newsfirstkannada.com

ಮತ್ತಷ್ಟು ಕುಸಿತ ಕಂಡ KRS​​ ಜಲಾಶಯದ ನೀರಿನ ಮಟ್ಟ; ನಾಳೆ ಪ್ರಾಧಿಕಾರದ ಮಹತ್ವದ ಸಭೆ

Share :

27-08-2023

    ಕೆಆರ್‌ಎಸ್ ಇಂದಿನ ನೀರಿನ ಮಟ್ಟ ಎಷ್ಟಕ್ಕೆ ಕುಸಿದಿದೆ ಗೊತ್ತಾ?

    ಶುಕ್ರವಾರ ಸುಪ್ರೀಂಕೋರ್ಟ್​​ನಲ್ಲಿ ‘ಕಾವೇರಿ’ದ ವಿಚಾರಣೆ!

    ಚರ್ಚೆ ನಡೆಸಿ ಸುಪ್ರೀಂಗೆ ವರದಿ ಸಲ್ಲಿಸಲಿರುವ ಪ್ರಾಧಿಕಾರ!

ಕಾವೇರಿ ಕನ್ನಡ ನಾಡಿನ ಜೀವನದಿ. ಕರುನಾಡಿನ ಮನೆಮಗಳು. ತಲಕಾವೇರಿಯಲ್ಲಿ ಹುಟ್ಟಿ ಬಂಗಾಳಕೊಲ್ಲಿ ಸೇರುವ ತನಕ ಅಸಂಖ್ಯ ಜೀವರಾಶಿಗಳಿಗೆ ಜೀವಾಮೃತ. ಕಾವೇರಿ ಕೊಳ್ಳಗಳಲ್ಲಿ ಮಳೆ ಇಲ್ಲದ ಪರಿಣಾಮ ಈ ಬಾರಿ ತೀವ್ರ ಜಲಸಂಕಷ್ಟ ಎದುರಾಗಿದ್ದು ಬಿಕ್ಕಟ್ಟು ಬಿಗಡಾಯಿಸಿದೆ.

ನಾಳೆ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರದ ಸಭೆ‘

ಮೊನ್ನೆ ಸುಪ್ರೀಂಕೋರ್ಟ್ ಕಟಕಟೆಯಲ್ಲಿ ಕಾವೇರಿ ವಿವಾದದ ಬಗ್ಗೆ ವಾದ-ಪ್ರತಿವಾದ ನಡೆದಿತ್ತು. ನಿಯಮದ ಪ್ರಕಾರ ನೀರು ಬಿಡ್ತಿಲ್ಲ ಎಂದು ಆರೋಪಿಸಿ ತಮಿಳುನಾಡು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್​​ ಈ ಬಗ್ಗೆ ತೀರ್ಮಾನ ಮಾಡಲು ಕಾವೇರಿ ಪ್ರಾಧಿಕಾರವೇ ಸೂಕ್ತ, ನಮಗೆ ಅಷ್ಟು ಜ್ಞಾನ ಇಲ್ಲ. ಹೀಗಾಗಿ ಪ್ರಾಧಿಕಾರ ಸಭೆ ನಡೆಸಿ ನಮಗೆ ವರದಿ ನೀಡಬೇಕು ಅಂತ ಆದೇಶಿಸಿ​ ಸೆಪ್ಟೆಂಬರ್ 1ಕ್ಕೆ ವಿಚಾರಣೆ ಮುಂದೂಡಿತ್ತು. ಹೀಗಾಗಿ ನಾಳೆ ನವದೆಹಲಿಯಲ್ಲಿ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರದ ಸಭೆ ನಡೆಯಲಿದೆ. ಕರ್ನಾಟಕ ಹಾಗೂ ತಮಿಳುನಾಡಿನ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಲಿದ್ದಾರೆ.

