾರ
ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವೂ ಶಕ್ತಿ ಯೋಜನೆ ಅಡಿಯಲ್ಲಿ ರಾಜ್ಯದ ಎಲ್ಲಾ ಮಹಿಳೆಯರಿಗೆ ಫ್ರೀ ಬಸ್ ಪ್ರಯಾಣ ವ್ಯವಸ್ಥೆ ಕಲ್ಪಿಸಿ 10 ದಿನಗಳು ಕಳೆದಿವೆ. ಕೇವಲ ಹತ್ತು ದಿನಗಳಲ್ಲಿ ಸುಮಾರು 4 ಕೋಟಿ 82 ಲಕ್ಷಕ್ಕೂ ಅಧಿಕ ಮಹಿಳೆಯರು ಫ್ರೀ ಬಸ್ನಲ್ಲಿ ಟ್ರಾವೆಲ್ ಮಾಡಿದ್ದಾರೆ. ಇದರ ಒಟ್ಟು ಪ್ರಯಾಣದ ಮೊತ್ತವೂ 113 ಕೋಟಿ ದಾಟಿದೆ. ಅದರಲ್ಲೂ ಧಾರ್ಮಿಕ ಕ್ಷೇತ್ರಗಳಿಗೆ ಹೆಣ್ಣುಮಕ್ಕಳಂತೂ ಕಿಲೋ ಮೀಟರ್ಗಟ್ಟಲೇ ಸೀಟ್ ಇಲ್ಲದೆ ಹೋದರು ಬಸ್ನಲ್ಲಿ ನಿಂತುಕೊಂಡೇ ಪ್ರಯಾಣ ಮಾಡಿದ ಎಷ್ಟೋ ಪ್ರಕರಣಗಳು ಬೆಳಕಿಗೆ ಬಂದಿವೆ. ಹೀಗಿರುವಾಗ ಸರ್ಕಾರ ಮಹತ್ವದ ನಿರ್ಧಾರವೊಂದು ತೆಗೆದುಕೊಂಡಿದೆ. ಶಕ್ತಿ ಯೋಜನೆಗೂ ಷರತ್ತುಗಳು ಹಾಕಲು ಮುಂದಾಗಿದೆ. ಈ ಮೂಲಕ ಫ್ರೀ ಬಸ್ನಲ್ಲಿ ಧಾರ್ಮಿಕ ಕ್ಷೇತ್ರಗಳಿಗೆ ಪ್ರಯಾಣಿಸೋ ಮಹಿಳೆಯರಿಗೆ ಶಾಕ್ ಕೊಟ್ಟಿದೆ.
ಹೌದು, ಯಾವುದೇ ಕಾರಣಕ್ಕೂ ಫ್ರೀ ಬಸ್ನಲ್ಲಿ ಸೀಟ್ ಕ್ಯಾಪಾಸಿಟಿ ಮೀರಿ ಹೆಚ್ಚು ಮಂದಿ ಹತ್ತಬಾರದು ಎಂದು ಆದೇಶ ಹೊರಡಿಸಲು ರಾಜ್ಯ ಸಾರಿಗೆ ಇಲಾಖೆ ನಿರ್ಧರಿಸಿದೆ. ಇನ್ಮುಂದೆ ಸೀಟ್ ಇದ್ದಷ್ಟು ಜನರಿಗೆ ಪ್ರಯಾಣಿಸಲು ಅವಕಾಶ ನೀಡಲಾಗುವುದು. ಮಹಿಳೆಯರು ಫ್ರೀ ಬಸ್ನಲ್ಲಿ ಕಿಲೋ ಮೀಟರ್ಗಟ್ಟಲೇ ನಿಂತುಕೊಂಡೇ ಧಾರ್ಮಿಕ ಕ್ಷೇತ್ರಗಳಿಗೆ ಪ್ರಯಾಣ ಮಾಡುತ್ತಿದ್ದರು. ಪ್ರಯಾಣಿಕರ ಹಿತ ದೃಷ್ಟಿಯಿಂದ ಈ ನಿರ್ಧಾರಕ್ಕೆ ಬಂದಿರುವುದಾಗಿ ವರದಿಯಾಗಿದೆ.
ಈ ಸಂಬಂಧ ಮಾತಾಡಿದ ರಾಜ್ಯ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಬಿಎಂಟಿಸಿ ಬಸ್ನಲ್ಲಿ 20 ಲಕ್ಷಕ್ಕೂ ಹೆಚ್ಚು ಮಹಿಳೆಯರು ಪ್ರಯಾಣ ಮಾಡುತ್ತಾರೆ. ಇದುವರೆಗೂ ಇಲ್ಲಿ ಯಾವುದೇ ಸಮಸ್ಯೆ ಆಗಿಲ್ಲ. ಆದರೆ KSRTC ಬಸ್ನಲ್ಲಿ ಮಾತ್ರ ಈ ಸಮಸ್ಯೆ ಕಂಡು ಬಂದಿದೆ. ಎಲ್ಲರಿಗೂ ಒಂದೇ ದಿನ ಓಡಾಡಬೇಕೆಂಬ ಆಸೆ. ನಮ್ಮ ಸರ್ಕಾರ ಈ ಯೋಜನೆಯನ್ನು ಐದು ವರ್ಷ ಮುಂದುವರಿಸಲಿದೆ. ನಿಧಾನವಾಗಿ ಧಾರ್ಮಿಕ ಕ್ಷೇತ್ರಗಳಿಗೆ ಹೋಗುವ ಪ್ಲಾನ್ ಮಾಡಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಜತೆಗೆ ಮುಂದಿನ ದಿನಗಳಲ್ಲಿ ಬಸ್ಗಳಲ್ಲಿ ಪುರುಷರಿಗೆ ಶೇ. 50ರಷ್ಟು ಸೀಟ್ ರಿಸರ್ವ್ ಮಾಡುವುದಾಗಿ ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಫ್ರೀ ಬಸ್ನಲ್ಲಿ ಧಾರ್ಮಿಕ ಕ್ಷೇತ್ರಗಳಿಗೆ ಹೋಗುವ ಮಹಿಳೆಯರಿಗೆ ಶಾಕ್
ಒಂದು ಬಸ್ನಲ್ಲಿ ಇಷ್ಟೇ ಮಂದಿ ಹೋಗಬೇಕು ಎಂದು ಹೊಸ ಕಂಡೀಷನ್
ಪ್ರಯಾಣಿಕರ ಹಿತದೃಷ್ಟಿಯಿಂದ ಕಾಂಗ್ರೆಸ್ ಸರ್ಕಾರದಿಂದ ಮಹತ್ವದ ನಿರ್ಧಾರ
ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವೂ ಶಕ್ತಿ ಯೋಜನೆ ಅಡಿಯಲ್ಲಿ ರಾಜ್ಯದ ಎಲ್ಲಾ ಮಹಿಳೆಯರಿಗೆ ಫ್ರೀ ಬಸ್ ಪ್ರಯಾಣ ವ್ಯವಸ್ಥೆ ಕಲ್ಪಿಸಿ 10 ದಿನಗಳು ಕಳೆದಿವೆ. ಕೇವಲ ಹತ್ತು ದಿನಗಳಲ್ಲಿ ಸುಮಾರು 4 ಕೋಟಿ 82 ಲಕ್ಷಕ್ಕೂ ಅಧಿಕ ಮಹಿಳೆಯರು ಫ್ರೀ ಬಸ್ನಲ್ಲಿ ಟ್ರಾವೆಲ್ ಮಾಡಿದ್ದಾರೆ. ಇದರ ಒಟ್ಟು ಪ್ರಯಾಣದ ಮೊತ್ತವೂ 113 ಕೋಟಿ ದಾಟಿದೆ. ಅದರಲ್ಲೂ ಧಾರ್ಮಿಕ ಕ್ಷೇತ್ರಗಳಿಗೆ ಹೆಣ್ಣುಮಕ್ಕಳಂತೂ ಕಿಲೋ ಮೀಟರ್ಗಟ್ಟಲೇ ಸೀಟ್ ಇಲ್ಲದೆ ಹೋದರು ಬಸ್ನಲ್ಲಿ ನಿಂತುಕೊಂಡೇ ಪ್ರಯಾಣ ಮಾಡಿದ ಎಷ್ಟೋ ಪ್ರಕರಣಗಳು ಬೆಳಕಿಗೆ ಬಂದಿವೆ. ಹೀಗಿರುವಾಗ ಸರ್ಕಾರ ಮಹತ್ವದ ನಿರ್ಧಾರವೊಂದು ತೆಗೆದುಕೊಂಡಿದೆ. ಶಕ್ತಿ ಯೋಜನೆಗೂ ಷರತ್ತುಗಳು ಹಾಕಲು ಮುಂದಾಗಿದೆ. ಈ ಮೂಲಕ ಫ್ರೀ ಬಸ್ನಲ್ಲಿ ಧಾರ್ಮಿಕ ಕ್ಷೇತ್ರಗಳಿಗೆ ಪ್ರಯಾಣಿಸೋ ಮಹಿಳೆಯರಿಗೆ ಶಾಕ್ ಕೊಟ್ಟಿದೆ.
