newsfirstkannada.com

ವರ್ತೂರು ಸಂತೋಷ್​ಗೆ ನಟಿ ಸಂಗೀತಾ ಫುಲ್​​ ಕ್ಲಾಸ್​​.. ಬಿಗ್​ಬಾಸ್​ ಮನೆಯಲ್ಲಿ ಆಗಿದ್ದೇನು?

Share :

02-11-2023

    ಬಿಗ್​ಬಾಸ್​ ಕೊಟ್ಟ ಹಳ್ಳಿ ಟಾಸ್ಕ್​​ನಿಂದ ಇಬ್ಭಾಗಗೊಂಡ ಬಿಗ್​​​ ಮನೆ

    ಸಂಗೀತಾ, ತನಿಶಾ ಌಂಡ್​ ಕಾರ್ತಿಕ್​​ ವರ್ತೂರು ಸಂತೋಪ್​ಗೆ ಹೇಳಿದ್ದೇನು?

    ಸಜ್ಜನರ ಸಹವಾಸ ಮಾಡಿ, ದುರ್ಜನರ ಸಹವಾಸ ಬೇಡ ಎಂದ ನೆಟ್ಟಿಗರು

ಬಿಗ್​ಬಾಸ್​ ಮನೆ ಒಂದು ಪುಟ್ಟ ಹಳ್ಳಿಯಾಗಿ ಪರಿವರ್ತನೆಗೊಂಡಿದೆ. ಹಳ್ಳಿಯಲ್ಲಿ ಎರಡು ಮನೆತನಗಳು. ಒಂದು ಮನೆತನಕ್ಕೆ ವಿನಯ್ ಮುಖ್ಯಸ್ಥ. ಇನ್ನೊಂದು ಮನೆತನಕ್ಕೆ ಸಂಗೀತಾ ಮುಖ್ಯಸ್ಥೆ. ಕಾಲ ಕಾಲಕ್ಕೆ ಬಿಗ್​ಬಾಸ್​ ಹಳ್ಳಿಗೆ ಸಂಬಂಧಪಟ್ಟ ಟಾಸ್ಕ್​​ಗಳನ್ನ ನೀಡುತ್ತಾರೆ. ಸದಸ್ಯರೆಲ್ಲರೂ ಈ ವಾರ ಪಾತ್ರಗಳಾಗಿ ತಮ್ಮಗೆ ಕೊಟ್ಟಿರುವ ಟಾಸ್ಕ್​ನ ನಿಭಾಯಿಸುತ್ತಿದ್ದಾರೆ.

ನಿನ್ನೆಯಿಂದ ಹಳ್ಳಿಯ ಟಾಸ್ಕ್​ ಪ್ರಾರಂಭವಾಗಿದೆ. ಕಾಲ ಕಾಲಕ್ಕೆ ಬಿಗ್​​ಬಾಸ್​ ಟಾಸ್ಕ್​ಗೆ ಬೇಕಾಗಿರೋ ಸಾಮಾಗ್ರಿಗಳನ್ನ ಸಣ್ಣ ಕಿಂಡಿಯಿಂದ ಕೊಟ್ಟಿದ್ದರು. ಟಾಸ್ಕ್​ನ ವಿಷಯವಾಗಿ ಬಿಗ್​ಬಾಸ್​ ಮನೆಯ ಸ್ಪರ್ಧಿಗಳ ಮಧ್ಯೆ ಜಗಳ ತಾರಕಕ್ಕೇರಿತ್ತು. ಟಾಸ್ಕ್​​ ವಿಚಾರವಾಗಿ ಬಿಗ್​ಬಾಸ್​ ಮನೆ ಈಗ ಇಬ್ಭಾಗಗೊಂಡಿತ್ತು.

