newsfirstkannada.com

ಬಸ್​ನಲ್ಲೇ ಲಕ್ಷಾಂತರ ಮೌಲ್ಯದ ವಸ್ತುಗಳು ಬಿಟ್ಹೋಗಿದ್ರು; ವಾಪಸ್​​ ಕೊಟ್ಟು ಕಂಡಕ್ಟರ್​​ ಪ್ರಾಮಾಣಿಕತೆ ಮೆರೆದ್ರು..!

Share :

17-11-2023

    ಬೆಲೆ ಬಾಳುವ ವಸ್ತುಗಳನ್ನ ಹಿಂತಿರುಗಿಸಿ ಮಾನವೀಯತೆ ಮೆರೆದ ಕಂಡಕ್ಟರ್​

    ಕೃಷ್ಣಪ್ಪ ಎಂಬುವವರನ್ನು ಗೌರಿಬಿದನೂರು ಘಟಕಕ್ಕೆ ಕರೆಸಿ ಹಣ ವಾಪಸ್​​

    ಎಲ್ಲೆಡೆ ಮೆಚ್ಚುಗೆಗೆ ಪಾತ್ರರಾದ ಕೆಎಸ್​​​ಆರ್​​ಟಿಸಿ ಬಸ್ ನಿರ್ವಾಹಕ ಓಬಲೇಶ್

ಚಿಕ್ಕಬಳ್ಳಾಪುರ: ಈಗಿನ ಕಾಲದಲ್ಲಿ ಎಲ್ಲಾದರೂ ಬೆಲೆ ಬಾಳುವ ವಸ್ತುಗಳನ್ನ ಇಟ್ಟು ಸ್ವಲ್ಪ ಯಾಮಾರಿದ್ರೂ ಕ್ಷಣಾರ್ದದಲ್ಲಿ ಕದ್ದು ಪರಾರಿಯಾಗುತ್ತಾರೆ. ಇಂತಹ ಕಾಲದಲ್ಲಿ ಕೆಎಸ್​​​ಆರ್​​ಟಿಸಿ ನಿರ್ವಾಹಕನೋರ್ವ ಬಸ್​ನಲ್ಲಿ ಬಿಟ್ಟು ಹೋಗಿದ್ದ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ವಸ್ತುಗಳನ್ನು ಮಾಲೀಕರಿಗೆ ತಲುಪಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಗೌರಿಬಿದನೂರು ಘಟಕದ ಕೆಎಸ್​​​ಆರ್​​ಟಿಸಿ ಬಸ್ ನಿರ್ವಾಹಕ ಹಾಗೂ ಗುಡಿಬಂಡೆ ಮೂಲದ ಜಿ.ಎ. ಓಬಲೇಶ್ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಪ್ರಯಾಣಿಕರೊಬ್ಬರು ಒಂದು ಲಾಪ್ ಟಾಪ್, ಐಫೋನ್, ಎರಡು ಸಾವಿರ ರೂಪಾಯಿ ಹಣ ಹಾಗೂ ದಾಖಲೆಗಳಿರುವ ಬ್ಯಾಗ್​​ ಅನ್ನು ಬಸ್​ನಲ್ಲಿಯೇ ಮರೆತು ಬಿಟ್ಟು ಹೋಗಿದ್ದಾರೆ. ಇದನ್ನು ಗಮನಿಸಿದ ನಿರ್ವಾಹಕ ಓಬಲೇಶ್ ಬ್ಯಾಗ್ ಸುರಕ್ಷಿತವಾಗಿ ಇಟ್ಟುಕೊಂಡು ಅದರ ಮಾಲೀಕರಾದ ಕೃಷ್ಣಪ್ಪ ಎನ್ನುವವರನ್ನ ಗೌರಿಬಿದನೂರಿ ಘಟಕಕ್ಕೆ ಕರೆಸಿ ಎಲ್ಲರ ಸಮ್ಮುಖದಲ್ಲಿ ಬೆಲೆ ಬಾಳುವ ವಸ್ತುಗಳನ್ನ ಹಿಂತಿರುಗಿಸಿ ಮಾನವೀಯ ಮೆರೆದಿದ್ದಾರೆ.

ಇಷ್ಟೇ ಅಲ್ಲದೆ ಈ ಹಿಂದೆ ಹಲವು ಪ್ರಯಾಣಿಕರು ಅಮೂಲ್ಯವಾದ ವಸ್ತುಗಳಿರುವ ಬ್ಯಾಗ್​ಗಳನ್ನು ಬಸ್​ನಲ್ಲಿಯೇ ಬಿಟ್ಟು ಹೋಗಿದ್ದರು. ಅದನ್ನ ಕೂಡ ಓಬಲೇಶ್ ಅವರು ಮಾಲೀಕರಿಗೆ ಹಿಂತಿರುಗಿಸಿದ್ದಾರೆ. ಓಬಲೇಶ್ ಅವರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಸ್​ನಲ್ಲೇ ಲಕ್ಷಾಂತರ ಮೌಲ್ಯದ ವಸ್ತುಗಳು ಬಿಟ್ಹೋಗಿದ್ರು; ವಾಪಸ್​​ ಕೊಟ್ಟು ಕಂಡಕ್ಟರ್​​ ಪ್ರಾಮಾಣಿಕತೆ ಮೆರೆದ್ರು..!

