ಆರೋಪಿಯಿಂದಲೇ ಬೆಂಗಳೂರು ಪೊಲೀಸರ ಟ್ರ್ಯಾಪ್
ಕೇರಳದ ಕೊಚ್ಚಿಯಲ್ಲಿ ಬೆಂಗಳೂರು ಪೊಲೀಸರು ಅರೆಸ್ಟ್
ಬೆಂಗಳೂರು ಪೊಲೀಸರಿಗೆ ಆರೋಪಿ ಲವರ್ನಿಂದ ಸಂಕಷ್ಟ!
ಬೆಂಗಳೂರು: ಇಡೀ ದೇಶಾದ್ಯಂತ ಸಾಕಷ್ಟು ಸದ್ದು ಮಾಡಿದ್ದ ಸಿನಿಮಾ ಕೇರಳ ಫೈಲ್ಸ್. ಅದು ನಿಮಗೂ ಗೊತ್ತೇ ಇದೆ. ಆದ್ರೆ ಇದೀಗ ಕೇರಳ ಪೊಲೀಸ್ ಸ್ಟೋರಿಯ ಕರಾಮತ್ತು ಶುರುವಾಗಿದೆ. ಕೇರಳದಲ್ಲಿ ಬೆಂಗಳೂರು ಪೊಲೀಸರ ಮೇಲೆ ಲಂಚ ಆರೋಪ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಅಂಡ್ ಟರ್ನ್ ಪಡೆಯುತ್ತಿದೆ.
ಇತ್ತೀಚೆಗಷ್ಟೇ ಇನ್ಸ್ಪೆಕ್ಟರ್ ಶಿವಪ್ರಕಾಶ್ ಸೇರಿ ನಾಲ್ವರು ಪೊಲೀಸರನ್ನು ಅಮಾನತು ಮಾಡಿ ಬೆಂಗಳೂರು ಪೊಲೀಸ್ ಆಯುಕ್ತ ಬಿ. ದಯಾನಂದ್ ಆದೇಶಿಸಿದ್ದಾರೆ. ಈ ಬೆನ್ನಲ್ಲೀಗ ಲಂಚ ಪಡೆದ ಪ್ರಕರಣಕ್ಕೆ ಆರೋಪಿಯ ಲವರ್ ಅಲ್ಲ, ಲಾಯರ್ ಎಂಟ್ರಿಯಾಗಿದೆ.
ಹೌದು, ಕೇರಳ ಪೊಲೀಸರಿಗೆ ಬೆಂಗಳೂರು ಪೊಲೀಸರ ಕೇಸ್ ಲೀಡ್ ಹೇಗೆ ಸಿಕ್ಕಿತ್ತು ಎಂಬುದರ ಹಿಂದೆ ರಾಜ್ಯ ಪೊಲೀಸರ ಯಡವಟ್ಟು, ಆರೋಪಿ ಅಖಿಲ್ ಲವರ್ ಮಾಸ್ಟರ್ ಪ್ಲಾನ್ ಇದೆ. ತಾವೇ ತೋಡಿದ ಗುಂಡಿಗೆ ತಾವೇ ಬೀಳೋದು ಅಂದ್ರೆ ಬಹುಷಃ ಇದೆ ಅನಿಸತ್ತೆ. ಕರ್ನಾಟಕ ಪೊಲೀಸರು ಆರೋಪಿ ಅಖಿಲ್ ಬಳಿ ಒಟ್ಟು ಹತ್ತು ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ರು ಅನ್ನೋ ಆರೋಪ ಕೇಳಿ ಬಂದಿದೆ. ಅಷ್ಟೇ ಅಲ್ಲ, ಮೂರು ಲಕ್ಷದ 95 ಸಾವಿರ ಪಡೆದು ಆರೋಪಿಯನ್ನ ಪೊಲೀಸರು ಕರೆ ತಂದಿದ್ರು.
ಕರ್ನಾಟಕದ ಬಾರ್ಡರ್ ಹತ್ತಿರಕ್ಕೇ ಬಂದಿದ್ದ ಇನ್ಸ್ಪೆಕ್ಟರ್ ಶಿವಪ್ರಕಾಶ್ ಆ್ಯಂಡ್ ಸಿಬ್ಬಂದಿ, ಕೊನೆ ಗಳಿಗೆಯಲ್ಲಿ ಅರೆಸ್ಟ್ ಮಾಡಿದ್ದ ಆರೋಪಿ ಕೈಗೆ ಮೊಬೈಲ್ ಕೊಟ್ಟಿದ್ದರಂತೆ. ಇದೇ ರಾಜ್ಯ ಪೊಲೀಸರು ಮಾಡಿದ ಯಡವಟ್ಟು.