ಹೀಗೆ ಬಿಗ್​ಬಾಸ್​ ಕೊಟ್ಟ ಟಾಸ್ಕ್​​ ಮುಕ್ತಾಯಗೊಂಡ ಬಳಿಕ ಮನೆಯಲ್ಲಿದ್ದ ಸ್ಪರ್ಧಿಗಳು ಒಂದು ಕಡೆ ಕುಳಿತುಕೊಂಡು ಮಾತಾಡುತ್ತಿದ್ದರು. ಇದೇ ವೇಳೆ ಸಂಗೀತಾ ಅವರ ತಂಡದಲ್ಲಿದ್ದ ವರ್ತೂರು ಸಂತೋಷ್​ ಅವರು ವಿನಯ್​​ ತಂಡದ ಸದಸ್ಯರ ಜೊತೆ ಮಾತಾಡುತ್ತಿದ್ದರು. ಇದನ್ನು ನೋಡಿದ ಸಂಗೀತಾ, ತನಿಶಾ ಹಾಗೂ ಕಾರ್ತಿಕ್​​ ಕೂಡಲೇ ವರ್ತೂರು ಸಂತೋಷ್​ರನ್ನು ಕರೆಯುತ್ತಾರೆ. ಆಗ ತನಿಶಾ ನಾಳೆ ಟಾಸ್ಕ್​​ ಮುಗಿಯುವವರೆಗೂ ಅವರ ಜೊತೆ ಮಾತಾಡಬೇಡಿ ಎಂದು ಹೇಳುತ್ತಾರೆ. ಬಳಿಕ ಸಂಗೀತಾ ಮಾತಾಡಿ, ಹೀಗಾದರೆ ನಮಗೆ ನಿಮ್ಮ ಮೇಲೆ ನಂಬಿಕೆ ಇರುವುದಿಲ್ಲ. ಈ ಟಾಸ್ಕ್​ನಲ್ಲಿ ನಿಮ್ಮ ಪಾತ್ರ ಏನು ಅದನ್ನು ಮಾತ್ರ ಮಾಡಿ. ಸದ್ಯಕ್ಕೆ ನಾವು ಹಳ್ಳಿಯವರು. ಈ ಟಾಸ್ಕ್​​ ಮುಗಿದ ಕೂಡಲೇ ಅವರ ಜೊತೆ ಮಾತಾಡಿ. ಅಲ್ಲಿಯವರೆಗೆ ದಯಮಾಡಿ ಅವರ ಜತೆ ಮಾತಾಡಬೇಡಿ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ವರ್ತೂರು ಸಂತೋಷ್​ಗೆ ನಟಿ ಸಂಗೀತಾ ಫುಲ್​​ ಕ್ಲಾಸ್​​.. ಬಿಗ್​ಬಾಸ್​ ಮನೆಯಲ್ಲಿ ಆಗಿದ್ದೇನು?

https://newsfirstlive.com/wp-content/uploads/2023/11/bigg-boss-2023-11-02T184445.921.jpg

    ಬಿಗ್​ಬಾಸ್​ ಕೊಟ್ಟ ಹಳ್ಳಿ ಟಾಸ್ಕ್​​ನಿಂದ ಇಬ್ಭಾಗಗೊಂಡ ಬಿಗ್​​​ ಮನೆ

    ಸಂಗೀತಾ, ತನಿಶಾ ಌಂಡ್​ ಕಾರ್ತಿಕ್​​ ವರ್ತೂರು ಸಂತೋಪ್​ಗೆ ಹೇಳಿದ್ದೇನು?

    ಸಜ್ಜನರ ಸಹವಾಸ ಮಾಡಿ, ದುರ್ಜನರ ಸಹವಾಸ ಬೇಡ ಎಂದ ನೆಟ್ಟಿಗರು

ಬಿಗ್​ಬಾಸ್​ ಮನೆ ಒಂದು ಪುಟ್ಟ ಹಳ್ಳಿಯಾಗಿ ಪರಿವರ್ತನೆಗೊಂಡಿದೆ. ಹಳ್ಳಿಯಲ್ಲಿ ಎರಡು ಮನೆತನಗಳು. ಒಂದು ಮನೆತನಕ್ಕೆ ವಿನಯ್ ಮುಖ್ಯಸ್ಥ. ಇನ್ನೊಂದು ಮನೆತನಕ್ಕೆ ಸಂಗೀತಾ ಮುಖ್ಯಸ್ಥೆ. ಕಾಲ ಕಾಲಕ್ಕೆ ಬಿಗ್​ಬಾಸ್​ ಹಳ್ಳಿಗೆ ಸಂಬಂಧಪಟ್ಟ ಟಾಸ್ಕ್​​ಗಳನ್ನ ನೀಡುತ್ತಾರೆ. ಸದಸ್ಯರೆಲ್ಲರೂ ಈ ವಾರ ಪಾತ್ರಗಳಾಗಿ ತಮ್ಮಗೆ ಕೊಟ್ಟಿರುವ ಟಾಸ್ಕ್​ನ ನಿಭಾಯಿಸುತ್ತಿದ್ದಾರೆ.

