ಜವಾನ್ ಶೂಟಿಂಗ್ ವೇಳೆ ಶಾರುಖ್ ಖಾನ್ ಮೂಗಿಗೆ ಗಾಯ
ತೀವ್ರ ರಕ್ತಸ್ರಾವದಿಂದ ವೈದ್ಯರ ಮೊರೆ ಹೋದ ಶಾರುಖ್ ಖಾನ್
ಅಟ್ಲಿ ಜೊತೆಗೆ ಜವಾನ್ ಸಿನಿಮಾದ ಶೂಟಿಂಗ್ ವೇಳೆ ಅವಾಂತರ
ಕಿಂಗ್ ಖಾನ್ ಶಾರುಖ್ ಖಾನ್ ಬ್ಲಾಕ್ಬಸ್ಟರ್ ಸಿನಿಮಾಗಳನ್ನು ನೀಡುತ್ತಾ ಬಂದಿದ್ದಾರೆ. ಅದರಂತೆಯೇ ಈ ವರ್ಷ ಬಿಡುಗಡೆಗೊಂಡ ‘ಪಠಾಣ್’ ಸಿನಿಮಾ 100 ಕೋಟಿ ಬಾಚಿಕೊಂಡಿದೆ. ಇದೀಗ ಮತ್ತೊಂದು ಬ್ಲಾಕ್ಬಸ್ಟರ್ ಸಿನಿಮಾ ನೀಡಲು ಕಿಂಗ್ ಖಾನ್ ಮುಂದಾಗಿದ್ದು, ‘ಜವಾನ್’ ಆಗಿ ತೆರೆ ಮೇಲೆ ಬರಲು ಸಜ್ಜಾಗಿದ್ದಾರೆ. ಆದರೆ ಈ ನಡುವೆ ಶೂಟಿಂಗ್ ಸೆಟ್ನಲ್ಲಿ ಆದ ಅಪಘಾತದಿಂದ ಶಾರುಖ್ ಖಾನ್ ವಿದೇಶದಲ್ಲೇ ಶಸ್ತ್ರ ಚಿಕಿತ್ಸೆಗೆ ಒಳಗಾದರು.
ಕಿಂಗ್ ಖಾನ್ಗೆ ಅಂಥದ್ದೇನಾಯ್ತು?
ಎಸ್ಆರ್ಕೆ ಸದ್ಯ ಖ್ಯಾತ ನಿರ್ದೇಶಕ ಅಟ್ಲಿ ಜೊತೆಗೆ ಕೈ ಜೋಡಿಸಿಕೊಂಡಿದ್ದಾರೆ. ಜವಾನ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆದರೆ ಇತ್ತೀಚೆಗೆ ಶೂಟಿಂಗ್ ಸೆಟ್ನಲ್ಲಿ ಶಾರುಖ್ ಖಾನ್ಗೆ ಸಣ್ಣ ಅಪಘಾತವಾಗಿದ್ದು ಅದರ ಶಸ್ತ್ರ ಚಿಕಿತ್ಸೆಗಾಗಿ ಲಾಸ್ ಏಂಜಲೀಸ್ನಲ್ಲಿ ಚಿಕಿತ್ಸೆ ಒಳಗಾಗಬೇಕಾಯ್ತು.
ಶಾರುಖ್ ಮೂಗಿಗೆ ಗಾಯ
ಲಾಸ್ ಏಂಜಲೀಸ್ನಲ್ಲಿ ಶೂಟಿಂಗ್ ನಡೆಸುವ ವೇಳೆ ಶಾರುಖ್ ಖಾನ್ ಮೂಗಿಗೆ ಗಾಯವಾಗಿದೆ. ಈ ವೇಳೆ ತೀವ್ರ ರಕ್ತಸ್ರಾವವಾಗಿದೆ. ಆದರೆ ರಕ್ತ ನಿಲ್ಲದ ಹೊರತು ವೈದ್ಯರು ಸಣ್ಣ ಶಸ್ತ್ರ ಚಿಕಿತ್ಸೆ ಮಾಡಬೇಕು ಎಂದು ಹೇಳಿದ್ದರು. ಅದರ ಜೊತೆಗೆ ಭಯಪಡುವ ಅಗತ್ಯವಿಲ್ಲ ಎಂದು ಹೇಳಿದ್ದರು.
