Advertisment

ಮಳೆಯಿಂದ ಮೈದುಂಬಿ ಹರಿಯುತ್ತಿರುವ ಕಾವೇರಿ.. ಮತ್ತೊಮ್ಮೆ ಪ್ರವಾಹ ಭೀತಿ! ಇಂದು ಒಳಹರಿವು ಎಷ್ಟಿದೆ ಗೊತ್ತಾ?

author-image
AS Harshith
Updated On
Kaveri Water: ಇಂದು ಕಾವೇರಿ ನೀರು ನಿರ್ವಹಣಾ ಸಮಿತಿ ಸಭೆ.. ಆತಂಕದಲ್ಲಿ ಮಂಡ್ಯ ರೈತರು
Advertisment
  • KRS ಡ್ಯಾಂ ಮುಂಭಾಗ ಹಾಲ್ನೊರೆಯಂತೆ ಉಕ್ಕಿ ಹರಿಯುತ್ತಿರುವ ಜೀವನಾಡಿ
  • ಪ್ರವಾಹ ಭೀತಿಯಲ್ಲಿ ಜನರು.. ಮುಂಜಾಗೃತ ಕ್ರಮವಾಗಿ ಏನು ಮಾಡಿದ್ದಾರೆ ಗೊತ್ತಾ?
  • ಮಳೆಯಿಂದಾಗಿ ಇಂದು ಮತ್ತಷ್ಟು ಹೆಚ್ಚಳವಾಗಿದೆ ಕೆಆರ್‌ಎಸ್ ಡ್ಯಾಂನ ಒಳಹರಿವು

ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಹಿನ್ನಲೆ ಕೆಆರ್‌ಎಸ್ ಡ್ಯಾಂನ ಒಳಹರಿವು ಮತ್ತಷ್ಟು ಹೆಚ್ಚಳವಾಗಿದೆ. 21,060 ಕ್ಯೂಸೆಕ್ ಗೆ ಡ್ಯಾಂನ ಒಳಹರಿವು ಏರಿಕೆ ಕಂಡಿದೆ. ಮುಂಜಾಗೃತ ಕ್ರಮವಾಗಿ ಮತ್ತೆ 38,318 ಕ್ಯೂಸೆಕ್ ನೀರು ನದಿಗೆ ಬಿಡುಗಡೆ ಮಾಡಲಾಗಿದೆ.

Advertisment

ಮಳೆಯಿಂದಾಗಿ ಕಾವೇರಿ ನದಿ ಮತ್ತೆ ಮೈದುಂಬಿ ಹರಿಯುತ್ತಿದ್ದಾಳೆ. ಡ್ಯಾಂ ಮುಂಭಾಗ ಭೋರ್ಗರೆದು ಹಾಲ್ನೊರೆಯಂತೆ ಉಕ್ಕಿ ಹರಿಯುತ್ತಿದ್ದಾಳೆ.

ಮಳೆ ಮತ್ತಷ್ಟು ಜಾಸ್ತಿಯಾದರೆ ಕಾವೇರಿ ನದಿಪಾತ್ರದಲ್ಲಿ ಪ್ರವಾಹ ಭೀತಿ ಎದುರಾಗುವ ಸಾಧ್ಯತೆ ಇದೆ. ಕೆಲ ದಿನಗಳ ಹಿಂದೆಯಷ್ಟೆ ಕಾವೇರಿ ಪ್ರವಾಹದಿಂದ ಜನರು ಸಂಕಷ್ಟ ಎದುರಿಸಿದ್ದರು. ಮತ್ತೊಮ್ಮೆ ಪ್ರವಾಹ ಉಂಟಾದ್ರೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ.

ಇದನ್ನೂ ಓದಿ: ತುಂಗಭದ್ರಾ ಡ್ಯಾಂ ಅಧಿಕಾರಿಗಳ ಯಡವಟ್ಟು, ರೈತರಿಗೆ ಸಂಕಟ.. ಖಾಲಿಯಾಗುತ್ತಿದೆ ನೀರು! ರಿಪೇರಿ ಯಾವಾಗ?

Advertisment

ಇಂದಿನ ಕೆಆರ್‌ಎಸ್ ಡ್ಯಾಂ ನೀರಿನ ಮಟ್ಟ

ಗರಿಷ್ಠ ಮಟ್ಟ - 124.80 ಅಡಿ.
ಇಂದಿನ ಮಟ್ಟ - 123.10 ಅಡಿ.
ಗರಿಷ್ಠ ಸಾಮರ್ಥ್ಯ - 49.452 ಟಿಎಂಸಿ.
ಇಂದಿನ ಸಾಮರ್ಥ್ಯ - 47.106 ಟಿಎಂಸಿ
ಒಳ ಹರಿವು - 21,060 ಕ್ಯೂಸೆಕ್
ಹೊರ ಹರಿವು - 38,318 ಕ್ಯೂಸೆಕ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment