Advertisment

ಮೂರು ತಿಂಗಳಲ್ಲಿ ಮದುವೆ; ಅದಕ್ಕಾಗಿ ಹಣ ಸಂಪಾದಿಸಲು ಕೇರಳಕ್ಕೆ ಬಂದಿದ್ದ.. ಆದರೆ..

author-image
Ganesh
Updated On
ಕೇರಳದಲ್ಲಿ ಮತ್ತೊಂದು ಸಮಸ್ಯೆ.. ಅನಾಥವಾಗಿ ಬಿದ್ದಿವೆ 30 ಮೃತದೇಹಗಳು..
Advertisment
  • ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ಮುಂದುವರಿಕೆ
  • ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 357ಕ್ಕೆ ಏರಿಕೆ
  • ಜಲಪಾತದ ಬಳಿ ಸಿಲುಕಿ ರಕ್ಷಣಾ ಸಿಬ್ಬಂದಿ ಪರದಾಟ

ದೇವರುನಾಡು ಅಂತಲೇ ಪ್ರಸಿದ್ಧಿಯಾಗಿರುವ ಕೇರಳ ಪ್ರಕೃತಿ ವಿಕೋಪಕ್ಕೆ ಸಿಲುಕಿ ತತ್ತರಿಸಿದೆ. ಸುಂದರವಾದ ತಾಣವೀಗ ಸ್ಮಶಾನದಂತಾಗಿದೆ. ಕ್ಷಣಕ್ಷಣಕ್ಕೂ ಸಾವು-ನೋವು ಹೆಚ್ಚಾಗುತ್ತಿದ್ದು, ರಕ್ಷಣಾ ಕಾರ್ಯಾಚರಣೆ 6ನೇ ದಿನಕ್ಕೆ ಕಾಲಿಟ್ಟಿದೆ.

Advertisment

ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 357ಕ್ಕೆ ಏರಿಕೆ
ವಿನಾಶಕಾರಿ ಭೂಕುಸಿತಕ್ಕೆ ತುತ್ತಾಗಿರುವ ವಯನಾಡ್​ನಲ್ಲಿ ರಕ್ಷಣಾ ಕಾರ್ಯಾಚರಣೆಗಳು ಮುಂದುವರಿದಿದೆ. ಅವಶೇಷಗಳಡಿ ಸಿಲುಕಿದ ಜನರನ್ನು ರಕ್ಷಣಾ ಪಡೆಗಳು ಆಧುನಿಕ ತಂತ್ರಜ್ಞಾನ ಬಳಸಿ ಪತ್ತೆ ಮಾಡುತ್ತಿವೆ. ಅವಶೇಷಗಳಡಿ ಸಿಲುಕಿದವರ ಉಸಿರಾಟವನ್ನು ರಡಾರ್​​ಗಳು ಪತ್ತೆ ಮಾಡಿವೆ. ಆದರೆ, ಅದು ಮಾನವರೋ ಅಥವಾ ಪ್ರಾಣಿಯೋ ಎಂಬುದು ತಿಳಿದುಬಂದಿಲ್ಲ. 5 ದಿನಗಳಿಂದ ರಕ್ಷಣಾ ಕಾರ್ಯ ನಡೆಯುತ್ತಿದ್ದರೂ, ಇನ್ನೂ ನೂರಕ್ಕೂ ಹೆಚ್ಚು ಮಂದಿ ನಾಪತ್ತೆ ಆಗಿದ್ದಾರೆ. ಇದರ ನಡುವೆ ಕೇರಳ ಸಿಎಂ ಪಿಣರಾಯ್​, ರಕ್ಷಣಾ ಕಾರ್ಯ ಅಂತಿಮ ಹಂತ ತಲುಪಿದೆ ಎಂದಿದ್ದಾರೆ. ಇದುವರೆಗೆ 357 ಜನರು ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ:ರೋಹಿತ್​ಗೆ ಬೇಕಿತ್ತು ಪಂತ್.. ರಾಹುಲ್​ಗೆ ಚಾನ್ಸ್​ ಸಿಕ್ಕಿರುವ ಹಿಂದಿದೆ ಓರ್ವ ಸೂತ್ರಧಾರನ ಕೈವಾಡ..!

publive-image

ಜಲಪಾತದ ಬಳಿ ಸಿಲುಕಿ ರಕ್ಷಣಾ ಸಿಬ್ಬಂದಿ ಪರದಾಟ
ಭೂಕುಸಿತದಲ್ಲಿ ಕೊಚ್ಚಿ ಹೋಗಿ, ಕಾಡಿನಲ್ಲಿ ಸಿಲುಕಿರುವವರನ್ನು ರಕ್ಷಣೆ ಮಾಡಲಾಗ್ತಿದೆ. ಹೀಗೆ ಮುಂಡಕೈನಿಂದ ಸೂಜಿಪಾರಾವರೆಗೂ ವೈಮಾನಿಕ ಸಮೀಕ್ಷೆ ಮಾಡುವಾಗ ಫಾಲ್ಸ್ ಬಳಿ ಮೂವರು ಸಿಲುಕಿಕೊಂಡಿರುವುದು ಪತ್ತೆ ಆಗಿದೆ. ಕೂಡಲೇ ಇಂಡಿಯನ್ ಕೋಸ್ಟ್ ಗಾರ್ಡ್ ಹೆಲಿಕಾಫ್ಟರ್​ ದುರ್ಗಮ ಜಲಪಾತದ ಬಳಿ ತೆರಳಿ, ಮೂವರನ್ನು ರಕ್ಷಣೆ ಮಾಡಿದ್ದು, ಈ ದೃಶ್ಯ ಬಲು ರೋಚಕವಾಗಿದೆ.

