newsfirstkannada.com

ಏಟು ಏಟು ಫುಲ್ ಟೈಟ್.. ಬಾರ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಪೊಲೀಸಪ್ಪ ಅಮಾನತು; ಸಿಕ್ಕಿಬಿದ್ದಿದ್ದು ಹೇಗೆ?

Share :

18-11-2023

    ಬಾರ್ ಸಿಬ್ಬಂದಿ ಮೇಲೆ ಗಲಾಟೆ ಮಾಡಿದ್ದ ವಿಡಿಯೋ ವೈರಲ್

    ಸರ್ಕಲ್​ನಲ್ಲಿನ ಬಾರ್ ಸಿಬ್ಬಂದಿ ನಮಸ್ಕಾರ ಮಾಡಿಲ್ಲವೆಂದು ಹಲ್ಲೆ

    ಉದಾಸೀನ ತೋರಿದ ಹಿನ್ನೆಲೆ ASI ಅಮಾನತು ಮಾಡಿ ಆದೇಶ

ಕೋಲಾರ: ಕುಡಿದು ಫುಲ್ ಟೈಟ್ ಆಗಿ ಬಾರ್ ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾಗಿದ್ದ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯ ಎಎಸ್​ಐ ಕೆ.ಸಿ ನಾರಾಯಣ ಸ್ವಾಮಿಯವರನ್ನು ಅಮಾನತು ಮಾಡಲಾಗಿದೆ.

ನವೆಂಬರ್ 11ರ ರಾತ್ರಿ ಸಮಯದಲ್ಲಿ ಕೋಲಾರ ನಗರದ ಬಂಗಾರಪೇಟೆ ವೃತ್ತದ ಅಶೋಕ್ ಬಾರ್​ನಲ್ಲಿ ನಮಸ್ಕಾರ ಮಾಡಿಲ್ಲ ಎಂಬ ವಿಚಾರಕ್ಕೆ ಬಾರ್ ಸಿಬ್ಬಂದಿ ಮೇಲೆ ಗಲಾಟೆ ಮಾಡಿದ್ದನು. ಅಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ವೇಳೆ ಬಾರ್ ಸಿಬ್ಬಂದಿ ಹಾಗೂ ಎಎಸ್​ಐ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ಎಎಸ್ಐ ರಸ್ತೆ ಬದಿ ಬಿದ್ದಿದ್ದ ಕಲ್ಲನ್ನು ಎತ್ತಿಕೊಂಡು ಬಂದು ಸಿಬ್ಬಂದಿ ಮೇಲೆ ಹಾಕಲು ಮುಂದಾಗಿರುವ ವಿಡಿಯೋ ವೈರಲ್ ಆಗಿತ್ತು.

ನನ್ನ ಮೆಲೆ ಹಲ್ಲೆಯಾಗಿದೆ ಎಂದು ಎಎಸ್ಐ ನಾರಾಯಣಸ್ವಾಮಿ ದೂರು ದಾಖಲು ಮಾಡಿದ್ದರು. ಆದ್ರೆ ಎಎಸ್​ಐ ಸುಳ್ಳು ದೂರು ನೀಡಿದ್ದಾರೆಂದು ಆರೋಪಿಸಿ ಬಾರ್ ಅಸೋಸಿಯೇಷನ್ ಎಸ್​ಪಿಗೆ ದೂರು ನೀಡಿತ್ತು. ಎಎಸ್​ಐ ನಾರಾಯಣಸ್ವಾಮಿ ತಪ್ಪು ಮಾಡಿರೋದು ಸಾಬೀತಾದ ಹಿನ್ನೆಲೆ ಇಲಾಖೆ ಅಗೌರವ, ದುರ್ನಡತೆ, ಬೇಜವಾಬ್ದಾರಿತನ, ಉದಾಸೀನ ತೋರಿದ ಹಿನ್ನೆಲೆಯಲ್ಲಿ ASI KC ನಾರಾಯಣ ಸ್ವಾಮಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಏಟು ಏಟು ಫುಲ್ ಟೈಟ್.. ಬಾರ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಪೊಲೀಸಪ್ಪ ಅಮಾನತು; ಸಿಕ್ಕಿಬಿದ್ದಿದ್ದು ಹೇಗೆ?

