newsfirstkannada.com

BIGG BOSS ಮನೆಗೆ ಬಂದ ಅಡ್ವೊಕೇಟ್.. ಜಗದೀಶ್ ಹೋಗಿದ್ದು ನರಕಕ್ಕಾ ಅಥವಾ ಸ್ವರ್ಗಕ್ಕಾ?

Share :

Published September 29, 2024 at 7:58pm

Update September 29, 2024 at 8:13pm

    ಬಿಗ್​ಬಾಸ್​ ಮನೆಗೆ ಬಂದ 5ನೇ ಕಂಟೆಸ್ಟೆಂಟ್​ ಇವರೇ ನೋಡಿ

    ಕಿಚ್ಚ ಸುದೀಪ್​ ಮುಂದೆಯೇ ಭ್ರಷ್ಟಾಚಾರದ ಬಗ್ಗೆ ಲಾಯರ್ ಮಾತು

    ಭವ್ಯಾ ಗೌಡ ಹಾಗೂ ಯಮುನಾ ಶ್ರೀನಿಧಿ ನಿರ್ಧಾರ ಏನಾಗಿತ್ತು?

ಗ್ರ್ಯಾಂಡ್​ ಆಗಿ ಓಪನಿಂಗ್​ ಪಡೆದುಕೊಂಡಿದೆ ಬಿಗ್​ಬಾಸ್​ ಸೀಸನ್​ 11. ಈಗಾಗಲೇ ಬಿಗ್​ಬಾಸ್​ ಮನೆಗೆ ಕಿರುತೆರೆ ನಟಿ ಭವ್ಯಾ ಗೌಡ ಹಾಗೂ ಯಮುನಾ ಶ್ರೀನಿಧಿ ನೇರವಾಗಿ ಸ್ವರ್ಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈಗ ಬಿಗ್​ಬಾಸ್ ಸೀಸನ್​ 11 7ನೇ  ಸ್ಪರ್ಧಿಯಾಗಿ ಲಾಯರ್​ ಜಗದೀಶ್​​ ಎಂಟ್ರಿ ಕೊಟ್ಟಿದ್ದಾರೆ.

ಇದನ್ನೂ ಓದಿ: ಬಿಗ್‌ ಬಾಸ್ ಸೀಸನ್ 11: ಸ್ವರ್ಗಕ್ಕೆ ಯಾರು? ನರಕದಲ್ಲಿ ನರಳಾಡೋದು ಯಾರು? ಇಲ್ಲಿದೆ ಬಿಗ್ ಅಪ್ಡೇಟ್‌!

ಕಳೆದ ಐದಾರು ವರ್ಷಗಳಿಂದಲೂ ಲಾಯರ್​ ಜಗದೀಶ್​​ ಅವರು ಸುದ್ದಿಯಲ್ಲೇ ಇದ್ದಾರೆ. ಇತ್ತೀಚೆಗೆ ನಟ ದರ್ಶನ್​ ವಿಚಾರವಾಗಿಯೂ ಸುದ್ದಿ ಮಾಡಿದ್ದರು. ಸ್ಯಾಂಡಲ್​ವುಡ್​ ನಟ ದರ್ಶನ್​ ಕೇಸ್​ನಲ್ಲಿಯೂ ಯಾರದ್ದೋ ಕೈವಾಡ ಇದೆ. ನಾವು ದರ್ಶನ್​​ ಕೇಸ್​ ಮರು ತನಿಖೆಗೆ ಆಗ್ರಹಿಸುತ್ತೇನೆ ಎಂದು ಫ್ರೀಡಮ್​ ಪಾರ್ಕ್​ನಲ್ಲಿ ಪ್ರೊಟೆಸ್ಟ್​ ಮಾಡಿದ್ದರು. ಲಾಯರ್​ ಜಗದೀಶ್​​ ಈತ ಸದಾ ಸೋಷಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿರುತ್ತಾರೆ.

