newsfirstkannada.com

RSS ಸಂಸ್ಥಾಪಕ ಹೆಡ್ಗೆವಾರ್ ಪಠ್ಯಕ್ಕೆ ಬೀಳುತ್ತಾ ಕತ್ತರಿ..?; ರಾಜ್ಯದಲ್ಲಿ ಮತ್ತೆ ಪಠ್ಯ-ಪುಸ್ತಕ ದಂಗಲ್ ಮುನ್ಸೂಚನೆ

Share :

24-05-2023

    RSS ಸಂಸ್ಥಾಪಕ ಹೆಡ್ಗೆವಾರ್ ಪಠ್ಯಕ್ಕೆ ಬೀಳುತ್ತಾ ಕತ್ತರಿ?

    ರಾಜ್ಯದಲ್ಲಿ ಮತ್ತೆ ಪಠ್ಯ-ಪುಸ್ತಕ ದಂಗಲ್ ಮುನ್ಸೂಚನೆ!

    ರಾಜ್ಯದಲ್ಲಿ ಶಿಕ್ಷಣ ತಜ್ಞರ ಒತ್ತಾಯವೇನು?

ಬೆಂಗಳೂರು: ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆಯೇ ಮತ್ತೆ ಪಠ್ಯ ಪರಿಷ್ಕರಣೆ ಮುನ್ನಲೆಗೆ ಬಂದಿದೆ. ಆರ್​ಎಸ್​ಎಸ್ ಸಂಸ್ಥಾಪಕ ಹೆಡ್ಗೆವಾರ್ ಪಠ್ಯ ಕತ್ತರಿ ಹಾಕುವಂತೆ ಶಿಕ್ಷಣ ತಜ್ಞರು ಸೇರಿ ಕೆಲ ಹಿರಿಯ ಸಾಹಿತಿಗಳಿಂದ ಒತ್ತಾಯ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮಾತ್ರವಲ್ಲ, ಚಕ್ರವರ್ತಿ ಸೂಲಿಬೆಲೆ ಬರೆದಿರುವ ‘ತಾಯಿ ಭಾರತೀಯ ಅಮರಪುತ್ರರು’ ಎಂಬ ಪಾಠವನ್ನೂ ತೆಗೆದು ಹಾಕುವಂತೆ ಶಿಕ್ಷಣ ತಜ್ಞ ನಿರಂಜನ್ ಆರಾಧ್ಯಾ ಒತ್ತಾಯ ಮಾಡಿದ್ದಾರಂತೆ.

ಶಿಕ್ಷಣ ತಜ್ಞರ ಒತ್ತಾಯವೇನು?

  • ಮನವಿ 01: ಕೇಸರಿ ಪಠ್ಯ ಮಕ್ಕಳ ಕಲಿಕೆಗೆ ಬೇಡ ಅಂತ ಒತ್ತಾಯ
  • ಮನವಿ 02: ಬಿಜೆಪಿ ಸರ್ಕಾರ ಮಕ್ಕಳ ಪಠ್ಯ ಕೇಸರಿಕರಣ ಮಾಡಿದೆ
  • ಮನವಿ 03: ಬಸವಣ್ಣ, ಅಂಬೇಡ್ಕರ್, ಟಿಪ್ಪುಗೆ ಅವಮಾನ ಮಾಡಿದೆ
  • ಮನವಿ 04: ರೋಹಿತ್ ಚಕ್ರತೀರ್ಥ ಪರಿಷ್ಕರಣೆಯ ಪಠ್ಯ ತಗೆದು ಹಾಕಿ
  • ಮನವಿ 05: ಈ ವರ್ಷ ಹೆಡ್ಗೆವಾರ್, ಸೂಲಿಬೆಲೆ ಸೇರಿ ಕೆಲ ಪಠ್ಯ ತಗೆಯಿರಿ
  • ಮನವಿ 06: 2019ರ ಬರಗೂರು ರಾಮಚಂದ್ರಪ್ಪ ಪರಿಷ್ಕರಣೆ ಪಠ್ಯ ಇತ್ತು
  • ಮನವಿ 07: ಬರಗೂರು ಪರಿಷ್ಕರಣೆಯ ಪಠ್ಯ ಮುಂದುವರೆಸಬೇಕು
  • ಮನವಿ 08: ಅವಶ್ಯವಾದ್ರೆ ಮುಂದಿನ ವರ್ಷ ಸಂಪೂರ್ಣ ಪಠ್ಯ ಪರಿಷ್ಕರಿಸಿ