 

ನಾಳೆ ನವದೆಹಲಿಯಲ್ಲಿ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರದ ಸಭೆ ನಡೆಯಲಿದ್ದು ಮುಂದಿನ 15 ದಿನಗಳ ಕಾಲ ನೀರು ಬಿಡಬೇಕಾ, ಬೇಡ್ವಾ ಎಂಬ ಬಗ್ಗೆ ಚರ್ಚೆ ನಡೆಯಲಿದೆ. ಕಳೆದ ಸಭೆಯಲ್ಲಿ ವಾಸ್ತವ ಸ್ಥಿತಿಯನ್ನು ಒಪ್ಪದ ತಮಿಳುನಾಡು ಅಧಿಕಾರಿಗಳು ಸಭೆಯಿಂದ ಅರ್ಧಕ್ಕೆ ಎದ್ದು ಹೋಗಿದ್ದರು, ಹೀಗಾಗಿ ನಾಳೆ ನಡೆಯಲಿರುವ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರದ ಸಭೆ ಭಾರಿ ಮಹತ್ವ ಪಡೆದಿದೆ.

ಶುಕ್ರವಾರ ಸುಪ್ರೀಂಕೋರ್ಟ್​​ನಲ್ಲಿ ‘ಕಾವೇರಿ’ದ ವಿಚಾರಣೆ!

ಇನ್ನು, ನಾಳೆ ಕಾವೇರಿ ನೀರು ನಿಯಂತ್ರಣಾ ಸಮಿತಿ ಸಭೆ ನಡೆಯಲಿದ್ದು, ಮುಂದಿನ 15 ದಿನಗಳಿಗೆ ನೀರು ಹಂಚಿಕೆ ಮಾಡುವ ಸಾಧ್ಯತೆ ಇದೆ. ಸಮಿತಿ ನೀಡುವ ಸೂಚನೆ ಬಗ್ಗೆ ಕಾವೇರಿ ನದಿ ನೀರು ಪ್ರಾಧಿಕಾರ ಪರಿಶೀಲನೆ ನಡೆಸಲಿದೆ. ಆದ್ರೆ, ಎರಡೂ ರಾಜ್ಯಗಳ ಜೊತೆ ಸಭೆ ನಡೆಸುವ ಬಗ್ಗೆ ಇನ್ನೂ ಖಚಿತತೆ ಇಲ್ಲ. ಈ ಬಗ್ಗೆ ನಾಳಿನ ಸಭೆಯ ಬಳಿಕ ನಿರ್ಧರಿಸಲಿದೆ ಎನ್ನಲಾಗಿದೆ. ಇನ್ನು ಪ್ರಾಧಿಕಾರದ ಸಭೆ ಬೆನ್ನಲ್ಲೇ ಸೆಪ್ಟೆಂಬರ್ 1ರಂದು ಸುಪ್ರೀಂಕೋರ್ಟ್​​​ ತ್ರಿಸದಸ್ಯ ಪೀಠದಲ್ಲಿ ವರದಿ ಸಲ್ಲಿಕೆ ಆಗಬೇಕಿದೆ. ಒಂದ್ಕಡೆ ಕಾವೇರಿ ಬಿಕ್ಕಟ್ಟು ಸುಪ್ರೀಂಕೋರ್ಟ್ ಅಂಗಳದಲ್ಲಿರುವಾಗ ಇತ್ತ ತಮಿಳುನಾಡಿಗೆ ನೀರು ಹರಿಸುತ್ತಿರುವ ಪರಿಣಾಮ ಮಂಡ್ಯದ ಕೆಆರ್​ಎಸ್​​ ಜಲಾಶಯದ ಒಡಲು ಮತ್ತಷ್ಟು ಖಾಲಿಯಾಗಿದೆ. ಜಲಾಶಯದ ನೀರಿನ ಮಟ್ಟ ನೆಲ ಕಾಣುವಂತಿದೆ.

ಕೆಆರ್‌ಎಸ್ ಇಂದಿನ ನೀರಿನ ಮಟ್ಟ!