ಸದ್ಯ ಕಿಚ್ಚ ಸುದೀಪ್ ಮುಂದೆ ಲಾಯರ್​ ಜಗದೀಶ್ ಸಮಾಜದಲ್ಲಿ ನಡೆಯುತ್ತಿರೋ ಭ್ರಷ್ಟಾಚಾರದ ಬಗ್ಗೆ ಮಾತಾಡಿದ್ದಾರೆ. ಜನಗಳ ಮುಖದಲ್ಲಿ ನಗು ಇಲ್ಲ. ಅದಕ್ಕೆ ನಾನಾ ಕಾರಣಗಳು ಇವೆ. ಕೆಲವರು EMI ಕಟ್ಟಿಲ್ಲ ಅಂತಾ, ಮಕ್ಕಳ ಫೀಸ್​ ಕಟ್ಟಿಲ್ಲ ಅಂತಾ, ಇನ್ನೂ ಕೆಲವರಿಗೆ ಜೀವನ ಅಂದ್ರೆನೇ ದೊಡ್ಡ ಚಾಲೆಂಜ್​ ಆಗುತ್ತೆ. ನಮ್ಮ ಸಮಾಜದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಈ ಬಗ್ಗೆ ಧ್ವನಿ ಎತ್ತುವವರೆ ಇಲ್ಲ ಅಂತ ಕಿಚ್ಚ ಸುದೀಪ್​ ಮುಂದೆ ಹೇಳಿದ್ದಾರೆ.

ಇನ್ನು, ಭವ್ಯಾ ಗೌಡ ಹಾಗೂ ಯಮುನಾ ಶ್ರೀನಿಧಿ ಅವರ ನಿರ್ಧಾರದ ಮೇಲೆ ಲಾಯರ್​ ಜಗದೀಶ್ ಅವರು ಸ್ವರ್ಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅದು ಕೂಡ ವೀಕ್ಷಕರ ವೋಟ್​ ಮೂಲಕ ನೇರವಾಗಿ ಸ್ವರ್ಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. 2 ಲಕ್ಷದ 13 ಸಾವಿರ ವೋಟ್​ಗಳನ್ನು ಪಡೆದುಕೊಳ್ಳುವ ಮೂಲಕ ಲಾಯರ್​ ಜಗದೀಶ್ ಅವರು ಸ್ವರ್ಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BIGG BOSS ಮನೆಗೆ ಬಂದ ಅಡ್ವೊಕೇಟ್.. ಜಗದೀಶ್ ಹೋಗಿದ್ದು ನರಕಕ್ಕಾ ಅಥವಾ ಸ್ವರ್ಗಕ್ಕಾ?

https://newsfirstlive.com/wp-content/uploads/2024/09/lawyer-jagadish.jpg

    ಬಿಗ್​ಬಾಸ್​ ಮನೆಗೆ ಬಂದ 5ನೇ ಕಂಟೆಸ್ಟೆಂಟ್​ ಇವರೇ ನೋಡಿ

    ಕಿಚ್ಚ ಸುದೀಪ್​ ಮುಂದೆಯೇ ಭ್ರಷ್ಟಾಚಾರದ ಬಗ್ಗೆ ಲಾಯರ್ ಮಾತು

    ಭವ್ಯಾ ಗೌಡ ಹಾಗೂ ಯಮುನಾ ಶ್ರೀನಿಧಿ ನಿರ್ಧಾರ ಏನಾಗಿತ್ತು?

ಗ್ರ್ಯಾಂಡ್​ ಆಗಿ ಓಪನಿಂಗ್​ ಪಡೆದುಕೊಂಡಿದೆ ಬಿಗ್​ಬಾಸ್​ ಸೀಸನ್​ 11. ಈಗಾಗಲೇ ಬಿಗ್​ಬಾಸ್​ ಮನೆಗೆ ಕಿರುತೆರೆ ನಟಿ ಭವ್ಯಾ ಗೌಡ ಹಾಗೂ ಯಮುನಾ ಶ್ರೀನಿಧಿ ನೇರವಾಗಿ ಸ್ವರ್ಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈಗ ಬಿಗ್​ಬಾಸ್ ಸೀಸನ್​ 11 7ನೇ  ಸ್ಪರ್ಧಿಯಾಗಿ ಲಾಯರ್​ ಜಗದೀಶ್​​ ಎಂಟ್ರಿ ಕೊಟ್ಟಿದ್ದಾರೆ.

ಇದನ್ನೂ ಓದಿ: ಬಿಗ್‌ ಬಾಸ್ ಸೀಸನ್ 11: ಸ್ವರ್ಗಕ್ಕೆ ಯಾರು? ನರಕದಲ್ಲಿ ನರಳಾಡೋದು ಯಾರು? ಇಲ್ಲಿದೆ ಬಿಗ್ ಅಪ್ಡೇಟ್‌!

ಕಳೆದ ಐದಾರು ವರ್ಷಗಳಿಂದಲೂ ಲಾಯರ್​ ಜಗದೀಶ್​​ ಅವರು ಸುದ್ದಿಯಲ್ಲೇ ಇದ್ದಾರೆ. ಇತ್ತೀಚೆಗೆ ನಟ ದರ್ಶನ್​ ವಿಚಾರವಾಗಿಯೂ ಸುದ್ದಿ ಮಾಡಿದ್ದರು. ಸ್ಯಾಂಡಲ್​ವುಡ್​ ನಟ ದರ್ಶನ್​ ಕೇಸ್​ನಲ್ಲಿಯೂ ಯಾರದ್ದೋ ಕೈವಾಡ ಇದೆ. ನಾವು ದರ್ಶನ್​​ ಕೇಸ್​ ಮರು ತನಿಖೆಗೆ ಆಗ್ರಹಿಸುತ್ತೇನೆ ಎಂದು ಫ್ರೀಡಮ್​ ಪಾರ್ಕ್​ನಲ್ಲಿ ಪ್ರೊಟೆಸ್ಟ್​ ಮಾಡಿದ್ದರು. ಲಾಯರ್​ ಜಗದೀಶ್​​ ಈತ ಸದಾ ಸೋಷಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿರುತ್ತಾರೆ.

ಸದ್ಯ ಕಿಚ್ಚ ಸುದೀಪ್ ಮುಂದೆ ಲಾಯರ್​ ಜಗದೀಶ್ ಸಮಾಜದಲ್ಲಿ ನಡೆಯುತ್ತಿರೋ ಭ್ರಷ್ಟಾಚಾರದ ಬಗ್ಗೆ ಮಾತಾಡಿದ್ದಾರೆ. ಜನಗಳ ಮುಖದಲ್ಲಿ ನಗು ಇಲ್ಲ. ಅದಕ್ಕೆ ನಾನಾ ಕಾರಣಗಳು ಇವೆ. ಕೆಲವರು EMI ಕಟ್ಟಿಲ್ಲ ಅಂತಾ, ಮಕ್ಕಳ ಫೀಸ್​ ಕಟ್ಟಿಲ್ಲ ಅಂತಾ, ಇನ್ನೂ ಕೆಲವರಿಗೆ ಜೀವನ ಅಂದ್ರೆನೇ ದೊಡ್ಡ ಚಾಲೆಂಜ್​ ಆಗುತ್ತೆ. ನಮ್ಮ ಸಮಾಜದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಈ ಬಗ್ಗೆ ಧ್ವನಿ ಎತ್ತುವವರೆ ಇಲ್ಲ ಅಂತ ಕಿಚ್ಚ ಸುದೀಪ್​ ಮುಂದೆ ಹೇಳಿದ್ದಾರೆ.

ಇನ್ನು, ಭವ್ಯಾ ಗೌಡ ಹಾಗೂ ಯಮುನಾ ಶ್ರೀನಿಧಿ ಅವರ ನಿರ್ಧಾರದ ಮೇಲೆ ಲಾಯರ್​ ಜಗದೀಶ್ ಅವರು ಸ್ವರ್ಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅದು ಕೂಡ ವೀಕ್ಷಕರ ವೋಟ್​ ಮೂಲಕ ನೇರವಾಗಿ ಸ್ವರ್ಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. 2 ಲಕ್ಷದ 13 ಸಾವಿರ ವೋಟ್​ಗಳನ್ನು ಪಡೆದುಕೊಳ್ಳುವ ಮೂಲಕ ಲಾಯರ್​ ಜಗದೀಶ್ ಅವರು ಸ್ವರ್ಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More