ರಾಜ್ಯ ಸರ್ಕಾರದ ಶಕ್ತಿ ಯೋಜನೆಗೆ ಮಹಿಳೆಯರಿಂದ ಭರ್ಜರಿ ರೆಸ್ಪಾನ್ಸ್
ಧಾರ್ಮಿಕ ಸ್ಥಳಗಳಿಗೆ ಮಹಿಳೆಯರ ಹಿಂಡು, ಬಸ್ಗಳು ಹೌಸ್ ಫುಲ್
ಬಸ್ಸಿನಲ್ಲಿ ನೂಕುನುಗ್ಗಲು, ಬಸ್ ಬಾಗಿಲನ್ನೇ ಮುರಿದ ಮಹಿಳಾಮಣಿಗಳು
ಮಂಡ್ಯ: ಫ್ರೀ ಶಕ್ತಿ ಯೋಜನೆಯ ಎಫೆಕ್ಟ್ ರಾಜ್ಯದ ಎಲ್ಲಾ ಸಾರಿಗೆ ಕೆಂಪು ಬಸ್ಗಳಿಗೂ ತಟ್ಟಿದೆ. ಉಚಿತ ಸಾರಿಗೆ ಪ್ರಯಾಣ ಶುರುವಾಗಿದ್ದೇ ಆಗಿದ್ದು ಮಹಿಳೆಯರ ಕಾಲು ಮನೆಯಲ್ಲಿ ನಿಲ್ಲುತ್ತಿಲ್ಲ. ದಿನದಿಂದ ದಿನಕ್ಕೆ ಮಹಿಳೆಯರ ಪ್ರವಾಸ ಜೋರಾಗಿದೆ. ಉಚಿತ ಬಸ್ ಇದ್ದ ಕಾರಣ ರಾಜ್ಯದ ಮಹಿಳೆಯರು ಧಾರ್ಮಿಕ ಸ್ಥಳಗಳಿಗೆ ಹೋಗುತ್ತಿದ್ದಾರೆ. ಹೀಗಾಗಿ ಸರ್ಕಾರಿ ಬಸ್ಗಳು ಹೌಸ್ ಫುಲ್ ಆಗಿವೆ.
ಸರ್ಕಾರಿ ಬಸ್ಗಳಲ್ಲಿ ಭಾರೀ ಸಂಖ್ಯೆಯಲ್ಲಿ ಮಹಿಳೆಯರು ಕಾಣಿಸಿಕೊಳ್ಳುತ್ತಿದ್ದಾರೆ. ಮಂಡ್ಯದಲ್ಲಿ ನಾರಿಶಕ್ತಿಗೆ ಮುರಿದ ಮತ್ತೊಂದು KSRTC ಬಸ್ ಡೋರ್ಗಳು ಮುರಿದು ಹೋಗಿದೆ. ಈ ಘಟನೆಯು ಜಿಲ್ಲೆಯ ಮಳವಳ್ಳಿ ಪಟ್ಟಣದ ಬಸ್ ನಿಲ್ದಾಣದಲ್ಲಿ ನಡೆದಿದೆ. ಮೊನ್ನೆಯಷ್ಟೇ ಕೊಳ್ಳೆಗಾಲದಲ್ಲಿ KSRTC ಬಸ್ ಬಾಗಿಲು ಕಿತ್ತು ಬಂದಿತ್ತು. ಇದೀಗ ಮಳವಳ್ಳಿ ಪಟ್ಟಣದಲ್ಲಿ ಮತ್ತೊಂದು ಘಟನೆ ಸಂಭವಿಸಿದೆ. ಮಹಿಳೆಯರು ಬಸ್ನಲ್ಲಿ ಕುಳಿತುಕೊಳ್ಳಲು ಸೀಟ್ ಹಿಡಿಯುಲು ಮುಂದಾಗಿದ್ದರು. ಈ ವೇಳೆ ಹೆಚ್ಚಿನ ತಳ್ಳಾಟ-ನೂಕಾಟ ಉಂಟಾದ ಪರಿಣಾಮ ಬಸ್ ಬಾಗಿಲು ಮುರಿದು ಹೋಗಿದೆ. ಇನ್ನು ಬಾಗಿಲು ಕಿತ್ತು ಬಂದ ಕಾರಣ ಸಾರಿಗೆ ಸಿಬ್ಬಂದಿ ಬಸ್ನಿಂದ ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ. ಬಳಿಕ ಕಿತ್ತು ಹೋದ ಡೋರ್ ಅನ್ನು ಬಸ್ಸಿನ ಕಂಡಕ್ಟರ್ ಟಿಸಿಗೆ ಹಸ್ತಾಂತರಿಸಿದ್ದಾರೆ.