Advertisment

ಬದುಕು ಕಟ್ಟಿಕೊಳ್ಳಲು ಬಂದವನು ಭೂಕುಸಿತದಲ್ಲಿ ಕಣ್ಮರೆ
ವಯನಾಡು ಭೂಕುಸಿತದ ದುರಂತದಲ್ಲಿ ಸಾವು ನೋವಿನ ಕಥೆ ಒಂದೆಡೆಯಾದ್ರೆ, ಉದ್ಯೋಗ ಹರಿಸಿ ವಯನಾಡಿಗೆ ಬಂದ ಹೊರರಾಜ್ಯದವರ ಕಣ್ಣೀರ ಕಥೆ ಮತ್ತೊಂದೆಡೆ..

ಬದುಕು ಕಸಿದ ಭೂಕುಸಿತ
ಬಿಹಾರ ಮೂಲದ ರೆಂಜಿತ್​ ಎಂಬ ಯುವಕನಿಗೆ ಮದುವೆ ಫಿಕ್ಸ್​ ಆಗಿತ್ತು. ಹೀಗಾಗಿ ಮದುವೆಗೆ ಹಣಹೊಂದಿಸಲು ಉದ್ಯೋಗರ ಅರಸಿ ವಯನಾಡಿಗೆ ಬಂದಿದ್ದ. ದುರಂತ ಏನಂದ್ರೆ, ರೆಂಜಿತ್​ ಕೂಡ ಭೂಕುಸಿತದಲ್ಲಿ ಕಣ್ಮರೆಯಾಗಿದ್ದಾನೆ. ಬರುವ ಅಕ್ಟೋಬರ್​ನಲ್ಲಿ ರೆಂಜಿತ್​ನ ಮದುವೆ ನಡೆಯಬೇಕಿತ್ತು. ಇದೀಗ ರೆಂಜಿತ್ ಅವರ​ ಸಹೋದರ ಸಂಬಂಧಿ ವಯನಾಡಿಗೆ ಆಗಮಿಸಿದ್ದು, ರೆಂಜಿತ್​ನಗಾಗಿ ಕಣ್ಣೀರಿಡುತ್ತಿದ್ದಾರೆ.

ಇದನ್ನೂ ಓದಿ:ಧೋನಿ ಉಳಿಸಿಕೊಳ್ಳಲು BCCI ಮುಂದೆ ಹಳೇ ಅಸ್ತ್ರ ಇಟ್ಟ CSK ; ಕಾವ್ಯ ಮಾರನ್ ತೀವ್ರ ವಿರೋಧ..!

Advertisment

publive-image

ರಕ್ಷಣಾ ಕಾರ್ಯಾದಲ್ಲಿ ಸೇನಾ ಶ್ವಾನಗಳ ಕಾರ್ಯವೂ ಶ್ಲಾಘನೀಯ
ರಕ್ಷಣಾ ಕಾರ್ಯಕ್ಕೆ ಭಾರತೀಯ ಸೇನೆಯ ಶ್ವಾನಗಳು ಕೂಡ ಸಾಥ್​ ನೀಡಿದೆ. ಮಾಯ, ಮುರ್ಫಿ, ಮ್ಯಾಗಿ, ಸಾರಾ ಎಂಬ ಶ್ವಾನಗಳು ಕೂಡ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡು ಮಣ್ಣನಡಿ ಸಿಲುಕಿರುವವರನ್ನು ಪತ್ತೆ ಮಾಡ್ತಿವೆ. ಕಷ್ಟದಲ್ಲಿರುವ ಸಂತ್ರಸ್ತರಿಗಾಗಿ ಇಡೀ ದೇಶವೇ ನೆರವಿನ ಹಸ್ತಚಾಚುತ್ತಿದೆ. ಹಲವು ದಾನಿಗಳು ನಿರಾಶ್ರಿತರ ಸಹಾಯಕ್ಕಾಗಿ ಕೇರಳ ಸಿಎಂ ರಿಲೀಫ್​ ಫಂಡ್​ಗೆ ದೇಣಿಗೆ ನೀಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ. ಕರ್ನಾಟಕ ಸರ್ಕಾರವು ಕೂಡ ನಿರಾಶ್ರಿತರಿಗಾಗಿ ನೂರು ಮನೆಗಳನ್ನು ನಿರ್ಮಿಸಿಕೊಡಲು ಮುಂದಾಗಿದೆ.

ಇದನ್ನೂ ಓದಿ:ಒಂದೇ ವರ್ಷಕ್ಕೆ ಬೇಡವಾದ ಪಾಂಡ್ಯ.. ಮುಂಬೈ ಇಂಡಿಯನ್ಸ್​ನಿಂದ ಶಾಕಿಂಗ್ ನಿರ್ಧಾರ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment