newsfirstkannada.com

ವೈಷ್ಣವ್-ಕೀರ್ತಿ ಪ್ರೇಮ ಪ್ರಕರಣ; ಲಕ್ಷ್ಮೀಗೆ ಶುರುವಾಯ್ತು ಅನುಮಾನ..!

Share :

04-07-2023

    ಕಿರುತೆರೆಯ ಸೀರಿಯಲ್​ ಮೂಲಕ ವೀಕ್ಷಕರ ಮಗಳಾದ ಲಕ್ಷ್ಮೀ

    ಲಕ್ಷ್ಮೀ ಬಾರಮ್ಮ ಸೀರಿಯಲ್​ನಲ್ಲಿ ಊಹಿಸಲಾಗದ ತಿರುವು ತೆರೆಗೆ

    ಲಕ್ಷ್ಮೀಗೆ ಪತಿ ವೈಷ್ಣವ್​ ಹಾಗೂ ಕೀರ್ತಿ ಬಗ್ಗೆ ಮೂಡಿತು ಅನುಮಾನ!

ಲಕ್ಷ್ಮೀ ಬಾರಮ್ಮ ಸೀರಿಯಲ್​ ಅದ್ಭುತವಾಗಿ ಮೂಡಿ ಬರುತ್ತಿದ್ದು, ವೀಕ್ಷಕರ ಮನೆ ಮಗಳಾಗಿದ್ದಾಳೆ ಲಕ್ಷ್ಮೀ. ಹಳೆ ಲಕ್ಷ್ಮೀಯನ್ನ ಎಷ್ಟು ಪ್ರೀತಿಸುತ್ತಿದ್ರೋ ಅಷ್ಟೇ ಪ್ರೀತಿ ಈ ಹೊಸ ಲಕ್ಷ್ಮೀಗೂ ಸಿಗುತ್ತಿದೆ. ಸೀರಿಯಲ್​ ತಂಡ ಕತೆಯನ್ನ ಸೊಗಸಾಗಿ ಕಟ್ಟಿಕೊಡ್ತಿದೆ.

ಇನ್ನು ಲಕ್ಷ್ಮೀ ಊಹಿಸದ ತಿರುವೊಂದು ಎದುರಾಗಿದೆ. ಕೀರ್ತಿ ಹಾಗೂ ವೈಷ್ಣವ್ ಪ್ರೀತಿ ಬಗ್ಗೆ ಅನುಮಾನ ಶುರುವಾಗಿದೆ. ಹೌದು, ಲಕ್ಷ್ಮೀ ತಂದೆ ಬಂದು ಈ ಬಗ್ಗೆ ತಕರಾರು ಎತ್ತಿದಾಗ ಬೀಗರ ಬಾಯಿ ಮುಚ್ಚಿಸಿದ್ದರು ಕಾವೇರಿ. ಅದು ಅಲ್ಲದೇ ಲಕ್ಷ್ಮೀ ಕೂಡ ಅತ್ತೆ ಪರವಾಗಿ ಮಾತನಾಡಿ ವೈಷ್ಣವ್​ ಬಗೆಗೆ ತನಗಿರುವ ವಿಶ್ವಾಸ, ನಂಬಿಕೆಯನ್ನ ಅಪ್ಪನಿಗೆ ಅರ್ಥ ಮಾಡಿಸಿದಳು.

ಸದ್ಯ ಕೀರ್ತಿ ವೈಷ್ಣವ್​ ಬಗ್ಗೆ ಸ್ಪಷ್ಟನೆ ಸಿಗದೆ ಒದ್ದಾಡುತ್ತಿದ್ದಾರೆ ಲಕ್ಷ್ಮೀ ತಂದೆ. ಇದೇ ಯೋಚನೆಯಲ್ಲಿದ್ದ ವಿಠ್ಠಲ್​ ಮೂರ್ತಿಗೆ ಕೀರ್ತಿ ಶಾಕಿಂಗ್​ ನ್ಯೂಸ್​ ಹೇಳಿದ್ದಾಳೆ. ಇತ್ತ ಅಪ್ಪ ಹೇಳಿದ ಮಾತುಗಳಲ್ಲೆ ಮುಳಗಿರುವ ಲಕ್ಷ್ಮೀಯಲ್ಲಿ ಅನುಮಾನದ ಬೀಜ ಬಿತ್ತಿದ್ದಾಳೆ ಸುಪ್ರೀತಾ. ಲಕ್ಷ್ಮೀಗೆ ವೈಷ್ಣವ್​ ಕೀರ್ತಿ ಬಗ್ಗೆ ಅನುಮಾನ ಶುರುವಾಗಿದ್ದು, ಈ ಪರಿಸ್ಥಿತಿಯನ್ನ ಹೇಗೆ ನಿಭಾಯಿಸ್ತಾಳೆ ಲಕ್ಷ್ಮೀ ಅನ್ನೋದೇ ಸದ್ಯದ ಕಥಾಹಂದರ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

 

