ಚಾಕು ಬಳಸಿ ಪಾರಿವಾಳಗಳನ್ನು ಕೊಂದ ಕಿಡಿಗೇಡಿಗಳು
ಮನೆಯಲ್ಲಿ ಯಾರು ಇಲ್ಲದೆ ವೇಳೆ ಬಂದು ಪಾರಿವಾಳಗಳ ಹತ್ಯೆ
ಹಳೇ ದ್ವೇಷದ ಹಿನ್ನೆಲೆ ಮೂಕ ಪಾರಿವಾಳಗಳು ಹತನಾದವೇ?
ಹುಬ್ಬಳ್ಳಿ: ಮನೆಯೊಂದರಲ್ಲಿ ಸಾಕಿದ್ದ ಪಾರಿವಾಳಗಳ ಕುತ್ತಿಗೆ ಕಟ್ ಮಾಡಿ ಸಾಯಿಸಿದ ಘಟನೆ ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಯಾವಗಲ್ ಪ್ಲಾಟ್ನಲ್ಲಿ ನಡೆದಿದೆ. ಕಿಡಿಗೇಡಿಗಳು 23 ಪಾರಿವಾಳಗಳನ್ನ ಸಾಯಿಸಿದ್ದಾರೆ.
ರಾಹುಲ್ ದಾಂಡೇಲಿ ಅವರಿಗೆ ಸೇರಿದ 23 ಪಾರಿವಾಳಗಳಾಗಿದ್ದು, ಚಾಕು ಬಳಸಿ ಕುತ್ತಿಗೆ ಕಟ್ ಮಾಡಿ ಕೊಂಡಿದ್ದಾರೆ. ಬಳಿಕ ಪಾರಿವಾಳಗಳನ್ನು ಅಲ್ಲಲ್ಲೇ ಬೀಸಾಕಿ ಹೋಗಿದ್ದಾರೆ.
ರಾಹುಲ್ ಕಳೆದ ಆರು ತಿಂಗಳಿಂದ ಪಾರಿವಾಳ ಸಾಕಿದ್ದರು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಪಾರಿವಾಳ ಸಾಯಿಸಿ ಕಿರಾತಕರು ಪರಾರಿಯಾಗಿದ್ದಾರೆ.
ಹಳೇ ದ್ವೇಷದ ಹಿನ್ನೆಲೆ ಪಾರಿವಾಳ ಕೊಲೆ ಮಾಡಿರೋ ಶಂಕೆ ವ್ಯಕ್ತವಾಗಿದೆ. ಈ ಘಟನೆ ರಾಹುಲ್ಗೆ ಗೊತ್ತಾಗುತ್ತಿದ್ದಂತೆಯೇ ಹುಬ್ಬಳ್ಳಿಯ ಉಪನಗರ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಪಾರಿವಾಳಗಳನ್ನು ಸಾಯಿಸಿದವರನ್ನ ಕೂಡಲೇ ಅರೆಸ್ಟ್ ಮಾಡಬೇಕೆಂದು ಆಗ್ರಹಿಸಿ ದೂರು ಸಲ್ಲಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಚಾಕು ಬಳಸಿ ಪಾರಿವಾಳಗಳನ್ನು ಕೊಂದ ಕಿಡಿಗೇಡಿಗಳು
ಮನೆಯಲ್ಲಿ ಯಾರು ಇಲ್ಲದೆ ವೇಳೆ ಬಂದು ಪಾರಿವಾಳಗಳ ಹತ್ಯೆ
ಹಳೇ ದ್ವೇಷದ ಹಿನ್ನೆಲೆ ಮೂಕ ಪಾರಿವಾಳಗಳು ಹತನಾದವೇ?
ಹುಬ್ಬಳ್ಳಿ: ಮನೆಯೊಂದರಲ್ಲಿ ಸಾಕಿದ್ದ ಪಾರಿವಾಳಗಳ ಕುತ್ತಿಗೆ ಕಟ್ ಮಾಡಿ ಸಾಯಿಸಿದ ಘಟನೆ ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಯಾವಗಲ್ ಪ್ಲಾಟ್ನಲ್ಲಿ ನಡೆದಿದೆ. ಕಿಡಿಗೇಡಿಗಳು 23 ಪಾರಿವಾಳಗಳನ್ನ ಸಾಯಿಸಿದ್ದಾರೆ.
ರಾಹುಲ್ ದಾಂಡೇಲಿ ಅವರಿಗೆ ಸೇರಿದ 23 ಪಾರಿವಾಳಗಳಾಗಿದ್ದು, ಚಾಕು ಬಳಸಿ ಕುತ್ತಿಗೆ ಕಟ್ ಮಾಡಿ ಕೊಂಡಿದ್ದಾರೆ. ಬಳಿಕ ಪಾರಿವಾಳಗಳನ್ನು ಅಲ್ಲಲ್ಲೇ ಬೀಸಾಕಿ ಹೋಗಿದ್ದಾರೆ.
ರಾಹುಲ್ ಕಳೆದ ಆರು ತಿಂಗಳಿಂದ ಪಾರಿವಾಳ ಸಾಕಿದ್ದರು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಪಾರಿವಾಳ ಸಾಯಿಸಿ ಕಿರಾತಕರು ಪರಾರಿಯಾಗಿದ್ದಾರೆ.
ಹಳೇ ದ್ವೇಷದ ಹಿನ್ನೆಲೆ ಪಾರಿವಾಳ ಕೊಲೆ ಮಾಡಿರೋ ಶಂಕೆ ವ್ಯಕ್ತವಾಗಿದೆ. ಈ ಘಟನೆ ರಾಹುಲ್ಗೆ ಗೊತ್ತಾಗುತ್ತಿದ್ದಂತೆಯೇ ಹುಬ್ಬಳ್ಳಿಯ ಉಪನಗರ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಪಾರಿವಾಳಗಳನ್ನು ಸಾಯಿಸಿದವರನ್ನ ಕೂಡಲೇ ಅರೆಸ್ಟ್ ಮಾಡಬೇಕೆಂದು ಆಗ್ರಹಿಸಿ ದೂರು ಸಲ್ಲಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