ಉಚಿತ ಬಸ್ ಪ್ರಯಾಣಕ್ಕೆ ಅತಿ ಹೆಚ್ಚು ಸಂಖ್ಯೆಯಲ್ಲಿ ಮಹಿಳೆಯರು ಬಂದಿದ್ದಕ್ಕೆ ನೂಕು ನುಗ್ಗಲು ಉಂಟಾದ ಪರಿಣಾಮ ಕೆಎಸ್ಆರ್ಟಿಸಿ ಬಸ್ನ ಬಾಗಿಲು ಮುರಿದು ಹೋಗಿದೆ. ಈ ಘಟನೆಯು ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದ ಬಸ್ ನಿಲ್ದಾಣದಲ್ಲಿ ನಡೆದಿದೆ. #newsfirstkannada #newsfirstkannada #KSRTC #bus #mandya #ViralVideos… pic.twitter.com/tUnQ3dyRXn
— NewsFirst Kannada (@NewsFirstKan) June 19, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ರಾಜ್ಯ ಸರ್ಕಾರದ ಶಕ್ತಿ ಯೋಜನೆಗೆ ಮಹಿಳೆಯರಿಂದ ಭರ್ಜರಿ ರೆಸ್ಪಾನ್ಸ್
ಧಾರ್ಮಿಕ ಸ್ಥಳಗಳಿಗೆ ಮಹಿಳೆಯರ ಹಿಂಡು, ಬಸ್ಗಳು ಹೌಸ್ ಫುಲ್
ಬಸ್ಸಿನಲ್ಲಿ ನೂಕುನುಗ್ಗಲು, ಬಸ್ ಬಾಗಿಲನ್ನೇ ಮುರಿದ ಮಹಿಳಾಮಣಿಗಳು
ಮಂಡ್ಯ: ಫ್ರೀ ಶಕ್ತಿ ಯೋಜನೆಯ ಎಫೆಕ್ಟ್ ರಾಜ್ಯದ ಎಲ್ಲಾ ಸಾರಿಗೆ ಕೆಂಪು ಬಸ್ಗಳಿಗೂ ತಟ್ಟಿದೆ. ಉಚಿತ ಸಾರಿಗೆ ಪ್ರಯಾಣ ಶುರುವಾಗಿದ್ದೇ ಆಗಿದ್ದು ಮಹಿಳೆಯರ ಕಾಲು ಮನೆಯಲ್ಲಿ ನಿಲ್ಲುತ್ತಿಲ್ಲ. ದಿನದಿಂದ ದಿನಕ್ಕೆ ಮಹಿಳೆಯರ ಪ್ರವಾಸ ಜೋರಾಗಿದೆ. ಉಚಿತ ಬಸ್ ಇದ್ದ ಕಾರಣ ರಾಜ್ಯದ ಮಹಿಳೆಯರು ಧಾರ್ಮಿಕ ಸ್ಥಳಗಳಿಗೆ ಹೋಗುತ್ತಿದ್ದಾರೆ. ಹೀಗಾಗಿ ಸರ್ಕಾರಿ ಬಸ್ಗಳು ಹೌಸ್ ಫುಲ್ ಆಗಿವೆ.
ಸರ್ಕಾರಿ ಬಸ್ಗಳಲ್ಲಿ ಭಾರೀ ಸಂಖ್ಯೆಯಲ್ಲಿ ಮಹಿಳೆಯರು ಕಾಣಿಸಿಕೊಳ್ಳುತ್ತಿದ್ದಾರೆ. ಮಂಡ್ಯದಲ್ಲಿ ನಾರಿಶಕ್ತಿಗೆ ಮುರಿದ ಮತ್ತೊಂದು KSRTC ಬಸ್ ಡೋರ್ಗಳು ಮುರಿದು ಹೋಗಿದೆ. ಈ ಘಟನೆಯು ಜಿಲ್ಲೆಯ ಮಳವಳ್ಳಿ ಪಟ್ಟಣದ ಬಸ್ ನಿಲ್ದಾಣದಲ್ಲಿ ನಡೆದಿದೆ. ಮೊನ್ನೆಯಷ್ಟೇ ಕೊಳ್ಳೆಗಾಲದಲ್ಲಿ KSRTC ಬಸ್ ಬಾಗಿಲು ಕಿತ್ತು ಬಂದಿತ್ತು. ಇದೀಗ ಮಳವಳ್ಳಿ ಪಟ್ಟಣದಲ್ಲಿ ಮತ್ತೊಂದು ಘಟನೆ ಸಂಭವಿಸಿದೆ. ಮಹಿಳೆಯರು ಬಸ್ನಲ್ಲಿ ಕುಳಿತುಕೊಳ್ಳಲು ಸೀಟ್ ಹಿಡಿಯುಲು ಮುಂದಾಗಿದ್ದರು. ಈ ವೇಳೆ ಹೆಚ್ಚಿನ ತಳ್ಳಾಟ-ನೂಕಾಟ ಉಂಟಾದ ಪರಿಣಾಮ ಬಸ್ ಬಾಗಿಲು ಮುರಿದು ಹೋಗಿದೆ. ಇನ್ನು ಬಾಗಿಲು ಕಿತ್ತು ಬಂದ ಕಾರಣ ಸಾರಿಗೆ ಸಿಬ್ಬಂದಿ ಬಸ್ನಿಂದ ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ. ಬಳಿಕ ಕಿತ್ತು ಹೋದ ಡೋರ್ ಅನ್ನು ಬಸ್ಸಿನ ಕಂಡಕ್ಟರ್ ಟಿಸಿಗೆ ಹಸ್ತಾಂತರಿಸಿದ್ದಾರೆ.
ಉಚಿತ ಬಸ್ ಪ್ರಯಾಣಕ್ಕೆ ಅತಿ ಹೆಚ್ಚು ಸಂಖ್ಯೆಯಲ್ಲಿ ಮಹಿಳೆಯರು ಬಂದಿದ್ದಕ್ಕೆ ನೂಕು ನುಗ್ಗಲು ಉಂಟಾದ ಪರಿಣಾಮ ಕೆಎಸ್ಆರ್ಟಿಸಿ ಬಸ್ನ ಬಾಗಿಲು ಮುರಿದು ಹೋಗಿದೆ. ಈ ಘಟನೆಯು ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದ ಬಸ್ ನಿಲ್ದಾಣದಲ್ಲಿ ನಡೆದಿದೆ. #newsfirstkannada #newsfirstkannada #KSRTC #bus #mandya #ViralVideos… pic.twitter.com/tUnQ3dyRXn
— NewsFirst Kannada (@NewsFirstKan) June 19, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