ಹಿಂದಿನ ಸರ್ಕಾರದಲ್ಲಿ ಬಿ.ಸಿ.ನಾಗೇಶ್ ಅವರು ಶಿಕ್ಷಣಮಂತ್ರಿಯಾಗಿದ್ದರು. ಈ ವೇಳೆ ಪಠ್ಯ-ಪುಸ್ತಕಗಳ ಪರಿಷ್ಕರಣೆಗಾಗಿ ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿತ್ತು. ಅದರಂತೆ ಈ ಸಮಿತಿಯು ಪಠ್ಯ-ಪುಸ್ತಕದಲ್ಲಿ ಒಂದಷ್ಟು ಬದಲಾವಣೆ ಮಾಡಿತ್ತು. ಇದು ಹಲವರ ವಿರೋಧಕ್ಕೆ ಕಾರಣವಾಗಿತ್ತು. ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್​ ಸರ್ಕಾರ ಬರುತ್ತಿದ್ದಂತೆಯೇ, ಬಿಜೆಪಿ ಸರ್ಕಾರದಲ್ಲಿ ಪರಿಷ್ಕರಣೆ ಆಗಿದ್ದ ಪಠ್ಯ-ಪುಸ್ತಕಗಳಿಗೆ ಕತ್ತರಿ ಹಾಕಿ, ಹಳೆಯ ಅಂದ್ರೆ 2019 ರ ಬರಗೂರು ರಾಮಚಂದ್ರಪ್ಪನವರ ಪರಿಷ್ಕರಣೆಯಂತೆ ಪಠ್ಯವನ್ನೇ ಮುಂದುವರೆಸುವಂತೆ ಒತ್ತಾಯ ಮಾಡ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

RSS ಸಂಸ್ಥಾಪಕ ಹೆಡ್ಗೆವಾರ್ ಪಠ್ಯಕ್ಕೆ ಬೀಳುತ್ತಾ ಕತ್ತರಿ..?; ರಾಜ್ಯದಲ್ಲಿ ಮತ್ತೆ ಪಠ್ಯ-ಪುಸ್ತಕ ದಂಗಲ್ ಮುನ್ಸೂಚನೆ

https://newsfirstlive.com/wp-content/uploads/2023/05/text_book.jpg

    RSS ಸಂಸ್ಥಾಪಕ ಹೆಡ್ಗೆವಾರ್ ಪಠ್ಯಕ್ಕೆ ಬೀಳುತ್ತಾ ಕತ್ತರಿ?

    ರಾಜ್ಯದಲ್ಲಿ ಮತ್ತೆ ಪಠ್ಯ-ಪುಸ್ತಕ ದಂಗಲ್ ಮುನ್ಸೂಚನೆ!

    ರಾಜ್ಯದಲ್ಲಿ ಶಿಕ್ಷಣ ತಜ್ಞರ ಒತ್ತಾಯವೇನು?

ಬೆಂಗಳೂರು: ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆಯೇ ಮತ್ತೆ ಪಠ್ಯ ಪರಿಷ್ಕರಣೆ ಮುನ್ನಲೆಗೆ ಬಂದಿದೆ. ಆರ್​ಎಸ್​ಎಸ್ ಸಂಸ್ಥಾಪಕ ಹೆಡ್ಗೆವಾರ್ ಪಠ್ಯ ಕತ್ತರಿ ಹಾಕುವಂತೆ ಶಿಕ್ಷಣ ತಜ್ಞರು ಸೇರಿ ಕೆಲ ಹಿರಿಯ ಸಾಹಿತಿಗಳಿಂದ ಒತ್ತಾಯ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮಾತ್ರವಲ್ಲ, ಚಕ್ರವರ್ತಿ ಸೂಲಿಬೆಲೆ ಬರೆದಿರುವ ‘ತಾಯಿ ಭಾರತೀಯ ಅಮರಪುತ್ರರು’ ಎಂಬ ಪಾಠವನ್ನೂ ತೆಗೆದು ಹಾಕುವಂತೆ ಶಿಕ್ಷಣ ತಜ್ಞ ನಿರಂಜನ್ ಆರಾಧ್ಯಾ ಒತ್ತಾಯ ಮಾಡಿದ್ದಾರಂತೆ.