ಗರಿಷ್ಠ ಮಟ್ಟ – 124.80 ಅಡಿಗಳು
ಇಂದಿನ ಮಟ್ಟ – 102.00 ಅಡಿಗಳು
ಒಳ ಹರಿವು – 3,108 ಕ್ಯೂಸೆಕ್
ಹೊರ ಹರಿವು – 5,068 ಕ್ಯೂಸೆಕ್

ಒಟ್ಟಿನಲ್ಲಿ ನೀರು ಬಿಡುಗಡೆ ವಿಷಯದಲ್ಲಿ ಕಾವೇರಿ ಪ್ರಾಧಿಕಾರವೇ ನಿರ್ಣಾಯಕ ಎಂಬ ಸಂದೇಶವನ್ನು ಕೋರ್ಟ್ ರವಾನೆ ಮಾಡಿದೆ. ಕಳೆದ ವಿಚಾರಣೆಯಲ್ಲಿ ಮಧ್ಯಪ್ರವೇಶಕ್ಕೆ ನಿರಾಕರಿಸಿದ್ದರಿಂದ ಕರ್ನಾಟಕಕ್ಕೆ ಕೊಂಚ ನಿರಾಳತೆ ಸಿಕ್ಕಿತ್ತು. ಆದ್ರೆ, ನಾಳೆ ನಡೆಯುವ ಸಭೆಯಲ್ಲಿ ಕೈಗೊಳ್ಳುವ ನಿರ್ಧಾರದ ಮೇಲೆ ಸುಪ್ರೀಂಕೋರ್ಟ್​​​ ತೀರ್ಮಾನ ಕೈಗೊಳ್ಳಲಿದೆ. ಹೀಗಾಗಿ ನಾಳಿನ ಸಭೆ ಬಳಿಕ ಏನೆಲ್ಲಾ ಬೆಳವಣಿಗೆಗಳು ನಡೆಯುತ್ತವೆ ಅನ್ನೋದನ್ನು ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮತ್ತಷ್ಟು ಕುಸಿತ ಕಂಡ KRS​​ ಜಲಾಶಯದ ನೀರಿನ ಮಟ್ಟ; ನಾಳೆ ಪ್ರಾಧಿಕಾರದ ಮಹತ್ವದ ಸಭೆ

https://newsfirstlive.com/wp-content/uploads/2023/07/KRS-Dam-1.jpg

    ಕೆಆರ್‌ಎಸ್ ಇಂದಿನ ನೀರಿನ ಮಟ್ಟ ಎಷ್ಟಕ್ಕೆ ಕುಸಿದಿದೆ ಗೊತ್ತಾ?

    ಶುಕ್ರವಾರ ಸುಪ್ರೀಂಕೋರ್ಟ್​​ನಲ್ಲಿ ‘ಕಾವೇರಿ’ದ ವಿಚಾರಣೆ!

    ಚರ್ಚೆ ನಡೆಸಿ ಸುಪ್ರೀಂಗೆ ವರದಿ ಸಲ್ಲಿಸಲಿರುವ ಪ್ರಾಧಿಕಾರ!

ಕಾವೇರಿ ಕನ್ನಡ ನಾಡಿನ ಜೀವನದಿ. ಕರುನಾಡಿನ ಮನೆಮಗಳು. ತಲಕಾವೇರಿಯಲ್ಲಿ ಹುಟ್ಟಿ ಬಂಗಾಳಕೊಲ್ಲಿ ಸೇರುವ ತನಕ ಅಸಂಖ್ಯ ಜೀವರಾಶಿಗಳಿಗೆ ಜೀವಾಮೃತ. ಕಾವೇರಿ ಕೊಳ್ಳಗಳಲ್ಲಿ ಮಳೆ ಇಲ್ಲದ ಪರಿಣಾಮ ಈ ಬಾರಿ ತೀವ್ರ ಜಲಸಂಕಷ್ಟ ಎದುರಾಗಿದ್ದು ಬಿಕ್ಕಟ್ಟು ಬಿಗಡಾಯಿಸಿದೆ.

ನಾಳೆ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರದ ಸಭೆ‘

ಮೊನ್ನೆ ಸುಪ್ರೀಂಕೋರ್ಟ್ ಕಟಕಟೆಯಲ್ಲಿ ಕಾವೇರಿ ವಿವಾದದ ಬಗ್ಗೆ ವಾದ-ಪ್ರತಿವಾದ ನಡೆದಿತ್ತು. ನಿಯಮದ ಪ್ರಕಾರ ನೀರು ಬಿಡ್ತಿಲ್ಲ ಎಂದು ಆರೋಪಿಸಿ ತಮಿಳುನಾಡು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್​​ ಈ ಬಗ್ಗೆ ತೀರ್ಮಾನ ಮಾಡಲು ಕಾವೇರಿ ಪ್ರಾಧಿಕಾರವೇ ಸೂಕ್ತ, ನಮಗೆ ಅಷ್ಟು ಜ್ಞಾನ ಇಲ್ಲ. ಹೀಗಾಗಿ ಪ್ರಾಧಿಕಾರ ಸಭೆ ನಡೆಸಿ ನಮಗೆ ವರದಿ ನೀಡಬೇಕು ಅಂತ ಆದೇಶಿಸಿ​ ಸೆಪ್ಟೆಂಬರ್ 1ಕ್ಕೆ ವಿಚಾರಣೆ ಮುಂದೂಡಿತ್ತು. ಹೀಗಾಗಿ ನಾಳೆ ನವದೆಹಲಿಯಲ್ಲಿ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರದ ಸಭೆ ನಡೆಯಲಿದೆ. ಕರ್ನಾಟಕ ಹಾಗೂ ತಮಿಳುನಾಡಿನ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಲಿದ್ದಾರೆ.

 

ನಾಳೆ ನವದೆಹಲಿಯಲ್ಲಿ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರದ ಸಭೆ ನಡೆಯಲಿದ್ದು ಮುಂದಿನ 15 ದಿನಗಳ ಕಾಲ ನೀರು ಬಿಡಬೇಕಾ, ಬೇಡ್ವಾ ಎಂಬ ಬಗ್ಗೆ ಚರ್ಚೆ ನಡೆಯಲಿದೆ. ಕಳೆದ ಸಭೆಯಲ್ಲಿ ವಾಸ್ತವ ಸ್ಥಿತಿಯನ್ನು ಒಪ್ಪದ ತಮಿಳುನಾಡು ಅಧಿಕಾರಿಗಳು ಸಭೆಯಿಂದ ಅರ್ಧಕ್ಕೆ ಎದ್ದು ಹೋಗಿದ್ದರು, ಹೀಗಾಗಿ ನಾಳೆ ನಡೆಯಲಿರುವ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರದ ಸಭೆ ಭಾರಿ ಮಹತ್ವ ಪಡೆದಿದೆ.

ಶುಕ್ರವಾರ ಸುಪ್ರೀಂಕೋರ್ಟ್​​ನಲ್ಲಿ ‘ಕಾವೇರಿ’ದ ವಿಚಾರಣೆ!