ಆರೋಪಿ ಲವರ್ ಪ್ಲಾನ್ಗೆ ಟ್ರ್ಯಾಪ್ ಆಗಿದ್ದ ನಗರ ಪೊಲೀಸರು
ಮೊಬೈಲ್ ಸಿಕ್ಕಿದ್ದೇ ತಡ ಆರೋಪಿ ಅಖಿಲ್ ತನ್ನ ಲವರ್ ಅದರಲ್ಲೂ ವೃತ್ತಿಯಲ್ಲಿ ಲಾಯರ್ ಆಗಿದ್ದ ಆಕೆಗೆ ಕಾಲ್ ಮಾಡಿದ್ದ. ಜೊತೆಗೆ ನನ್ನ ಅರೆಸ್ಟ್ ಮಾಡಿಕೊಂಡು ಹೋಗುತ್ತಿದ್ದಾರೆ ಎಂದು ಲವರ್ಗೆ ಮಲೆಯಾಳಂನಲ್ಲಿ ಆರೋಪಿ ಹೇಳಿದ್ದ. ಈ ಕಡೆ ಮಲೆಯಾಳಂ ಅರ್ಥವಾಗದೆ ಹಣದ ಅರೆಂಜ್ಮೆಂಟ್ ಆಗುತ್ತಿದೆಯೇನೋ ಎಂದು ಪೊಲೀಸ್ ಟೀಂ ಕೂಡ ಸುಮ್ಮನಾಗಿ ವಾಪಸ್ ಕರ್ನಾಟಕಕ್ಕೆ ತೆರಳಿದೆ. ಅಷ್ಟೋತ್ತಿಗಾಗಲೇ ನಡೆದ ವಿಷಯವನ್ನೆಲ್ಲಾ ಕೇರಳ ಪೊಲೀಸರಿಗೆ ಆರೋಪಿ ಲವರ್ ತಿಳಿಸಿದ್ದಾಳೆ. ಬಳಿಕ ಪೋಷಕರಿಂದ ಉಳಿದ ಹಣ ಕೊಡೋದಾಗಿ ಕರೆ ಮಾಡಿಸಿ ಕೇರಳ ಲಿಮಿಟ್ಸ್ಗೆ ನಾಲ್ವರು ಪೊಲೀಸರು ಬರುವಂತೆ ಮಾಡಿದ್ದಾರೆ. ಲಿಮಿಟ್ಸ್ಗೆ ಬಂದಿದ್ದೇ ತಡ ರೈಡ್ ಮಾಡಿ ಎಲ್ಲರನ್ನೂ ಕೇರಳ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಆರೋಪಿಯನ್ನ ಬಂಧಿಸಬೇಕಾದರೆ ಅಥವಾ ದಾಳಿ ಮಾಡಬೇಕಾದರೆ ಸ್ಥಳೀಯ ಪೊಲೀಸರಿಗೆ ಸೂಚನೆ ನೀಡಲೇಬೇಕಿತ್ತು. ಆದರೆ ಯಾವುದೇ ಸೂಚನೆ ನೀಡದೆ ವೈಟ್ಫೀಲ್ಡ್ ಪೊಲೀಸರು ಆರೋಪಿಯನ್ನ ಕರೆದೊಯ್ದಿದ್ರು.
ಸದ್ಯ ನೋಟಿಸ್ ನೀಡಿ ಕೇರಳ ಪೊಲೀಸರು ಆರೋಪಿಗಳನ್ನ ಬಿಟ್ಟು ಕಳುಹಿಸಿದ್ದಾರೆ. ಇತ್ತ ಕರ್ನಾಟಕದಲ್ಲಿ ಆ ನಾಲ್ವರನ್ನೂ ಸಸ್ಪೆಂಡ್ ಮಾಡಲಾಗಿದೆ. ಅದೇನೇ ಇದ್ರೂ ಲಂಚ ಪಡೆಯೋಕೆ ಹೋದ ಈ ಪೊಲೀಸರು ಇಂಗುತಿಂದ ಮಂಗನಂತಾಗಿದ್ದು ವಿಪರ್ಯಾಸ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಆರೋಪಿಯಿಂದಲೇ ಬೆಂಗಳೂರು ಪೊಲೀಸರ ಟ್ರ್ಯಾಪ್
ಕೇರಳದ ಕೊಚ್ಚಿಯಲ್ಲಿ ಬೆಂಗಳೂರು ಪೊಲೀಸರು ಅರೆಸ್ಟ್
ಬೆಂಗಳೂರು ಪೊಲೀಸರಿಗೆ ಆರೋಪಿ ಲವರ್ನಿಂದ ಸಂಕಷ್ಟ!