ಶಿಕ್ಷಣ ತಜ್ಞರ ಒತ್ತಾಯವೇನು?

  • ಮನವಿ 01: ಕೇಸರಿ ಪಠ್ಯ ಮಕ್ಕಳ ಕಲಿಕೆಗೆ ಬೇಡ ಅಂತ ಒತ್ತಾಯ
  • ಮನವಿ 02: ಬಿಜೆಪಿ ಸರ್ಕಾರ ಮಕ್ಕಳ ಪಠ್ಯ ಕೇಸರಿಕರಣ ಮಾಡಿದೆ
  • ಮನವಿ 03: ಬಸವಣ್ಣ, ಅಂಬೇಡ್ಕರ್, ಟಿಪ್ಪುಗೆ ಅವಮಾನ ಮಾಡಿದೆ
  • ಮನವಿ 04: ರೋಹಿತ್ ಚಕ್ರತೀರ್ಥ ಪರಿಷ್ಕರಣೆಯ ಪಠ್ಯ ತಗೆದು ಹಾಕಿ
  • ಮನವಿ 05: ಈ ವರ್ಷ ಹೆಡ್ಗೆವಾರ್, ಸೂಲಿಬೆಲೆ ಸೇರಿ ಕೆಲ ಪಠ್ಯ ತಗೆಯಿರಿ
  • ಮನವಿ 06: 2019ರ ಬರಗೂರು ರಾಮಚಂದ್ರಪ್ಪ ಪರಿಷ್ಕರಣೆ ಪಠ್ಯ ಇತ್ತು
  • ಮನವಿ 07: ಬರಗೂರು ಪರಿಷ್ಕರಣೆಯ ಪಠ್ಯ ಮುಂದುವರೆಸಬೇಕು
  • ಮನವಿ 08: ಅವಶ್ಯವಾದ್ರೆ ಮುಂದಿನ ವರ್ಷ ಸಂಪೂರ್ಣ ಪಠ್ಯ ಪರಿಷ್ಕರಿಸಿ

ಹಿಂದಿನ ಸರ್ಕಾರದಲ್ಲಿ ಬಿ.ಸಿ.ನಾಗೇಶ್ ಅವರು ಶಿಕ್ಷಣಮಂತ್ರಿಯಾಗಿದ್ದರು. ಈ ವೇಳೆ ಪಠ್ಯ-ಪುಸ್ತಕಗಳ ಪರಿಷ್ಕರಣೆಗಾಗಿ ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿತ್ತು. ಅದರಂತೆ ಈ ಸಮಿತಿಯು ಪಠ್ಯ-ಪುಸ್ತಕದಲ್ಲಿ ಒಂದಷ್ಟು ಬದಲಾವಣೆ ಮಾಡಿತ್ತು. ಇದು ಹಲವರ ವಿರೋಧಕ್ಕೆ ಕಾರಣವಾಗಿತ್ತು. ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್​ ಸರ್ಕಾರ ಬರುತ್ತಿದ್ದಂತೆಯೇ, ಬಿಜೆಪಿ ಸರ್ಕಾರದಲ್ಲಿ ಪರಿಷ್ಕರಣೆ ಆಗಿದ್ದ ಪಠ್ಯ-ಪುಸ್ತಕಗಳಿಗೆ ಕತ್ತರಿ ಹಾಕಿ, ಹಳೆಯ ಅಂದ್ರೆ 2019 ರ ಬರಗೂರು ರಾಮಚಂದ್ರಪ್ಪನವರ ಪರಿಷ್ಕರಣೆಯಂತೆ ಪಠ್ಯವನ್ನೇ ಮುಂದುವರೆಸುವಂತೆ ಒತ್ತಾಯ ಮಾಡ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More