https://newsfirstlive.com/wp-content/uploads/2023/11/KLR_ASI_NARAYANASWAMI.jpg

    ಬಾರ್ ಸಿಬ್ಬಂದಿ ಮೇಲೆ ಗಲಾಟೆ ಮಾಡಿದ್ದ ವಿಡಿಯೋ ವೈರಲ್

    ಸರ್ಕಲ್​ನಲ್ಲಿನ ಬಾರ್ ಸಿಬ್ಬಂದಿ ನಮಸ್ಕಾರ ಮಾಡಿಲ್ಲವೆಂದು ಹಲ್ಲೆ

    ಉದಾಸೀನ ತೋರಿದ ಹಿನ್ನೆಲೆ ASI ಅಮಾನತು ಮಾಡಿ ಆದೇಶ

ಕೋಲಾರ: ಕುಡಿದು ಫುಲ್ ಟೈಟ್ ಆಗಿ ಬಾರ್ ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾಗಿದ್ದ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯ ಎಎಸ್​ಐ ಕೆ.ಸಿ ನಾರಾಯಣ ಸ್ವಾಮಿಯವರನ್ನು ಅಮಾನತು ಮಾಡಲಾಗಿದೆ.

ನವೆಂಬರ್ 11ರ ರಾತ್ರಿ ಸಮಯದಲ್ಲಿ ಕೋಲಾರ ನಗರದ ಬಂಗಾರಪೇಟೆ ವೃತ್ತದ ಅಶೋಕ್ ಬಾರ್​ನಲ್ಲಿ ನಮಸ್ಕಾರ ಮಾಡಿಲ್ಲ ಎಂಬ ವಿಚಾರಕ್ಕೆ ಬಾರ್ ಸಿಬ್ಬಂದಿ ಮೇಲೆ ಗಲಾಟೆ ಮಾಡಿದ್ದನು. ಅಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ವೇಳೆ ಬಾರ್ ಸಿಬ್ಬಂದಿ ಹಾಗೂ ಎಎಸ್​ಐ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ಎಎಸ್ಐ ರಸ್ತೆ ಬದಿ ಬಿದ್ದಿದ್ದ ಕಲ್ಲನ್ನು ಎತ್ತಿಕೊಂಡು ಬಂದು ಸಿಬ್ಬಂದಿ ಮೇಲೆ ಹಾಕಲು ಮುಂದಾಗಿರುವ ವಿಡಿಯೋ ವೈರಲ್ ಆಗಿತ್ತು.

ನನ್ನ ಮೆಲೆ ಹಲ್ಲೆಯಾಗಿದೆ ಎಂದು ಎಎಸ್ಐ ನಾರಾಯಣಸ್ವಾಮಿ ದೂರು ದಾಖಲು ಮಾಡಿದ್ದರು. ಆದ್ರೆ ಎಎಸ್​ಐ ಸುಳ್ಳು ದೂರು ನೀಡಿದ್ದಾರೆಂದು ಆರೋಪಿಸಿ ಬಾರ್ ಅಸೋಸಿಯೇಷನ್ ಎಸ್​ಪಿಗೆ ದೂರು ನೀಡಿತ್ತು. ಎಎಸ್​ಐ ನಾರಾಯಣಸ್ವಾಮಿ ತಪ್ಪು ಮಾಡಿರೋದು ಸಾಬೀತಾದ ಹಿನ್ನೆಲೆ ಇಲಾಖೆ ಅಗೌರವ, ದುರ್ನಡತೆ, ಬೇಜವಾಬ್ದಾರಿತನ, ಉದಾಸೀನ ತೋರಿದ ಹಿನ್ನೆಲೆಯಲ್ಲಿ ASI KC ನಾರಾಯಣ ಸ್ವಾಮಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More