ಅದರಂತೆಯೇ ಕಿಂಗ್ ಖಾನ್ ಯಶಸ್ವಿ ಶಸ್ತ್ರಚಿಕಿತ್ಸೆ ಬಳಿಕ ಭಾರತಕ್ಕೆ ಮರಳಿದ್ದಾರೆ. ಮನೆಯಲ್ಲಿಯೇ ಕುಳಿತು ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಜವಾನ್ ಶೂಟಿಂಗ್ ವೇಳೆ ಶಾರುಖ್ ಖಾನ್ ಮೂಗಿಗೆ ಗಾಯ
ತೀವ್ರ ರಕ್ತಸ್ರಾವದಿಂದ ವೈದ್ಯರ ಮೊರೆ ಹೋದ ಶಾರುಖ್ ಖಾನ್
ಅಟ್ಲಿ ಜೊತೆಗೆ ಜವಾನ್ ಸಿನಿಮಾದ ಶೂಟಿಂಗ್ ವೇಳೆ ಅವಾಂತರ
ಕಿಂಗ್ ಖಾನ್ ಶಾರುಖ್ ಖಾನ್ ಬ್ಲಾಕ್ಬಸ್ಟರ್ ಸಿನಿಮಾಗಳನ್ನು ನೀಡುತ್ತಾ ಬಂದಿದ್ದಾರೆ. ಅದರಂತೆಯೇ ಈ ವರ್ಷ ಬಿಡುಗಡೆಗೊಂಡ ‘ಪಠಾಣ್’ ಸಿನಿಮಾ 100 ಕೋಟಿ ಬಾಚಿಕೊಂಡಿದೆ. ಇದೀಗ ಮತ್ತೊಂದು ಬ್ಲಾಕ್ಬಸ್ಟರ್ ಸಿನಿಮಾ ನೀಡಲು ಕಿಂಗ್ ಖಾನ್ ಮುಂದಾಗಿದ್ದು, ‘ಜವಾನ್’ ಆಗಿ ತೆರೆ ಮೇಲೆ ಬರಲು ಸಜ್ಜಾಗಿದ್ದಾರೆ. ಆದರೆ ಈ ನಡುವೆ ಶೂಟಿಂಗ್ ಸೆಟ್ನಲ್ಲಿ ಆದ ಅಪಘಾತದಿಂದ ಶಾರುಖ್ ಖಾನ್ ವಿದೇಶದಲ್ಲೇ ಶಸ್ತ್ರ ಚಿಕಿತ್ಸೆಗೆ ಒಳಗಾದರು.
ಕಿಂಗ್ ಖಾನ್ಗೆ ಅಂಥದ್ದೇನಾಯ್ತು?
ಎಸ್ಆರ್ಕೆ ಸದ್ಯ ಖ್ಯಾತ ನಿರ್ದೇಶಕ ಅಟ್ಲಿ ಜೊತೆಗೆ ಕೈ ಜೋಡಿಸಿಕೊಂಡಿದ್ದಾರೆ. ಜವಾನ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆದರೆ ಇತ್ತೀಚೆಗೆ ಶೂಟಿಂಗ್ ಸೆಟ್ನಲ್ಲಿ ಶಾರುಖ್ ಖಾನ್ಗೆ ಸಣ್ಣ ಅಪಘಾತವಾಗಿದ್ದು ಅದರ ಶಸ್ತ್ರ ಚಿಕಿತ್ಸೆಗಾಗಿ ಲಾಸ್ ಏಂಜಲೀಸ್ನಲ್ಲಿ ಚಿಕಿತ್ಸೆ ಒಳಗಾಗಬೇಕಾಯ್ತು.
ಶಾರುಖ್ ಮೂಗಿಗೆ ಗಾಯ
ಲಾಸ್ ಏಂಜಲೀಸ್ನಲ್ಲಿ ಶೂಟಿಂಗ್ ನಡೆಸುವ ವೇಳೆ ಶಾರುಖ್ ಖಾನ್ ಮೂಗಿಗೆ ಗಾಯವಾಗಿದೆ. ಈ ವೇಳೆ ತೀವ್ರ ರಕ್ತಸ್ರಾವವಾಗಿದೆ. ಆದರೆ ರಕ್ತ ನಿಲ್ಲದ ಹೊರತು ವೈದ್ಯರು ಸಣ್ಣ ಶಸ್ತ್ರ ಚಿಕಿತ್ಸೆ ಮಾಡಬೇಕು ಎಂದು ಹೇಳಿದ್ದರು. ಅದರ ಜೊತೆಗೆ ಭಯಪಡುವ ಅಗತ್ಯವಿಲ್ಲ ಎಂದು ಹೇಳಿದ್ದರು.
ಅದರಂತೆಯೇ ಕಿಂಗ್ ಖಾನ್ ಯಶಸ್ವಿ ಶಸ್ತ್ರಚಿಕಿತ್ಸೆ ಬಳಿಕ ಭಾರತಕ್ಕೆ ಮರಳಿದ್ದಾರೆ. ಮನೆಯಲ್ಲಿಯೇ ಕುಳಿತು ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