ಬೆಂಗಳೂರು: ಇಡೀ ದೇಶಾದ್ಯಂತ ಸಾಕಷ್ಟು ಸದ್ದು ಮಾಡಿದ್ದ ಸಿನಿಮಾ ಕೇರಳ ಫೈಲ್ಸ್. ಅದು ನಿಮಗೂ ಗೊತ್ತೇ ಇದೆ. ಆದ್ರೆ ಇದೀಗ ಕೇರಳ ಪೊಲೀಸ್ ಸ್ಟೋರಿಯ ಕರಾಮತ್ತು ಶುರುವಾಗಿದೆ. ಕೇರಳದಲ್ಲಿ ಬೆಂಗಳೂರು ಪೊಲೀಸರ ಮೇಲೆ ಲಂಚ ಆರೋಪ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಅಂಡ್ ಟರ್ನ್ ಪಡೆಯುತ್ತಿದೆ.
ಇತ್ತೀಚೆಗಷ್ಟೇ ಇನ್ಸ್ಪೆಕ್ಟರ್ ಶಿವಪ್ರಕಾಶ್ ಸೇರಿ ನಾಲ್ವರು ಪೊಲೀಸರನ್ನು ಅಮಾನತು ಮಾಡಿ ಬೆಂಗಳೂರು ಪೊಲೀಸ್ ಆಯುಕ್ತ ಬಿ. ದಯಾನಂದ್ ಆದೇಶಿಸಿದ್ದಾರೆ. ಈ ಬೆನ್ನಲ್ಲೀಗ ಲಂಚ ಪಡೆದ ಪ್ರಕರಣಕ್ಕೆ ಆರೋಪಿಯ ಲವರ್ ಅಲ್ಲ, ಲಾಯರ್ ಎಂಟ್ರಿಯಾಗಿದೆ.
ಹೌದು, ಕೇರಳ ಪೊಲೀಸರಿಗೆ ಬೆಂಗಳೂರು ಪೊಲೀಸರ ಕೇಸ್ ಲೀಡ್ ಹೇಗೆ ಸಿಕ್ಕಿತ್ತು ಎಂಬುದರ ಹಿಂದೆ ರಾಜ್ಯ ಪೊಲೀಸರ ಯಡವಟ್ಟು, ಆರೋಪಿ ಅಖಿಲ್ ಲವರ್ ಮಾಸ್ಟರ್ ಪ್ಲಾನ್ ಇದೆ. ತಾವೇ ತೋಡಿದ ಗುಂಡಿಗೆ ತಾವೇ ಬೀಳೋದು ಅಂದ್ರೆ ಬಹುಷಃ ಇದೆ ಅನಿಸತ್ತೆ. ಕರ್ನಾಟಕ ಪೊಲೀಸರು ಆರೋಪಿ ಅಖಿಲ್ ಬಳಿ ಒಟ್ಟು ಹತ್ತು ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ರು ಅನ್ನೋ ಆರೋಪ ಕೇಳಿ ಬಂದಿದೆ. ಅಷ್ಟೇ ಅಲ್ಲ, ಮೂರು ಲಕ್ಷದ 95 ಸಾವಿರ ಪಡೆದು ಆರೋಪಿಯನ್ನ ಪೊಲೀಸರು ಕರೆ ತಂದಿದ್ರು.
ಕರ್ನಾಟಕದ ಬಾರ್ಡರ್ ಹತ್ತಿರಕ್ಕೇ ಬಂದಿದ್ದ ಇನ್ಸ್ಪೆಕ್ಟರ್ ಶಿವಪ್ರಕಾಶ್ ಆ್ಯಂಡ್ ಸಿಬ್ಬಂದಿ, ಕೊನೆ ಗಳಿಗೆಯಲ್ಲಿ ಅರೆಸ್ಟ್ ಮಾಡಿದ್ದ ಆರೋಪಿ ಕೈಗೆ ಮೊಬೈಲ್ ಕೊಟ್ಟಿದ್ದರಂತೆ. ಇದೇ ರಾಜ್ಯ ಪೊಲೀಸರು ಮಾಡಿದ ಯಡವಟ್ಟು.