ಹೌದು, ಯಾವುದೇ ಕಾರಣಕ್ಕೂ ಫ್ರೀ ಬಸ್ನಲ್ಲಿ ಸೀಟ್ ಕ್ಯಾಪಾಸಿಟಿ ಮೀರಿ ಹೆಚ್ಚು ಮಂದಿ ಹತ್ತಬಾರದು ಎಂದು ಆದೇಶ ಹೊರಡಿಸಲು ರಾಜ್ಯ ಸಾರಿಗೆ ಇಲಾಖೆ ನಿರ್ಧರಿಸಿದೆ. ಇನ್ಮುಂದೆ ಸೀಟ್ ಇದ್ದಷ್ಟು ಜನರಿಗೆ ಪ್ರಯಾಣಿಸಲು ಅವಕಾಶ ನೀಡಲಾಗುವುದು. ಮಹಿಳೆಯರು ಫ್ರೀ ಬಸ್ನಲ್ಲಿ ಕಿಲೋ ಮೀಟರ್ಗಟ್ಟಲೇ ನಿಂತುಕೊಂಡೇ ಧಾರ್ಮಿಕ ಕ್ಷೇತ್ರಗಳಿಗೆ ಪ್ರಯಾಣ ಮಾಡುತ್ತಿದ್ದರು. ಪ್ರಯಾಣಿಕರ ಹಿತ ದೃಷ್ಟಿಯಿಂದ ಈ ನಿರ್ಧಾರಕ್ಕೆ ಬಂದಿರುವುದಾಗಿ ವರದಿಯಾಗಿದೆ.
ಈ ಸಂಬಂಧ ಮಾತಾಡಿದ ರಾಜ್ಯ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಬಿಎಂಟಿಸಿ ಬಸ್ನಲ್ಲಿ 20 ಲಕ್ಷಕ್ಕೂ ಹೆಚ್ಚು ಮಹಿಳೆಯರು ಪ್ರಯಾಣ ಮಾಡುತ್ತಾರೆ. ಇದುವರೆಗೂ ಇಲ್ಲಿ ಯಾವುದೇ ಸಮಸ್ಯೆ ಆಗಿಲ್ಲ. ಆದರೆ KSRTC ಬಸ್ನಲ್ಲಿ ಮಾತ್ರ ಈ ಸಮಸ್ಯೆ ಕಂಡು ಬಂದಿದೆ. ಎಲ್ಲರಿಗೂ ಒಂದೇ ದಿನ ಓಡಾಡಬೇಕೆಂಬ ಆಸೆ. ನಮ್ಮ ಸರ್ಕಾರ ಈ ಯೋಜನೆಯನ್ನು ಐದು ವರ್ಷ ಮುಂದುವರಿಸಲಿದೆ. ನಿಧಾನವಾಗಿ ಧಾರ್ಮಿಕ ಕ್ಷೇತ್ರಗಳಿಗೆ ಹೋಗುವ ಪ್ಲಾನ್ ಮಾಡಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಜತೆಗೆ ಮುಂದಿನ ದಿನಗಳಲ್ಲಿ ಬಸ್ಗಳಲ್ಲಿ ಪುರುಷರಿಗೆ ಶೇ. 50ರಷ್ಟು ಸೀಟ್ ರಿಸರ್ವ್ ಮಾಡುವುದಾಗಿ ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