ಇನ್ನು, ನಾಳೆ ಕಾವೇರಿ ನೀರು ನಿಯಂತ್ರಣಾ ಸಮಿತಿ ಸಭೆ ನಡೆಯಲಿದ್ದು, ಮುಂದಿನ 15 ದಿನಗಳಿಗೆ ನೀರು ಹಂಚಿಕೆ ಮಾಡುವ ಸಾಧ್ಯತೆ ಇದೆ. ಸಮಿತಿ ನೀಡುವ ಸೂಚನೆ ಬಗ್ಗೆ ಕಾವೇರಿ ನದಿ ನೀರು ಪ್ರಾಧಿಕಾರ ಪರಿಶೀಲನೆ ನಡೆಸಲಿದೆ. ಆದ್ರೆ, ಎರಡೂ ರಾಜ್ಯಗಳ ಜೊತೆ ಸಭೆ ನಡೆಸುವ ಬಗ್ಗೆ ಇನ್ನೂ ಖಚಿತತೆ ಇಲ್ಲ. ಈ ಬಗ್ಗೆ ನಾಳಿನ ಸಭೆಯ ಬಳಿಕ ನಿರ್ಧರಿಸಲಿದೆ ಎನ್ನಲಾಗಿದೆ. ಇನ್ನು ಪ್ರಾಧಿಕಾರದ ಸಭೆ ಬೆನ್ನಲ್ಲೇ ಸೆಪ್ಟೆಂಬರ್ 1ರಂದು ಸುಪ್ರೀಂಕೋರ್ಟ್​​​ ತ್ರಿಸದಸ್ಯ ಪೀಠದಲ್ಲಿ ವರದಿ ಸಲ್ಲಿಕೆ ಆಗಬೇಕಿದೆ. ಒಂದ್ಕಡೆ ಕಾವೇರಿ ಬಿಕ್ಕಟ್ಟು ಸುಪ್ರೀಂಕೋರ್ಟ್ ಅಂಗಳದಲ್ಲಿರುವಾಗ ಇತ್ತ ತಮಿಳುನಾಡಿಗೆ ನೀರು ಹರಿಸುತ್ತಿರುವ ಪರಿಣಾಮ ಮಂಡ್ಯದ ಕೆಆರ್​ಎಸ್​​ ಜಲಾಶಯದ ಒಡಲು ಮತ್ತಷ್ಟು ಖಾಲಿಯಾಗಿದೆ. ಜಲಾಶಯದ ನೀರಿನ ಮಟ್ಟ ನೆಲ ಕಾಣುವಂತಿದೆ.

ಕೆಆರ್‌ಎಸ್ ಇಂದಿನ ನೀರಿನ ಮಟ್ಟ!

ಗರಿಷ್ಠ ಮಟ್ಟ – 124.80 ಅಡಿಗಳು
ಇಂದಿನ ಮಟ್ಟ – 102.00 ಅಡಿಗಳು
ಒಳ ಹರಿವು – 3,108 ಕ್ಯೂಸೆಕ್
ಹೊರ ಹರಿವು – 5,068 ಕ್ಯೂಸೆಕ್

ಒಟ್ಟಿನಲ್ಲಿ ನೀರು ಬಿಡುಗಡೆ ವಿಷಯದಲ್ಲಿ ಕಾವೇರಿ ಪ್ರಾಧಿಕಾರವೇ ನಿರ್ಣಾಯಕ ಎಂಬ ಸಂದೇಶವನ್ನು ಕೋರ್ಟ್ ರವಾನೆ ಮಾಡಿದೆ. ಕಳೆದ ವಿಚಾರಣೆಯಲ್ಲಿ ಮಧ್ಯಪ್ರವೇಶಕ್ಕೆ ನಿರಾಕರಿಸಿದ್ದರಿಂದ ಕರ್ನಾಟಕಕ್ಕೆ ಕೊಂಚ ನಿರಾಳತೆ ಸಿಕ್ಕಿತ್ತು. ಆದ್ರೆ, ನಾಳೆ ನಡೆಯುವ ಸಭೆಯಲ್ಲಿ ಕೈಗೊಳ್ಳುವ ನಿರ್ಧಾರದ ಮೇಲೆ ಸುಪ್ರೀಂಕೋರ್ಟ್​​​ ತೀರ್ಮಾನ ಕೈಗೊಳ್ಳಲಿದೆ. ಹೀಗಾಗಿ ನಾಳಿನ ಸಭೆ ಬಳಿಕ ಏನೆಲ್ಲಾ ಬೆಳವಣಿಗೆಗಳು ನಡೆಯುತ್ತವೆ ಅನ್ನೋದನ್ನು ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More