https://newsfirstlive.com/wp-content/uploads/2023/11/bus-11.jpg

    ಬೆಲೆ ಬಾಳುವ ವಸ್ತುಗಳನ್ನ ಹಿಂತಿರುಗಿಸಿ ಮಾನವೀಯತೆ ಮೆರೆದ ಕಂಡಕ್ಟರ್​

    ಕೃಷ್ಣಪ್ಪ ಎಂಬುವವರನ್ನು ಗೌರಿಬಿದನೂರು ಘಟಕಕ್ಕೆ ಕರೆಸಿ ಹಣ ವಾಪಸ್​​

    ಎಲ್ಲೆಡೆ ಮೆಚ್ಚುಗೆಗೆ ಪಾತ್ರರಾದ ಕೆಎಸ್​​​ಆರ್​​ಟಿಸಿ ಬಸ್ ನಿರ್ವಾಹಕ ಓಬಲೇಶ್

ಚಿಕ್ಕಬಳ್ಳಾಪುರ: ಈಗಿನ ಕಾಲದಲ್ಲಿ ಎಲ್ಲಾದರೂ ಬೆಲೆ ಬಾಳುವ ವಸ್ತುಗಳನ್ನ ಇಟ್ಟು ಸ್ವಲ್ಪ ಯಾಮಾರಿದ್ರೂ ಕ್ಷಣಾರ್ದದಲ್ಲಿ ಕದ್ದು ಪರಾರಿಯಾಗುತ್ತಾರೆ. ಇಂತಹ ಕಾಲದಲ್ಲಿ ಕೆಎಸ್​​​ಆರ್​​ಟಿಸಿ ನಿರ್ವಾಹಕನೋರ್ವ ಬಸ್​ನಲ್ಲಿ ಬಿಟ್ಟು ಹೋಗಿದ್ದ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ವಸ್ತುಗಳನ್ನು ಮಾಲೀಕರಿಗೆ ತಲುಪಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಗೌರಿಬಿದನೂರು ಘಟಕದ ಕೆಎಸ್​​​ಆರ್​​ಟಿಸಿ ಬಸ್ ನಿರ್ವಾಹಕ ಹಾಗೂ ಗುಡಿಬಂಡೆ ಮೂಲದ ಜಿ.ಎ. ಓಬಲೇಶ್ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಪ್ರಯಾಣಿಕರೊಬ್ಬರು ಒಂದು ಲಾಪ್ ಟಾಪ್, ಐಫೋನ್, ಎರಡು ಸಾವಿರ ರೂಪಾಯಿ ಹಣ ಹಾಗೂ ದಾಖಲೆಗಳಿರುವ ಬ್ಯಾಗ್​​ ಅನ್ನು ಬಸ್​ನಲ್ಲಿಯೇ ಮರೆತು ಬಿಟ್ಟು ಹೋಗಿದ್ದಾರೆ. ಇದನ್ನು ಗಮನಿಸಿದ ನಿರ್ವಾಹಕ ಓಬಲೇಶ್ ಬ್ಯಾಗ್ ಸುರಕ್ಷಿತವಾಗಿ ಇಟ್ಟುಕೊಂಡು ಅದರ ಮಾಲೀಕರಾದ ಕೃಷ್ಣಪ್ಪ ಎನ್ನುವವರನ್ನ ಗೌರಿಬಿದನೂರಿ ಘಟಕಕ್ಕೆ ಕರೆಸಿ ಎಲ್ಲರ ಸಮ್ಮುಖದಲ್ಲಿ ಬೆಲೆ ಬಾಳುವ ವಸ್ತುಗಳನ್ನ ಹಿಂತಿರುಗಿಸಿ ಮಾನವೀಯ ಮೆರೆದಿದ್ದಾರೆ.

ಇಷ್ಟೇ ಅಲ್ಲದೆ ಈ ಹಿಂದೆ ಹಲವು ಪ್ರಯಾಣಿಕರು ಅಮೂಲ್ಯವಾದ ವಸ್ತುಗಳಿರುವ ಬ್ಯಾಗ್​ಗಳನ್ನು ಬಸ್​ನಲ್ಲಿಯೇ ಬಿಟ್ಟು ಹೋಗಿದ್ದರು. ಅದನ್ನ ಕೂಡ ಓಬಲೇಶ್ ಅವರು ಮಾಲೀಕರಿಗೆ ಹಿಂತಿರುಗಿಸಿದ್ದಾರೆ. ಓಬಲೇಶ್ ಅವರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More