ಆರೋಪಿ ಲವರ್ ಪ್ಲಾನ್ಗೆ ಟ್ರ್ಯಾಪ್ ಆಗಿದ್ದ ನಗರ ಪೊಲೀಸರು
ಮೊಬೈಲ್ ಸಿಕ್ಕಿದ್ದೇ ತಡ ಆರೋಪಿ ಅಖಿಲ್ ತನ್ನ ಲವರ್ ಅದರಲ್ಲೂ ವೃತ್ತಿಯಲ್ಲಿ ಲಾಯರ್ ಆಗಿದ್ದ ಆಕೆಗೆ ಕಾಲ್ ಮಾಡಿದ್ದ. ಜೊತೆಗೆ ನನ್ನ ಅರೆಸ್ಟ್ ಮಾಡಿಕೊಂಡು ಹೋಗುತ್ತಿದ್ದಾರೆ ಎಂದು ಲವರ್ಗೆ ಮಲೆಯಾಳಂನಲ್ಲಿ ಆರೋಪಿ ಹೇಳಿದ್ದ. ಈ ಕಡೆ ಮಲೆಯಾಳಂ ಅರ್ಥವಾಗದೆ ಹಣದ ಅರೆಂಜ್ಮೆಂಟ್ ಆಗುತ್ತಿದೆಯೇನೋ ಎಂದು ಪೊಲೀಸ್ ಟೀಂ ಕೂಡ ಸುಮ್ಮನಾಗಿ ವಾಪಸ್ ಕರ್ನಾಟಕಕ್ಕೆ ತೆರಳಿದೆ. ಅಷ್ಟೋತ್ತಿಗಾಗಲೇ ನಡೆದ ವಿಷಯವನ್ನೆಲ್ಲಾ ಕೇರಳ ಪೊಲೀಸರಿಗೆ ಆರೋಪಿ ಲವರ್ ತಿಳಿಸಿದ್ದಾಳೆ. ಬಳಿಕ ಪೋಷಕರಿಂದ ಉಳಿದ ಹಣ ಕೊಡೋದಾಗಿ ಕರೆ ಮಾಡಿಸಿ ಕೇರಳ ಲಿಮಿಟ್ಸ್ಗೆ ನಾಲ್ವರು ಪೊಲೀಸರು ಬರುವಂತೆ ಮಾಡಿದ್ದಾರೆ. ಲಿಮಿಟ್ಸ್ಗೆ ಬಂದಿದ್ದೇ ತಡ ರೈಡ್ ಮಾಡಿ ಎಲ್ಲರನ್ನೂ ಕೇರಳ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಆರೋಪಿಯನ್ನ ಬಂಧಿಸಬೇಕಾದರೆ ಅಥವಾ ದಾಳಿ ಮಾಡಬೇಕಾದರೆ ಸ್ಥಳೀಯ ಪೊಲೀಸರಿಗೆ ಸೂಚನೆ ನೀಡಲೇಬೇಕಿತ್ತು. ಆದರೆ ಯಾವುದೇ ಸೂಚನೆ ನೀಡದೆ ವೈಟ್ಫೀಲ್ಡ್ ಪೊಲೀಸರು ಆರೋಪಿಯನ್ನ ಕರೆದೊಯ್ದಿದ್ರು.
ಸದ್ಯ ನೋಟಿಸ್ ನೀಡಿ ಕೇರಳ ಪೊಲೀಸರು ಆರೋಪಿಗಳನ್ನ ಬಿಟ್ಟು ಕಳುಹಿಸಿದ್ದಾರೆ. ಇತ್ತ ಕರ್ನಾಟಕದಲ್ಲಿ ಆ ನಾಲ್ವರನ್ನೂ ಸಸ್ಪೆಂಡ್ ಮಾಡಲಾಗಿದೆ. ಅದೇನೇ ಇದ್ರೂ ಲಂಚ ಪಡೆಯೋಕೆ ಹೋದ ಈ ಪೊಲೀಸರು ಇಂಗುತಿಂದ ಮಂಗನಂತಾಗಿದ್ದು ವಿಪರ್ಯಾಸ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