newsfirstkannada.com

KSRTC ಬಸ್​​, ಕಾರ್​ ಮಧ್ಯೆ ಅಪಘಾತ ಆಗಿದ್ಹೇಗೆ? 6 ಮಂದಿ ದುರ್ಮರಣಕ್ಕೆ ಕಾರಣ ಯಾರು..?

Share :

28-08-2023

    ಕೆಎಸ್​​ಆರ್​ಟಿಸಿ ಬಸ್​ ಹಾಗೂ ಕಾರು ನಡುವೆ ಅಪಘಾತ

    ಭಯಾನಕ ಅಪಘಾತದಲ್ಲಿ 6 ಮಂದಿ ದಾರುಣ ಸಾವು

    ಈ ಭೀಕರ ಅಪಘಾತಕ್ಕೆ ಮುಖ್ಯ ಕಾರಣವೇನು..?

ರಾಮನಗರ: ಕೆಎಸ್​​ಆರ್​ಟಿಸಿ ಬಸ್​ ಹಾಗೂ ಕಾರು ನಡುವೆ ಭೀಕರ ಅಪಘಾತ ಸಂಭವಿಸಿ 6 ಮಂದಿ ದಾರುಣವಾಗಿ ಸಾವನ್ನಪ್ಪಿರೋ ಘಟನೆ ಸಾತನೂರು ಕೆಮ್ಮಾಳೆ ಗೇಟ್​​ ಬಳಿ ಈ ದುರ್ಘಟನೆ ನಡೆದಿದೆ.

ಕೆಎಸ್ಆರ್‌ಟಿಸಿ ಕನಕಪುರದಿಂದ ಮಳವಳ್ಳಿ ಕಡೆಗೆ ಹೋಗುತ್ತಿತ್ತು. ಕಾರು ಮಳವಳ್ಳಿಯಿಂದ ಕನಕಪುರ ಕಡೆಗೆ ಬರುತ್ತಿದ್ದ ವೇಳೆ ಭೀಕರ ಅಪಘಾತ ಸಂಭವಿಸಿದೆ. ಪರಿಣಾಮ ಕಾರಿನಲ್ಲಿದ್ದ 6 ಮಂದಿ ಸ್ಥಳದಲ್ಲೇ ಅಸುನೀಗಿದ್ದಾರೆ. ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಾಗೇಶ್, ಪುಟ್ಟರಾಜು, ಜ್ಯೋತಿರ್ಲಿಂಗಪ್ಪ, ಗೋವಿಂದ, ಕುಮಾರ್​ ಮೃತ ದುರ್ದೈವಿಗಳು.

ಮೃತರು ಬೆಂಗಳೂರಿನ ಮಾರತ್ತಹಳ್ಳಿ ಹಾಗೂ ಚಂದಾಪುರದವರು ಎಂದು ತಿಳಿದು ಬಂದಿದೆ. ಕೆಎಸ್​​ಆರ್​ಟಿಸಿ​ ಬಸ್‌ನಲ್ಲಿದ್ದ 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅವರನ್ನು ಸಾತನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಸ್​ ಚಾಲಕನ ಯಡವಟ್ಟಿನಿಂದ ಈ ಭೀಕರ ಅಪಘಾತ ನಡೆದಿದೆ ಎನ್ನಲಾಗಿದೆ. ಇದೇ ಜಾಗದಲ್ಲಿ ವರ್ಷದ ಹಿಂದೆ ಮಗು ಮತ್ತು ತಾಯಿ ಸಹ ತೀರಿಕೊಂಡಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

KSRTC ಬಸ್​​, ಕಾರ್​ ಮಧ್ಯೆ ಅಪಘಾತ ಆಗಿದ್ಹೇಗೆ? 6 ಮಂದಿ ದುರ್ಮರಣಕ್ಕೆ ಕಾರಣ ಯಾರು..?

https://newsfirstlive.com/wp-content/uploads/2023/08/Acident.jpg

    ಕೆಎಸ್​​ಆರ್​ಟಿಸಿ ಬಸ್​ ಹಾಗೂ ಕಾರು ನಡುವೆ ಅಪಘಾತ

    ಭಯಾನಕ ಅಪಘಾತದಲ್ಲಿ 6 ಮಂದಿ ದಾರುಣ ಸಾವು

    ಈ ಭೀಕರ ಅಪಘಾತಕ್ಕೆ ಮುಖ್ಯ ಕಾರಣವೇನು..?

ರಾಮನಗರ: ಕೆಎಸ್​​ಆರ್​ಟಿಸಿ ಬಸ್​ ಹಾಗೂ ಕಾರು ನಡುವೆ ಭೀಕರ ಅಪಘಾತ ಸಂಭವಿಸಿ 6 ಮಂದಿ ದಾರುಣವಾಗಿ ಸಾವನ್ನಪ್ಪಿರೋ ಘಟನೆ ಸಾತನೂರು ಕೆಮ್ಮಾಳೆ ಗೇಟ್​​ ಬಳಿ ಈ ದುರ್ಘಟನೆ ನಡೆದಿದೆ.

ಕೆಎಸ್ಆರ್‌ಟಿಸಿ ಕನಕಪುರದಿಂದ ಮಳವಳ್ಳಿ ಕಡೆಗೆ ಹೋಗುತ್ತಿತ್ತು. ಕಾರು ಮಳವಳ್ಳಿಯಿಂದ ಕನಕಪುರ ಕಡೆಗೆ ಬರುತ್ತಿದ್ದ ವೇಳೆ ಭೀಕರ ಅಪಘಾತ ಸಂಭವಿಸಿದೆ. ಪರಿಣಾಮ ಕಾರಿನಲ್ಲಿದ್ದ 6 ಮಂದಿ ಸ್ಥಳದಲ್ಲೇ ಅಸುನೀಗಿದ್ದಾರೆ. ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಾಗೇಶ್, ಪುಟ್ಟರಾಜು, ಜ್ಯೋತಿರ್ಲಿಂಗಪ್ಪ, ಗೋವಿಂದ, ಕುಮಾರ್​ ಮೃತ ದುರ್ದೈವಿಗಳು.

ಮೃತರು ಬೆಂಗಳೂರಿನ ಮಾರತ್ತಹಳ್ಳಿ ಹಾಗೂ ಚಂದಾಪುರದವರು ಎಂದು ತಿಳಿದು ಬಂದಿದೆ. ಕೆಎಸ್​​ಆರ್​ಟಿಸಿ​ ಬಸ್‌ನಲ್ಲಿದ್ದ 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅವರನ್ನು ಸಾತನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಸ್​ ಚಾಲಕನ ಯಡವಟ್ಟಿನಿಂದ ಈ ಭೀಕರ ಅಪಘಾತ ನಡೆದಿದೆ ಎನ್ನಲಾಗಿದೆ. ಇದೇ ಜಾಗದಲ್ಲಿ ವರ್ಷದ ಹಿಂದೆ ಮಗು ಮತ್ತು ತಾಯಿ ಸಹ ತೀರಿಕೊಂಡಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More