ನಿನ್ನೆಯಿಂದ ಹಳ್ಳಿಯ ಟಾಸ್ಕ್​ ಪ್ರಾರಂಭವಾಗಿದೆ. ಕಾಲ ಕಾಲಕ್ಕೆ ಬಿಗ್​​ಬಾಸ್​ ಟಾಸ್ಕ್​ಗೆ ಬೇಕಾಗಿರೋ ಸಾಮಾಗ್ರಿಗಳನ್ನ ಸಣ್ಣ ಕಿಂಡಿಯಿಂದ ಕೊಟ್ಟಿದ್ದರು. ಟಾಸ್ಕ್​ನ ವಿಷಯವಾಗಿ ಬಿಗ್​ಬಾಸ್​ ಮನೆಯ ಸ್ಪರ್ಧಿಗಳ ಮಧ್ಯೆ ಜಗಳ ತಾರಕಕ್ಕೇರಿತ್ತು. ಟಾಸ್ಕ್​​ ವಿಚಾರವಾಗಿ ಬಿಗ್​ಬಾಸ್​ ಮನೆ ಈಗ ಇಬ್ಭಾಗಗೊಂಡಿತ್ತು.

ಹೀಗೆ ಬಿಗ್​ಬಾಸ್​ ಕೊಟ್ಟ ಟಾಸ್ಕ್​​ ಮುಕ್ತಾಯಗೊಂಡ ಬಳಿಕ ಮನೆಯಲ್ಲಿದ್ದ ಸ್ಪರ್ಧಿಗಳು ಒಂದು ಕಡೆ ಕುಳಿತುಕೊಂಡು ಮಾತಾಡುತ್ತಿದ್ದರು. ಇದೇ ವೇಳೆ ಸಂಗೀತಾ ಅವರ ತಂಡದಲ್ಲಿದ್ದ ವರ್ತೂರು ಸಂತೋಷ್​ ಅವರು ವಿನಯ್​​ ತಂಡದ ಸದಸ್ಯರ ಜೊತೆ ಮಾತಾಡುತ್ತಿದ್ದರು. ಇದನ್ನು ನೋಡಿದ ಸಂಗೀತಾ, ತನಿಶಾ ಹಾಗೂ ಕಾರ್ತಿಕ್​​ ಕೂಡಲೇ ವರ್ತೂರು ಸಂತೋಷ್​ರನ್ನು ಕರೆಯುತ್ತಾರೆ. ಆಗ ತನಿಶಾ ನಾಳೆ ಟಾಸ್ಕ್​​ ಮುಗಿಯುವವರೆಗೂ ಅವರ ಜೊತೆ ಮಾತಾಡಬೇಡಿ ಎಂದು ಹೇಳುತ್ತಾರೆ. ಬಳಿಕ ಸಂಗೀತಾ ಮಾತಾಡಿ, ಹೀಗಾದರೆ ನಮಗೆ ನಿಮ್ಮ ಮೇಲೆ ನಂಬಿಕೆ ಇರುವುದಿಲ್ಲ. ಈ ಟಾಸ್ಕ್​ನಲ್ಲಿ ನಿಮ್ಮ ಪಾತ್ರ ಏನು ಅದನ್ನು ಮಾತ್ರ ಮಾಡಿ. ಸದ್ಯಕ್ಕೆ ನಾವು ಹಳ್ಳಿಯವರು. ಈ ಟಾಸ್ಕ್​​ ಮುಗಿದ ಕೂಡಲೇ ಅವರ ಜೊತೆ ಮಾತಾಡಿ. ಅಲ್ಲಿಯವರೆಗೆ ದಯಮಾಡಿ ಅವರ ಜತೆ ಮಾತಾಡಬೇಡಿ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Load More