ವೈಷ್ಣವ್-ಕೀರ್ತಿ ಪ್ರೇಮ ಪ್ರಕರಣ; ಲಕ್ಷ್ಮೀಗೆ ಶುರುವಾಯ್ತು ಅನುಮಾನ..!

https://newsfirstlive.com/wp-content/uploads/2023/07/laxmi.jpg

    ಕಿರುತೆರೆಯ ಸೀರಿಯಲ್​ ಮೂಲಕ ವೀಕ್ಷಕರ ಮಗಳಾದ ಲಕ್ಷ್ಮೀ

    ಲಕ್ಷ್ಮೀ ಬಾರಮ್ಮ ಸೀರಿಯಲ್​ನಲ್ಲಿ ಊಹಿಸಲಾಗದ ತಿರುವು ತೆರೆಗೆ

    ಲಕ್ಷ್ಮೀಗೆ ಪತಿ ವೈಷ್ಣವ್​ ಹಾಗೂ ಕೀರ್ತಿ ಬಗ್ಗೆ ಮೂಡಿತು ಅನುಮಾನ!

ಲಕ್ಷ್ಮೀ ಬಾರಮ್ಮ ಸೀರಿಯಲ್​ ಅದ್ಭುತವಾಗಿ ಮೂಡಿ ಬರುತ್ತಿದ್ದು, ವೀಕ್ಷಕರ ಮನೆ ಮಗಳಾಗಿದ್ದಾಳೆ ಲಕ್ಷ್ಮೀ. ಹಳೆ ಲಕ್ಷ್ಮೀಯನ್ನ ಎಷ್ಟು ಪ್ರೀತಿಸುತ್ತಿದ್ರೋ ಅಷ್ಟೇ ಪ್ರೀತಿ ಈ ಹೊಸ ಲಕ್ಷ್ಮೀಗೂ ಸಿಗುತ್ತಿದೆ. ಸೀರಿಯಲ್​ ತಂಡ ಕತೆಯನ್ನ ಸೊಗಸಾಗಿ ಕಟ್ಟಿಕೊಡ್ತಿದೆ.

ಇನ್ನು ಲಕ್ಷ್ಮೀ ಊಹಿಸದ ತಿರುವೊಂದು ಎದುರಾಗಿದೆ. ಕೀರ್ತಿ ಹಾಗೂ ವೈಷ್ಣವ್ ಪ್ರೀತಿ ಬಗ್ಗೆ ಅನುಮಾನ ಶುರುವಾಗಿದೆ. ಹೌದು, ಲಕ್ಷ್ಮೀ ತಂದೆ ಬಂದು ಈ ಬಗ್ಗೆ ತಕರಾರು ಎತ್ತಿದಾಗ ಬೀಗರ ಬಾಯಿ ಮುಚ್ಚಿಸಿದ್ದರು ಕಾವೇರಿ. ಅದು ಅಲ್ಲದೇ ಲಕ್ಷ್ಮೀ ಕೂಡ ಅತ್ತೆ ಪರವಾಗಿ ಮಾತನಾಡಿ ವೈಷ್ಣವ್​ ಬಗೆಗೆ ತನಗಿರುವ ವಿಶ್ವಾಸ, ನಂಬಿಕೆಯನ್ನ ಅಪ್ಪನಿಗೆ ಅರ್ಥ ಮಾಡಿಸಿದಳು.

ಸದ್ಯ ಕೀರ್ತಿ ವೈಷ್ಣವ್​ ಬಗ್ಗೆ ಸ್ಪಷ್ಟನೆ ಸಿಗದೆ ಒದ್ದಾಡುತ್ತಿದ್ದಾರೆ ಲಕ್ಷ್ಮೀ ತಂದೆ. ಇದೇ ಯೋಚನೆಯಲ್ಲಿದ್ದ ವಿಠ್ಠಲ್​ ಮೂರ್ತಿಗೆ ಕೀರ್ತಿ ಶಾಕಿಂಗ್​ ನ್ಯೂಸ್​ ಹೇಳಿದ್ದಾಳೆ. ಇತ್ತ ಅಪ್ಪ ಹೇಳಿದ ಮಾತುಗಳಲ್ಲೆ ಮುಳಗಿರುವ ಲಕ್ಷ್ಮೀಯಲ್ಲಿ ಅನುಮಾನದ ಬೀಜ ಬಿತ್ತಿದ್ದಾಳೆ ಸುಪ್ರೀತಾ. ಲಕ್ಷ್ಮೀಗೆ ವೈಷ್ಣವ್​ ಕೀರ್ತಿ ಬಗ್ಗೆ ಅನುಮಾನ ಶುರುವಾಗಿದ್ದು, ಈ ಪರಿಸ್ಥಿತಿಯನ್ನ ಹೇಗೆ ನಿಭಾಯಿಸ್ತಾಳೆ ಲಕ್ಷ್ಮೀ ಅನ್ನೋದೇ ಸದ್ಯದ ಕಥಾಹಂದರ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

 

Load More